<p>ಪೌತಿ ಖಾತೆ ಮಾಡುವ ಬಗ್ಗೆ ಮಾಹಿತಿ ನೀಡಿ</p>.<p>ನಾಗರಾಜ್, ಬೆಂಗಳೂರು ನಗರ ಎಂ.ಜಿ. ನಾರಾಯಣ, ಜಿಗಣಿ</p>.<p>ರಾಜ್ಯದಲ್ಲಿ ಪೌತಿ ಖಾತೆ ಆಂದೋಲನ ನಡೆಯುತ್ತಿದೆ. ನಿಮ್ಮ ಹಿರಿಯರ ಹೆಸರಿನಲ್ಲಿರುವ ಜಮೀನನ್ನು ನಿಮ್ಮ ಹೆಸರಿಗೆ ಮಾಡಿಕೊಳ್ಳಬೇಕಾದರೆ ತಹಶೀಲ್ದಾರ್ ಅಥವಾ ನಾಡ ಕಚೇರಿಯ ಮೂಲಕ ಕಂದಾಯ ಇಲಾಖೆಗೆ ಅರ್ಜಿ ಸಲ್ಲಿಸಬೇಕು. ಆರ್ಟಿಸಿ ಸಂಖ್ಯೆ, ಮರಣ ಪ್ರಮಾಣಪತ್ರ, ವಂಶವೃಕ್ಷ ಪ್ರಮಾಣಪತ್ರಗಳನ್ನು ಅರ್ಜಿಯ ಜೊತೆಗೆ ಸಲ್ಲಿಸಬೇಕು. ದಾಖಲೆಗಳನ್ನು ಪರಿಶೀಲಿಸಿ, ಸಂಬಂಧಪಟ್ಟವರಿಗೆ ನೋಟಿಸ್ ನೀಡಲಾಗುತ್ತದೆ. ಯಾವುದೇ ತಕರಾರು ಅರ್ಜಿ ಬಾರದೇ ಇದ್ದರೆ 15 ದಿನಗಳಲ್ಲಿ ಪೌತಿ ಖಾತೆಯನ್ನು ಮಾಡಿಕೊಡಲಾಗುತ್ತದೆ.</p>.<p>ಮೇಡಹಳ್ಳಿಯ ಸರ್ವೇ ಸಂಖ್ಯೆ 89ರ ಸರ್ಕಾರಿ ಗೋಮಾಳ ಭೂಮಿಯ ಒತ್ತುವರಿ ತೆರವುಗೊಳಿಸಬೇಕು. ಈ ಬಗ್ಗೆ ತಹಶೀಲ್ದಾರಿಗೆ ದೂರು ನೀಡಿದರೂ ಸ್ಪಂದಿಸುತ್ತಿಲ್ಲ?</p>.<p>ಸರ್ಕಾರಿ ಜಮೀನು ಉಳಿಸುವುದೇ ನಮ್ಮ ಕರ್ತವ್ಯ. ಮೇಡಹಳ್ಳಿಯ ಈ ಜಮೀನನ್ನು ತಹಶೀಲ್ದಾರ್ ಮೂಲಕ ಸಮೀಕ್ಷೆ ನಡೆಸಿ, ಒತ್ತುವರಿಯಾಗಿದ್ದರೆ ತೆರವುಗೊಳಿಸಲಾಗುವುದು.</p>.<p>ಪಹಣಿ ಪತ್ರದಲ್ಲಿ ಮೂಲ ಖಾತೆದಾರರ ಹೆಸರು ಬರುತ್ತಿದ್ದು, ಈ ಸಮಸ್ಯೆಗೆ ಪರಿಹಾರ ನೀಡಿ</p>.<p>ಇನಾಂ ಜಮೀನು ಆಗಿದ್ದರೆ ಪಹಣಿ ಪತ್ರದಲ್ಲಿ ಮೂಲ ಖಾತೆದಾರರ ಹೆಸರು ಬರುತ್ತದೆ. ಈ ಜಮೀನು ನಿಮಗೆ ಮರು ಮಂಜೂರು ಆದ ನಂತರ ಮೂಲ ಖಾತೆದಾರರ ಹೆಸರು ತೆಗೆಯಬೇಕು. ಅದಕ್ಕೆ ತಹಶೀಲ್ದಾರ್ ಕಚೇರಿಗೆ ಅರ್ಜಿ ಸಲ್ಲಿಸಬೇಕು.</p>.<p>2014ರಲ್ಲಿ 94 ಸಿಸಿ ಹಕ್ಕುಪತ್ರ ನೀಡಿದರೂ ನೋಂದಣಿ ಆಗುತ್ತಿಲ್ಲ?</p>.<p>ಕೆಂಗೇರಿ ಹೋಬಳಿಯ 199 ಸರ್ವೇ ಸಂಖ್ಯೆಯಲ್ಲಿ 94 ಸಿಸಿ ಹಕ್ಕುಪತ್ರ ನೀಡಲಾಗಿರುವ ಎಲ್ಲರಿಗೂ ನೋಂದಣಿ ಮಾಡಿಕೊಡುವಂತೆ ತಹಶೀಲ್ದಾರ್ಗೆ ಸೂಚಿಸುತ್ತೇನೆ.</p>.<p>ಕಗ್ಗಲಿಪುರ ಸರ್ವೇ ನಂ. 46ರಲ್ಲಿ 1991–92ರಲ್ಲಿ ಮಂಜೂರು ಆಗಿದೆ. ಆದರೆ ಪೋಡಿ ಆಗುತ್ತಿಲ್ಲ?</p>.