<p><strong>ಚೆನ್ನೈ:</strong> 2026ರ ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ನಟ ವಿಜಯ್ ಅವರ ತಮಿಳಗ ವೆಟ್ರಿ ಕಳಗಂ (ಟಿವಿಕೆ) ದಾಖಲಿಸಿದ ಅಭೂತಪೂರ್ವ ಗೆಲುವಿನ ಹಿಂದೆ ಅವರ ಅಭಿಮಾನಿ ಬಳಗಗಳು ವಿಜಯ್ ಮಕ್ಕಳ್ ಇಯಕ್ಕಂ (ವಿಎಂಐ) ಪ್ರಮುಖ ಪಾತ್ರ ವಹಿಸಿವೆ.</p><p>ಕೇವಲ ಸಿನಿಮಾ ಪ್ರೇಮಿಗಳ ಗುಂಪಾಗಿದ್ದ ವಿಎಂಐ, ಶಿಸ್ತುಬದ್ಧ ರಾಜಕೀಯ ಸೇನೆಯಾಗಿ ರೂಪಾಂತರಗೊಂಡು ದ್ರಾವಿಡ ಪಕ್ಷಗಳ ಭದ್ರಕೋಟೆಯನ್ನು ನಡುಗಿಸಿವೆ.</p>.ಎಂಜಿಆರ್, ಜಯಲಲಿತಾರಂತೆ ಸಿಎಂ ಆಗ್ತಾರಾ ವಿಜಯ್? ಮುಂದಿರುವ ಸವಾಲುಗಳೇನು?.ಕಿಂಗ್ ಮೇಕರ್ ಅಲ್ಲ 'ಕಿಂಗ್' ಆಗುವತ್ತ ದಳಪತಿ ವಿಜಯ್: TVK ಕೈ ಹಿಡಿದ ಅಂಶಗಳಿವು.... <p><strong>ಟಿವಿಕೆ ಬೃಹತ್ ಜಯಕ್ಕೆ ವಿಜಯ್ ಅಭಿಮಾನಿ ಬಳಗಗಳ ಪಾತ್ರ.</strong>..</p><h2>1. ತಳಮಟ್ಟದ ರಾಜಕೀಯ ಪಡೆಯಾಗಿ ರೂಪಾಂತರ...</h2><p><strong>ದಶಕದ ಸಿದ್ಧತೆ:</strong> 2009ರಿಂದಲೇ ವಿಜಯ್ ತಮ್ಮ ಸುಮಾರು 85,000 ಅಭಿಮಾನಿ ಸಂಘಗಳನ್ನು ಸಮಾಜ ಸೇವಾ ಸಂಘಟನೆಯಾಗಿ (ವಿಎಂಐ) ಬದಲಿಸಿದರು. ರಕ್ತದಾನ ಶಿಬಿರಗಳು, ಉಚಿತ ಟ್ಯೂಷನ್ ಕೇಂದ್ರಗಳು, ವಿದ್ಯಾರ್ಥಿ ವೇತನ ಮತ್ತು ಬಡವರಿಗೆ ನೆರವು ನೀಡುವ ಮೂಲಕ ಜನರಿಗೆ ಹತ್ತಿರವಾದರು.</p><p><strong>ಸನ್ನದ್ಧ ಸಂಘಟನೆ</strong>: ಟಿವಿಕೆ ಪಕ್ಷ ಆರಂಭವಾದಾಗ ಅದಕ್ಕೆ ಹೊಸದಾಗಿ ಸಂಘಟನೆ ಕಟ್ಟುವ ಅಗತ್ಯವಿರಲಿಲ್ಲ.ತಮಿಳುನಾಡಿನಾದ್ಯಂತ ಮೊದಲೇ ಅಸ್ತಿತ್ವದಲ್ಲಿದ್ದ ನಿಷ್ಠಾವಂತ ಅಭಿಮಾನಿಗಳ ಸಂಘ ಪಕ್ಷದ ಬೆನ್ನೆಲುಬಾಗಿ ನಿಂತಿತು.