ಅನಕ್ಷರತೆ ಮತ್ತು ಬಡತನದ ಕಾರಣದಿಂದಲೇ ಇಂದು ಬಹುತೇಕ ಯುವಕ, ಯುವತಿಯರು ಹತಾಶೆ, ಅಸಮಾಧಾನಕ್ಕೆ ಒಳಗಾಗಿ ಸಮಾಜದ ಮುಖ್ಯವಾಹಿನಿಯಿಂದಲೇ ದೂರ ಉಳಿದುಬಿಡುತ್ತಾರೆ. ಇಂತಹ ವ್ಯಕ್ತಿಗಳನ್ನು ಹುಡುಕಿ ಅವರಿಗೆ ಉಚಿತವಾಗಿ ತಾಂತ್ರಿಕ ಕೌಶಲ ತರಬೇತಿ ನೀಡಿ ಉಚಿತವಾಗಿಯೇ ಉದ್ಯೋಗ ಕೊಡಿಸುವ ಮೂಲಕ ಅವರ ಬದುಕಿಗೆ ಪರೋಕ್ಷವಾಗಿ ಸಹಾಯಹಸ್ತ ಚಾಚುತ್ತಾ ಬಂದಿದೆ ಬೆಂಗಳೂರಿನ ಬೈಯಪ್ಪನಹಳ್ಳಿಯ ಸದಾನಂದ ನಗರದ `ಉನ್ನತಿ ತರಬೇತಿ ಸಂಸ್ಥೆ'.
ಬಡತನದ ಕೂಪಕ್ಕೆ ಸಿಲುಕಿ ಶಿಕ್ಷಣ ಮುಂದುವರಿಸಲು ಸಾಧ್ಯವಾಗದೇ ಇರುವ ಯುವಜನರಲ್ಲಿ ಆತ್ಮವಿಶ್ವಾಸ ತುಂಬಿ ಅವರಿಗೆ ನೀಡುವ ತರಬೇತಿಗೆ ತಕ್ಕಂತೆ ವಿವಿಧ ಕಂಪೆನಿಗಳಲ್ಲಿ ಉದ್ಯೋಗ ಕೊಡಿಸುವುದೇ ಈ ಸಂಸ್ಥೆಯ ಮೂಲ ಉದ್ದೇಶ.
ಯುವಜನರನ್ನು ಸ್ವಾವಲಂಬಿಗಳನ್ನಾಗಿ ಮಾಡಬೇಕೆಂಬ ನಿಟ್ಟಿನಲ್ಲಿ 2003ರಲ್ಲಿ ಆರಂಭವಾದ ಈ ಸಂಸ್ಥೆ ಇದುವರೆಗೆ ಸುಮಾರು 4 ಸಾವಿರಕ್ಕೂ ಅಧಿಕ ಮಂದಿಗೆ ತರಬೇತಿ ನೀಡಿ, ಖಚಿತವಾಗಿ ನೌಕರಿಯನ್ನೂ ಕೊಡಿಸಿರುವ ಹೆಗ್ಗಳಿಕೆ ಹೊಂದಿದೆ. ಪರಿಣತ ಶಿಕ್ಷಕರ ತಂಡ, ಸುಸಜ್ಜಿತ ತರಗತಿಗಳು, ಕಂಪ್ಯೂಟರ್ ವ್ಯವಸ್ಥೆ, ದೃಶ್ಯ ಸಂಯೋಜನೆ ಮೂಲಕ ಬೋಧನಾ ವ್ಯವಸ್ಥೆ ಇಲ್ಲಿದೆ. ಇನ್ನು ವಿದ್ಯಾರ್ಥಿಗಳಿಗೆ ಅನುಕೂಲವಾಗಲೆಂದು ಇನ್ಫೋಸಿಸ್ ಸಂಸ್ಥೆಯು ವಿಶಾಲವಾದ ಸುಸಜ್ಜಿತ ಸಭಾಂಗಣವನ್ನು ನಿರ್ಮಿಸಿಕೊಟ್ಟಿದೆ.
ಓದಿರಿ..
ಉನ್ನತ ಧ್ಯೇಯದ `ಉನ್ನತಿ'