<p>ರಾಮಕೃಷ್ಣಪ್ಪ, ಕಗ್ಗಲಿಪುರ ಬೆಂಗಳೂರು ದಕ್ಷಿಣ ಜಿಲ್ಲೆ</p>.<p>ಅನುಬಂಧಕ್ಕೆ ಸಹಿ ಮಾಡಿ, ಸಮೀಕ್ಷೆ ನಡೆಸಿ, ಪೋಡಿ ಮಾಡಲು ತಹಶೀಲ್ದಾರ್ಗೆ ಸೂಚಿಸುತ್ತೇನೆ.</p>.<p>ಬೆಂಗಳೂರು ನಗರದಲ್ಲಿ ಬಲಾಢ್ಯರು ಸರ್ಕಾರಿ ಜಮೀನು ಒತ್ತುವರಿ ಮಾಡಿಕೊಂಡಿದ್ದಾರೆ. ಅಂತಹವರನ್ನು ಎದುರು ಹಾಕಿಕೊಂಡು ಒತ್ತುವರಿ ತೆರವು ಹೇಗೆ ಮಾಡುತ್ತೀದ್ದೀರಿ?</p>.<p>ಒತ್ತುವರಿ ಆಗಿರುವ ಸರ್ಕಾರಿ ಜಮೀನು ತೆರವುಗೊಳಿಸುವುದು ನಮ್ಮೆಲ್ಲರ ಕರ್ತವ್ಯ. ಕೆಲ ಜಿಲ್ಲಾಧಿಕಾರಿಗಳು ಸವಾಲು ಎದುರಿಸಿ ಕೆಲಸ ಮಾಡುತ್ತಾರೆ. ಕೆಲವರು ಮಾಡುವುದಿಲ್ಲ. ನಾನು ₹20 ಸಾವಿರ ಕೋಟಿ ಮಾರುಕಟ್ಟೆ ಮೌಲ್ಯದ 850 ಎಕರೆಗೆ ಹೆಚ್ಚು ಸರ್ಕಾರಿ ಜಮೀನು ಒತ್ತುವರಿ ತೆರವುಗೊಳಿಸಿದ್ದೇನೆ.</p>.<p>ನಮ್ಮ ತಂದೆ ಮೂರು ವರ್ಷದ ಹಿಂದೆ ಮರಣ ಹೊಂದಿದ್ದಾರೆ. ಅವರ ದೇಹವನ್ನು ವೈದ್ಯಕೀಯ ಆಸ್ಪತ್ರೆಗೆ ದಾನ ಮಾಡಲಾಗಿದೆ. ಆದರೆ ಅವರ ಮರಣ ಪ್ರಮಾಣಪತ್ರವನ್ನು ಇದುವರೆಗೂ ನೀಡುತ್ತಿಲ್ಲ?</p>.<p>ಮರಣ ಪ್ರಮಾಣಪತ್ರವನ್ನು ಒಂದು ವರ್ಷದೊಳಗೆ ಪಡೆದುಕೊಳ್ಳಬೇಕು. ಇಷ್ಟು ತಡ ಮಾಡುವುದಕ್ಕೆ ಏನು ಕಾರಣ ಎಂಬುದು ನನಗೆ ಗೊತ್ತಿಲ್ಲ. ಕೂಡಲೇ ನಿಮ್ಮ ತಂದೆಯವರ ಮರಣ ಪ್ರಮಾಣಪತ್ರ ನೀಡುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸುತ್ತೇನೆ.</p>.<p>ತಪ್ಪಾಗಿ ಪೋಡಿ ಮಾಡಿರುವುದನ್ನು ಸರಿಪಡಿಸಬೇಕು.</p>.<p>ತಪ್ಪಾಗಿ ಪೋಡಿ ಆಗಿರುವ ಎಲ್ಲ ದಾಖಲೆಗಳನ್ನು ತೆಗೆದುಕೊಂಡು ಬಂದು ನನ್ನನ್ನು ಭೇಟಿಯಾಗಿ. ಸರಿಪಡಿಸುವಂತೆ ಭೂದಾಖಲೆಗಳ ಉಪನಿರ್ದೇಶಕರಿಗೆ (ಡಿಡಿಎಲ್ಆರ್) ಸೂಚಿಸುತ್ತೇನೆ.</p>.<p>92 ಸಿಸಿ ಅಡಿ ಅರ್ಜಿ ಹಾಕಿ ಬಹಳ ದಿನಗಳಾದರೂ ಇದುವರೆಗೂ ಅರ್ಜಿ ವಿಲೇವಾರಿ ಆಗಿಲ್ಲ.</p>.<p>2016ಕ್ಕಿಂತ ಮೊದಲು ನೀವು ಆ ನಿವೇಶನದಲ್ಲಿ ವಾಸಿಸಬೇಕು. ಅಂದಾಗ ಮಾತ್ರ ನಿಮಗೆ ಹಕ್ಕುಪತ್ರ ನೀಡಲು ಬರುತ್ತದೆ. ಈ ಬಗ್ಗೆ ಪರಿಶೀಲಿಸಿ, ನಿಮ್ಮ ಸಮಸ್ಯೆಯನ್ನು ಸರಿಪಡಿಸುವಂತೆ ತಹಶೀಲ್ದಾರ್ಗೆ ಸೂಚಿಸುತ್ತೇನೆ.