</p><p><strong>ಸ್ಥಳೀಯ ಚುನಾವಣೆಯಲ್ಲಿ ಯಶಸ್ಸು:</strong> 2021ರ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ವಿಎಂಐ ಸದಸ್ಯರು 115 ಸ್ಥಾನಗಳಲ್ಲಿ ಜಯಗಳಿಸಿದ್ದರು. ಇದು ವಿಜಯ್ ಅವರ ರಾಜಕೀಯ ಪ್ರವೇಶಕ್ಕೂ ಮುನ್ನವೇ ಅವರ ಅಭಿಮಾನಿ ಬಳಗಕ್ಕಿದ್ದ ಮತ ಸೆಳೆಯುವ ಶಕ್ತಿಯನ್ನು ಸಾಬೀತುಪಡಿಸಿತ್ತು.</p><h2>2. ಸಾಮಾಜಿಕ ಮಾಧ್ಯಮ ಮತ್ತು ಚುನಾವಣೆ ನಿರ್ವಹಣೆ</h2><p><strong>ವಾರ್ ರೂಮ್ ಕಾರ್ಯಚರಣೆ</strong>: ವಿಎಂಐ ದಿನದ 24 ಗಂಟೆಯೂ ಕಾರ್ಯನಿರ್ವಹಿಸುವ 'ವಾರ್ ರೂಮ್' ಸ್ಥಾಪಿಸಿತ್ತು. ಆ್ಯಪ್ಗಳ ಮೂಲಕ ಮತದಾರರ ಸಮೀಕ್ಷೆ ಮತ್ತು ತಂತ್ರಜ್ಞಾನ ಆಧಾರಿತ ಪ್ರಚಾರವನ್ನು ಇದು ನಿರ್ವಹಿಸಿತು.</p><p><strong>ಡಿಜಿಟಲ್ ಪ್ರಚಾರ</strong>: ಲಕ್ಷಾಂತರ ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ಪಕ್ಷದ ಸಿದ್ಧಾಂತಗಳನ್ನು ಪ್ರಚಾರ ಮಾಡುವ ಮೂಲಕ ವಿರೋಧಿಗಳ ಟೀಕೆಗಳಿಗೆ ತಕ್ಕ ಉತ್ತರ ನೀಡಿದರು.</p><p><strong>ಬೂತ್ ಮಟ್ಟದ ನಿರ್ವಹಣೆ:</strong> 2026ರ ಚುನಾವಣೆಯಲ್ಲಿ 69,400 ಬೂತ್ ಏಜೆಂಟರಗಳು ಮತ್ತು 2.9 ಲಕ್ಷಕ್ಕೂ ಹೆಚ್ಚು ಪದಾಧಿಕಾರಿಗಳನ್ನು ನಿಯೋಜಿಸುವ ಮೂಲಕ ಬೂತ್ ಮಟ್ಟದಲ್ಲಿ ಭದ್ರವಾದ ಹಿಡಿತ ಸಾಧಿಸಿತ್ತು.</p><h2>3. ಅಭಿಮಾನಿಗಳನ್ನು ಮತದಾರರನ್ನಾಗಿ ಬದಲಿಸಿದ ತಂತ್ರ</h2><p>ವಿಜಯ್ ಅವರು ಕೇವಲ ದಳಪತಿಯಾಗಿ ಉಳಿಯದೆ ಒರ್ವ ಗಂಭೀರ ರಾಜಕೀಯ ನಾಯಕನಾಗಿ ಬದಲಾದಾಗ ಅವರ ಅಭಿಮಾನಿಗಳು ಕೂಡ ಅಷ್ಟೇ ಗಂಭೀರವಾಗಿ ಚುನಾವಣಾ ಕಾರ್ಯದಲ್ಲಿ ತೊಡಗಿದರು.