<p>ಎರಡು ವರ್ಷಗಳ ಹಿಂದಷ್ಟೇ ಸ್ಥಾಪನೆಗೊಂಡ ತಮಿಳಗ ವೆಟ್ರಿ ಕಳಗಂ (ಟಿವಿಕೆ) ತಮಿಳುನಾಡು ರಾಜಕೀಯದಲ್ಲಿ ಬಲವಾದ ಛಾಪು ಮೂಡಿಸಿದೆ.</p><p>ನಟ, ರಾಜಕಾರಣಿ ವಿಜಯ್ ಅವರ ಈ ಪಕ್ಷ, ಆಡಳಿತಾರೂಢ ಡಿಎಂಕೆ ಮತ್ತು ಬಿಜೆಪಿ–ಎಐಎಡಿಎಂಕೆ ನೇತೃತ್ವದ ಮಿತ್ರಕೂಟಗಳನ್ನು ಹಿಂದಿಕ್ಕಿ ನೂರಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದೆ. ಟ್ರೆಂಡ್ ಹೀಗೆಯೇ ಮುಂದುವರಿದರೆ, ಅಧಿಕಾರಕ್ಕೇರುವುದು ಖಚಿತ ಎನ್ನಲಾಗುತ್ತಿದೆ.</p><p>ಡಿಎಂಕೆಗೆ ಪ್ರಬಲ ಪೈಪೋಟಿ ನೀಡುತ್ತಿರುವ ಟಿವಿಕೆ, ಹಲವು ಕ್ಷೇತ್ರಗಳಲ್ಲಿ ಎಐಎಡಿಎಂಕೆ ಪಕ್ಷವನ್ನು ಮೂರನೇ ಸ್ಥಾನಕ್ಕೆ ನೂಕಿದೆ.</p><p>ಬಹಳ ಸಮಯದಿಂದಲೂ ಡಿಎಂಕೆ ಮತ್ತು ಎಐಎಡಿಎಂಕೆ ನಡುವೆಯೇ ಹಂಚಿಕೆಯಾಗುತ್ತಿದ್ದ ಅಧಿಕಾರದ ಮಾದರಿಯನ್ನು ವಿಜಯ್ ಅವರ ರಾಜಕೀಯ ಪ್ರವೇಶವು ಬದಲಿಸಿದೆ ಎಂಬುದಕ್ಕೆ ಇದು ಸಾಕ್ಷಿಯಾಗಿದೆ.</p>.ದಳಪತಿ ವಿಜಯ್, ಟಿವಿಕೆಯನ್ನು ಪಟ್ಟಕ್ಕೇರಿಸಲಿವೆಯೇ ಅಭಿಮಾನಿ ಸಂಘಗಳು?.Tamil Nadu Election: ಡಿಎಂಕೆ ಭದ್ರಕೋಟೆಗೆ ನುಗ್ಗುವ ಧೈರ್ಯ ಮಾಡಿದ್ದೇಕೆ ವಿಜಯ್?.<p><strong>ಮತ್ತೊಬ್ಬ ಎಂಜಿಆರ್ ಆಗುವರೇ ವಿಜಯ್<br></strong>ತಮಿಳುನಾಡಿನಲ್ಲಿ ಸಿನಿಮಾ ಮಂದಿ ರಾಜಕೀಯದಲ್ಲಿ ಯಶಸ್ಸು ಸಾಧಿಸಿರುವುದಕ್ಕೆ ದೀರ್ಘ ಇತಿಹಾಸವಿದೆ.</p><p>ಎಂ.ಜಿ. ರಾಮಚಂದ್ರನ್ ಮತ್ತು ಜೆ. ಜಯಲಲಿತಾ ಅವರ ನಂತರ ರಾಜ್ಯದ ರಾಜಕಾರಣದ ಮೇಲೆ ಪ್ರಭಾವ ಬೀರುವ ಹಾಗೂ ಮುಖ್ಯಮಂತ್ರಿ ಗಾಧಿಗೆ ಏರಿದ ನಟ ಎನಿಸಿಕೊಳ್ಳುವ ಅವಕಾಶ ವಿಜಯ್ ಅವರಿಗೆ ಇದೆ. ಅದಕ್ಕಾಗಿ ಅವರು, ತಾವೂ ಗೆದ್ದು, ಪಕ್ಷವನ್ನೂ ಗೆಲ್ಲಿಸಿಕೊಳ್ಳಬೇಕಾಗಿದೆ. ಆರಂಭಿಕ ಟ್ರೆಂಡ್ ಗಮನಿಸಿದರೆ ಅದು ಸಾಧ್ಯವೂ ಹೌದು.