<p><strong>ಕೊಪ್ಪಳ:</strong> ದ್ವಿತೀಯ ವರ್ಷದ ಪದವಿಪೂರ್ವ ಪರೀಕ್ಷೆ ಬರೆದ ದಿನದಿಂದಲೇ ಕುತೂಹಲದಿಂದ ಕಾಯುತ್ತಿದ್ದ ಫಲಿತಾಂಶ ಪ್ರಕಟವಾಗಿದ್ದು, ಜಿಲ್ಲೆಯ ವಿದ್ಯಾರ್ಥಿಗಳು ಹಿಂದಿನ ಎಲ್ಲ ವರ್ಷಕ್ಕಿಂತಲೂ ಉತ್ತಮ ಸಾಧನೆ ಮಾಡಿದ್ದಾರೆ.</p>.<p>ಹೀಗಾಗಿ ಭವಿಷ್ಯ ಸುಂದರವಾಗಿ ರೂಪಿಸಿಕೊಳ್ಳಲು ವಿದ್ಯಾರ್ಥಿಗಳಲ್ಲಿ ಯಾವ ಕೋರ್ಸ್ ಆಯ್ಕೆ ಮಾಡಿಕೊಳ್ಳಬೇಕು ಎನ್ನುವ ಪ್ರಶ್ನೆಯೂ ಕಾಡುತ್ತಿದ್ದು, ಸಮಯೋಚಿತ ಮತ್ತು ಸ್ಪರ್ಧಾತ್ಮಕ ಸವಾಲಿಗೆ ತಕ್ಕಂತೆ ಆಯ್ಕೆ ಮಹತ್ವ ಪಡೆದುಕೊಂಡಿದೆ. ತಮ್ಮೂರು, ತಮ್ಮ ಜಿಲ್ಲೆ ಬಿಟ್ಟು ಹೋಗಲಾಗದೆ ಇದ್ದ ಜಿಲ್ಲೆಯಲ್ಲಿಯೇ ಓದು ಮುಂದುವರಿಸಲು ಬಯಸುವವರಿಗೂ ಜಿಲ್ಲೆಯಲ್ಲಿಯೇ ಹೇರಳ ಅವಕಾಶಗಳು ಹಾಗೂ ಕೋರ್ಸ್ಗಳು ಇವೆ.</p>.<p>ವಿಜ್ಞಾನ ವಿಭಾಗದಲ್ಲಿ ಉತ್ತಮ ಅಂಕಗಳೊಂದಿಗೆ ತೇರ್ಗಡೆ ಹೊಂದಿದವರು ಈಗ ಸಿಇಟಿ, ಎನ್ಇಇಟಿ ಹಾಗೂ ಜೆಇಇ ಪರೀಕ್ಷೆಗಾಗಿ ಸಿದ್ಧತೆಯಲ್ಲಿ ತೊಡಗಿದ್ದಾರೆ. ಅಲ್ಲಿ ಪಡೆಯುವ ಫಲಿತಾಂಶದ ಆಧಾರದ ಮೇಲೆ ಕೋರ್ಸ್ಗಳ ಆಯ್ಕೆ ಬಗ್ಗೆ ನಿರ್ದಿಷ್ಟವಾಗಿ ಗೊತ್ತಾಗಲಿದೆ. ಎಂಜಿನಿಯರಿಂಗ್ನಲ್ಲಿ ಬಿಇ, ಬಿಟೆಕ್, ವೈದ್ಯಕೀಯ, ವಿಜ್ಞಾನ, ಕೃಷಿ ವಿಜ್ಞಾನ, ಫಾರ್ಮಸಿ, ವಾಸ್ತುಶಿಲ್ಪ ಹಾಗೂ ಪ್ಯಾರಾಮೆಡಿಕಲ್ ಕೋರ್ಸ್ಗಳು ಸೇರಿದಂತೆ ಹಲವು ಅವಕಾಶಗಳಿವೆ.</p>.