</p><p><strong>ಯುವಜನತೆ ಮತ್ತು ಮಹಿಳೆಯರ ಒಲವು</strong>: ಮೊದಲ ಬಾರಿಗೆ ಮತದಾನ ಮಾಡುವ ಯುವಜನತೆ ಮತ್ತು ಮಹಿಳಾ ಮತದಾರರನ್ನು ಸೆಳೆಯುವಲ್ಲಿ ವಿಎಂಐ ಕಾರ್ಯಕರ್ತರು ಯಶಸ್ವಿಯಾದರು.</p><p><strong>ಸ್ಥಳೀಯ ನಾಯಕತ್ವ:</strong> ವಿಎಂಐನ ಹಲವು ಜಿಲ್ಲಾ ಕಾರ್ಯದರ್ಶಿಗಳು ಚುನಾವಣೆಯಲ್ಲಿ ಸ್ಪರ್ಧಿಸಿ, ಹಿರಿಯ ರಾಜಕಾರಣಿಗಳನ್ನು ಸೋಲಿಸಿದ್ದಾರೆ.</p><h2><strong>4. ಪ್ರಚಾರ ಮತ್ತು ಸಮಾಜಮುಖಿ ಸಂದೇಶ</strong></h2><p><strong>ವಿಜಯ್ ಹೆಸರೇ ಬಲ:</strong> ಅಭಿಮಾನಿಗಳು ವಿಜಯ್ ಅವರ ಫೋಟೊ ಮತ್ತು ಪಕ್ಷದ ಧ್ವಜವನ್ನು ಹಿಡಿದು ಪ್ರಚಾರ ಮಾಡುವ ಮೂಲಕ ಇಡೀ ಚುನಾವಣೆಯನ್ನು ವಿಜಯ್ ಬ್ರ್ಯಾಂಡ್ ಸುತ್ತ ಸುತ್ತುವಂತೆ ಮಾಡಿದರು.</p><p><strong>ಜನಪರ ಚಳವಳಿ:</strong> ಅಭಿಮಾನಿ ಬಳಗಗಳು ಕಳೆದ ಹಲವಾರು ವರ್ಷಗಳಿಂದ ನಡೆಸಿಕೊಂಡು ಬಂದಿದ್ದ ಸಮಾಜ ಸೇವಾ ಕಾರ್ಯಗಳು, ಟಿವಿಕೆ ಕೈಹಿಡಿದವು.</p><p>ದಶಕಗಳ ಕಾಲ ಸಿನಿಮಾ ಕ್ಷೇತ್ರದಲ್ಲಿ ಗಳಿಸಿದ್ದ ಜನಪ್ರಿಯತೆಯನ್ನು ಶಿಸ್ತುಬದ್ಧ ರಾಜಕೀಯ ಶಕ್ತಿಯಾಗಿ ಪರಿವರ್ತಿಸಿದ ವಿಜಯ್ ಅಭಿಮಾನಿ ಬಳಗಗಳು ತಮಿಳುನಾಡಿನಲ್ಲಿ ಐತಿಹಾಸಿಕ ರಾಜಕೀಯ ಬದಲಾವಣೆಗೆ ಮುನ್ನುಡಿ ಬರೆದಿವೆ.</p>.ತಮಿಳುನಾಡಿನ 'ಅಕ್ಕಿ ಪಾತ್ರೆ'ಯಲ್ಲಿ ಮತ ಲೆಕ್ಕಾಚಾರ: ಡಿಎಂಕೆಗೆ ರೈತರ ಚಾಟಿ ಏಟು?.ವಿಜಯ್ ಗೆಲುವಿನ ಹಿಂದಿದ್ದಿದ್ದೂ ಸಿದ್ದರಾಮಯ್ಯಗೆ ಸಲಹೆ ನೀಡಿದ್ದ ಇದೇ ಸ್ವಾಮಿ!.