</p>.<p>ಹಿರಿಯ ನಾಗರಿಕರ ಪಿಂಚಣಿ ಸರಿಯಾದ ಸಮಯಕ್ಕೆ ಬರುತ್ತಿಲ್ಲ.</p>.<p>ಪುಷ್ಪಾ ಎಸ್. ರಾವ್, ಗಿರಿನಗರ ವಾರ್ಡ್</p>.<p>ಈ ತಿಂಗಳ ಪಿಂಚಣಿ ಇನ್ನೇನು ಬಿಡುಗಡೆ ಆಗಬೇಕಿದೆ. 2025ರಲ್ಲಿ ಏಳು ತಿಂಗಳ ನಿಮ್ಮ ಪಿಂಚಣಿ ಬಾರದಿರುವುದಕ್ಕೆ ಏನು ಕಾರಣ ಎಂಬುದರ ಬಗ್ಗೆ ಪರಿಶೀಲಿಸುತ್ತೇನೆ. ಜಿಲ್ಲಾಧಿಕಾರಿ ಕಚೇರಿಗೆ ಬಂದು ಭೇಟಿಯಾಗಿ.</p>.<p>ನಮ್ಮ ಯಜಮಾನರು ತೀರಿಕೊಂಡು ಐದು ತಿಂಗಳಾಗಿದೆ. ಪೌತಿ ಖಾತೆಯಲ್ಲಿ ಅವರದೇ ಭಾವಚಿತ್ರ ಇದೆ. ತಹಶೀಲ್ದಾರ್ ಕಚೇರಿಗೆ ಅರ್ಜಿ ಸಲ್ಲಿಸಿದರೂ ಸ್ಪಂದಿಸುತ್ತಿಲ್ಲ.</p>.<p>ಮರಣ ಪ್ರಮಾಣಪತ್ರ, ಜಮೀನಿನ ದಾಖಲೆಗಳನ್ನು ತೆಗೆದುಕೊಂಡು ತಹಶೀಲ್ದಾರ್ ಕಚೇರಿಯಲ್ಲಿ ಅರ್ಜಿ ಹಾಕಬೇಕು. ಕೂಡಲೇ ಪೌತಿ ಖಾತೆ ಮಾಡುವಂತೆ ತಹಶೀಲ್ದಾರ್ಗೆ ಸೂಚಿಸುತ್ತೇನೆ.</p>.<p>ಮೈಲಪ್ಪನಹಳ್ಳಿಯಲ್ಲಿ ಸರ್ಕಾರಿ ಜಮೀನನ್ನು ಅಕ್ರಮವಾಗಿ ಖಾತೆ ಮಾಡಿಸಿಕೊಡಲಾಗಿದೆ. ಈ ಬಗ್ಗೆ ತನಿಖೆ ನಡೆಸಬೇಕು.</p>.<p>ಜಿಲ್ಲಾ ಪಂಚಾಯಿತಿ ಸಿಇಒ ಜೊತೆಗೆ ಮಾತನಾಡಿ, ಈ ಬಗ್ಗೆ ಕಾನೂನು ಕ್ರಮ ಕೈಗೊಳ್ಳಲಾಗುವುದು.</p>.<p>ತಿಂಡ್ಲು ಸರ್ವೇ ಸಂಖ್ಯೆ 81 ಗುಂಡು ತೋಪಿನ 3 ಎಕರೆ 9 ಗುಂಟೆ ಜಮೀನನ್ನು ಕಬಳಿಸಲಾಗಿದೆ. ಒತ್ತುವರಿ ತೆರವುಗೊಳಿಸಲು ಅರ್ಜಿ ಸಲ್ಲಿಸಿದರೂ ಅಧಿಕಾರಿಗಳು ಸ್ಪಂದಿಸುತ್ತಿಲ್ಲ.</p>.<p>ಜಗದೀಶ್, ತಿಂಡ್ಲು, ವಿದ್ಯಾರಣ್ಯಪುರ,</p>.<p>ಈ ಬಗ್ಗೆ ಸಮೀಕ್ಷೆ ನಡೆಸುವಂತೆ ತಹಶೀಲ್ದಾರ್ಗೆ ಆದೇಶ ನೀಡುತ್ತೇನೆ. ವೀರಭದ್ರಸ್ವಾಮಿ ದೇವಸ್ಥಾನದ ಜಾಗವನ್ನು ತೆರವುಗೊಳಿಸಲು ಸೂಚಿಸುತ್ತೇನೆ.</p>.<p>2025ರ ಜನವರಿಯಲ್ಲಿ ಖಾತೆ ಬದಲಾವಣೆಗೆ ಅರ್ಜಿ ಹಾಕಲಾಗಿದೆ. ಎಸಿ ಕಚೇರಿಯಲ್ಲಿ ಬಾಕಿ ಇದೆ.</p>.<p>ಕಂದಾಯ ಉಪ ವಿಭಾಗಾಧಿಕಾರಿಯವರಿಗೆ ಹೇಳಿ ನಿಮ್ಮ ಅರ್ಜಿಯನ್ನು ವಿಲೇವಾರಿ ಮಾಡಿಸಲಾಗುವುದು.</p>.<p>ರಾಮಕೃಷ್ಣಪುರ ಗ್ರಾಮದ ಕೆರೆ ಒತ್ತುವರಿಯಾಗಿದೆ. ಇದುವರೆಗೂ ಈ ಕೆರೆಯ ಸಮೀಕ್ಷೆ ಆಗಿಲ್ಲ.</p>.