</p><p>ಮೂರು ಬಾರಿ ತಮಿಳುನಾಡಿನ ಮುಖ್ಯಮಂತ್ರಿಯಾಗಿದ್ದ ಎಂಜಿಆರ್ ಅವರು ರಾಜಕೀಯ ಪ್ರವೇಶಕ್ಕೂ ಮುನ್ನ ನಟನಾಗಿ ಅಪಾರ ಜನಪ್ರಿಯತೆ ಹೊಂದಿದ್ದರು. ಕರುಣಾನಿಧಿ ಅವರೊಂದಿಗಿನ ವೈಮನಸ್ಸಿನ ಕಾರಣದಿಂದಾಗಿ ಡಿಎಂಕೆ ತೊರೆದು ಅಖಿಲ ಭಾರತ ಅಣ್ಣಾ ದ್ರಾವಿಡ ಮುನ್ನೇತ್ರ ಕಳಗಂ (ಎಐಎಡಿಎಂಕೆ) ಪಕ್ಷ ಸ್ಥಾಪಿಸಿ ಯಶಸ್ಸು ಸಾಧಿಸಿದ್ದರು.</p><p><strong>ಎನ್ಟಿಆರ್ ದಾಖಲೆ ಸಹಿತ<br></strong>ಆಂಧ್ರಪ್ರದೇಶದಲ್ಲಿ ಅಪಾರ ಜನಪ್ರಿಯತೆ ಹೊಂದಿದ್ದ ನಟ ನಂದಮೂರಿ ತಾರಕ ರಾಮ್ ರಾವ್ (ಎನ್ಟಿಆರ್) ಅವರು ಈ ಹಿಂದೆ ಪಕ್ಷ ಸ್ಥಾಪಿಸಿದ 9 ತಿಂಗಳಲ್ಲೇ ಮುಖ್ಯಮಂತ್ರಿಯಾಗಿದ್ದರು. ಅವರು ತೆಲುಗು ದೇಶಂ ಪಕ್ಷವನ್ನು 1982ರ ಮಾರ್ಚ್ನಲ್ಲಿ ಆರಂಭಿಸಿದ್ದರು.</p><p>294 ಸದಸ್ಯ ಬಲದ ಅಲ್ಲಿನ ವಿಧಾನಸಭೆಗೆ ನಡೆದ ಚುನಾವಣೆಯಲ್ಲಿ 1982ರ ಅಂತ್ಯದಲ್ಲಿ ನಡೆದ ಚುನಾವಣೆಯಲ್ಲಿ ತೆಲುಗು ದೇಶಂ ಪಕ್ಷ 201 ಸ್ಥಾನಗಳನ್ನು ಗೆದ್ದಿತ್ತು.</p><p>ಹೀಗಾಗಿ, ಎನ್ಟಿಆರ್ ಅವರು 1983ರ ಜನವರಿ 9ರಂದು ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ್ದರು. ಇದರೊಂದಿಗೆ, ಪಕ್ಷ ಸ್ಥಾಪಿಸಿದ ಅಲ್ಪಾವಧಿಯಲ್ಲೇ ಅಧಿಕಾರಕ್ಕೇರಿದ ನಟ ಎನಿಸಿಕೊಂಡಿದ್ದರು.</p><p>ಇದೀಗ ಅಂತಹದ್ದೇ ಸಾಧನೆ ಮಾಡುವ ಅವಕಾಶ ವಿಜಯ್ ಅವರಿಗೆ ಇದೆ. ರಾಜಕೀಯಕ್ಕೆ ಬರುವುದಾಗಿ 2024ರ ಫೆಬ್ರುವರಿಯಲ್ಲಿ ಘೋಷಿಸಿದ್ದ ವಿಜಯ್, ಅದೇ ವರ್ಷ ಆಗಸ್ಟ್ನಲ್ಲಿ ಪಕ್ಷದ ಹೆಸರು, ಧ್ವಜ ಪ್ರಕಟಿಸಿದ್ದರು. ಅವರ ಪಕ್ಷ ಇದೀಗ, ಚುನಾವಣೆಯಲ್ಲಿ ಬಹುಮತ ಸಾಧಿಸುವತ್ತ ಮುನ್ನಡೆದಿದೆ.</p>.ತಮಿಳುನಾಡಿನ 'ಅಕ್ಕಿ ಪಾತ್ರೆ'ಯಲ್ಲಿ ಮತ ಲೆಕ್ಕಾಚಾರ: ಡಿಎಂಕೆಗೆ ರೈತರ ಚಾಟಿ ಏಟು?.Tamil Nadu Politics: ತಮಿಳುನಾಡು ರಾಜಕಾರಣದಿಂದ ಕಳೆದುಹೋದ ನಾಯಕ ಅಳಗಿರಿ.