<p><strong>ಚೆನ್ನೈ</strong>: ಡಿಎಂಕೆ ಹಾಗೂ ಎಐಎಡಿಎಂಕೆ ಪಕ್ಷಗಳ ಅಂಗಳದಲ್ಲೇ ಸುಳಿದಾಡುತ್ತಿದ್ದ 'ಅಧಿಕಾರ' ಇದೀಗ ತಮಿಳಗ ವೆಟ್ರಿ ಕಳಗಂ (ಟಿವಿಕೆ) ಪಕ್ಷದ ಮನೆಯಂಗಳ ಪ್ರವೇಶಿಸುವ ಸುಳಿವು ಲಭ್ಯವಾಗಿದೆ.</p><p>ಚುನಾವಣಾ ಆಯೋಗದ ಮಾಹಿತಿ ಪ್ರಕಾರ, ಮತ ಎಣಿಕೆ ಪ್ರಗತಿಯಲ್ಲಿದ್ದು ಟಿವಿಕೆ ನೂರಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಮುನ್ನಡೆ ಕಾಯ್ದುಕೊಂಡಿದೆ.</p><p>ಚುನಾವಣೋತ್ತರ ಸಮೀಕ್ಷೆಗಳು, ವಿಜಯ್ ಅವರ ಪಕ್ಷ 'ಕಿಂಗ್ ಮೇಕರ್' ಆಗಬಹುದು ಎಂದು ಭವಿಷ್ಯ ನುಡಿದಿದ್ದವು. ಆದರೆ, ಆ ಎಲ್ಲ ಲೆಕ್ಕಾಚಾರಗಳನ್ನು ಉಲ್ಟಾ ಮಾಡಿರುವ ವಿಜಯ್, ತಾವೇ 'ಕಿಂಗ್' ಆಗಲು ಹೊರಟಿದ್ದಾರೆ. ಇದರೊಂದಿಗೆ, ಎಂ.ಜಿ. ರಾಮಚಂದ್ರನ್ ಮತ್ತು ಜೆ.ಜಯಲಲಿತಾ ನಂತರ ಇದೀಗ ತಮಿಳುನಾಡಿನ ಮುಖ್ಯಮಂತ್ರಿಯಾಗುವ ಅವಕಾಶ ವಿಜಯ್ ಅವರದ್ದಾಗುವ ಸಾಧ್ಯತೆ ಇದೆ.</p><p><strong><ins>ಟಿವಿಕೆ ಕೈ ಹಿಡಿದ ಅಂಶಗಳೇನು?</ins></strong></p><p><strong>* ಸರಿಯಾದ ಸಮಯದಲ್ಲಿ ರಾಜಕೀಯ ಪ್ರವೇಶ<br></strong>ಡಿಎಂಕೆ ಬಿಟ್ಟರೆ ಎಐಡಿಎಂಕೆ; ಎಐಡಿಎಂಕೆ ಬಿಟ್ಟರೆ ಡಿಎಂಕೆ – ಬಹುತೇಕ ಆರು ದಶಕಗಳಿಂದಲೂ ತಮಿಳುನಾಡಿನಲ್ಲಿ ಅಧಿಕಾರ ಹಂಚಿಕೆಯಾಗುತ್ತಾ ಬಂದಿರುವುದು ಇದೇ ರೀತಿ.</p><p>ಈ ಬಾರಿ ಡಿಎಂಕೆಗೆ ಆಡಳಿತ ವಿರೋಧಿ ಅಲೆ ಎದುರಾಗಿದೆ. ಆದರೆ, ಅದರ ಲಾಭ ಪಡೆಯುವಲ್ಲಿ ಎಐಎಡಿಎಂಕೆ ವಿಫಲವಾಗಿದೆ. ಮಾಜಿ ಮುಖ್ಯಮಂತ್ರಿ ಜೆ.ಜಯಲಲಿತಾ ಅವರ ನಿಧನದ ನಂತರ ಉಂಟಾದ ಆಂತರಿಕ ಬಿಕ್ಕಟ್ಟಿನಿಂದ ಎಐಎಡಿಎಂಕೆ ಬಲ ಕುಸಿದಿರುವುದು ಅದಕ್ಕೆ ಕಾರಣ.</p><p>ಇಂತಹ ಹೊತ್ತಿನಲ್ಲೇ ವಿಜಯ್ ರಾಜಕೀಯ ಪ್ರವೇಶಿಸಿ, ಟಿವಿಕೆ ಸ್ಥಾಪಿಸಿದ್ದು ಕೆಲಸ ಮಾಡಿದೆ. ಪರ್ಯಾಯ ನಾಯಕತ್ವ, ಸರ್ಕಾರವನ್ನು ಎದುರು ನೋಡುತ್ತಿದ್ದ ರಾಜ್ಯದ ಜನತೆ ಕೈ ಹಿಡಿದಿದ್ದಾರೆ.</p><p><strong>* ರೈತರ ಅಸಮಾಧಾನ<br></strong>ತಮಿಳುನಾಡಿನ 'ಅನ್ನದ ಬಟ್ಟಲು' ಎನ್ನಲಾಗುವ ಕಾವೇರಿ ನದಿ ಮುಖಜಭೂಮಿ ಅಥವಾ ಕೇಂದ್ರ ಭಾಗದಲ್ಲಿ ರೈತರ ಅಸಮಾಧಾನ ಬಲಗೊಂಡಿತ್ತು. ಇದು, ಡಿಎಂಕೆಗೆ ಹಿನ್ನಡೆಯಾಗಿ ಪರಿಣಮಿಸಿದೆ. 