<p>ವಾಣಿಜ್ಯ ವಿಭಾಗದಲ್ಲಿ ಉತ್ತಮ ಅಂಕಗಳನ್ನು ಗಳಿಸಿದವರು ಬಿಕಾಂ ಪದವಿ ಮಾಡಬಹುದು, ಬಿಬಿಎ, ಬಿಬಿಎಂ, ಸಿಎ, ಸಿಎಸ್., ಸಿಎಂಎ, ಬ್ಯಾಂಕಿಂಗ್, ಫೈನಾನ್ಸ್, ಹೋಟೆಲ್ ಮ್ಯಾನೇಜಮೆಂಟ್ ಕೋರ್ಸ್ಗಳನ್ನು ಕಲಿಯಬಹುದು. ಕಲಾ ವಿಭಾಗದಲ್ಲಿ ಉತ್ತೀರ್ಣರಾದವರು ಬಿಎ ಪದವಿ, ಪತ್ರಿಕೋದ್ಯಮ ಹಾಗೂ ಸಮೂಹ ಸಂವಹನ ಕೋರ್ಸ್ ಮಾಡಬಹುದು. ಇದಕ್ಕಾಗಿ ಜಿಲ್ಲೆಯಲ್ಲಿ ವಿವಿಧ ಪದವಿ ಕಾಲೇಜುಗಳಲ್ಲಿ ಸೌಲಭ್ಯವಿದೆ. ಐದು ವರ್ಷಗಳ ಕಾನೂನು (ಎಲ್ಎಲ್ಬಿ) ಪದವಿ, ಸಮಾಜಕಾರ್ಯ (ಬಿಎಸ್ಡಬ್ಲ್ಯು), ಲಲಿತ ಕಲೆ, ಬಿಇಡಿ ಸೇರಿದಂತೆ ಅನೇಕ ಕೋರ್ಸ್ಗಳು ಇವೆ. ಸರ್ಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರದಲ್ಲಿ (ಜಿಟಿಟಿಸಿ) ಕೋರ್ಸ್ ಆಯ್ಕೆ ಮಾಡಿಕೊಳ್ಳಬಹುದು.</p>.<p>ಕೌಶಲಕ್ಕೂ ಬೇಕು ಒತ್ತು: ವಿಜ್ಞಾನ, ವಾಣಿಜ್ಯ ಹಾಗೂ ಕಲಾ ಇದರಲ್ಲಿ ಯಾವುದೇ ವಿಭಾಗದಲ್ಲಿ ಉತ್ತೀರ್ಣರಾಗಿದ್ದರೆ ವಿದ್ಯಾರ್ಥಿಗಳು ಆಯ್ಕೆ ಮಾಡಿಕೊಳ್ಳುವ ಕೋರ್ಸ್ಗಳ ಆಧಾರದ ಮೇಲೆ ಭವಿಷ್ಯ ರೂಪುಗೊಳ್ಳುತ್ತದೆ.</p>.<p>ಇದು ಬಹುಕೌಶಲಗಳ ಸ್ಪರ್ಧಾತ್ಮಕ ಕಾಲವಾಗಿರುವುದರಿಂದ ಕೋರ್ಸ್ಗಳ ಜೊತೆಗೆ ಪರಿಣಾಮಕಾರಿ ಸಂವಹನ ಕೌಶಲ, ಸರಾಗವಾಗಿ ಕನ್ನಡ, ಇಂಗ್ಲಿಷ್, ಹಿಂದಿ ಭಾಷೆಗಳ ಕಲಿಕೆ, ಕಂಪ್ಯೂಟರ್ ಜ್ಞಾನ ಕಲಿತುಕೊಳ್ಳುವ ಅಗತ್ಯವಿದೆ. ಪ್ರಸ್ತುತ ದಿನಮಾನಗಳಲ್ಲಿ ವಿದ್ಯಾರ್ಥಿಗಳಿಗೆ, ಯುವಜನತೆಗೆ ಹಾಗೂ ಉದ್ಯೋಗಿಗಳಿಗೆ ಸವಾಲು ಒಡ್ಡಿರುವ ಎಐ ತಂತ್ರಜ್ಞಾನ ಕಲಿಯುವುದು ಅಗತ್ಯವಿದೆ.