<p>ಮಧುಗಿರಿ: ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಹಿಂದಿ ಸೇರಿದಂತೆ ತೃತೀಯ ಭಾಷೆಗಳ ಅಂಕಗಳು ಫಲಿತಾಂಶದಲ್ಲಿ ನಿರ್ಧಾರಕವಾಗಿರುವುದಿಲ್ಲ ಎಂಬುದು ಸ್ವಾಗತಾರ್ಹ. ಇದು ಶಾಲಾ ಶಿಕ್ಷಣದಲ್ಲಿ ದ್ವಿಭಾಷಾ ಸೂತ್ರಕ್ಕೆ ಮುನ್ನುಡಿಯಂತಿದೆ ಎಂದು ಅಚಲ ಕಲ್ಚರಲ್ ಫೌಂಡೇಶನ್ ಅಧ್ಯಕ್ಷ ಪ್ರೊ.ಡಿ.ಎಸ್. ಮುನೀಂದ್ರ ಕುಮಾರ್ ಹೇಳಿದರು.</p>.<p>ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಶಾಲಾ ಶಿಕ್ಷಣದಲ್ಲಿ ಸಚಿವರು ತೆಗೆದುಕೊಂಡ ತೀರ್ಮಾನ ಕನ್ನಡ ಭಾಷೆಗೆ ಮತ್ತು ಕನ್ನಡಿಗರ ಪಾಲಿಗೆ ಮಹತ್ವದ ಮೈಲಿಗಲ್ಲು ಎಂದರು.</p>.<p>ಸಾಹಿತಿ ಮ.ಲ.ನ.ಮೂರ್ತಿ ಮಾತನಾಡಿ, ತ್ರಿಭಾಷಾ ಸೂತ್ರದ ಬಗ್ಗೆ ಐದಾರು ದಶಕಗಳಿಂದ ಶಿಕ್ಷಣ ತಜ್ಞರು ಚಿಂತಕರಲ್ಲಿ ಚರ್ಚೆನಡೆಯುತ್ತಾ ಬಂದಿದ್ದು ಕನ್ನಡ ಪರ ಸಂಘಟನೆಯ ಕೋರಿಕೆಗೆ ಸ್ಪಂದಿಸಿರುವುದು ಶ್ಲಾಘನೀಯ ಎಂದರು.</p>.<p>ವಿಮರ್ಶಕ ಕೆ.ಪಿ ನಟರಾಜ್ ಮಾತನಾಡಿ, ಈ ಆದೇಶ ಕನ್ನಡದ ಮಕ್ಕಳ ಮೇಲಿನ ಭಾರ ಇಳಿಸುತ್ತದೆ. ಕೇವಲ ಕಲಿಕೆಯ ಭಾರ ಮಾತ್ರವಲ್ಲ, ಹಿಂದಿ ರಾಜ್ಯಗಳ ಯಜಮಾನಿಕೆಯ ಶಕ್ತಿಗಳು ಹಿಂದಿ ಮೂಲಕ ಕರ್ನಾಟಕದ ಮೇಲೆ ಹೇರಿದ ಗುಲಾಮಗಿರಿಯ ಭಾರವನ್ನು ಈ ನಿರ್ಧಾರದಿಂದ ಇಳಿಸಿದಂತಾಗುತ್ತದೆ ಎಂದರು.</p>.<p>ಕೆಲವು ಪ್ರಶ್ನೆಗಳಿಗೆ ಸರ್ಕಾರ ಸ್ಪಷ್ಟೀಕರಣ ನೀಡಬೇಕಾಗಿದೆ. ಹತ್ತನೇ ತರಗತಿಗೆ ಮಾತ್ರ ಇದು ಅನ್ವಯಿಸುತ್ತದೆಯೇ? ಅಥವಾ ಮೂರನೇ ಭಾಷೆ ಕಲಿಕೆ ಆರಂಭವಾಗುವ ಆರನೇ ತರಗತಿಯಿಂದ ಆರಂಭಿಸಿ ಒಂಭತ್ತನೇ ತರಗತಿಯವರೆಗೂ ಈ ವಿಷಯದ ಅಂಕಗಳು ಪರೀಕ್ಷೆಗೆ ಪರಿಗಣಿಸಲ್ಪಡುವುದಿಲ್ಲವೇ? ಅಲ್ಲಿಯೂ ಗ್ರೇಡಿಂಗ್ ಅನುಸರಿಸಲಾಗುತ್ತದೆಯೇ ಎಂಬ ಬಗ್ಗೆ ಸ್ಪಷ್ಟೀಕರಣ ಅಗತ್ಯವಾಗಿದೆ ಎಂದರು.</p>.<p>ಪಿ.ಕೆ ರಂಗಸ್ವಾಮಿ, ಪ್ರೊ.