<p><strong>ಬೆಂಗಳೂರು:</strong> ಇಲ್ಲಿನ ಸೈಂಟ್ ಫ್ರಾನ್ಸಿಸ್ ಕಾಲೇಜಿನ ಕನ್ನಡ ವಿಭಾಗದ ವತಿಯಿಂದ ಆಯೋಜಿಸಲಾದ ರಾಜ್ಯಮಟ್ಟದ ಸೈಂಟ್ ಫ್ರಾನ್ಸಿಸ್ ಕಾವ್ಯ ಸ್ಪರ್ಧೆಯ ಪ್ರಶಸ್ತಿ ಪತ್ರ ವಿತರಣೆ ಹಾಗೂ ಕವನ ಸಂಕಲನ ಬಿಡುಗಡೆ ಸಮಾರಂಭವು ಅದ್ಧೂರಿಯಾಗಿ ನೆರವೇರಿತು.</p><p>ಕಾರ್ಯಕ್ರಮದಲ್ಲಿ ರಾಜ್ಯದ ವಿವಿಧ ಕಾಲೇಜುಗಳಿಂದ ವಿದ್ಯಾರ್ಥಿಗಳು ಉತ್ಸಾಹದಿಂದ ಭಾಗವಹಿಸಿದ್ದರು. ಸ್ಪರ್ಧೆಗೆ ಆಗಮಿಸಿದ್ದ ಕವಿತೆಗಳು ಸಮಾಜದ ನೋವು, ಮಾನವೀಯ ಮೌಲ್ಯಗಳು, ಪ್ರೀತಿ, ಪ್ರಕೃತಿ ಹಾಗೂ ಸಮಕಾಲೀನ ಚಿಂತನೆಗಳನ್ನು ಒಳಗೊಂಡಿದ್ದವು ಎಂದು ಪ್ರಾಂಶುಪಾಲ ಡಾ. ಆರ್.ಎನ್. ಸುಬ್ಬರಾವ್ ಅವರು ಅಭಿಪ್ರಾಯಪಟ್ಟರು.</p><p>ಇಂದಿನ ತಂತ್ರಜ್ಞಾನ ಯುಗದಲ್ಲಿಯೂ ಯುವಕರು ಕಾವ್ಯದ ಮೂಲಕ ತಮ್ಮ ಭಾವನೆಗಳನ್ನು ಅಭಿವ್ಯಕ್ತಿಸುತ್ತಿರುವುದು ಆಶಾದಾಯಕ ಬೆಳವಣಿಗೆಯಾಗಿದೆ ಎಂದು ಸಂಯೋಜಕ ಕೀರ್ತಿ ಪಿ. ಅವರು ಹೇಳಿದರು.</p><p>ಕನ್ನಡ ವಿಭಾಗದ ಮುಖ್ಯಸ್ಥರಾದ ಡಾ. ಸಂತೋಷ್ ಕುಮಾರ್ ಆರ್. ಎಂ. ಅವರು ಮಾತನಾಡಿ, ಸಾಹಿತ್ಯ ಚಟುವಟಿಕೆಗಳು ವಿದ್ಯಾರ್ಥಿಗಳಲ್ಲಿ ಭಾಷಾ ಸಂವೇದನೆ, ಸೃಜನಶೀಲತೆ ಹಾಗೂ ಸಾಮಾಜಿಕ ಜವಾಬ್ದಾರಿಯನ್ನು ಬೆಳೆಸುವಲ್ಲಿ ಮಹತ್ವದ ಪಾತ್ರವಹಿಸುತ್ತವೆ ಎಂದು ತಿಳಿಸಿದರು. ಇಂತಹ ರಾಜ್ಯಮಟ್ಟದ ಸ್ಪರ್ಧೆಗಳು ಯುವ ಪ್ರತಿಭೆಗಳಿಗೆ ತಮ್ಮ ಸಾಹಿತ್ಯಿಕ ಸಾಮರ್ಥ್ಯ ಪ್ರದರ್ಶಿಸಲು ಸೂಕ್ತ ವೇದಿಕೆಯನ್ನು ಒದಗಿಸುತ್ತವೆ ಎಂದು ಹೇಳಿದರು.</p><p>ಸ್ಪರ್ಧೆಯಲ್ಲಿ ದಿ ನ್ಯಾಷನಲ್ ಕಾಲೇಜು, ಬಸವನಗುಡಿ, ಬೆಂಗಳೂರು ವಿದ್ಯಾರ್ಥಿನಿ ರುಚಿತಾ ಬಿ.