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಎರಡು ವರ್ಷಗಳ ಹಿಂದಷ್ಟೇ ಸ್ಥಾಪನೆಗೊಂಡ ತಮಿಳಗ ವೆಟ್ರಿ ಕಳಗಂ (ಟಿವಿಕೆ) ತಮಿಳುನಾಡು ರಾಜಕೀಯದಲ್ಲಿ ಬಲವಾದ ಛಾಪು ಮೂಡಿಸಿದೆ.</p><p>ನಟ, ರಾಜಕಾರಣಿ ವಿಜಯ್ ಅವರ ಈ ಪಕ್ಷ, ಆಡಳಿತಾರೂಢ ಡಿಎಂಕೆ ಮತ್ತು ಬಿಜೆಪಿ–ಎಐಎಡಿಎಂಕೆ ನೇತೃತ್ವದ ಮಿತ್ರಕೂಟಗಳನ್ನು ಹಿಂದಿಕ್ಕಿ ನೂರಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದೆ. ಟ್ರೆಂಡ್ ಹೀಗೆಯೇ ಮುಂದುವರಿದರೆ, ಅಧಿಕಾರಕ್ಕೇರುವುದು ಖಚಿತ ಎನ್ನಲಾಗುತ್ತಿದೆ.</p><p>ಡಿಎಂಕೆಗೆ ಪ್ರಬಲ ಪೈಪೋಟಿ ನೀಡುತ್ತಿರುವ ಟಿವಿಕೆ, ಹಲವು ಕ್ಷೇತ್ರಗಳಲ್ಲಿ ಎಐಎಡಿಎಂಕೆ ಪಕ್ಷವನ್ನು ಮೂರನೇ ಸ್ಥಾನಕ್ಕೆ ನೂಕಿದೆ.</p><p>ಬಹಳ ಸಮಯದಿಂದಲೂ ಡಿಎಂಕೆ ಮತ್ತು ಎಐಎಡಿಎಂಕೆ ನಡುವೆಯೇ ಹಂಚಿಕೆಯಾಗುತ್ತಿದ್ದ ಅಧಿಕಾರದ ಮಾದರಿಯನ್ನು ವಿಜಯ್ ಅವರ ರಾಜಕೀಯ ಪ್ರವೇಶವು ಬದಲಿಸಿದೆ ಎಂಬುದಕ್ಕೆ ಇದು ಸಾಕ್ಷಿಯಾಗಿದೆ.</p>.ದಳಪತಿ ವಿಜಯ್, ಟಿವಿಕೆಯನ್ನು ಪಟ್ಟಕ್ಕೇರಿಸಲಿವೆಯೇ ಅಭಿಮಾನಿ ಸಂಘಗಳು?.Tamil Nadu Election: ಡಿಎಂಕೆ ಭದ್ರಕೋಟೆಗೆ ನುಗ್ಗುವ ಧೈರ್ಯ ಮಾಡಿದ್ದೇಕೆ ವಿಜಯ್?.<p><strong>ಮತ್ತೊಬ್ಬ ಎಂಜಿಆರ್ ಆಗುವರೇ ವಿಜಯ್<br></strong>ತಮಿಳುನಾಡಿನಲ್ಲಿ ಸಿನಿಮಾ ಮಂದಿ ರಾಜಕೀಯದಲ್ಲಿ ಯಶಸ್ಸು ಸಾಧಿಸಿರುವುದಕ್ಕೆ ದೀರ್ಘ ಇತಿಹಾಸವಿದೆ.</p><p>ಎಂ.ಜಿ. ರಾಮಚಂದ್ರನ್ ಮತ್ತು ಜೆ. ಜಯಲಲಿತಾ ಅವರ ನಂತರ ರಾಜ್ಯದ ರಾಜಕಾರಣದ ಮೇಲೆ ಪ್ರಭಾವ ಬೀರುವ ಹಾಗೂ ಮುಖ್ಯಮಂತ್ರಿ ಗಾಧಿಗೆ ಏರಿದ ನಟ ಎನಿಸಿಕೊಳ್ಳುವ ಅವಕಾಶ ವಿಜಯ್ ಅವರಿಗೆ ಇದೆ. ಅದಕ್ಕಾಗಿ ಅವರು, ತಾವೂ ಗೆದ್ದು, ಪಕ್ಷವನ್ನೂ ಗೆಲ್ಲಿಸಿಕೊಳ್ಳಬೇಕಾಗಿದೆ. ಆರಂಭಿಕ ಟ್ರೆಂಡ್ ಗಮನಿಸಿದರೆ ಅದು ಸಾಧ್ಯವೂ ಹೌದು.