<p>ಯಾದಗಿರಿ: ಎರಡು ತಿಂಗಳು ಬೇಸಿಗೆ ರಜೆಯ ಮಜಾ ಅನುಭವಿಸಿದ ಚಿಣ್ಣರು ಸೋಮವಾರ ನಗುಮೊಗದಲ್ಲಿ ನಲಿ ಯುತ ಕುಣಿಯುತ ಶಾಲೆಗೆ ಬಂದರು. ಶಿಕ್ಷಕರೂ ಮಕ್ಕಳಿಗೆ ಹೂವುಗಳನ್ನು ನೀಡಿ ಸಂತಸದಿಂದ ಬರಮಾಡಿಕೊಂಡರು.</p>.<p>ಶಿಕ್ಷಣ ಇಲಾಖೆಯು ‘ಉತ್ತಮ ಕಲಿಕೆ, ಉಜ್ವಲ ಭವಿಷ್ಯ’ ಧ್ಯೇಯವಾಕ್ಯದೊಂದಿಗೆ 2026–27ನೇ ಸಾಲಿನ ಶೈಕ್ಷಣಿಕ ವರ್ಷವನ್ನು ಅದ್ದೂರಿಯಾಗಿ ಆರಂಭ ಮಾಡಿದ್ದು, ಮೊದಲ ದಿನ ಶಾಲೆಗಳಲ್ಲಿ ಹಬ್ಬದ ಸಂಭ್ರಮ ಮನೆಮಾಡಿತ್ತು.</p>.<p>ಶಾಲೆಯ ಶಿಕ್ಷಕರು, ಎಸ್ಡಿಎಂಸಿ ಸದಸ್ಯರು ವಿದ್ಯಾರ್ಥಿಗಳನ್ನು ಬರಮಾಡಿಕೊಳ್ಳಲು ಬೆಳಿಗ್ಗೆಯಿಂದಲೇ ಸಿದ್ಧತೆಯಲ್ಲಿ ತೊಡಗಿದ್ದರು. ಶಾಲಾ ಪ್ರವೇಶ ದ್ವಾರದಲ್ಲಿ ತೆಂಗಿನ ಗರಿ ಹಾಗೂ ಮಾವಿನ ತಳೀರು ತೋರಣ ಕಟ್ಟಿ ಸಿಂಗರಿಸಿದ್ದರು.</p>.<p>ಶಾಲೆಯ ಪ್ರವೇಶ ದ್ವಾರ, ಆವರಣದಲ್ಲಿ ‘ಉತ್ತಮ ಕಲಿಕೆ, ಉಜ್ವಲ ಭವಿಷ್ಯ’, 2026–27ನೇ ಸಾಲಿನ ಶೈಕ್ಷಣಿಕ ವರ್ಷ’, ‘ಶಾಲೆಗೆ ಸ್ವಾಗತ’ ಸೇರಿ ಹಲವು ಬಗೆಯ ಸಂದೇಶಗಳನ್ನು ರಂಗೋಲಿಯಲ್ಲಿ ಬಿಡಿಸಲಾಯಿತು.</p>.<p>ಮೊದಲ ದಿನ ಮಕ್ಕಳು ಸಾಲಾಗಿ ನಿಂತು ಶಾಲೆಯ ಆವರಣವನ್ನು ಪ್ರವೇಶಿಸಿದರು. ಶಿಕ್ಷಕರು, ಎಸ್ಡಿಎಂಸಿ ಸದಸ್ಯರು ಮಕ್ಕಳ ಮೇಲೆ ಹೂಗಳನ್ನು ಹಾಕಿ ಹೂವು, ಚಾಕೊಲೇಟ್ ನೀಡಿ ಸಂಭ್ರಮದಿಂದ ಸ್ವಾಗತಿಸಿದರು.</p>.<p>ಕೆಲವು ಶಾಲೆಗಳ ತರಗತಿಯ ಕೋಣೆಯಲ್ಲಿ ಸರಸ್ವತಿಯ ಫೋಟೊವನ್ನು ಇರಿಸಿ ಪೂಜೆ ಮಾಡಿ, ಪ್ರಾರ್ಥನೆ ಗೀತೆಯನ್ನು ಹಾಡಿ ಮಂಗಳಕರವಾದ ರೀತಿಯಲ್ಲಿ ಪ್ರಸಕ್ತ ವರ್ಷದ ಮಕ್ಕಳ ಕಲಿಕೆಯನ್ನು ಆರಂಭ ಮಾಡಲಾಗಿದೆ.