ಮಹಿಳಾ ಅಧಿಕಾರಿಯ ಕಾರ್ಯವೇ ಪ್ರೇರಣೆ
‘7ನೇ ತರಗತಿಯಲ್ಲಿ ಇದ್ದಾಗ ಮಹಿಳಾ ಅಧಿಕಾರಿಯೊಬ್ಬರು ಒತ್ತುವರಿಯಾಗಿದ್ದ ರಸ್ತೆಯನ್ನು ತೆರವು ಮಾಡಿಸಿದ್ದರು. ಬೆಳಿಗ್ಗೆ 6ಕ್ಕೆ ಬಂದು, ವಿರೋಧದ ನಡುವೆಯೂ ಮುಂದೆ ನಿಂತು ದಿಟ್ಟತನದಿಂದ ಅಧಿಕಾರ ಚಲಾಯಿಸಿದ್ದರು. ಅದು, ನಮ್ಮೂರಲ್ಲಿ ದೊಡ್ಡ ಸುದ್ದಿಯಾಗಿತ್ತು. ಎಲ್ಲೆಡೆಯೂ ಆ ಅಧಿಕಾರಿಯ ಬಗ್ಗೆಯೇ ಮಾತು. ನಾನೂ ಅಧಿಕಾರಿಯಾದರೆ ಸಮಾಜದಲ್ಲಿ ಏನೆಲ್ಲ ಬದಲಾವಣೆ ತರಬಹುದು, ಯಾವೆಲ್ಲ ಒಳ್ಳೆಯ ಕೆಲಸ ಮಾಡಬಹುದು ಎಂಬುದಕ್ಕೆ ಅದು ಪ್ರೇರಣೆಯಾಗಿ, ಇವತ್ತು ಯುಪಿಎಸ್ಸಿ ಪಾಸಾದೆ’ ಎನ್ನುತ್ತಾರೆ ಬಸವರಾಜ ಜವಳಿ ಅವರು.