<p>ನಾಲತವಾಡ: ಸ್ಥಳೀಯ ಕಡು ಬಡವ, ನಿತ್ಯ ಬಜಾರ ಸೇರಿದಂತೆ ಮನೆ ಮನೆಗೆ ಹೂ ಮಾರಿ ಬದುಕುವ ಆಯಗಾರ ವೃತ್ತಿಯ ಶ್ರೀಶೈಲ ಹೂಗಾರ ಇವರ ಮಗಳು ಲಕ್ಷ್ಮೀ ಹೂಗಾರ ಎಸ್ಎಸ್ಎಲ್ ಸಿ ಪರೀಕ್ಷೆಯಲ್ಲಿ ಇಂಗ್ಲೀಷ್ ಮಾಧ್ಯಮದಲ್ಲಿ ಶೇ 99 ಅಂಕ ಪಡೆದು ಸಾಧನೆ ಮಾಡಿದ್ದಾರೆ.</p>.<p>ನಾಗರಬೆಟ್ಟದ ಎಕ್ಸ್ಪರ್ಟ್ (ಆಕ್ಸ್ಫರ್ಡ್) ಮಠ ಇವರಲ್ಲಿ ಓದುತ್ತಿರುವ ಲಕ್ಷ್ಮೀಯವರಿಗೆ ಅವಿದ್ಯಾವಂತ ತಾಯಿ, ಇಂಗ್ಲಿಷ್ ಗೊತ್ತಿಲ್ಲದ ತಂದೆ, ಕಿತ್ತು ತಿನ್ನುವ ಬಡತನ ಇದೆ. ಈ ನಡುವೆ ಲಕ್ಷ್ಮೀ ಸಾಧನೆ ಮಾಡಿದ್ದಾರೆ. ಮಗಳ ಸಾಧನೆಗೆ ತಂದೆ ಶ್ರೀಶೈಲ ಹಾಗೂ ತಾಯಿ ಪಾರ್ವತಿ ಬಜಾರದ ನಡು ರಸ್ತೆಯ ತಮ್ಮ ವ್ಯಾಪಾರದ ಸ್ಥಳದಲ್ಲೇ ಮಗಳಿಗೆ ಸಿಹಿ ತಿನ್ನಿಸಿ ಹರ್ಷ ವ್ಯಕ್ತಪಡಿಸಿದರು.</p>.<p>‘ಪ್ರಜಾವಾಣಿ’ ಜೊತೆ ಮಾತನಾಡಿದ ಲಕ್ಷ್ಮೀ ಹೂಗಾರ, ‘ಇಷ್ಟೊಂದು ಅಂಕ ಬರಲಿದೆ ಎಂದು ನಿರೀಕ್ಷೆ ಮಾಡಿರಲಿಲ್ಲ. ಪಿಯುಸಿ ವಿಜ್ಞಾನ ವಿಭಾಗದಲ್ಲಿ ಮುಂದಿನ ಶಿಕ್ಷಣ ಮುಂದುವರೆಸಿ ವೈದ್ಯೆ ಆಗುವ ಗುರಿ ಇಟ್ಟುಕೊಂಡಿರುವೆ’ ಎಂದು ಹೇಳಿದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260425-26-784925142</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ನಾಲತವಾಡ: ಸ್ಥಳೀಯ ಕಡು ಬಡವ, ನಿತ್ಯ ಬಜಾರ ಸೇರಿದಂತೆ ಮನೆ ಮನೆಗೆ ಹೂ ಮಾರಿ ಬದುಕುವ ಆಯಗಾರ ವೃತ್ತಿಯ ಶ್ರೀಶೈಲ ಹೂಗಾರ ಇವರ ಮಗಳು ಲಕ್ಷ್ಮೀ ಹೂಗಾರ ಎಸ್ಎಸ್ಎಲ್ ಸಿ ಪರೀಕ್ಷೆಯಲ್ಲಿ ಇಂಗ್ಲೀಷ್ ಮಾಧ್ಯಮದಲ್ಲಿ ಶೇ 99 ಅಂಕ ಪಡೆದು ಸಾಧನೆ ಮಾಡಿದ್ದಾರೆ.</p>.<p>ನಾಗರಬೆಟ್ಟದ ಎಕ್ಸ್ಪರ್ಟ್ (ಆಕ್ಸ್ಫರ್ಡ್) ಮಠ ಇವರಲ್ಲಿ ಓದುತ್ತಿರುವ ಲಕ್ಷ್ಮೀಯವರಿಗೆ ಅವಿದ್ಯಾವಂತ ತಾಯಿ, ಇಂಗ್ಲಿಷ್ ಗೊತ್ತಿಲ್ಲದ ತಂದೆ, ಕಿತ್ತು ತಿನ್ನುವ ಬಡತನ ಇದೆ. ಈ ನಡುವೆ ಲಕ್ಷ್ಮೀ ಸಾಧನೆ ಮಾಡಿದ್ದಾರೆ. ಮಗಳ ಸಾಧನೆಗೆ ತಂದೆ ಶ್ರೀಶೈಲ ಹಾಗೂ ತಾಯಿ ಪಾರ್ವತಿ ಬಜಾರದ ನಡು ರಸ್ತೆಯ ತಮ್ಮ ವ್ಯಾಪಾರದ ಸ್ಥಳದಲ್ಲೇ ಮಗಳಿಗೆ ಸಿಹಿ ತಿನ್ನಿಸಿ ಹರ್ಷ ವ್ಯಕ್ತಪಡಿಸಿದರು.</p>.<p>‘ಪ್ರಜಾವಾಣಿ’ ಜೊತೆ ಮಾತನಾಡಿದ ಲಕ್ಷ್ಮೀ ಹೂಗಾರ, ‘ಇಷ್ಟೊಂದು ಅಂಕ ಬರಲಿದೆ ಎಂದು ನಿರೀಕ್ಷೆ ಮಾಡಿರಲಿಲ್ಲ. ಪಿಯುಸಿ ವಿಜ್ಞಾನ ವಿಭಾಗದಲ್ಲಿ ಮುಂದಿನ ಶಿಕ್ಷಣ ಮುಂದುವರೆಸಿ ವೈದ್ಯೆ ಆಗುವ ಗುರಿ ಇಟ್ಟುಕೊಂಡಿರುವೆ’ ಎಂದು ಹೇಳಿದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260425-26-784925142</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>