<p>ವೇಣುಗೋಪಾಲ್, ಜಿಗಣಿ ಹೋಬಳಿ, ಆನೇಕಲ್</p>.<p>ಬೆಂಗಳೂರು ನಗರ ಜಿಲ್ಲೆಯ ಎಲ್ಲ 782 ಕೆರೆಗಳ ಸಮೀಕ್ಷೆ ಆಗಿದೆ. ಶೇ 80ರಷ್ಟು ಒತ್ತುವರಿ ತೆರವುಗೊಳಿಸಲಾಗಿದೆ. ರಾಮಕೃಷ್ಣಪುರ ಕೆರೆಯ ಒತ್ತುವರಿಯನ್ನು ತೆರವುಗೊಳಿಸಲು ತಹಶೀಲ್ದಾರ್ಗೆ ನಿರ್ದೇಶನ ನೀಡುತ್ತೇನೆ.</p>.<p>ಇನಾಂ ಜಮೀನು ಮರು ಮಂಜೂರಾಗಿದ್ದರೂ ನೋಂದಣಿ ಆಗಿಲ್ಲ. ತಹಶೀಲ್ದಾರ್ಗೆ ಅರ್ಜಿ ಹಾಕಿದರೂ ಸ್ಪಂದಿಸುತ್ತಿಲ್ಲ.</p>.<p>ಇನಾಂ ಭೂಮಿಯ ದಾಖಲೆಗಳನ್ನು ಪರಿಶೀಲಿಸಿ, ಅಧಿಕಾರಿಗಳೊಂದಿಗೆ ಚರ್ಚಿಸಿ ಪರಿಹಾರ ನೀಡುತ್ತೇನೆ.</p>.<p>ಎಚ್ಬಿಆರ್ ಬಡಾವಣೆಯ ಸ್ಮಶಾನ ಜಾಗದ 1 ಎಕರೆ 15 ಗುಂಟೆ ಒತ್ತುವರಿ ತೆರವುಗೊಳಿಸಬೇಕು</p>.<p>ಸರ್ವೇ ಸಂಖ್ಯೆ 229ರ ಸ್ಮಶಾನದ ಸಮೀಕ್ಷೆ ನಡೆಸಿ ಒತ್ತುವರಿ ಆಗಿದ್ದರೆ ತೆರವುಗೊಳಿಸಲು ತಹಶೀಲ್ದಾರ್ಗೆ ಸೂಚಿಸುತ್ತೇನೆ.</p>.<p>ಕೌಡೇನಹಳ್ಳಿ ಕೆರೆ 20 ಎಕರೆ ಜಮೀನು ಒತ್ತುವರಿ ತೆರವುಗೊಳಿಸಿ</p>.<p>ಕೌಡೇನಹಳ್ಳಿ ಕೆರೆ ಸಮೀಕ್ಷೆ ಆಗಿದೆ. ಆದರೆ ಒತ್ತುವರಿ ತೆರವುಗೊಂಡಿಲ್ಲ. ಈ ಬಗ್ಗೆ ತಹಶೀಲ್ದಾರ್ ಅವರೊಂದಿಗೆ ಮಾತನಾಡಿ, ಒತ್ತುವರಿ ತೆರವುಗೊಳಿಸಲು ಸೂಚಿಸುತ್ತೇನೆ.</p>.<p>ಬೆಳಗಾವಿ ಜಿಲ್ಲೆಯ ಗೋಕಾಕ ವಿಧಾನಸಭಾ ಕ್ಷೇತ್ರದ ಮತದಾರರ ಪಟ್ಟಿಯಲ್ಲಿ ನನ್ನ ಹೆಸರು ಇದೆ. ಈಗ ನಾನು ಬೆಂಗಳೂರಿನಲ್ಲಿ ವಾಸಿಸುತ್ತಿದ್ದು, ಇಲ್ಲಿಯ ಮತದಾರರ ಪಟ್ಟಿಯಲ್ಲಿ ನನ್ನ ಹೆಸರು ನೋಂದಣಿ ಹೇಗೆ ಮಾಡಿಕೊಳ್ಳಬೇಕು.</p>.<p>8ಎ ಫಾರಂ ಮೂಲಕ ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆಗೆ ಅರ್ಜಿ ಸಲ್ಲಿಸಬೇಕು. ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳಿಗೆ ಸಮರ್ಪಕ ದಾಖಲೆಗಳನ್ನು ನೀಡಿ, ಮತದಾರರ ಪಟ್ಟಿಯಲ್ಲಿ ಹೆಸರು ನೋಂದಣಿ ಮಾಡಿಕೊಳ್ಳಬಹುದು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260526-4-1363705376</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಪೌತಿ ಖಾತೆ ಮಾಡುವ ಬಗ್ಗೆ ಮಾಹಿತಿ ನೀಡಿ</p>.