ಕೃಷ್ಣಪ್ಪ, ವೆಂಕಟರಮಣಪ್ಪ, ನರಸಿಂಹಮೂರ್ತಿ ಇದ್ದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260329-18-1182925544</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಮಧುಗಿರಿ: ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಹಿಂದಿ ಸೇರಿದಂತೆ ತೃತೀಯ ಭಾಷೆಗಳ ಅಂಕಗಳು ಫಲಿತಾಂಶದಲ್ಲಿ ನಿರ್ಧಾರಕವಾಗಿರುವುದಿಲ್ಲ ಎಂಬುದು ಸ್ವಾಗತಾರ್ಹ. ಇದು ಶಾಲಾ ಶಿಕ್ಷಣದಲ್ಲಿ ದ್ವಿಭಾಷಾ ಸೂತ್ರಕ್ಕೆ ಮುನ್ನುಡಿಯಂತಿದೆ ಎಂದು ಅಚಲ ಕಲ್ಚರಲ್ ಫೌಂಡೇಶನ್ ಅಧ್ಯಕ್ಷ ಪ್ರೊ.ಡಿ.ಎಸ್. ಮುನೀಂದ್ರ ಕುಮಾರ್ ಹೇಳಿದರು.</p>.<p>ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಶಾಲಾ ಶಿಕ್ಷಣದಲ್ಲಿ ಸಚಿವರು ತೆಗೆದುಕೊಂಡ ತೀರ್ಮಾನ ಕನ್ನಡ ಭಾಷೆಗೆ ಮತ್ತು ಕನ್ನಡಿಗರ ಪಾಲಿಗೆ ಮಹತ್ವದ ಮೈಲಿಗಲ್ಲು ಎಂದರು.</p>.<p>ಸಾಹಿತಿ ಮ.ಲ.ನ.ಮೂರ್ತಿ ಮಾತನಾಡಿ, ತ್ರಿಭಾಷಾ ಸೂತ್ರದ ಬಗ್ಗೆ ಐದಾರು ದಶಕಗಳಿಂದ ಶಿಕ್ಷಣ ತಜ್ಞರು ಚಿಂತಕರಲ್ಲಿ ಚರ್ಚೆನಡೆಯುತ್ತಾ ಬಂದಿದ್ದು ಕನ್ನಡ ಪರ ಸಂಘಟನೆಯ ಕೋರಿಕೆಗೆ ಸ್ಪಂದಿಸಿರುವುದು ಶ್ಲಾಘನೀಯ ಎಂದರು.</p>.<p>ವಿಮರ್ಶಕ ಕೆ.ಪಿ ನಟರಾಜ್ ಮಾತನಾಡಿ, ಈ ಆದೇಶ ಕನ್ನಡದ ಮಕ್ಕಳ ಮೇಲಿನ ಭಾರ ಇಳಿಸುತ್ತದೆ. ಕೇವಲ ಕಲಿಕೆಯ ಭಾರ ಮಾತ್ರವಲ್ಲ, ಹಿಂದಿ ರಾಜ್ಯಗಳ ಯಜಮಾನಿಕೆಯ ಶಕ್ತಿಗಳು ಹಿಂದಿ ಮೂಲಕ ಕರ್ನಾಟಕದ ಮೇಲೆ ಹೇರಿದ ಗುಲಾಮಗಿರಿಯ ಭಾರವನ್ನು ಈ ನಿರ್ಧಾರದಿಂದ ಇಳಿಸಿದಂತಾಗುತ್ತದೆ ಎಂದರು.</p>.<p>ಕೆಲವು ಪ್ರಶ್ನೆಗಳಿಗೆ ಸರ್ಕಾರ ಸ್ಪಷ್ಟೀಕರಣ ನೀಡಬೇಕಾಗಿದೆ. ಹತ್ತನೇ ತರಗತಿಗೆ ಮಾತ್ರ ಇದು ಅನ್ವಯಿಸುತ್ತದೆಯೇ? ಅಥವಾ ಮೂರನೇ ಭಾಷೆ ಕಲಿಕೆ ಆರಂಭವಾಗುವ ಆರನೇ ತರಗತಿಯಿಂದ ಆರಂಭಿಸಿ ಒಂಭತ್ತನೇ ತರಗತಿಯವರೆಗೂ ಈ ವಿಷಯದ ಅಂಕಗಳು ಪರೀಕ್ಷೆಗೆ ಪರಿಗಣಿಸಲ್ಪಡುವುದಿಲ್ಲವೇ? ಅಲ್ಲಿಯೂ ಗ್ರೇಡಿಂಗ್ ಅನುಸರಿಸಲಾಗುತ್ತದೆಯೇ ಎಂಬ ಬಗ್ಗೆ ಸ್ಪಷ್ಟೀಕರಣ ಅಗತ್ಯವಾಗಿದೆ ಎಂದರು.</p>.<p>ಪಿ.ಕೆ ರಂಗಸ್ವಾಮಿ, ಪ್ರೊ.ಕೃಷ್ಣಪ್ಪ, ವೆಂಕಟರಮಣಪ್ಪ, ನರಸಿಂಹಮೂರ್ತಿ ಇದ್ದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260329-18-1182925544</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>