2008ರಲ್ಲಿ ಕ್ಷೇತ್ರ ಪುನರ್ ವಿಂಗಡಣೆಯಾಗಿ ಕುರುಗೋಡು ಅಸ್ತಿತ್ವಕಳೆದುಕೊಂಡ ಬಳಿಕ ಅಲ್ಲಂ ವೀರಭದ್ರಪ್ಪ ಮತ್ತೆ ಬೇರೆ ಕ್ಷೇತ್ರದಿಂದ ಸ್ಪರ್ಧಿಸಲಿಲ್ಲ. ನಾರಾಯಣರೆಡ್ಡಿ ಅವರಿಗೂ ಪುನರ್ವಿಂಗಡಣೆಯು ರಾಜಕೀಯ ಅಸ್ತಿತ್ವದ ಸವಾಲನ್ನು ಎದುರಾಗಿಸಿತ್ತು. ಅವರೂ ಕೂಡ ನಂತರ ಸ್ಪರ್ಧಿಸಲಿಲ್ಲ. ತಾಲ್ಲೂಕು ಕೇಂದ್ರವಾಗಿರುವ ಕುರುಗೋಡು ಪಟ್ಟಣ, ಇದೀಗ ಕಂಪ್ಲಿ ಕ್ಷೇತ್ರಕ್ಕೆ ಸೇರಿದ್ದು, ಅಲ್ಲಿ ತನ್ನ ಚಹರೆ ಗುರುತಿಸಿಕೊಳ್ಳುವ ಹವಣಿಕೆಯಲ್ಲಿದೆ.ಇಲ್ಲಿ ಸ್ಪರ್ಧಿಸಿದವರೆಲ್ಲರ ಮನದಾಳದಲ್ಲಿ ಕುರುಗೋಡು ಕಟು– ಮಧುರ ನೆನಪಾಗಿ ಅಷ್ಟೇ ಉಳಿದಿದೆ.