<p>ವಿಜಯಪುರ : ಸಾಹಿತ್ಯ, ಶಿಕ್ಷಣದ ಮೂಲಕ ಗಡಿ ಭಾಗದಲ್ಲಿ ಕನ್ನಡದ ಹೂವನ್ನು ಅರಳಿಸುವ ನಿಟ್ಟಿನಲ್ಲಿ ಪ್ರಯತ್ನಿಸುತ್ತಿರುವ ಗಡಿನಾಡು ಅಭಿವೃದ್ಧಿ ಪ್ರಾಧಿಕಾರದ ಗಡಿನಾಡು ಚೇತನ ಪ್ರಶಸ್ತಿಗೂ ಭಾಜನರಾಗಿರುವ ಎನ್.ಆರ್.ಕುಲಕರ್ಣಿ ಅವರನ್ನು ಪುಸ್ತಕಗಳ ಮೂಲಕ ತುಲಾಭಾರ ಮಾಡಿ ಅಪೂರ್ವ ರೀತಿಯಲ್ಲಿ ಅವರ ಸೇವೆಯನ್ನು ಗೌರವಿಸಲಾಯಿತು.</p>.<p>ನಗರದ ಅನಂತ ಲಕ್ಷ್ಮೀ ಮಂಗಲ ಕಾರ್ಯಾಲಯದಲ್ಲಿ ಈಚೆಗೆ ನಡೆದ ಸಮಾರಂಭದಲ್ಲಿ ಅವರ ಜೀವನ ಸಾಧನೆ, ಗಡಿ ಭಾಗದಲ್ಲಿ ಅಪೂರ್ವ ಸಾಹಿತ್ಯ ಸೇವೆಯನ್ನು ತಿಳಿಸುವ ಅಭಿನಂದನಾ ಗ್ರಂಥ ಸಹ ಬಿಡುಗಡೆಗೊಂಡಿತು.</p>.<p>ಗ್ರಂಥ ಬಿಡುಗಡೆಗೊಳಿಸಿದ ಗಡಿನಾಡು ಅಭಿವೃದ್ಧಿ ಪ್ರಾಧಿಕಾರದ ಸದಸ್ಯ ಎಂ.ಎಸ್. ಮದಭಾವಿ ಮಾತನಾಡಿ, ಜೀವನದಲ್ಲಿ ಸಾಧನೆ ಮಾಡಿದವರನ್ನು ಸನ್ಮಾನಿಸುವುದು ನಮ್ಮ ಪರಂಪರೆ. ಮಾಸ್ತರ ಎಂದು ಸಂಬೋಧಿಸುವುದಕ್ಕೆ ಒಂದು ಗೌರವ ಸೂಚಕವಾಗಿದೆ ಹಾಗೂ ಸರ್ವಶ್ರೇಷ್ಠವಾಗಿದೆ. ಈ ಹಿನ್ನೆಲೆಯಲ್ಲಿ ಬೇಂದ್ರೆ-ಸಿಂಪಿ ಲಿಂಗಣ್ಣನವರನ್ನು ಮಾಸ್ತರ ಎಂದೇ ಜನಜನೀತರಾಗಿರುವರು. ಪ್ರಾಥಮಿಕ ಶಾಲಾ ಶಿಕ್ಷಕರು ಜಿಲ್ಲೆಯಲ್ಲಿ ಮಾಡಿದ ಸೇವೆ ಅಪಾರ. ಕುಲಕರ್ಣಿ ಅವರು ಜಾತ್ಯಾತೀತತೆಯನ್ನು ಅಪ್ಪಿಕೊಂಡ ವ್ಯಕ್ತಿಯಾಗಿದ್ದು, ಅವರ ಹೃದಯ ವೈಶಾಲ್ಯತೆ ವರ್ಣನಾತೀತ ಎಂದರು.</p>.<p>ಜಿಲ್ಲಾ ವೀರಶೈವ ಲಿಂಗಾಯತ ಮಹಾಸಭೆ ಅಧ್ಯಕ್ಷ ವಿ.ಸಿ. ನಾಗಠಾಣ ಮಾತನಾಡಿದರು.</p>.<p>ಎನ್.ಆರ್. ಕುಲಕರ್ಣಿ ಅವರು ರಚಿಸಿದ `ಹಣ್ಣೆಲೆಯ ಹಸಿರು ನೆನಪುಗಳು' ಗ್ರಂಥ ಕುರಿತು ಉಪನ್ಯಾಸಕ ಪ್ರೋ ಯು.ಎನ್. ಕುಂಟೋಜಿ ಮಾತನಾಡಿದರು. ಪಂ.ಪ್ರಕಾಶಾಚಾರ್ಯ ಮದಭಾವಿ, ಡಾ.ಜಿ.ಡಿ. ಕೊಟ್ನಾಳ, ವಿ.ಎಸ್. ಖಾಡೆ, ಎಸ್.ಬಿ. ಬಾಗೇವಾಡಿ, ವಿದ್ಯಾವತಿ ಅಂಕಲಗಿ, ಸುಜಾತಾ ಪಟ್ಟಣಶೆಟ್ಟಿ, ಪಂಡಿತರಾವ ಪಾಟೀಲ, ಜಿ.ಎಸ್.