<p>ರಾಣೆಬೆನ್ನೂರು: ಇಲ್ಲಿನ ಉಮಾಶಂಕರ ನಗರದ ಆಟೊ ಚಾಲಕ ನಾಗರಾಜ ನರಸಪ್ಪ ಆರೇರ ಅವರ ಪುತ್ರಿ ಆಶಾ ಆರೇರ ಎಸ್ಎಸ್ಎಲ್ಸಿ ವಾರ್ಷಿಕ ಪರೀಕ್ಷೆಯಲ್ಲಿ ಶೇ 93.06 ರಷ್ಟು ಅಂಕಗಳನ್ನು ಪಡೆದು ಸಾಧನೆ ಮಾಡಿದ್ದಾರೆ.</p>.<p>ಹಳೇ ಪಿ.ಬಿ.ರಸ್ತೆಯ ಬಳಿ ಇರುವ ಎನ್.ಆರ್.ಸಂಕೇತ ಪ್ರೌಢಶಾಲೆಯ ವಿದ್ಯಾರ್ಥಿನಿಯಾಗಿದ್ದು, ಕನ್ನಡ 98, ಇಂಗ್ಲೀಷ 119, ಹಿಂದಿ 97, ಗಣಿತ 95, ವಿಜ್ಞಾನ 85 ಮತು ಸಮಾಜ ವಿಜ್ಞಾನ 91 ಸೇರಿ ಒಟ್ಟು 585 ಅಂಕಗಳನ್ನು ಪಡೆದು ಶಾಲೆಗೆ ದ್ವಿತೀಯ ಸ್ಥಾನ ಪಡೆದಿದ್ದಾಳೆ.</p>.<p>ಕುಟುಂಬಕ್ಕೆ ಆಟೊದಿಂದ ಬರುವ ಆದಾಯವೇ ಆಧಾರವಾಗಿದ್ದು, ಇದರ ನಡುವೆಯೂ ಪುತ್ರಿಯನ್ನು ಓದುವುದಕ್ಕೆ ನಾಗರಾಜ ಪ್ರೋತ್ಸಾಹಿಸಿದ್ದಾರೆ. ಆಶಾ ಆರೇರ ಅವರು ಶಿಕ್ಷಕರ ಮಾರ್ಗದರ್ಶನದಲ್ಲಿ ನಿರಂತರ ಅಧ್ಯಯನ ಕೈಗೊಂಡು ಉತ್ತಮ ಅಂಕಗಳನ್ನು ಪಡೆದು ತಂದೆ–ತಾಯಿ ಮತ್ತು ಶಾಲೆಗೆ ಕೀರ್ತಿ ತಂದಿದ್ದಾರೆ.</p>.<p>‘ನಮ್ಮ ತಂದೆ ನಾಗರಾಜ ಮತ್ತು ತಾಯಿ ರಾಧಾ ಅವರ ಶ್ರಮವೇ ನನಗೆ ಪ್ರೇರಣೆಯಾಗಿದೆ. ಅಂದಿನ ಪಾಠವನ್ನು ಅಂದೇ ಓದಿ ಮುಗಿಸುತ್ತಿದ್ದೆ. ಬೆಳಿಗ್ಗೆ ಬೇಗ ಎದ್ದು ಓದುತ್ತಿದ್ದೆ. ಮುಂದೆ ಪಿಯುಸಿ ವಿಜ್ಞಾನದಲ್ಲಿ ಓದಿ ವೈದ್ಯಳಾಗುವ ಕನಸು ಹೊಂದಿದ್ದೇನೆ’ ಎಂದು ‘ಪ್ರಜಾವಾಣಿ‘ಗೆ ತಿಳಿಸಿದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260425-22-217249418</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ರಾಣೆಬೆನ್ನೂರು: ಇಲ್ಲಿನ ಉಮಾಶಂಕರ ನಗರದ ಆಟೊ ಚಾಲಕ ನಾಗರಾಜ ನರಸಪ್ಪ ಆರೇರ ಅವರ ಪುತ್ರಿ ಆಶಾ ಆರೇರ ಎಸ್ಎಸ್ಎಲ್ಸಿ ವಾರ್ಷಿಕ ಪರೀಕ್ಷೆಯಲ್ಲಿ ಶೇ 93.06 ರಷ್ಟು ಅಂಕಗಳನ್ನು ಪಡೆದು ಸಾಧನೆ ಮಾಡಿದ್ದಾರೆ.</p>.<p>ಹಳೇ ಪಿ.ಬಿ.ರಸ್ತೆಯ ಬಳಿ ಇರುವ ಎನ್.ಆರ್.ಸಂಕೇತ ಪ್ರೌಢಶಾಲೆಯ ವಿದ್ಯಾರ್ಥಿನಿಯಾಗಿದ್ದು, ಕನ್ನಡ 98, ಇಂಗ್ಲೀಷ 119, ಹಿಂದಿ 97, ಗಣಿತ 95, ವಿಜ್ಞಾನ 85 ಮತು ಸಮಾಜ ವಿಜ್ಞಾನ 91 ಸೇರಿ ಒಟ್ಟು 585 ಅಂಕಗಳನ್ನು ಪಡೆದು ಶಾಲೆಗೆ ದ್ವಿತೀಯ ಸ್ಥಾನ ಪಡೆದಿದ್ದಾಳೆ.</p>.<p>ಕುಟುಂಬಕ್ಕೆ ಆಟೊದಿಂದ ಬರುವ ಆದಾಯವೇ ಆಧಾರವಾಗಿದ್ದು, ಇದರ ನಡುವೆಯೂ ಪುತ್ರಿಯನ್ನು ಓದುವುದಕ್ಕೆ ನಾಗರಾಜ ಪ್ರೋತ್ಸಾಹಿಸಿದ್ದಾರೆ. ಆಶಾ ಆರೇರ ಅವರು ಶಿಕ್ಷಕರ ಮಾರ್ಗದರ್ಶನದಲ್ಲಿ ನಿರಂತರ ಅಧ್ಯಯನ ಕೈಗೊಂಡು ಉತ್ತಮ ಅಂಕಗಳನ್ನು ಪಡೆದು ತಂದೆ–ತಾಯಿ ಮತ್ತು ಶಾಲೆಗೆ ಕೀರ್ತಿ ತಂದಿದ್ದಾರೆ.</p>.<p>‘ನಮ್ಮ ತಂದೆ ನಾಗರಾಜ ಮತ್ತು ತಾಯಿ ರಾಧಾ ಅವರ ಶ್ರಮವೇ ನನಗೆ ಪ್ರೇರಣೆಯಾಗಿದೆ. ಅಂದಿನ ಪಾಠವನ್ನು ಅಂದೇ ಓದಿ ಮುಗಿಸುತ್ತಿದ್ದೆ. ಬೆಳಿಗ್ಗೆ ಬೇಗ ಎದ್ದು ಓದುತ್ತಿದ್ದೆ. ಮುಂದೆ ಪಿಯುಸಿ ವಿಜ್ಞಾನದಲ್ಲಿ ಓದಿ ವೈದ್ಯಳಾಗುವ ಕನಸು ಹೊಂದಿದ್ದೇನೆ’ ಎಂದು ‘ಪ್ರಜಾವಾಣಿ‘ಗೆ ತಿಳಿಸಿದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260425-22-217249418</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>