<p>ಸಿರುಗುಪ್ಪ: ‘ಗ್ರಾಮೀಣ ಭಾಗದ ಮಕ್ಕಳಿಗಾಗಿ ಅರಿವು ಗ್ರಂಥಾಲಯ ಕೇಂದ್ರದಲ್ಲಿ ಬೇಸಿಗೆ ಶಿಬಿ ನಡೆಯಲಿದ್ದು, ಕಲಿಕೆಗೆ ಸಹಕಾರಿಯಾಗುತ್ತದೆ’ ಎಂದು ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಮಂಜುಳ ಹೇಳಿದರು.</p>.<p>ತಾಲ್ಲೂಕಿನ ಕೆಂಚನಗುಡ್ಡ ಗ್ರಾಮದಲ್ಲಿ ಗ್ರಾಮ ಪಂಚಾಯಿತಿ ಅರಿವು ಕೇಂದ್ರ ಗ್ರಂಥಾಲಯ ಹಾಗೂ ಮಾಹಿತಿ ಕೇಂದ್ರದಲ್ಲಿ ಶಾಲಾ ವಿದ್ಯಾರ್ಥಿಗಳಿಗೆ ಏ.15ರಿಂದ ಏ.30 ರವರೆಗೆ ಬುಧವಾರ ಹಮ್ಮಿಕೊಂಡಿದ್ದ ಗ್ರಾಮೀಣ ಮಕ್ಕಳ ಬೇಸಿಗೆ ಶಿಬಿರದಲ್ಲಿ ಮಾತನಾಡಿದರು.</p>.<p>ಶಿಬಿರದಲ್ಲಿ ಗ್ರಾಮೀಣ ಆಟಗಳು, ಗಣಿತ, ಇಂಗ್ಲಿಷ್, ಇತಿಹಾಸ, ಓದುವ ಅಭ್ಯಾಸ, ವಾಕ್ಯ ರಚನೆ, ಚೆಸ್, ಚಿತ್ರ ಕಲೆ, ಕಲಾಕೃತಿಗಳ ಕಲಿಕೆ, ಕೇರಂ, ಸಾಂಸ್ಕೃತಿಕ ಚಟುವಟಿಕೆಗಳನ್ನು ನಡೆಸಲಾಗುವುದು. ವಿದ್ಯಾರ್ಥಿಗಳು ಉಪಯೋಗ ಪಡೆಯಬೇಕು ಎಂದು ಗ್ರಂಥಪಾಲಕ ವಿ.ಅಡಿವೆಪ್ಪ ತಿಳಿಸಿದ್ದಾರೆ.</p>.<p>ಪಂಚಾಯಿತಿ ಕಾರ್ಯದರ್ಶಿ ಬಸನಗೌಡ, ಸಿ.ಆರ್.ಪಿ. ಟಿ.ಶಾಂತ, ಆರ್.ಜಿ.ಪಿ. ಅಧಿಕಾರಿ ವೀಕ್ಷಿತ, ಹೊನ್ನಪ್ಪ, ನಾಗಪ್ಪ, ನಾಗರಾಜ, ರವಿ ಇದ್ದರು.</p>.<p>ತೆಕ್ಕಲಕೋಟೆ: ಸಮೀಪದ ಉತ್ತನೂರು ಗ್ರಾಮದ ಸಾರ್ವಜನಿಕ ಗ್ರಂಥಾಲಯ ಕೇಂದ್ರದಲ್ಲಿ ಚಿಣ್ಣರಿಗಾಗಿ ಉಚಿತ ಬೇಸಿಗೆ ಶಿಬಿರಕ್ಕೆ ಬುಧವಾರ ಚಾಲನೆ ನೀಡಲಾಯಿತು.</p>.<p>ಗ್ರಾಮ ಪಂಚಾಯಿತಿ ಪಿಡಿಒ ಶಿವಕುಮಾರ ಮಾತನಾಡಿ, ‘ಮೊಬೈಲ್ ಎಂಬ ಕೂಪದಲ್ಲಿ ಮುಳುಗಿ ಮಂಡೂಕಗಳಾಗದೆ, ಜ್ಞಾನವೆಂಬ ಗ್ರಂಥಾಲಯ ಸಾಗರದಲ್ಲಿ ಪುಸ್ತಕ ಓದುವ ಮೂಲಕ ಜ್ಞಾನಿಗಳಾಗಿ’ ಎಂದರು.</p>.<p>ಗ್ರಾ.ಪಂ. ಕಾರ್ಯದರ್ಶಿ ಕೆ.ಶಿವಮೂರ್ತಿ, ಶಿಕ್ಷಕ ಕಿರಣ್, ಗ್ರಂಥಪಾಲಕ ಚಂದ್ರಶೇಖರ, ಪಾಲಕರು ಹಾಗೂ ವಿದ್ಯಾರ್ಥಿಗಳು ಇದ್ದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260417-25-539089495</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಸಿರುಗುಪ್ಪ: ‘ಗ್ರಾಮೀಣ ಭಾಗದ ಮಕ್ಕಳಿಗಾಗಿ ಅರಿವು ಗ್ರಂಥಾಲಯ ಕೇಂದ್ರದಲ್ಲಿ ಬೇಸಿಗೆ ಶಿಬಿ ನಡೆಯಲಿದ್ದು, ಕಲಿಕೆಗೆ ಸಹಕಾರಿಯಾಗುತ್ತದೆ’ ಎಂದು ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಮಂಜುಳ ಹೇಳಿದರು.