</p>.<p>ಈಗಾಗಲೇ ಬಹಳಷ್ಟು ಕಡೆಗಳಲ್ಲಿ ಎಐ ತಂತ್ರಜ್ಞಾನವನ್ನು ಅನೇಕ ಕಚೇರಿಗಳಲ್ಲಿ ಅಳವಡಿಸಿಕೊಳ್ಳಲಾಗಿದ್ದು ಈಗ ಪಿಯುಸಿ ಮುಗಿಸಿ ಮುಂದಿನ ವ್ಯಾಸಂಗಕ್ಕೆ ಅಣಿಯಾಗುವ ವಿದ್ಯಾರ್ಥಿಗಳು ಈ ದಿಸೆಯಿಂದಲೇ ಎಐ ಸ್ವರೂಪ, ತಾಂತ್ರಿಕ ಕೌಶಲ, ಸ್ಪರ್ಧಾತ್ಮಕತೆಗೆ ತಕ್ಕಂತೆ ಕಲಿತುಕೊಳ್ಳಬೇಕಾದ ವಿಷಯಗಳನ್ನು ಮನನ ಮಾಡಿಕೊಂಡರೆ ವರ್ತಮಾನದ ಜೊತೆಗೆ ಭವಿಷವ್ಯವೂ ಸುಂದರವಾಗಿ ಇರುತ್ತದೆ. ಹೀಗಾಗಿ ಪಿಯುಸಿ ಘಟ್ಟದಲ್ಲಿ ವಿದ್ಯಾರ್ಥಿಗಳು ಮಾಡಿಕೊಳ್ಳುವ ಆಯ್ಕೆ ಅವರ ಬದುಕಿನ ಘಟ್ಟವನ್ನೇ ಬದಲಿಸಬಹುದು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕೊಪ್ಪಳ:</strong> ದ್ವಿತೀಯ ವರ್ಷದ ಪದವಿಪೂರ್ವ ಪರೀಕ್ಷೆ ಬರೆದ ದಿನದಿಂದಲೇ ಕುತೂಹಲದಿಂದ ಕಾಯುತ್ತಿದ್ದ ಫಲಿತಾಂಶ ಪ್ರಕಟವಾಗಿದ್ದು, ಜಿಲ್ಲೆಯ ವಿದ್ಯಾರ್ಥಿಗಳು ಹಿಂದಿನ ಎಲ್ಲ ವರ್ಷಕ್ಕಿಂತಲೂ ಉತ್ತಮ ಸಾಧನೆ ಮಾಡಿದ್ದಾರೆ.</p>.<p>ಹೀಗಾಗಿ ಭವಿಷ್ಯ ಸುಂದರವಾಗಿ ರೂಪಿಸಿಕೊಳ್ಳಲು ವಿದ್ಯಾರ್ಥಿಗಳಲ್ಲಿ ಯಾವ ಕೋರ್ಸ್ ಆಯ್ಕೆ ಮಾಡಿಕೊಳ್ಳಬೇಕು ಎನ್ನುವ ಪ್ರಶ್ನೆಯೂ ಕಾಡುತ್ತಿದ್ದು, ಸಮಯೋಚಿತ ಮತ್ತು ಸ್ಪರ್ಧಾತ್ಮಕ ಸವಾಲಿಗೆ ತಕ್ಕಂತೆ ಆಯ್ಕೆ ಮಹತ್ವ ಪಡೆದುಕೊಂಡಿದೆ. ತಮ್ಮೂರು, ತಮ್ಮ ಜಿಲ್ಲೆ ಬಿಟ್ಟು ಹೋಗಲಾಗದೆ ಇದ್ದ ಜಿಲ್ಲೆಯಲ್ಲಿಯೇ ಓದು ಮುಂದುವರಿಸಲು ಬಯಸುವವರಿಗೂ ಜಿಲ್ಲೆಯಲ್ಲಿಯೇ ಹೇರಳ ಅವಕಾಶಗಳು ಹಾಗೂ ಕೋರ್ಸ್ಗಳು ಇವೆ.