<p>ನಾಗರಾಜ್, ಬೆಂಗಳೂರು ನಗರ ಎಂ.ಜಿ. ನಾರಾಯಣ, ಜಿಗಣಿ</p>.<p>ರಾಜ್ಯದಲ್ಲಿ ಪೌತಿ ಖಾತೆ ಆಂದೋಲನ ನಡೆಯುತ್ತಿದೆ. ನಿಮ್ಮ ಹಿರಿಯರ ಹೆಸರಿನಲ್ಲಿರುವ ಜಮೀನನ್ನು ನಿಮ್ಮ ಹೆಸರಿಗೆ ಮಾಡಿಕೊಳ್ಳಬೇಕಾದರೆ ತಹಶೀಲ್ದಾರ್ ಅಥವಾ ನಾಡ ಕಚೇರಿಯ ಮೂಲಕ ಕಂದಾಯ ಇಲಾಖೆಗೆ ಅರ್ಜಿ ಸಲ್ಲಿಸಬೇಕು. ಆರ್ಟಿಸಿ ಸಂಖ್ಯೆ, ಮರಣ ಪ್ರಮಾಣಪತ್ರ, ವಂಶವೃಕ್ಷ ಪ್ರಮಾಣಪತ್ರಗಳನ್ನು ಅರ್ಜಿಯ ಜೊತೆಗೆ ಸಲ್ಲಿಸಬೇಕು. ದಾಖಲೆಗಳನ್ನು ಪರಿಶೀಲಿಸಿ, ಸಂಬಂಧಪಟ್ಟವರಿಗೆ ನೋಟಿಸ್ ನೀಡಲಾಗುತ್ತದೆ. ಯಾವುದೇ ತಕರಾರು ಅರ್ಜಿ ಬಾರದೇ ಇದ್ದರೆ 15 ದಿನಗಳಲ್ಲಿ ಪೌತಿ ಖಾತೆಯನ್ನು ಮಾಡಿಕೊಡಲಾಗುತ್ತದೆ.</p>.<p>ಮೇಡಹಳ್ಳಿಯ ಸರ್ವೇ ಸಂಖ್ಯೆ 89ರ ಸರ್ಕಾರಿ ಗೋಮಾಳ ಭೂಮಿಯ ಒತ್ತುವರಿ ತೆರವುಗೊಳಿಸಬೇಕು. ಈ ಬಗ್ಗೆ ತಹಶೀಲ್ದಾರಿಗೆ ದೂರು ನೀಡಿದರೂ ಸ್ಪಂದಿಸುತ್ತಿಲ್ಲ?</p>.<p>ಸರ್ಕಾರಿ ಜಮೀನು ಉಳಿಸುವುದೇ ನಮ್ಮ ಕರ್ತವ್ಯ. ಮೇಡಹಳ್ಳಿಯ ಈ ಜಮೀನನ್ನು ತಹಶೀಲ್ದಾರ್ ಮೂಲಕ ಸಮೀಕ್ಷೆ ನಡೆಸಿ, ಒತ್ತುವರಿಯಾಗಿದ್ದರೆ ತೆರವುಗೊಳಿಸಲಾಗುವುದು.</p>.<p>ಪಹಣಿ ಪತ್ರದಲ್ಲಿ ಮೂಲ ಖಾತೆದಾರರ ಹೆಸರು ಬರುತ್ತಿದ್ದು, ಈ ಸಮಸ್ಯೆಗೆ ಪರಿಹಾರ ನೀಡಿ</p>.<p>ಇನಾಂ ಜಮೀನು ಆಗಿದ್ದರೆ ಪಹಣಿ ಪತ್ರದಲ್ಲಿ ಮೂಲ ಖಾತೆದಾರರ ಹೆಸರು ಬರುತ್ತದೆ. ಈ ಜಮೀನು ನಿಮಗೆ ಮರು ಮಂಜೂರು ಆದ ನಂತರ ಮೂಲ ಖಾತೆದಾರರ ಹೆಸರು ತೆಗೆಯಬೇಕು. ಅದಕ್ಕೆ ತಹಶೀಲ್ದಾರ್ ಕಚೇರಿಗೆ ಅರ್ಜಿ ಸಲ್ಲಿಸಬೇಕು.</p>.<p>2014ರಲ್ಲಿ 94 ಸಿಸಿ ಹಕ್ಕುಪತ್ರ ನೀಡಿದರೂ ನೋಂದಣಿ ಆಗುತ್ತಿಲ್ಲ?</p>.<p>ಕೆಂಗೇರಿ ಹೋಬಳಿಯ 199 ಸರ್ವೇ ಸಂಖ್ಯೆಯಲ್ಲಿ 94 ಸಿಸಿ ಹಕ್ಕುಪತ್ರ ನೀಡಲಾಗಿರುವ ಎಲ್ಲರಿಗೂ ನೋಂದಣಿ ಮಾಡಿಕೊಡುವಂತೆ ತಹಶೀಲ್ದಾರ್ಗೆ ಸೂಚಿಸುತ್ತೇನೆ.</p>.<p>ಕಗ್ಗಲಿಪುರ ಸರ್ವೇ ನಂ. 46ರಲ್ಲಿ 1991–92ರಲ್ಲಿ ಮಂಜೂರು ಆಗಿದೆ. ಆದರೆ ಪೋಡಿ ಆಗುತ್ತಿಲ್ಲ?</p>.