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಚೆನ್ನೈ:</strong> 2026ರ ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ನಟ ವಿಜಯ್ ಅವರ ತಮಿಳಗ ವೆಟ್ರಿ ಕಳಗಂ (ಟಿವಿಕೆ) ದಾಖಲಿಸಿದ ಅಭೂತಪೂರ್ವ ಗೆಲುವಿನ ಹಿಂದೆ ಅವರ ಅಭಿಮಾನಿ ಬಳಗಗಳು ವಿಜಯ್ ಮಕ್ಕಳ್ ಇಯಕ್ಕಂ (ವಿಎಂಐ) ಪ್ರಮುಖ ಪಾತ್ರ ವಹಿಸಿವೆ.</p><p>ಕೇವಲ ಸಿನಿಮಾ ಪ್ರೇಮಿಗಳ ಗುಂಪಾಗಿದ್ದ ವಿಎಂಐ, ಶಿಸ್ತುಬದ್ಧ ರಾಜಕೀಯ ಸೇನೆಯಾಗಿ ರೂಪಾಂತರಗೊಂಡು ದ್ರಾವಿಡ ಪಕ್ಷಗಳ ಭದ್ರಕೋಟೆಯನ್ನು ನಡುಗಿಸಿವೆ.</p>.ಎಂಜಿಆರ್, ಜಯಲಲಿತಾರಂತೆ ಸಿಎಂ ಆಗ್ತಾರಾ ವಿಜಯ್? ಮುಂದಿರುವ ಸವಾಲುಗಳೇನು?.ಕಿಂಗ್ ಮೇಕರ್ ಅಲ್ಲ 'ಕಿಂಗ್' ಆಗುವತ್ತ ದಳಪತಿ ವಿಜಯ್: TVK ಕೈ ಹಿಡಿದ ಅಂಶಗಳಿವು.... <p><strong>ಟಿವಿಕೆ ಬೃಹತ್ ಜಯಕ್ಕೆ ವಿಜಯ್ ಅಭಿಮಾನಿ ಬಳಗಗಳ ಪಾತ್ರ.</strong>..</p><h2>1. ತಳಮಟ್ಟದ ರಾಜಕೀಯ ಪಡೆಯಾಗಿ ರೂಪಾಂತರ...</h2><p><strong>ದಶಕದ ಸಿದ್ಧತೆ:</strong> 2009ರಿಂದಲೇ ವಿಜಯ್ ತಮ್ಮ ಸುಮಾರು 85,000 ಅಭಿಮಾನಿ ಸಂಘಗಳನ್ನು ಸಮಾಜ ಸೇವಾ ಸಂಘಟನೆಯಾಗಿ (ವಿಎಂಐ) ಬದಲಿಸಿದರು. ರಕ್ತದಾನ ಶಿಬಿರಗಳು, ಉಚಿತ ಟ್ಯೂಷನ್ ಕೇಂದ್ರಗಳು, ವಿದ್ಯಾರ್ಥಿ ವೇತನ ಮತ್ತು ಬಡವರಿಗೆ ನೆರವು ನೀಡುವ ಮೂಲಕ ಜನರಿಗೆ ಹತ್ತಿರವಾದರು.</p><p><strong>ಸನ್ನದ್ಧ ಸಂಘಟನೆ</strong>: ಟಿವಿಕೆ ಪಕ್ಷ ಆರಂಭವಾದಾಗ ಅದಕ್ಕೆ ಹೊಸದಾಗಿ ಸಂಘಟನೆ ಕಟ್ಟುವ ಅಗತ್ಯವಿರಲಿಲ್ಲ.ತಮಿಳುನಾಡಿನಾದ್ಯಂತ ಮೊದಲೇ ಅಸ್ತಿತ್ವದಲ್ಲಿದ್ದ ನಿಷ್ಠಾವಂತ ಅಭಿಮಾನಿಗಳ ಸಂಘ ಪಕ್ಷದ ಬೆನ್ನೆಲುಬಾಗಿ ನಿಂತಿತು.