ಎಸ್. ಅವರ ‘ಯುದ್ಧ’ ಕವಿತೆಗೆ ಪ್ರಥಮ ಸ್ಥಾನ ಲಭಿಸಿತು. ಶ್ರೀ ಸತ್ಯಸಾಯಿ ಯುನಿವರ್ಸಿಟಿ ಫಾರ್ ಹ್ಯೂಮನ್ ಎಕ್ಸಲೆನ್ಸ್, ಚಿಕ್ಕಬಳ್ಳಾಪುರದ ಸಿಂಧು ಶ್ರೀ ಅವರ ‘ಒಂದು ವಿಶ್ವ – ಒಂದು ಕುಟುಂಬ’ ಕವಿತೆಗೆ ದ್ವಿತೀಯ ಸ್ಥಾನ ದೊರೆಯಿತು. ಸೈಂಟ್ ಫ್ರಾನ್ಸಿಸ್ ಕಾಲೇಜಿನ ವರುಣ್ ಜಿ ಅವರ ‘ಭೂಮಿಗೆ ಬಂದ ಬೆಳಕಿನ ಅತಿಥಿ’ ಕವಿತೆಗೆ ತೃತೀಯ ಸ್ಥಾನ ಲಭಿಸಿತು. ವಿಜೇತ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪತ್ರಗಳು ಹಾಗೂ ಸ್ಮರಣಿಕೆಗಳನ್ನು ವಿತರಿಸಲಾಯಿತು. </p><p>ಕಾರ್ಯಕ್ರಮದಲ್ಲಿ ನಿರ್ದೇಶಕರಾದ ಡಾ. ಟೈಟಸ್ ಆಂಟೋ, ಪ್ರಾಂಶುಪಾಲರಾದ ಡಾ. ಆರ್. ಎನ್. ಸುಬ್ಬರಾವ್, ಐಕ್ಯುಎಸಿ ಸಂಯೋಜಕ ಡಾ. ಎನ್. ಅನುಷಾ, ಕನ್ನಡ ವಿಭಾಗದ ಮುಖ್ಯಸ್ಥ ಡಾ. ಸಂತೋಷ್ ಕುಮಾರ್ ಆರ್. ಎಂ. ಸಂಯೋಜಕರಾದ ಕೀರ್ತಿ ಪಿ. ಉಪಸ್ಥಿತರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು:</strong> ಇಲ್ಲಿನ ಸೈಂಟ್ ಫ್ರಾನ್ಸಿಸ್ ಕಾಲೇಜಿನ ಕನ್ನಡ ವಿಭಾಗದ ವತಿಯಿಂದ ಆಯೋಜಿಸಲಾದ ರಾಜ್ಯಮಟ್ಟದ ಸೈಂಟ್ ಫ್ರಾನ್ಸಿಸ್ ಕಾವ್ಯ ಸ್ಪರ್ಧೆಯ ಪ್ರಶಸ್ತಿ ಪತ್ರ ವಿತರಣೆ ಹಾಗೂ ಕವನ ಸಂಕಲನ ಬಿಡುಗಡೆ ಸಮಾರಂಭವು ಅದ್ಧೂರಿಯಾಗಿ ನೆರವೇರಿತು.</p><p>ಕಾರ್ಯಕ್ರಮದಲ್ಲಿ ರಾಜ್ಯದ ವಿವಿಧ ಕಾಲೇಜುಗಳಿಂದ ವಿದ್ಯಾರ್ಥಿಗಳು ಉತ್ಸಾಹದಿಂದ ಭಾಗವಹಿಸಿದ್ದರು. ಸ್ಪರ್ಧೆಗೆ ಆಗಮಿಸಿದ್ದ ಕವಿತೆಗಳು ಸಮಾಜದ ನೋವು, ಮಾನವೀಯ ಮೌಲ್ಯಗಳು, ಪ್ರೀತಿ, ಪ್ರಕೃತಿ ಹಾಗೂ ಸಮಕಾಲೀನ ಚಿಂತನೆಗಳನ್ನು ಒಳಗೊಂಡಿದ್ದವು ಎಂದು ಪ್ರಾಂಶುಪಾಲ ಡಾ. ಆರ್.ಎನ್. ಸುಬ್ಬರಾವ್ ಅವರು ಅಭಿಪ್ರಾಯಪಟ್ಟರು.</p><p>ಇಂದಿನ ತಂತ್ರಜ್ಞಾನ ಯುಗದಲ್ಲಿಯೂ ಯುವಕರು ಕಾವ್ಯದ ಮೂಲಕ ತಮ್ಮ ಭಾವನೆಗಳನ್ನು ಅಭಿವ್ಯಕ್ತಿಸುತ್ತಿರುವುದು ಆಶಾದಾಯಕ ಬೆಳವಣಿಗೆಯಾಗಿದೆ ಎಂದು ಸಂಯೋಜಕ ಕೀರ್ತಿ ಪಿ. ಅವರು ಹೇಳಿದರು.