<p>ಶಿರಸಿ: ನಗರದ ವಿನೂತನ ಟ್ರಸ್ಟ್ ವತಿಯಿಂದ ಹಮ್ಮಿಕೊಳ್ಳಲಾದ ಮಕ್ಕಳ ಬೇಸಿಗೆ ಶಿಬಿರದ ಉದ್ಘಾಟನಾ ಸಮಾರಂಭವು ಇತ್ತೀಚೆಗೆ ನೆಮ್ಮದಿ ಕುಟೀರದಲ್ಲಿ ನೆರವೇರಿತು.</p>.<p>ಕಾರ್ಯಕ್ರಮವನ್ನು ಉದ್ಘಾಟಿಸಿದ ಸಾಮಾಜಿಕ ಕಾರ್ಯಕರ್ತ ವಿ.ಪಿ.ಹೆಗಡೆ ಮಾತನಾಡಿ, ‘ನೆಮ್ಮದಿ ಕುಟೀರ ಮತ್ತು ರಂಗಧಾಮದಂತಹ ಕೇಂದ್ರಗಳು ಮಕ್ಕಳಿಂದ ಹಿಡಿದು ವಯಸ್ಕರವರೆಗೆ ಪ್ರತಿದಿನವೂ ವಿವಿಧ ಸೃಜನಶೀಲ ಚಟುವಟಿಕೆಗಳಿಂದ ಕೂಡಿರಲಿ’ ಎಂದು ಆಶಯ ವ್ಯಕ್ತಪಡಿಸಿದರು.</p>.<p>ಅಧ್ಯಕ್ಷತೆ ವಹಿಸಿದ್ದ ಸಾಮಾಜಿಕ ಕಾರ್ಯಕರ್ತ ಅನಂತ ಹೆಗಡೆ ಬಾಳೇಗದ್ದೆ ಮಾತನಾಡಿ, ‘ವಿನೂತನ ಟ್ರಸ್ಟ್ ಇತ್ತೀಚಿನ ವರ್ಷಗಳಲ್ಲಿ ತನ್ನ ಸೇವೆಯನ್ನು ಆರಂಭಿಸಿದ್ದು, ಇದು ಅವರು ಆಯೋಜಿಸಿರುವ ಮೊದಲ ಬೇಸಿಗೆ ಶಿಬಿರವಾಗಿದೆ. ಮಕ್ಕಳು ಮತ್ತು ಪಾಲಕರು ಈ ಶಿಬಿರದ ಸಂಪೂರ್ಣ ಪ್ರಯೋಜನ ಪಡೆಯಬೇಕು. ವರ್ಷವಿಡೀ ಶಾಲೆಗಳಲ್ಲಿ ಕಲಿಯುವ ಪಠ್ಯಕ್ಕಿಂತ ಭಿನ್ನವಾದ ಚಟುವಟಿಕೆಗಳು ಇಲ್ಲಿರಲಿ. ಆ ಮೂಲಕ ಮಕ್ಕಳಿಗೆ ಹೊಸ ರುಚಿ, ಅಭಿರುಚಿ ಹಾಗೂ ಆಸಕ್ತಿಗಳ ಪರಿಚಯವಾಗಲಿ’ ಎಂದು ತಿಳಿಸಿದರು.</p>.<p>ಪ್ರಗತಿಮಿತ್ರ ರೈತ ಉತ್ಪಾದಕ ಸಂಸ್ಥೆಯ ಮುಖ್ಯಸ್ಥ ವಿವೇಕ ಹೆಗಡೆ, ಟ್ರಸ್ಟ್ನ ಮುಖ್ಯಸ್ಥೆ ಸೀಮಾ ಹೆಗಡೆ ಇದ್ದರು. ಶಿಕ್ಷಕಿ ಸುಮಾ ಭಟ್ ನಿರೂಪಿಸಿದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260419-20-1750861446</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಶಿರಸಿ: ನಗರದ ವಿನೂತನ ಟ್ರಸ್ಟ್ ವತಿಯಿಂದ ಹಮ್ಮಿಕೊಳ್ಳಲಾದ ಮಕ್ಕಳ ಬೇಸಿಗೆ ಶಿಬಿರದ ಉದ್ಘಾಟನಾ ಸಮಾರಂಭವು ಇತ್ತೀಚೆಗೆ ನೆಮ್ಮದಿ ಕುಟೀರದಲ್ಲಿ ನೆರವೇರಿತು.</p>.<p>ಕಾರ್ಯಕ್ರಮವನ್ನು ಉದ್ಘಾಟಿಸಿದ ಸಾಮಾಜಿಕ ಕಾರ್ಯಕರ್ತ ವಿ.ಪಿ.ಹೆಗಡೆ ಮಾತನಾಡಿ, ‘ನೆಮ್ಮದಿ ಕುಟೀರ ಮತ್ತು ರಂಗಧಾಮದಂತಹ ಕೇಂದ್ರಗಳು ಮಕ್ಕಳಿಂದ ಹಿಡಿದು ವಯಸ್ಕರವರೆಗೆ ಪ್ರತಿದಿನವೂ ವಿವಿಧ ಸೃಜನಶೀಲ ಚಟುವಟಿಕೆಗಳಿಂದ ಕೂಡಿರಲಿ’ ಎಂದು ಆಶಯ ವ್ಯಕ್ತಪಡಿಸಿದರು.</p>.<p>ಅಧ್ಯಕ್ಷತೆ ವಹಿಸಿದ್ದ ಸಾಮಾಜಿಕ ಕಾರ್ಯಕರ್ತ ಅನಂತ ಹೆಗಡೆ ಬಾಳೇಗದ್ದೆ ಮಾತನಾಡಿ, ‘ವಿನೂತನ ಟ್ರಸ್ಟ್ ಇತ್ತೀಚಿನ ವರ್ಷಗಳಲ್ಲಿ ತನ್ನ ಸೇವೆಯನ್ನು ಆರಂಭಿಸಿದ್ದು, ಇದು ಅವರು ಆಯೋಜಿಸಿರುವ ಮೊದಲ ಬೇಸಿಗೆ ಶಿಬಿರವಾಗಿದೆ. ಮಕ್ಕಳು ಮತ್ತು ಪಾಲಕರು ಈ ಶಿಬಿರದ ಸಂಪೂರ್ಣ ಪ್ರಯೋಜನ ಪಡೆಯಬೇಕು. ವರ್ಷವಿಡೀ ಶಾಲೆಗಳಲ್ಲಿ ಕಲಿಯುವ ಪಠ್ಯಕ್ಕಿಂತ ಭಿನ್ನವಾದ ಚಟುವಟಿಕೆಗಳು ಇಲ್ಲಿರಲಿ. ಆ ಮೂಲಕ ಮಕ್ಕಳಿಗೆ ಹೊಸ ರುಚಿ, ಅಭಿರುಚಿ ಹಾಗೂ ಆಸಕ್ತಿಗಳ ಪರಿಚಯವಾಗಲಿ’ ಎಂದು ತಿಳಿಸಿದರು.</p>.<p>ಪ್ರಗತಿಮಿತ್ರ ರೈತ ಉತ್ಪಾದಕ ಸಂಸ್ಥೆಯ ಮುಖ್ಯಸ್ಥ ವಿವೇಕ ಹೆಗಡೆ, ಟ್ರಸ್ಟ್ನ ಮುಖ್ಯಸ್ಥೆ ಸೀಮಾ ಹೆಗಡೆ ಇದ್ದರು. ಶಿಕ್ಷಕಿ ಸುಮಾ ಭಟ್ ನಿರೂಪಿಸಿದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260419-20-1750861446</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>