</p>.<p>ವಿಜ್ಞಾನ ವಿಭಾಗದಲ್ಲಿ ಉತ್ತಮ ಅಂಕಗಳೊಂದಿಗೆ ತೇರ್ಗಡೆ ಹೊಂದಿದವರು ಈಗ ಸಿಇಟಿ, ಎನ್ಇಇಟಿ ಹಾಗೂ ಜೆಇಇ ಪರೀಕ್ಷೆಗಾಗಿ ಸಿದ್ಧತೆಯಲ್ಲಿ ತೊಡಗಿದ್ದಾರೆ. ಅಲ್ಲಿ ಪಡೆಯುವ ಫಲಿತಾಂಶದ ಆಧಾರದ ಮೇಲೆ ಕೋರ್ಸ್ಗಳ ಆಯ್ಕೆ ಬಗ್ಗೆ ನಿರ್ದಿಷ್ಟವಾಗಿ ಗೊತ್ತಾಗಲಿದೆ. ಎಂಜಿನಿಯರಿಂಗ್ನಲ್ಲಿ ಬಿಇ, ಬಿಟೆಕ್, ವೈದ್ಯಕೀಯ, ವಿಜ್ಞಾನ, ಕೃಷಿ ವಿಜ್ಞಾನ, ಫಾರ್ಮಸಿ, ವಾಸ್ತುಶಿಲ್ಪ ಹಾಗೂ ಪ್ಯಾರಾಮೆಡಿಕಲ್ ಕೋರ್ಸ್ಗಳು ಸೇರಿದಂತೆ ಹಲವು ಅವಕಾಶಗಳಿವೆ.</p>.<p>ವಾಣಿಜ್ಯ ವಿಭಾಗದಲ್ಲಿ ಉತ್ತಮ ಅಂಕಗಳನ್ನು ಗಳಿಸಿದವರು ಬಿಕಾಂ ಪದವಿ ಮಾಡಬಹುದು, ಬಿಬಿಎ, ಬಿಬಿಎಂ, ಸಿಎ, ಸಿಎಸ್., ಸಿಎಂಎ, ಬ್ಯಾಂಕಿಂಗ್, ಫೈನಾನ್ಸ್, ಹೋಟೆಲ್ ಮ್ಯಾನೇಜಮೆಂಟ್ ಕೋರ್ಸ್ಗಳನ್ನು ಕಲಿಯಬಹುದು. ಕಲಾ ವಿಭಾಗದಲ್ಲಿ ಉತ್ತೀರ್ಣರಾದವರು ಬಿಎ ಪದವಿ, ಪತ್ರಿಕೋದ್ಯಮ ಹಾಗೂ ಸಮೂಹ ಸಂವಹನ ಕೋರ್ಸ್ ಮಾಡಬಹುದು. ಇದಕ್ಕಾಗಿ ಜಿಲ್ಲೆಯಲ್ಲಿ ವಿವಿಧ ಪದವಿ ಕಾಲೇಜುಗಳಲ್ಲಿ ಸೌಲಭ್ಯವಿದೆ. ಐದು ವರ್ಷಗಳ ಕಾನೂನು (ಎಲ್ಎಲ್ಬಿ) ಪದವಿ, ಸಮಾಜಕಾರ್ಯ (ಬಿಎಸ್ಡಬ್ಲ್ಯು), ಲಲಿತ ಕಲೆ, ಬಿಇಡಿ ಸೇರಿದಂತೆ ಅನೇಕ ಕೋರ್ಸ್ಗಳು ಇವೆ. ಸರ್ಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರದಲ್ಲಿ (ಜಿಟಿಟಿಸಿ) ಕೋರ್ಸ್ ಆಯ್ಕೆ ಮಾಡಿಕೊಳ್ಳಬಹುದು.