<p>ರಾಮಕೃಷ್ಣಪ್ಪ, ಕಗ್ಗಲಿಪುರ ಬೆಂಗಳೂರು ದಕ್ಷಿಣ ಜಿಲ್ಲೆ</p>.<p>ಅನುಬಂಧಕ್ಕೆ ಸಹಿ ಮಾಡಿ, ಸಮೀಕ್ಷೆ ನಡೆಸಿ, ಪೋಡಿ ಮಾಡಲು ತಹಶೀಲ್ದಾರ್ಗೆ ಸೂಚಿಸುತ್ತೇನೆ.</p>.<p>ಬೆಂಗಳೂರು ನಗರದಲ್ಲಿ ಬಲಾಢ್ಯರು ಸರ್ಕಾರಿ ಜಮೀನು ಒತ್ತುವರಿ ಮಾಡಿಕೊಂಡಿದ್ದಾರೆ. ಅಂತಹವರನ್ನು ಎದುರು ಹಾಕಿಕೊಂಡು ಒತ್ತುವರಿ ತೆರವು ಹೇಗೆ ಮಾಡುತ್ತೀದ್ದೀರಿ?</p>.<p>ಒತ್ತುವರಿ ಆಗಿರುವ ಸರ್ಕಾರಿ ಜಮೀನು ತೆರವುಗೊಳಿಸುವುದು ನಮ್ಮೆಲ್ಲರ ಕರ್ತವ್ಯ. ಕೆಲ ಜಿಲ್ಲಾಧಿಕಾರಿಗಳು ಸವಾಲು ಎದುರಿಸಿ ಕೆಲಸ ಮಾಡುತ್ತಾರೆ. ಕೆಲವರು ಮಾಡುವುದಿಲ್ಲ. ನಾನು ₹20 ಸಾವಿರ ಕೋಟಿ ಮಾರುಕಟ್ಟೆ ಮೌಲ್ಯದ 850 ಎಕರೆಗೆ ಹೆಚ್ಚು ಸರ್ಕಾರಿ ಜಮೀನು ಒತ್ತುವರಿ ತೆರವುಗೊಳಿಸಿದ್ದೇನೆ.</p>.<p>ನಮ್ಮ ತಂದೆ ಮೂರು ವರ್ಷದ ಹಿಂದೆ ಮರಣ ಹೊಂದಿದ್ದಾರೆ. ಅವರ ದೇಹವನ್ನು ವೈದ್ಯಕೀಯ ಆಸ್ಪತ್ರೆಗೆ ದಾನ ಮಾಡಲಾಗಿದೆ. ಆದರೆ ಅವರ ಮರಣ ಪ್ರಮಾಣಪತ್ರವನ್ನು ಇದುವರೆಗೂ ನೀಡುತ್ತಿಲ್ಲ?</p>.<p>ಮರಣ ಪ್ರಮಾಣಪತ್ರವನ್ನು ಒಂದು ವರ್ಷದೊಳಗೆ ಪಡೆದುಕೊಳ್ಳಬೇಕು. ಇಷ್ಟು ತಡ ಮಾಡುವುದಕ್ಕೆ ಏನು ಕಾರಣ ಎಂಬುದು ನನಗೆ ಗೊತ್ತಿಲ್ಲ. ಕೂಡಲೇ ನಿಮ್ಮ ತಂದೆಯವರ ಮರಣ ಪ್ರಮಾಣಪತ್ರ ನೀಡುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸುತ್ತೇನೆ.</p>.<p>ತಪ್ಪಾಗಿ ಪೋಡಿ ಮಾಡಿರುವುದನ್ನು ಸರಿಪಡಿಸಬೇಕು.</p>.<p>ತಪ್ಪಾಗಿ ಪೋಡಿ ಆಗಿರುವ ಎಲ್ಲ ದಾಖಲೆಗಳನ್ನು ತೆಗೆದುಕೊಂಡು ಬಂದು ನನ್ನನ್ನು ಭೇಟಿಯಾಗಿ. ಸರಿಪಡಿಸುವಂತೆ ಭೂದಾಖಲೆಗಳ ಉಪನಿರ್ದೇಶಕರಿಗೆ (ಡಿಡಿಎಲ್ಆರ್) ಸೂಚಿಸುತ್ತೇನೆ.</p>.<p>92 ಸಿಸಿ ಅಡಿ ಅರ್ಜಿ ಹಾಕಿ ಬಹಳ ದಿನಗಳಾದರೂ ಇದುವರೆಗೂ ಅರ್ಜಿ ವಿಲೇವಾರಿ ಆಗಿಲ್ಲ.</p>.<p>2016ಕ್ಕಿಂತ ಮೊದಲು ನೀವು ಆ ನಿವೇಶನದಲ್ಲಿ ವಾಸಿಸಬೇಕು. ಅಂದಾಗ ಮಾತ್ರ ನಿಮಗೆ ಹಕ್ಕುಪತ್ರ ನೀಡಲು ಬರುತ್ತದೆ. ಈ ಬಗ್ಗೆ ಪರಿಶೀಲಿಸಿ, ನಿಮ್ಮ ಸಮಸ್ಯೆಯನ್ನು ಸರಿಪಡಿಸುವಂತೆ ತಹಶೀಲ್ದಾರ್ಗೆ ಸೂಚಿಸುತ್ತೇನೆ.