ರಾಜಕಾರಣ ಎಂಬ ಮರಕ್ಕೆ ಜಾತಿ ಎನ್ನುವ ಬಳ್ಳಿ ಅಂಟಿಕೊಂಡಿದೆ. ಲಂಚವೇ ನೀರಾಗಿದೆ. ಆಸೆ, ಆಮಿಷ, ಮಾದಕ ಮದ್ಯಗಳೇ ಗೊಬ್ಬರವಾಗಿವೆ. ಒಂದು ದಿನದ ಹಬ್ಬಕ್ಕೆ ಐದು ವರ್ಷಗಳ ತಿಥಿ! ಬಾಳುವುದು ಯಾರೋ, ಬದುಕುವುದು ಯಾರೋ...
ಸ್ವಜಾತಿ ಪ್ರೇಮ, ಲಂಚಬಾಕತನ, ಭ್ರಷ್ಟಾಚಾರ, ಅಧಿಕಾರ ದುರುಪಯೋಗ ರಾಜಕೀಯ ವೈಷಮ್ಯಗಳು ದಿನೇ ದಿನೇ ಹೆಚ್ಚುತ್ತಿರುವುದು ಲಾಲ್ ಬಹದ್ದೂರ್ ಶಾಸ್ತ್ರಿ ಅವರನ್ನು ಕಂಡಂತಹ ಭಾರತಕ್ಕೆ ಕಪ್ಪುಚುಕ್ಕೆ. ಅಬ್ದುಲ್ ಕಲಾಂ ಕನಸು ಕಮರಿದೆ. ಕನ್ನಡಿಗರ ಏಕತೆ ಒಡೆದಿದೆ. ಕೋಮುದ್ವೇಷ ಹರಡಿದೆ.
ನಮ್ಮ ದುರದೃಷ್ಟ; ಇರುವ ಕಳ್ಳರಲ್ಲೇ ಉತ್ತಮರು ಯಾರು ಎಂಬುದನ್ನು ನಾವು ತೀರ್ಮಾನ ಮಾಡಬೇಕಾಗಿದೆ.