</p>.<p>ಕೌಶಲಕ್ಕೂ ಬೇಕು ಒತ್ತು: ವಿಜ್ಞಾನ, ವಾಣಿಜ್ಯ ಹಾಗೂ ಕಲಾ ಇದರಲ್ಲಿ ಯಾವುದೇ ವಿಭಾಗದಲ್ಲಿ ಉತ್ತೀರ್ಣರಾಗಿದ್ದರೆ ವಿದ್ಯಾರ್ಥಿಗಳು ಆಯ್ಕೆ ಮಾಡಿಕೊಳ್ಳುವ ಕೋರ್ಸ್ಗಳ ಆಧಾರದ ಮೇಲೆ ಭವಿಷ್ಯ ರೂಪುಗೊಳ್ಳುತ್ತದೆ.</p>.<p>ಇದು ಬಹುಕೌಶಲಗಳ ಸ್ಪರ್ಧಾತ್ಮಕ ಕಾಲವಾಗಿರುವುದರಿಂದ ಕೋರ್ಸ್ಗಳ ಜೊತೆಗೆ ಪರಿಣಾಮಕಾರಿ ಸಂವಹನ ಕೌಶಲ, ಸರಾಗವಾಗಿ ಕನ್ನಡ, ಇಂಗ್ಲಿಷ್, ಹಿಂದಿ ಭಾಷೆಗಳ ಕಲಿಕೆ, ಕಂಪ್ಯೂಟರ್ ಜ್ಞಾನ ಕಲಿತುಕೊಳ್ಳುವ ಅಗತ್ಯವಿದೆ. ಪ್ರಸ್ತುತ ದಿನಮಾನಗಳಲ್ಲಿ ವಿದ್ಯಾರ್ಥಿಗಳಿಗೆ, ಯುವಜನತೆಗೆ ಹಾಗೂ ಉದ್ಯೋಗಿಗಳಿಗೆ ಸವಾಲು ಒಡ್ಡಿರುವ ಎಐ ತಂತ್ರಜ್ಞಾನ ಕಲಿಯುವುದು ಅಗತ್ಯವಿದೆ.</p>.<p>ಈಗಾಗಲೇ ಬಹಳಷ್ಟು ಕಡೆಗಳಲ್ಲಿ ಎಐ ತಂತ್ರಜ್ಞಾನವನ್ನು ಅನೇಕ ಕಚೇರಿಗಳಲ್ಲಿ ಅಳವಡಿಸಿಕೊಳ್ಳಲಾಗಿದ್ದು ಈಗ ಪಿಯುಸಿ ಮುಗಿಸಿ ಮುಂದಿನ ವ್ಯಾಸಂಗಕ್ಕೆ ಅಣಿಯಾಗುವ ವಿದ್ಯಾರ್ಥಿಗಳು ಈ ದಿಸೆಯಿಂದಲೇ ಎಐ ಸ್ವರೂಪ, ತಾಂತ್ರಿಕ ಕೌಶಲ, ಸ್ಪರ್ಧಾತ್ಮಕತೆಗೆ ತಕ್ಕಂತೆ ಕಲಿತುಕೊಳ್ಳಬೇಕಾದ ವಿಷಯಗಳನ್ನು ಮನನ ಮಾಡಿಕೊಂಡರೆ ವರ್ತಮಾನದ ಜೊತೆಗೆ ಭವಿಷವ್ಯವೂ ಸುಂದರವಾಗಿ ಇರುತ್ತದೆ. ಹೀಗಾಗಿ ಪಿಯುಸಿ ಘಟ್ಟದಲ್ಲಿ ವಿದ್ಯಾರ್ಥಿಗಳು ಮಾಡಿಕೊಳ್ಳುವ ಆಯ್ಕೆ ಅವರ ಬದುಕಿನ ಘಟ್ಟವನ್ನೇ ಬದಲಿಸಬಹುದು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>