ಅರ್ಜಿಗಳ ಪರಿಶೀಲನೆ, ತಿದ್ದುಪಡಿಯಂತಹ ಪ್ರಕ್ರಿಯೆಗಳೂ ಜತೆಜತೆಯಾಗಿಯೇ ನಡೆಯುತ್ತಿದ್ದು, ಸಾಧ್ಯವಾದಷ್ಟು ಬೇಗ ಪ್ರಕ್ರಿಯೆ ಕೊನೆಗೊಳ್ಳಬೇಕೆಂಬುದು ಇಲಾಖೆ ಉದ್ದೇಶ. ತೊಂದರೆ ಆಗದಿರಲಿ ಎಂಬ ಕಾರಣಕ್ಕೆ ಟಿಡಿಎಸ್ ಸಲ್ಲಿಕೆಗೆ ಕೊನೆ ದಿನ ವಿಸ್ತರಿಸಲಾಗಿದೆ ಎಂದು ಪ್ರಾಥಮಿಕ ಶಿಕ್ಷಣ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.