</p>.<p>ಮಕ್ಕಳು ಶಾಲೆಗೆ ಬಂದ ಮೊದಲ ದಿನವೇ ಸಮವಸ್ತ್ರ ಹಾಗೂ ಪಠ್ಯಪುಸ್ತಕಗಳನ್ನು ಕೈಗೆ ನೀಡಲು ಸರ್ಕಾರಿ ಶಾಲೆಗಳ ಶಿಕ್ಷಕರು ಸಾಕಷ್ಟು ತಯಾರಿ ಮಾಡಿಕೊಂಡಿದ್ದರು.</p>.<p>ಅಂತೆಯೇ, ಶಾಲೆಗೆ ಬಂದಂತಹ ಮಕ್ಕಳಿಗೆ ಪಠ್ಯಪುಸ್ತಕಗಳು ಹಾಗೂ ಸಮವಸ್ತ್ರಗಳನ್ನು ಕೈಗಿಟ್ಟರು. ಶಾಲೆಗಳಲ್ಲಿ ಮಕ್ಕಳಿಗೆ ಸಿಹಿ ಭೋಜನದ ವ್ಯವಸ್ಥೆ ಮಾಡಲಾಗಿತ್ತು. ‘ಸರ್ಕಾರಿ ಶಾಲೆಗೆ ಮಕ್ಕಳನ್ನು ಕಳುಹಿಸಿ’ ಎನ್ನುವ ಮುಖೇನ ದಾಖಲಾತಿ ಆಂದೋಲನವೂ ನಡೆಸಲಾಯಿತು.</p>.<p>‘ಪ್ರಸಕ್ತ ವರ್ಷದಲ್ಲಿ ಮಕ್ಕಳಿಗೆ ಇನ್ನಷ್ಟು ಉತ್ತಮ ಗುಣಮಟ್ಟದ ಶಿಕ್ಷಣ ನೀಡುವ ಆಸೆಯೊಂದಿಗೆ ಶಾಲೆಯನ್ನು ಆರಂಭಿಸಿದ್ದೇವೆ. ಬಂದಂತಹ ಮಕ್ಕಳಿಗೆ ಪಠ್ಯ ಪುಸ್ತಕ, ಸಮಸ್ತ್ರಗಳನ್ನು ಕೊಟ್ಟು, ಸಿಹಿಯಾದ ಬಿಸಿಯೂಟವನ್ನು ಬಡಿಸಿದ್ದೇವೆ. ಎಸ್ಎಸ್ಎಲ್ಸಿ ಫಲಿತಾಂಶದಲ್ಲಿ ನಮ್ಮ ಶಾಲೆಗೆ</p>.<p>ಶೇ 92.03ರಷ್ಟು ಬಂದಿತ್ತು. ಈ ವರ್ಷ 100 ಪರ್ಸೆಂಟ್ ಫಲಿತಾಂಶ ಸಾಧಿಸುವ ಗುರಿ ಇಟ್ಟುಕೊಂಡಿದ್ದೇವೆ’ ಎಂದು ಸರ್ಕಾರಿ ಪ್ರೌಢಶಾಲೆ ಸ್ಟೇಷನ್ ಬಜಾರ್ ಶಾಲೆಯ ಮುಖ್ಯಶಿಕ್ಷಕ ಮಲ್ಲಿಕಾರ್ಜುನ ಪೂಜಾರಿ ಹೇಳಿದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260602-30-1323562336</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಯಾದಗಿರಿ: