<p>ತುಮಕೂರು: ದಿನದ ಆರಂಭಕ್ಕೆ ಬೆಳಕು ಹೇಗೆ ಕಾರಣವೋ ಹಾಗೆಯೇ ಪ್ರಕೃತಿ ತನ್ನ ಒಡಲಿನಿಂದ ಬದುಕಿಗೆ ಹೊಸ ಹುಟ್ಟು, ಹೊಸತನವನ್ನು ಕೊಡುವುದೇ ವಸಂತೋತ್ಸವ ಎಂದು ಅಂಬೇಡ್ಕರ್ ಕಾಲೇಜು ಪ್ರಾಂಶುಪಾಲರಾದ ಶಶಿಕಲಾ ಪುಟ್ಟರಾಜು ಅಭಿಪ್ರಾಯಪಟ್ಟರು.</p>.<p>ನಗರದ ಹೊರವಲಯದ ಬೆಳಗುಂಬದಲ್ಲಿ ಈಚೆಗೆ ಕುಂಚಶ್ರೀ ಮಹಿಳಾ ಬಳಗದ ವತಿಯಿಂದ ಆಯೋಜಿಸಿದ್ದ ವಸಂತೋತ್ಸವ, ಕವಿಗೋಷ್ಠಿ ಉದ್ಘಾಟಿಸಿ ಮಾತನಾಡಿದರು.</p>.<p>ವನ್ಯ ಜೀವಿ ಜಾಗೃತಿ ವೇದಿಕೆ ಅಧ್ಯಕ್ಷ ಬಿ.ವಿ.ಗುಂಡಪ್ಪ, ‘ಮಕ್ಕಳಿಗೆ ಮೊಬೈಲ್ ಕೊಡದೆ ಪ್ರಕೃತಿ ಜತೆ ಬೆರೆಯುವಂತೆ ಮಾಡಬೇಕು. ಪ್ರಕೃತಿಯಲ್ಲಿರುವ ಮರ-ಗಿಡ, ವೈವಿಧ್ಯಮಯ ಜೀವ ಪ್ರಭೇದಗಳಾದ ಇರುವೆಗಳ ಚಲನೆ ಗಮನಿಸುವಂತೆ ಮಾಡಿ ಮಕ್ಕಳ ಚಿಂತನಾ ಶೀಲತೆ ಬೆಳಸಬೇಕು’ ಎಂದು ಸಲಹೆ ಮಾಡಿದರು.</p>.<p>ಉದ್ಯಮಿ ಸುಮಂತ್ ಗೋವಿಂದಪ್ಪ, ‘ಪರಿಸರ ಸಂರಕ್ಷಣೆ ನಮ್ಮೆಲ್ಲರ ಹೊಣೆ. ಎಲ್ಲೆಂದರಲ್ಲಿ ಪ್ಲಾಸ್ಟಿಕ್ ಎಸೆಯದೆ ಪರಿಸರ ಸ್ವಚ್ಛವಾಗಿಟ್ಟುಕೊಳ್ಳಬೇಕು’ ಎಂದು ತಿಳಿಸಿದರು.</p>.<p>ಕುಂಚಶ್ರೀ ಮಹಿಳಾ ಬಳಗದ ಅಧ್ಯಕ್ಷೆ ಲಲಿತ ಮಲ್ಲಪ್ಪ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಪದಾಧಿಕಾರಿಗಳಾದ ಶೈಲಜಾ ಬಾಬು, ಪ್ರೇಮಾ ರಮೇಶ್, ರತ್ನ ನಾಗರಾಜು, ಸುವರ್ಣ ರಮೇಶ್, ಚಂದ್ರಕಲಾ, ಶಾರದಾ ನಾಗರಾಜು ಭಾಗವಹಿಸಿದ್ದರು.</p>.<p>ವಸಂತ ಋತುವಿನ ಕವಿಗೋಷ್ಠಿಯಲ್ಲಿ ಯಶೋದ ಕೃಷ್ಣ, ನೇತ್ರಾ ಗಿರೀಶ್, ಶೋಭಾ ಲಕ್ಷ್ಮಿಕಾಂತ್, ತ್ರಿವೇಣಿ ಇತರರು ಕವನ ವಾಚಿಸಿದರು. ಮಹಿಳೆಯರು ಪ್ರಕೃತಿ ಗೀತೆ ಹಾಡಿದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260430-17-1345380999</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ತುಮಕೂರು: ದಿನದ ಆರಂಭಕ್ಕೆ ಬೆಳಕು ಹೇಗೆ ಕಾರಣವೋ ಹಾಗೆಯೇ ಪ್ರಕೃತಿ ತನ್ನ ಒಡಲಿನಿಂದ ಬದುಕಿಗೆ ಹೊಸ ಹುಟ್ಟು, ಹೊಸತನವನ್ನು ಕೊಡುವುದೇ ವಸಂತೋತ್ಸವ ಎಂದು ಅಂಬೇಡ್ಕರ್ ಕಾಲೇಜು ಪ್ರಾಂಶುಪಾಲರಾದ ಶಶಿಕಲಾ ಪುಟ್ಟರಾಜು ಅಭಿಪ್ರಾಯಪಟ್ಟರು.</p>.<p>ನಗರದ ಹೊರವಲಯದ ಬೆಳಗುಂಬದಲ್ಲಿ ಈಚೆಗೆ ಕುಂಚಶ್ರೀ ಮಹಿಳಾ ಬಳಗದ ವತಿಯಿಂದ ಆಯೋಜಿಸಿದ್ದ ವಸಂತೋತ್ಸವ, ಕವಿಗೋಷ್ಠಿ ಉದ್ಘಾಟಿಸಿ ಮಾತನಾಡಿದರು.</p>.<p>ವನ್ಯ ಜೀವಿ ಜಾಗೃತಿ ವೇದಿಕೆ ಅಧ್ಯಕ್ಷ ಬಿ.ವಿ.ಗುಂಡಪ್ಪ, ‘ಮಕ್ಕಳಿಗೆ ಮೊಬೈಲ್ ಕೊಡದೆ ಪ್ರಕೃತಿ ಜತೆ ಬೆರೆಯುವಂತೆ ಮಾಡಬೇಕು. ಪ್ರಕೃತಿಯಲ್ಲಿರುವ ಮರ-ಗಿಡ, ವೈವಿಧ್ಯಮಯ ಜೀವ ಪ್ರಭೇದಗಳಾದ ಇರುವೆಗಳ ಚಲನೆ ಗಮನಿಸುವಂತೆ ಮಾಡಿ ಮಕ್ಕಳ ಚಿಂತನಾ ಶೀಲತೆ ಬೆಳಸಬೇಕು’ ಎಂದು ಸಲಹೆ ಮಾಡಿದರು.</p>.<p>ಉದ್ಯಮಿ ಸುಮಂತ್ ಗೋವಿಂದಪ್ಪ, ‘ಪರಿಸರ ಸಂರಕ್ಷಣೆ ನಮ್ಮೆಲ್ಲರ ಹೊಣೆ. ಎಲ್ಲೆಂದರಲ್ಲಿ ಪ್ಲಾಸ್ಟಿಕ್ ಎಸೆಯದೆ ಪರಿಸರ ಸ್ವಚ್ಛವಾಗಿಟ್ಟುಕೊಳ್ಳಬೇಕು’ ಎಂದು ತಿಳಿಸಿದರು.</p>.<p>ಕುಂಚಶ್ರೀ ಮಹಿಳಾ ಬಳಗದ ಅಧ್ಯಕ್ಷೆ ಲಲಿತ ಮಲ್ಲಪ್ಪ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಪದಾಧಿಕಾರಿಗಳಾದ ಶೈಲಜಾ ಬಾಬು, ಪ್ರೇಮಾ ರಮೇಶ್, ರತ್ನ ನಾಗರಾಜು, ಸುವರ್ಣ ರಮೇಶ್, ಚಂದ್ರಕಲಾ, ಶಾರದಾ ನಾಗರಾಜು ಭಾಗವಹಿಸಿದ್ದರು.</p>.<p>ವಸಂತ ಋತುವಿನ ಕವಿಗೋಷ್ಠಿಯಲ್ಲಿ ಯಶೋದ ಕೃಷ್ಣ, ನೇತ್ರಾ ಗಿರೀಶ್, ಶೋಭಾ ಲಕ್ಷ್ಮಿಕಾಂತ್, ತ್ರಿವೇಣಿ ಇತರರು ಕವನ ವಾಚಿಸಿದರು. ಮಹಿಳೆಯರು ಪ್ರಕೃತಿ ಗೀತೆ ಹಾಡಿದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260430-17-1345380999</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>