ಕುಲಕರ್ಣಿ ಇದ್ದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260512-26-1105812851</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ವಿಜಯಪುರ : ಸಾಹಿತ್ಯ, ಶಿಕ್ಷಣದ ಮೂಲಕ ಗಡಿ ಭಾಗದಲ್ಲಿ ಕನ್ನಡದ ಹೂವನ್ನು ಅರಳಿಸುವ ನಿಟ್ಟಿನಲ್ಲಿ ಪ್ರಯತ್ನಿಸುತ್ತಿರುವ ಗಡಿನಾಡು ಅಭಿವೃದ್ಧಿ ಪ್ರಾಧಿಕಾರದ ಗಡಿನಾಡು ಚೇತನ ಪ್ರಶಸ್ತಿಗೂ ಭಾಜನರಾಗಿರುವ ಎನ್.ಆರ್.ಕುಲಕರ್ಣಿ ಅವರನ್ನು ಪುಸ್ತಕಗಳ ಮೂಲಕ ತುಲಾಭಾರ ಮಾಡಿ ಅಪೂರ್ವ ರೀತಿಯಲ್ಲಿ ಅವರ ಸೇವೆಯನ್ನು ಗೌರವಿಸಲಾಯಿತು.</p>.<p>ನಗರದ ಅನಂತ ಲಕ್ಷ್ಮೀ ಮಂಗಲ ಕಾರ್ಯಾಲಯದಲ್ಲಿ ಈಚೆಗೆ ನಡೆದ ಸಮಾರಂಭದಲ್ಲಿ ಅವರ ಜೀವನ ಸಾಧನೆ, ಗಡಿ ಭಾಗದಲ್ಲಿ ಅಪೂರ್ವ ಸಾಹಿತ್ಯ ಸೇವೆಯನ್ನು ತಿಳಿಸುವ ಅಭಿನಂದನಾ ಗ್ರಂಥ ಸಹ ಬಿಡುಗಡೆಗೊಂಡಿತು.</p>.<p>ಗ್ರಂಥ ಬಿಡುಗಡೆಗೊಳಿಸಿದ ಗಡಿನಾಡು ಅಭಿವೃದ್ಧಿ ಪ್ರಾಧಿಕಾರದ ಸದಸ್ಯ ಎಂ.ಎಸ್. ಮದಭಾವಿ ಮಾತನಾಡಿ, ಜೀವನದಲ್ಲಿ ಸಾಧನೆ ಮಾಡಿದವರನ್ನು ಸನ್ಮಾನಿಸುವುದು ನಮ್ಮ ಪರಂಪರೆ. ಮಾಸ್ತರ ಎಂದು ಸಂಬೋಧಿಸುವುದಕ್ಕೆ ಒಂದು ಗೌರವ ಸೂಚಕವಾಗಿದೆ ಹಾಗೂ ಸರ್ವಶ್ರೇಷ್ಠವಾಗಿದೆ. ಈ ಹಿನ್ನೆಲೆಯಲ್ಲಿ ಬೇಂದ್ರೆ-ಸಿಂಪಿ ಲಿಂಗಣ್ಣನವರನ್ನು ಮಾಸ್ತರ ಎಂದೇ ಜನಜನೀತರಾಗಿರುವರು. ಪ್ರಾಥಮಿಕ ಶಾಲಾ ಶಿಕ್ಷಕರು ಜಿಲ್ಲೆಯಲ್ಲಿ ಮಾಡಿದ ಸೇವೆ ಅಪಾರ. ಕುಲಕರ್ಣಿ ಅವರು ಜಾತ್ಯಾತೀತತೆಯನ್ನು ಅಪ್ಪಿಕೊಂಡ ವ್ಯಕ್ತಿಯಾಗಿದ್ದು, ಅವರ ಹೃದಯ ವೈಶಾಲ್ಯತೆ ವರ್ಣನಾತೀತ ಎಂದರು.</p>.<p>ಜಿಲ್ಲಾ ವೀರಶೈವ ಲಿಂಗಾಯತ ಮಹಾಸಭೆ ಅಧ್ಯಕ್ಷ ವಿ.ಸಿ. ನಾಗಠಾಣ ಮಾತನಾಡಿದರು.</p>.<p>ಎನ್.ಆರ್. ಕುಲಕರ್ಣಿ ಅವರು ರಚಿಸಿದ `ಹಣ್ಣೆಲೆಯ ಹಸಿರು ನೆನಪುಗಳು' ಗ್ರಂಥ ಕುರಿತು ಉಪನ್ಯಾಸಕ ಪ್ರೋ ಯು.ಎನ್. ಕುಂಟೋಜಿ ಮಾತನಾಡಿದರು. ಪಂ.ಪ್ರಕಾಶಾಚಾರ್ಯ ಮದಭಾವಿ, ಡಾ.ಜಿ.ಡಿ. ಕೊಟ್ನಾಳ, ವಿ.ಎಸ್. ಖಾಡೆ, ಎಸ್.ಬಿ. ಬಾಗೇವಾಡಿ, ವಿದ್ಯಾವತಿ ಅಂಕಲಗಿ, ಸುಜಾತಾ ಪಟ್ಟಣಶೆಟ್ಟಿ, ಪಂಡಿತರಾವ ಪಾಟೀಲ, ಜಿ.ಎಸ್.ಕುಲಕರ್ಣಿ ಇದ್ದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260512-26-1105812851</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>