ಎರಡು ತಿಂಗಳು ಬೇಸಿಗೆ ರಜೆಯ ಮಜಾ ಅನುಭವಿಸಿದ ಚಿಣ್ಣರು ಸೋಮವಾರ ನಗುಮೊಗದಲ್ಲಿ ನಲಿ ಯುತ ಕುಣಿಯುತ ಶಾಲೆಗೆ ಬಂದರು. ಶಿಕ್ಷಕರೂ ಮಕ್ಕಳಿಗೆ ಹೂವುಗಳನ್ನು ನೀಡಿ ಸಂತಸದಿಂದ ಬರಮಾಡಿಕೊಂಡರು.</p>.<p>ಶಿಕ್ಷಣ ಇಲಾಖೆಯು ‘ಉತ್ತಮ ಕಲಿಕೆ, ಉಜ್ವಲ ಭವಿಷ್ಯ’ ಧ್ಯೇಯವಾಕ್ಯದೊಂದಿಗೆ 2026–27ನೇ ಸಾಲಿನ ಶೈಕ್ಷಣಿಕ ವರ್ಷವನ್ನು ಅದ್ದೂರಿಯಾಗಿ ಆರಂಭ ಮಾಡಿದ್ದು, ಮೊದಲ ದಿನ ಶಾಲೆಗಳಲ್ಲಿ ಹಬ್ಬದ ಸಂಭ್ರಮ ಮನೆಮಾಡಿತ್ತು.</p>.<p>ಶಾಲೆಯ ಶಿಕ್ಷಕರು, ಎಸ್ಡಿಎಂಸಿ ಸದಸ್ಯರು ವಿದ್ಯಾರ್ಥಿಗಳನ್ನು ಬರಮಾಡಿಕೊಳ್ಳಲು ಬೆಳಿಗ್ಗೆಯಿಂದಲೇ ಸಿದ್ಧತೆಯಲ್ಲಿ ತೊಡಗಿದ್ದರು. ಶಾಲಾ ಪ್ರವೇಶ ದ್ವಾರದಲ್ಲಿ ತೆಂಗಿನ ಗರಿ ಹಾಗೂ ಮಾವಿನ ತಳೀರು ತೋರಣ ಕಟ್ಟಿ ಸಿಂಗರಿಸಿದ್ದರು.</p>.<p>ಶಾಲೆಯ ಪ್ರವೇಶ ದ್ವಾರ, ಆವರಣದಲ್ಲಿ ‘ಉತ್ತಮ ಕಲಿಕೆ, ಉಜ್ವಲ ಭವಿಷ್ಯ’, 2026–27ನೇ ಸಾಲಿನ ಶೈಕ್ಷಣಿಕ ವರ್ಷ’, ‘ಶಾಲೆಗೆ ಸ್ವಾಗತ’ ಸೇರಿ ಹಲವು ಬಗೆಯ ಸಂದೇಶಗಳನ್ನು ರಂಗೋಲಿಯಲ್ಲಿ ಬಿಡಿಸಲಾಯಿತು.</p>.<p>ಮೊದಲ ದಿನ ಮಕ್ಕಳು ಸಾಲಾಗಿ ನಿಂತು ಶಾಲೆಯ ಆವರಣವನ್ನು ಪ್ರವೇಶಿಸಿದರು. ಶಿಕ್ಷಕರು, ಎಸ್ಡಿಎಂಸಿ ಸದಸ್ಯರು ಮಕ್ಕಳ ಮೇಲೆ ಹೂಗಳನ್ನು ಹಾಕಿ ಹೂವು, ಚಾಕೊಲೇಟ್ ನೀಡಿ ಸಂಭ್ರಮದಿಂದ ಸ್ವಾಗತಿಸಿದರು.</p>.<p>ಕೆಲವು ಶಾಲೆಗಳ ತರಗತಿಯ ಕೋಣೆಯಲ್ಲಿ ಸರಸ್ವತಿಯ ಫೋಟೊವನ್ನು ಇರಿಸಿ ಪೂಜೆ ಮಾಡಿ, ಪ್ರಾರ್ಥನೆ ಗೀತೆಯನ್ನು ಹಾಡಿ ಮಂಗಳಕರವಾದ ರೀತಿಯಲ್ಲಿ ಪ್ರಸಕ್ತ ವರ್ಷದ ಮಕ್ಕಳ ಕಲಿಕೆಯನ್ನು ಆರಂಭ ಮಾಡಲಾಗಿದೆ.