</p>.<p>ತಾಲ್ಲೂಕಿನ ಕೆಂಚನಗುಡ್ಡ ಗ್ರಾಮದಲ್ಲಿ ಗ್ರಾಮ ಪಂಚಾಯಿತಿ ಅರಿವು ಕೇಂದ್ರ ಗ್ರಂಥಾಲಯ ಹಾಗೂ ಮಾಹಿತಿ ಕೇಂದ್ರದಲ್ಲಿ ಶಾಲಾ ವಿದ್ಯಾರ್ಥಿಗಳಿಗೆ ಏ.15ರಿಂದ ಏ.30 ರವರೆಗೆ ಬುಧವಾರ ಹಮ್ಮಿಕೊಂಡಿದ್ದ ಗ್ರಾಮೀಣ ಮಕ್ಕಳ ಬೇಸಿಗೆ ಶಿಬಿರದಲ್ಲಿ ಮಾತನಾಡಿದರು.</p>.<p>ಶಿಬಿರದಲ್ಲಿ ಗ್ರಾಮೀಣ ಆಟಗಳು, ಗಣಿತ, ಇಂಗ್ಲಿಷ್, ಇತಿಹಾಸ, ಓದುವ ಅಭ್ಯಾಸ, ವಾಕ್ಯ ರಚನೆ, ಚೆಸ್, ಚಿತ್ರ ಕಲೆ, ಕಲಾಕೃತಿಗಳ ಕಲಿಕೆ, ಕೇರಂ, ಸಾಂಸ್ಕೃತಿಕ ಚಟುವಟಿಕೆಗಳನ್ನು ನಡೆಸಲಾಗುವುದು. ವಿದ್ಯಾರ್ಥಿಗಳು ಉಪಯೋಗ ಪಡೆಯಬೇಕು ಎಂದು ಗ್ರಂಥಪಾಲಕ ವಿ.ಅಡಿವೆಪ್ಪ ತಿಳಿಸಿದ್ದಾರೆ.</p>.<p>ಪಂಚಾಯಿತಿ ಕಾರ್ಯದರ್ಶಿ ಬಸನಗೌಡ, ಸಿ.ಆರ್.ಪಿ. ಟಿ.ಶಾಂತ, ಆರ್.ಜಿ.ಪಿ. ಅಧಿಕಾರಿ ವೀಕ್ಷಿತ, ಹೊನ್ನಪ್ಪ, ನಾಗಪ್ಪ, ನಾಗರಾಜ, ರವಿ ಇದ್ದರು.</p>.<p>ತೆಕ್ಕಲಕೋಟೆ: ಸಮೀಪದ ಉತ್ತನೂರು ಗ್ರಾಮದ ಸಾರ್ವಜನಿಕ ಗ್ರಂಥಾಲಯ ಕೇಂದ್ರದಲ್ಲಿ ಚಿಣ್ಣರಿಗಾಗಿ ಉಚಿತ ಬೇಸಿಗೆ ಶಿಬಿರಕ್ಕೆ ಬುಧವಾರ ಚಾಲನೆ ನೀಡಲಾಯಿತು.</p>.<p>ಗ್ರಾಮ ಪಂಚಾಯಿತಿ ಪಿಡಿಒ ಶಿವಕುಮಾರ ಮಾತನಾಡಿ, ‘ಮೊಬೈಲ್ ಎಂಬ ಕೂಪದಲ್ಲಿ ಮುಳುಗಿ ಮಂಡೂಕಗಳಾಗದೆ, ಜ್ಞಾನವೆಂಬ ಗ್ರಂಥಾಲಯ ಸಾಗರದಲ್ಲಿ ಪುಸ್ತಕ ಓದುವ ಮೂಲಕ ಜ್ಞಾನಿಗಳಾಗಿ’ ಎಂದರು.</p>.<p>ಗ್ರಾ.ಪಂ. ಕಾರ್ಯದರ್ಶಿ ಕೆ.ಶಿವಮೂರ್ತಿ, ಶಿಕ್ಷಕ ಕಿರಣ್, ಗ್ರಂಥಪಾಲಕ ಚಂದ್ರಶೇಖರ, ಪಾಲಕರು ಹಾಗೂ ವಿದ್ಯಾರ್ಥಿಗಳು ಇದ್ದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260417-25-539089495</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>