</p><p>ಮೂರು ಬಾರಿ ತಮಿಳುನಾಡಿನ ಮುಖ್ಯಮಂತ್ರಿಯಾಗಿದ್ದ ಎಂಜಿಆರ್ ಅವರು ರಾಜಕೀಯ ಪ್ರವೇಶಕ್ಕೂ ಮುನ್ನ ನಟನಾಗಿ ಅಪಾರ ಜನಪ್ರಿಯತೆ ಹೊಂದಿದ್ದರು. ಕರುಣಾನಿಧಿ ಅವರೊಂದಿಗಿನ ವೈಮನಸ್ಸಿನ ಕಾರಣದಿಂದಾಗಿ ಡಿಎಂಕೆ ತೊರೆದು ಅಖಿಲ ಭಾರತ ಅಣ್ಣಾ ದ್ರಾವಿಡ ಮುನ್ನೇತ್ರ ಕಳಗಂ (ಎಐಎಡಿಎಂಕೆ) ಪಕ್ಷ ಸ್ಥಾಪಿಸಿ ಯಶಸ್ಸು ಸಾಧಿಸಿದ್ದರು.</p><p><strong>ಎನ್ಟಿಆರ್ ದಾಖಲೆ ಸಹಿತ<br></strong>ಆಂಧ್ರಪ್ರದೇಶದಲ್ಲಿ ಅಪಾರ ಜನಪ್ರಿಯತೆ ಹೊಂದಿದ್ದ ನಟ ನಂದಮೂರಿ ತಾರಕ ರಾಮ್ ರಾವ್ (ಎನ್ಟಿಆರ್) ಅವರು ಈ ಹಿಂದೆ ಪಕ್ಷ ಸ್ಥಾಪಿಸಿದ 9 ತಿಂಗಳಲ್ಲೇ ಮುಖ್ಯಮಂತ್ರಿಯಾಗಿದ್ದರು. ಅವರು ತೆಲುಗು ದೇಶಂ ಪಕ್ಷವನ್ನು 1982ರ ಮಾರ್ಚ್ನಲ್ಲಿ ಆರಂಭಿಸಿದ್ದರು.</p><p>294 ಸದಸ್ಯ ಬಲದ ಅಲ್ಲಿನ ವಿಧಾನಸಭೆಗೆ ನಡೆದ ಚುನಾವಣೆಯಲ್ಲಿ 1982ರ ಅಂತ್ಯದಲ್ಲಿ ನಡೆದ ಚುನಾವಣೆಯಲ್ಲಿ ತೆಲುಗು ದೇಶಂ ಪಕ್ಷ 201 ಸ್ಥಾನಗಳನ್ನು ಗೆದ್ದಿತ್ತು.</p><p>ಹೀಗಾಗಿ, ಎನ್ಟಿಆರ್ ಅವರು 1983ರ ಜನವರಿ 9ರಂದು ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ್ದರು. ಇದರೊಂದಿಗೆ, ಪಕ್ಷ ಸ್ಥಾಪಿಸಿದ ಅಲ್ಪಾವಧಿಯಲ್ಲೇ ಅಧಿಕಾರಕ್ಕೇರಿದ ನಟ ಎನಿಸಿಕೊಂಡಿದ್ದರು.</p><p>ಇದೀಗ ಅಂತಹದ್ದೇ ಸಾಧನೆ ಮಾಡುವ ಅವಕಾಶ ವಿಜಯ್ ಅವರಿಗೆ ಇದೆ. ರಾಜಕೀಯಕ್ಕೆ ಬರುವುದಾಗಿ 2024ರ ಫೆಬ್ರುವರಿಯಲ್ಲಿ ಘೋಷಿಸಿದ್ದ ವಿಜಯ್, ಅದೇ ವರ್ಷ ಆಗಸ್ಟ್ನಲ್ಲಿ ಪಕ್ಷದ ಹೆಸರು, ಧ್ವಜ ಪ್ರಕಟಿಸಿದ್ದರು. ಅವರ ಪಕ್ಷ ಇದೀಗ, ಚುನಾವಣೆಯಲ್ಲಿ ಬಹುಮತ ಸಾಧಿಸುವತ್ತ ಮುನ್ನಡೆದಿದೆ.</p>.ತಮಿಳುನಾಡಿನ 'ಅಕ್ಕಿ ಪಾತ್ರೆ'ಯಲ್ಲಿ ಮತ ಲೆಕ್ಕಾಚಾರ: ಡಿಎಂಕೆಗೆ ರೈತರ ಚಾಟಿ ಏಟು?.Tamil Nadu Politics: ತಮಿಳುನಾಡು ರಾಜಕಾರಣದಿಂದ ಕಳೆದುಹೋದ ನಾಯಕ ಅಳಗಿರಿ.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>