</p>.<p>ಹಿರಿಯ ನಾಗರಿಕರ ಪಿಂಚಣಿ ಸರಿಯಾದ ಸಮಯಕ್ಕೆ ಬರುತ್ತಿಲ್ಲ.</p>.<p>ಪುಷ್ಪಾ ಎಸ್. ರಾವ್, ಗಿರಿನಗರ ವಾರ್ಡ್</p>.<p>ಈ ತಿಂಗಳ ಪಿಂಚಣಿ ಇನ್ನೇನು ಬಿಡುಗಡೆ ಆಗಬೇಕಿದೆ. 2025ರಲ್ಲಿ ಏಳು ತಿಂಗಳ ನಿಮ್ಮ ಪಿಂಚಣಿ ಬಾರದಿರುವುದಕ್ಕೆ ಏನು ಕಾರಣ ಎಂಬುದರ ಬಗ್ಗೆ ಪರಿಶೀಲಿಸುತ್ತೇನೆ. ಜಿಲ್ಲಾಧಿಕಾರಿ ಕಚೇರಿಗೆ ಬಂದು ಭೇಟಿಯಾಗಿ.</p>.<p>ನಮ್ಮ ಯಜಮಾನರು ತೀರಿಕೊಂಡು ಐದು ತಿಂಗಳಾಗಿದೆ. ಪೌತಿ ಖಾತೆಯಲ್ಲಿ ಅವರದೇ ಭಾವಚಿತ್ರ ಇದೆ. ತಹಶೀಲ್ದಾರ್ ಕಚೇರಿಗೆ ಅರ್ಜಿ ಸಲ್ಲಿಸಿದರೂ ಸ್ಪಂದಿಸುತ್ತಿಲ್ಲ.</p>.<p>ಮರಣ ಪ್ರಮಾಣಪತ್ರ, ಜಮೀನಿನ ದಾಖಲೆಗಳನ್ನು ತೆಗೆದುಕೊಂಡು ತಹಶೀಲ್ದಾರ್ ಕಚೇರಿಯಲ್ಲಿ ಅರ್ಜಿ ಹಾಕಬೇಕು. ಕೂಡಲೇ ಪೌತಿ ಖಾತೆ ಮಾಡುವಂತೆ ತಹಶೀಲ್ದಾರ್ಗೆ ಸೂಚಿಸುತ್ತೇನೆ.</p>.<p>ಮೈಲಪ್ಪನಹಳ್ಳಿಯಲ್ಲಿ ಸರ್ಕಾರಿ ಜಮೀನನ್ನು ಅಕ್ರಮವಾಗಿ ಖಾತೆ ಮಾಡಿಸಿಕೊಡಲಾಗಿದೆ. ಈ ಬಗ್ಗೆ ತನಿಖೆ ನಡೆಸಬೇಕು.</p>.<p>ಜಿಲ್ಲಾ ಪಂಚಾಯಿತಿ ಸಿಇಒ ಜೊತೆಗೆ ಮಾತನಾಡಿ, ಈ ಬಗ್ಗೆ ಕಾನೂನು ಕ್ರಮ ಕೈಗೊಳ್ಳಲಾಗುವುದು.</p>.<p>ತಿಂಡ್ಲು ಸರ್ವೇ ಸಂಖ್ಯೆ 81 ಗುಂಡು ತೋಪಿನ 3 ಎಕರೆ 9 ಗುಂಟೆ ಜಮೀನನ್ನು ಕಬಳಿಸಲಾಗಿದೆ. ಒತ್ತುವರಿ ತೆರವುಗೊಳಿಸಲು ಅರ್ಜಿ ಸಲ್ಲಿಸಿದರೂ ಅಧಿಕಾರಿಗಳು ಸ್ಪಂದಿಸುತ್ತಿಲ್ಲ.</p>.<p>ಜಗದೀಶ್, ತಿಂಡ್ಲು, ವಿದ್ಯಾರಣ್ಯಪುರ,</p>.<p>ಈ ಬಗ್ಗೆ ಸಮೀಕ್ಷೆ ನಡೆಸುವಂತೆ ತಹಶೀಲ್ದಾರ್ಗೆ ಆದೇಶ ನೀಡುತ್ತೇನೆ. ವೀರಭದ್ರಸ್ವಾಮಿ ದೇವಸ್ಥಾನದ ಜಾಗವನ್ನು ತೆರವುಗೊಳಿಸಲು ಸೂಚಿಸುತ್ತೇನೆ.</p>.<p>2025ರ ಜನವರಿಯಲ್ಲಿ ಖಾತೆ ಬದಲಾವಣೆಗೆ ಅರ್ಜಿ ಹಾಕಲಾಗಿದೆ. ಎಸಿ ಕಚೇರಿಯಲ್ಲಿ ಬಾಕಿ ಇದೆ.</p>.<p>ಕಂದಾಯ ಉಪ ವಿಭಾಗಾಧಿಕಾರಿಯವರಿಗೆ ಹೇಳಿ ನಿಮ್ಮ ಅರ್ಜಿಯನ್ನು ವಿಲೇವಾರಿ ಮಾಡಿಸಲಾಗುವುದು.</p>.<p>ರಾಮಕೃಷ್ಣಪುರ ಗ್ರಾಮದ ಕೆರೆ ಒತ್ತುವರಿಯಾಗಿದೆ. ಇದುವರೆಗೂ ಈ ಕೆರೆಯ ಸಮೀಕ್ಷೆ ಆಗಿಲ್ಲ.</p>.