</p><p><strong>ಸ್ಥಳೀಯ ಚುನಾವಣೆಯಲ್ಲಿ ಯಶಸ್ಸು:</strong> 2021ರ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ವಿಎಂಐ ಸದಸ್ಯರು 115 ಸ್ಥಾನಗಳಲ್ಲಿ ಜಯಗಳಿಸಿದ್ದರು. ಇದು ವಿಜಯ್ ಅವರ ರಾಜಕೀಯ ಪ್ರವೇಶಕ್ಕೂ ಮುನ್ನವೇ ಅವರ ಅಭಿಮಾನಿ ಬಳಗಕ್ಕಿದ್ದ ಮತ ಸೆಳೆಯುವ ಶಕ್ತಿಯನ್ನು ಸಾಬೀತುಪಡಿಸಿತ್ತು.</p><h2>2. ಸಾಮಾಜಿಕ ಮಾಧ್ಯಮ ಮತ್ತು ಚುನಾವಣೆ ನಿರ್ವಹಣೆ</h2><p><strong>ವಾರ್ ರೂಮ್ ಕಾರ್ಯಚರಣೆ</strong>: ವಿಎಂಐ ದಿನದ 24 ಗಂಟೆಯೂ ಕಾರ್ಯನಿರ್ವಹಿಸುವ 'ವಾರ್ ರೂಮ್' ಸ್ಥಾಪಿಸಿತ್ತು. ಆ್ಯಪ್ಗಳ ಮೂಲಕ ಮತದಾರರ ಸಮೀಕ್ಷೆ ಮತ್ತು ತಂತ್ರಜ್ಞಾನ ಆಧಾರಿತ ಪ್ರಚಾರವನ್ನು ಇದು ನಿರ್ವಹಿಸಿತು.</p><p><strong>ಡಿಜಿಟಲ್ ಪ್ರಚಾರ</strong>: ಲಕ್ಷಾಂತರ ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ಪಕ್ಷದ ಸಿದ್ಧಾಂತಗಳನ್ನು ಪ್ರಚಾರ ಮಾಡುವ ಮೂಲಕ ವಿರೋಧಿಗಳ ಟೀಕೆಗಳಿಗೆ ತಕ್ಕ ಉತ್ತರ ನೀಡಿದರು.</p><p><strong>ಬೂತ್ ಮಟ್ಟದ ನಿರ್ವಹಣೆ:</strong> 2026ರ ಚುನಾವಣೆಯಲ್ಲಿ 69,400 ಬೂತ್ ಏಜೆಂಟರಗಳು ಮತ್ತು 2.9 ಲಕ್ಷಕ್ಕೂ ಹೆಚ್ಚು ಪದಾಧಿಕಾರಿಗಳನ್ನು ನಿಯೋಜಿಸುವ ಮೂಲಕ ಬೂತ್ ಮಟ್ಟದಲ್ಲಿ ಭದ್ರವಾದ ಹಿಡಿತ ಸಾಧಿಸಿತ್ತು.</p><h2>3. ಅಭಿಮಾನಿಗಳನ್ನು ಮತದಾರರನ್ನಾಗಿ ಬದಲಿಸಿದ ತಂತ್ರ</h2><p>ವಿಜಯ್ ಅವರು ಕೇವಲ ದಳಪತಿಯಾಗಿ ಉಳಿಯದೆ ಒರ್ವ ಗಂಭೀರ ರಾಜಕೀಯ ನಾಯಕನಾಗಿ ಬದಲಾದಾಗ ಅವರ ಅಭಿಮಾನಿಗಳು ಕೂಡ ಅಷ್ಟೇ ಗಂಭೀರವಾಗಿ ಚುನಾವಣಾ ಕಾರ್ಯದಲ್ಲಿ ತೊಡಗಿದರು.