</p>.<p>ಮಕ್ಕಳು ಶಾಲೆಗೆ ಬಂದ ಮೊದಲ ದಿನವೇ ಸಮವಸ್ತ್ರ ಹಾಗೂ ಪಠ್ಯಪುಸ್ತಕಗಳನ್ನು ಕೈಗೆ ನೀಡಲು ಸರ್ಕಾರಿ ಶಾಲೆಗಳ ಶಿಕ್ಷಕರು ಸಾಕಷ್ಟು ತಯಾರಿ ಮಾಡಿಕೊಂಡಿದ್ದರು.</p>.<p>ಅಂತೆಯೇ, ಶಾಲೆಗೆ ಬಂದಂತಹ ಮಕ್ಕಳಿಗೆ ಪಠ್ಯಪುಸ್ತಕಗಳು ಹಾಗೂ ಸಮವಸ್ತ್ರಗಳನ್ನು ಕೈಗಿಟ್ಟರು. ಶಾಲೆಗಳಲ್ಲಿ ಮಕ್ಕಳಿಗೆ ಸಿಹಿ ಭೋಜನದ ವ್ಯವಸ್ಥೆ ಮಾಡಲಾಗಿತ್ತು. ‘ಸರ್ಕಾರಿ ಶಾಲೆಗೆ ಮಕ್ಕಳನ್ನು ಕಳುಹಿಸಿ’ ಎನ್ನುವ ಮುಖೇನ ದಾಖಲಾತಿ ಆಂದೋಲನವೂ ನಡೆಸಲಾಯಿತು.</p>.<p>‘ಪ್ರಸಕ್ತ ವರ್ಷದಲ್ಲಿ ಮಕ್ಕಳಿಗೆ ಇನ್ನಷ್ಟು ಉತ್ತಮ ಗುಣಮಟ್ಟದ ಶಿಕ್ಷಣ ನೀಡುವ ಆಸೆಯೊಂದಿಗೆ ಶಾಲೆಯನ್ನು ಆರಂಭಿಸಿದ್ದೇವೆ. ಬಂದಂತಹ ಮಕ್ಕಳಿಗೆ ಪಠ್ಯ ಪುಸ್ತಕ, ಸಮಸ್ತ್ರಗಳನ್ನು ಕೊಟ್ಟು, ಸಿಹಿಯಾದ ಬಿಸಿಯೂಟವನ್ನು ಬಡಿಸಿದ್ದೇವೆ. ಎಸ್ಎಸ್ಎಲ್ಸಿ ಫಲಿತಾಂಶದಲ್ಲಿ ನಮ್ಮ ಶಾಲೆಗೆ</p>.<p>ಶೇ 92.03ರಷ್ಟು ಬಂದಿತ್ತು. ಈ ವರ್ಷ 100 ಪರ್ಸೆಂಟ್ ಫಲಿತಾಂಶ ಸಾಧಿಸುವ ಗುರಿ ಇಟ್ಟುಕೊಂಡಿದ್ದೇವೆ’ ಎಂದು ಸರ್ಕಾರಿ ಪ್ರೌಢಶಾಲೆ ಸ್ಟೇಷನ್ ಬಜಾರ್ ಶಾಲೆಯ ಮುಖ್ಯಶಿಕ್ಷಕ ಮಲ್ಲಿಕಾರ್ಜುನ ಪೂಜಾರಿ ಹೇಳಿದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260602-30-1323562336</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>