<p>ವೇಣುಗೋಪಾಲ್, ಜಿಗಣಿ ಹೋಬಳಿ, ಆನೇಕಲ್</p>.<p>ಬೆಂಗಳೂರು ನಗರ ಜಿಲ್ಲೆಯ ಎಲ್ಲ 782 ಕೆರೆಗಳ ಸಮೀಕ್ಷೆ ಆಗಿದೆ. ಶೇ 80ರಷ್ಟು ಒತ್ತುವರಿ ತೆರವುಗೊಳಿಸಲಾಗಿದೆ. ರಾಮಕೃಷ್ಣಪುರ ಕೆರೆಯ ಒತ್ತುವರಿಯನ್ನು ತೆರವುಗೊಳಿಸಲು ತಹಶೀಲ್ದಾರ್ಗೆ ನಿರ್ದೇಶನ ನೀಡುತ್ತೇನೆ.</p>.<p>ಇನಾಂ ಜಮೀನು ಮರು ಮಂಜೂರಾಗಿದ್ದರೂ ನೋಂದಣಿ ಆಗಿಲ್ಲ. ತಹಶೀಲ್ದಾರ್ಗೆ ಅರ್ಜಿ ಹಾಕಿದರೂ ಸ್ಪಂದಿಸುತ್ತಿಲ್ಲ.</p>.<p>ಇನಾಂ ಭೂಮಿಯ ದಾಖಲೆಗಳನ್ನು ಪರಿಶೀಲಿಸಿ, ಅಧಿಕಾರಿಗಳೊಂದಿಗೆ ಚರ್ಚಿಸಿ ಪರಿಹಾರ ನೀಡುತ್ತೇನೆ.</p>.<p>ಎಚ್ಬಿಆರ್ ಬಡಾವಣೆಯ ಸ್ಮಶಾನ ಜಾಗದ 1 ಎಕರೆ 15 ಗುಂಟೆ ಒತ್ತುವರಿ ತೆರವುಗೊಳಿಸಬೇಕು</p>.<p>ಸರ್ವೇ ಸಂಖ್ಯೆ 229ರ ಸ್ಮಶಾನದ ಸಮೀಕ್ಷೆ ನಡೆಸಿ ಒತ್ತುವರಿ ಆಗಿದ್ದರೆ ತೆರವುಗೊಳಿಸಲು ತಹಶೀಲ್ದಾರ್ಗೆ ಸೂಚಿಸುತ್ತೇನೆ.</p>.<p>ಕೌಡೇನಹಳ್ಳಿ ಕೆರೆ 20 ಎಕರೆ ಜಮೀನು ಒತ್ತುವರಿ ತೆರವುಗೊಳಿಸಿ</p>.<p>ಕೌಡೇನಹಳ್ಳಿ ಕೆರೆ ಸಮೀಕ್ಷೆ ಆಗಿದೆ. ಆದರೆ ಒತ್ತುವರಿ ತೆರವುಗೊಂಡಿಲ್ಲ. ಈ ಬಗ್ಗೆ ತಹಶೀಲ್ದಾರ್ ಅವರೊಂದಿಗೆ ಮಾತನಾಡಿ, ಒತ್ತುವರಿ ತೆರವುಗೊಳಿಸಲು ಸೂಚಿಸುತ್ತೇನೆ.</p>.<p>ಬೆಳಗಾವಿ ಜಿಲ್ಲೆಯ ಗೋಕಾಕ ವಿಧಾನಸಭಾ ಕ್ಷೇತ್ರದ ಮತದಾರರ ಪಟ್ಟಿಯಲ್ಲಿ ನನ್ನ ಹೆಸರು ಇದೆ. ಈಗ ನಾನು ಬೆಂಗಳೂರಿನಲ್ಲಿ ವಾಸಿಸುತ್ತಿದ್ದು, ಇಲ್ಲಿಯ ಮತದಾರರ ಪಟ್ಟಿಯಲ್ಲಿ ನನ್ನ ಹೆಸರು ನೋಂದಣಿ ಹೇಗೆ ಮಾಡಿಕೊಳ್ಳಬೇಕು.</p>.<p>8ಎ ಫಾರಂ ಮೂಲಕ ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆಗೆ ಅರ್ಜಿ ಸಲ್ಲಿಸಬೇಕು. ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳಿಗೆ ಸಮರ್ಪಕ ದಾಖಲೆಗಳನ್ನು ನೀಡಿ, ಮತದಾರರ ಪಟ್ಟಿಯಲ್ಲಿ ಹೆಸರು ನೋಂದಣಿ ಮಾಡಿಕೊಳ್ಳಬಹುದು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260526-4-1363705376</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>