ಈ ಕುರಿತು ‘ಮೆಟ್ರೊ’ ಪುರವಣಿ ಮಾರ್ಚ್ 11ರಂದು ‘ಇದೇನು ಲಾರಿಗಳ ನಿಲ್ದಾಣವಾ?’ ಶೀರ್ಷಿಕೆಯಡಿ ವರದಿ ಪ್ರಕಟಿಸಿತ್ತು. ಇದಕ್ಕೆ ಸ್ಪಂದಿಸಿರುವ ಬಾಣಸವಾಡಿ ಸಂಚಾರ ವಲಯದ ಪೊಲೀಸರು ಮೇಲುಸೇತುವೆ ಕೆಳಗೆ ಸರತಿಯಲ್ಲಿ ನಿಲ್ಲಿಸಿದ್ದ ಲಾರಿಗಳನ್ನು ಅಲ್ಲಿಂದ ತೆರವುಗೊಳಿಸಿ, ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟಿದ್ದಾರೆ.