</p><p>ಕನ್ನಡ ವಿಭಾಗದ ಮುಖ್ಯಸ್ಥರಾದ ಡಾ. ಸಂತೋಷ್ ಕುಮಾರ್ ಆರ್. ಎಂ. ಅವರು ಮಾತನಾಡಿ, ಸಾಹಿತ್ಯ ಚಟುವಟಿಕೆಗಳು ವಿದ್ಯಾರ್ಥಿಗಳಲ್ಲಿ ಭಾಷಾ ಸಂವೇದನೆ, ಸೃಜನಶೀಲತೆ ಹಾಗೂ ಸಾಮಾಜಿಕ ಜವಾಬ್ದಾರಿಯನ್ನು ಬೆಳೆಸುವಲ್ಲಿ ಮಹತ್ವದ ಪಾತ್ರವಹಿಸುತ್ತವೆ ಎಂದು ತಿಳಿಸಿದರು. ಇಂತಹ ರಾಜ್ಯಮಟ್ಟದ ಸ್ಪರ್ಧೆಗಳು ಯುವ ಪ್ರತಿಭೆಗಳಿಗೆ ತಮ್ಮ ಸಾಹಿತ್ಯಿಕ ಸಾಮರ್ಥ್ಯ ಪ್ರದರ್ಶಿಸಲು ಸೂಕ್ತ ವೇದಿಕೆಯನ್ನು ಒದಗಿಸುತ್ತವೆ ಎಂದು ಹೇಳಿದರು.</p><p>ಸ್ಪರ್ಧೆಯಲ್ಲಿ ದಿ ನ್ಯಾಷನಲ್ ಕಾಲೇಜು, ಬಸವನಗುಡಿ, ಬೆಂಗಳೂರು ವಿದ್ಯಾರ್ಥಿನಿ ರುಚಿತಾ ಬಿ.ಎಸ್. ಅವರ ‘ಯುದ್ಧ’ ಕವಿತೆಗೆ ಪ್ರಥಮ ಸ್ಥಾನ ಲಭಿಸಿತು. ಶ್ರೀ ಸತ್ಯಸಾಯಿ ಯುನಿವರ್ಸಿಟಿ ಫಾರ್ ಹ್ಯೂಮನ್ ಎಕ್ಸಲೆನ್ಸ್, ಚಿಕ್ಕಬಳ್ಳಾಪುರದ ಸಿಂಧು ಶ್ರೀ ಅವರ ‘ಒಂದು ವಿಶ್ವ – ಒಂದು ಕುಟುಂಬ’ ಕವಿತೆಗೆ ದ್ವಿತೀಯ ಸ್ಥಾನ ದೊರೆಯಿತು. ಸೈಂಟ್ ಫ್ರಾನ್ಸಿಸ್ ಕಾಲೇಜಿನ ವರುಣ್ ಜಿ ಅವರ ‘ಭೂಮಿಗೆ ಬಂದ ಬೆಳಕಿನ ಅತಿಥಿ’ ಕವಿತೆಗೆ ತೃತೀಯ ಸ್ಥಾನ ಲಭಿಸಿತು. ವಿಜೇತ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪತ್ರಗಳು ಹಾಗೂ ಸ್ಮರಣಿಕೆಗಳನ್ನು ವಿತರಿಸಲಾಯಿತು. </p><p>ಕಾರ್ಯಕ್ರಮದಲ್ಲಿ ನಿರ್ದೇಶಕರಾದ ಡಾ. ಟೈಟಸ್ ಆಂಟೋ, ಪ್ರಾಂಶುಪಾಲರಾದ ಡಾ. ಆರ್. ಎನ್. ಸುಬ್ಬರಾವ್, ಐಕ್ಯುಎಸಿ ಸಂಯೋಜಕ ಡಾ. ಎನ್. ಅನುಷಾ, ಕನ್ನಡ ವಿಭಾಗದ ಮುಖ್ಯಸ್ಥ ಡಾ. ಸಂತೋಷ್ ಕುಮಾರ್ ಆರ್. ಎಂ. ಸಂಯೋಜಕರಾದ ಕೀರ್ತಿ ಪಿ. ಉಪಸ್ಥಿತರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>