</p><p><strong>ಯುವಜನತೆ ಮತ್ತು ಮಹಿಳೆಯರ ಒಲವು</strong>: ಮೊದಲ ಬಾರಿಗೆ ಮತದಾನ ಮಾಡುವ ಯುವಜನತೆ ಮತ್ತು ಮಹಿಳಾ ಮತದಾರರನ್ನು ಸೆಳೆಯುವಲ್ಲಿ ವಿಎಂಐ ಕಾರ್ಯಕರ್ತರು ಯಶಸ್ವಿಯಾದರು.</p><p><strong>ಸ್ಥಳೀಯ ನಾಯಕತ್ವ:</strong> ವಿಎಂಐನ ಹಲವು ಜಿಲ್ಲಾ ಕಾರ್ಯದರ್ಶಿಗಳು ಚುನಾವಣೆಯಲ್ಲಿ ಸ್ಪರ್ಧಿಸಿ, ಹಿರಿಯ ರಾಜಕಾರಣಿಗಳನ್ನು ಸೋಲಿಸಿದ್ದಾರೆ.</p><h2><strong>4. ಪ್ರಚಾರ ಮತ್ತು ಸಮಾಜಮುಖಿ ಸಂದೇಶ</strong></h2><p><strong>ವಿಜಯ್ ಹೆಸರೇ ಬಲ:</strong> ಅಭಿಮಾನಿಗಳು ವಿಜಯ್ ಅವರ ಫೋಟೊ ಮತ್ತು ಪಕ್ಷದ ಧ್ವಜವನ್ನು ಹಿಡಿದು ಪ್ರಚಾರ ಮಾಡುವ ಮೂಲಕ ಇಡೀ ಚುನಾವಣೆಯನ್ನು ವಿಜಯ್ ಬ್ರ್ಯಾಂಡ್ ಸುತ್ತ ಸುತ್ತುವಂತೆ ಮಾಡಿದರು.</p><p><strong>ಜನಪರ ಚಳವಳಿ:</strong> ಅಭಿಮಾನಿ ಬಳಗಗಳು ಕಳೆದ ಹಲವಾರು ವರ್ಷಗಳಿಂದ ನಡೆಸಿಕೊಂಡು ಬಂದಿದ್ದ ಸಮಾಜ ಸೇವಾ ಕಾರ್ಯಗಳು, ಟಿವಿಕೆ ಕೈಹಿಡಿದವು.</p><p>ದಶಕಗಳ ಕಾಲ ಸಿನಿಮಾ ಕ್ಷೇತ್ರದಲ್ಲಿ ಗಳಿಸಿದ್ದ ಜನಪ್ರಿಯತೆಯನ್ನು ಶಿಸ್ತುಬದ್ಧ ರಾಜಕೀಯ ಶಕ್ತಿಯಾಗಿ ಪರಿವರ್ತಿಸಿದ ವಿಜಯ್ ಅಭಿಮಾನಿ ಬಳಗಗಳು ತಮಿಳುನಾಡಿನಲ್ಲಿ ಐತಿಹಾಸಿಕ ರಾಜಕೀಯ ಬದಲಾವಣೆಗೆ ಮುನ್ನುಡಿ ಬರೆದಿವೆ.</p>.ತಮಿಳುನಾಡಿನ 'ಅಕ್ಕಿ ಪಾತ್ರೆ'ಯಲ್ಲಿ ಮತ ಲೆಕ್ಕಾಚಾರ: ಡಿಎಂಕೆಗೆ ರೈತರ ಚಾಟಿ ಏಟು?.ವಿಜಯ್ ಗೆಲುವಿನ ಹಿಂದಿದ್ದಿದ್ದೂ ಸಿದ್ದರಾಮಯ್ಯಗೆ ಸಲಹೆ ನೀಡಿದ್ದ ಇದೇ ಸ್ವಾಮಿ!.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>