ನವದೆಹಲಿ: ಭಾರತ ಕ್ರಿಕೆಟ್ ತಂಡದ ಹಿರಿಯ ಆಟಗಾರ ಗೌತಮ್ ಗಂಭೀರ್ ಅವರು, ನಾನು ವಿಶ್ವ ಪರಿಸರ ದಿನದ ಹೆಸರನ್ನು ವಿಶ್ವ ಅಸ್ತಿತ್ವ ದಿನವಾಗಿ ಬದಲಿಸಬಹುದೆಂದು ಆಲೋಚಿಸಿದೆ ಎಂದು ಟ್ವೀಟ್ ಮಾಡಿದ್ದಾರೆ.
‘ವಿಶ್ವ ಪರಿಸರ ದಿನದ ಹೆಸರನ್ನು ವಿಶ್ವ ಅಸ್ತಿತ್ವ ದಿನವಾಗಿ ಬದಲಿಸಬಹುದೆಂದು ಆಲೋಚಿಸಿದೆ. ಬಹುಶಃ ಆಗ ನಾವು ಎಚ್ಚರಗೇಡಿತನ ತುತ್ತತುದಿ ತಲುಪಿದ್ದೇವೆ ಮತ್ತು ದುರಾಸೆಯಿಂದ ವಿಪತ್ತು ತಂದೊಡ್ಡಿಕೊಳ್ಳುತ್ತಿರುವುದು ನಮಗೆ ಅರಿವಾಗಬಹುದು. ಶಿಮ್ಲಾದಲ್ಲಿ ಉಂಟಾಗಿರುವ ನೀರಿನ ಅಭಾವದ ಕಡೆಗೊಮ್ಮೆ ನೋಡಿ’ ಎಂದು ಟ್ವೀಟಿಸಿದ್ದಾರೆ.
ಹಲವು ಜನಪರ ನಿಲುವುಗಳ ಕಾರಣಕ್ಕೆ ಕ್ರೀಡೆಯಾಚೆಗೂ ಅಪಾರ ಅಭಿಮಾನಿಗಳನ್ನು ಸಂಪಾದಿಸಿರುವ ಗಂಭೀರ್ ಪರಿಸರ ಕಾಳಜಿ ದೃಷ್ಟಿಯಿಂದ ಈ ರೀತಿ ಪೋಸ್ಟ್ ಮಾಡಿದ್ದಾರೆ.
I think instead of #WorldEnvironmentDay let’s rename it as #WorldSurvivalDay. May be then we’ll realise we are on the brink of our carelessness & greed-infused disasters. Just look at water crisis in Shimla.