2021ರ ವಿಧಾನಸಭಾ ಚುನಾವಣೆ ವೇಳೆ ಈ ಭಾಗದ 46 ಸ್ಥಾನಗಳ ಪೈಕಿ 40ರಲ್ಲಿ ಜಯ ಕಂಡಿದ್ದ ಡಿಎಂಕೆ, ಈ ಬಾರಿ ನೀರಸ ಪ್ರದರ್ಶನ ತೋರಿದೆ.</p><p>‘ಸರ್ಕಾರ ನಮ್ಮ ಸಮಸ್ಯೆಗಳನ್ನು ಆಲಿಸುತ್ತಿಲ್ಲ. ನಮ್ಮ ಬಗ್ಗೆ ಕಾಳಜಿ ತೋರುತ್ತಿಲ್ಲ. ಪ್ರವಾಹದಿಂದ ಆಗಿರುವ ಬೆಳೆ ಹಾನಿಗೆ ನೀಡುತ್ತಿರುವ ಪರಿಹಾರ ಯಾವುದಕ್ಕೂ ಸಾಲುತ್ತಿಲ್ಲ. ರಸಗೊಬ್ಬರ ಕೊರತೆ ಹಾಗೆಯೇ ಇದೆ’ ಎಂದು ಈ ಭಾಗದ ರೈತರು ಚುನಾವಣಾ ಪೂರ್ವದಲ್ಲಿ ಅಸಮಾಧಾನ ವ್ಯಕ್ತಪಡಿಸಿದ್ದರು. ಇದರ ಲಾಭವನ್ನು ಟಿವಿಕೆ ಮಾಡಿಕೊಂಡಿದೆ.</p>.ತಮಿಳುನಾಡು ಫಲಿತಾಂಶ: ಮತ್ತೊಬ್ಬ ಎಂಜಿಆರ್ ಆಗುವರೇ ವಿಜಯ್?.Tamil Nadu Election: ಡಿಎಂಕೆ ಭದ್ರಕೋಟೆಗೆ ನುಗ್ಗುವ ಧೈರ್ಯ ಮಾಡಿದ್ದೇಕೆ ವಿಜಯ್?.<p><strong>* ಎಐಎಡಿಎಂಕೆ–ಬಿಜೆಪಿ ಮೈತ್ರಿ</strong><br>ರಾಜ್ಯದಲ್ಲಿ ಡಿಎಂಕೆ ಆಡಳಿತದ ವಿರುದ್ಧ ವ್ಯಕ್ತವಾಗಿದ್ದ ಆಡಳಿತ ವಿರೋಧಿ ಅಲೆಯ ಲಾಭ ಪಡೆಯಲು ಎಐಎಡಿಎಂಕೆ ವಿಫಲವಾಗಿದೆ. ಇದೇ ಕಾರಣಕ್ಕೆ ಜನರು, ಎಐಎಡಿಎಂಕೆಯತ್ತ ಒಲವು ಹೊಂದಿದ್ದರೂ, ಆ ಪಕ್ಷ ಬಿಜೆಪಿಯೊಂದಿಗೆ ಕೈ ಜೋಡಿಸಿರುವುದು ಅಸಮಾಧಾನ ಮೂಡಿಸಿತ್ತು. ಅದೇ ಕಾರಣಕ್ಕೆ ದ್ರಾವಿಡ ನೆಲೆಯ ರಾಜ್ಯದ ಜನರ ಚಿತ್ತ ಮೂರನೇ ಪಕ್ಷದತ್ತ ಹೊರಳಿದೆ. ಅದು ಫಲಿತಾಂಶದಲ್ಲಿ ಪ್ರತಿಫಲಿಸಿದೆ.</p><p><strong>* 'ಇಮೇಜ್' ಬಳಸಿಕೊಂಡ ವಿಜಯ್!<br></strong>ಸಿನಿರಂಗದಲ್ಲಿ ʼದಳಪತಿʼ (ತಲಪತಿ) ಎಂದೇ ಖ್ಯಾತರಾಗಿರುವ 51ರ ವಿಜಯ್, ತಮ್ಮ ಅಪಾರ ಅಭಿಮಾನಿಗಳ ಬೆಂʼಬಲʼದೊಂದಿಗೆ 2024ರಲ್ಲೇ ಟಿವಿಕೆ ಸ್ಥಾಪಿಸಿದರು. ಬೇರೆ ಪಕ್ಷಗಳೊಂದಿಗೆ ಕೈ ಜೋಡಿಸುವ ಸಾಧ್ಯತೆಗಳಿವೆ ಎಂಬ ಊಹಾಪೋಹಗಳ ನಡುವೆ, ಏಕಾಂಗಿಯಾಗಿ 'ಮೊದಲ' ಪರೀಕ್ಷೆ ಎದುರಿಸಿದರು.</p><p>ಸಿನಿಮಾಗಳಲ್ಲಿ ಬಡವರಿಗಾಗಿ ಹೋರಾಡುವ, ಭ್ರಷ್ಟರನ್ನು ಹಣಿಯುವ, ನ್ಯಾಯಕ್ಕಾಗಿ ಕೆಲಸ ಮಾಡುವ ನಾಯಕನ ಪಾತ್ರಗಳಲ್ಲಿ ತೆರೆಯ ಮೇಲೆ ಮಿಂಚಿರುವ ವಿಜಯ್ಗೆ, ಯುವಕರ ಕಣ್ಮಣಿ, ಜನನಾಯಕನ ಇಮೇಜ್ ದೊರೆತಿತ್ತು. ಅದನ್ನು, ಚೆನ್ನಾಗಿಯೇ ಬಳಸಿಕೊಂಡಿದ್ದಾರೆ ವಿಜಯ್.</p><p><strong>* ಮತ ತಂದುಕೊಟ್ಟ ಜನಪ್ರಿಯತೆ<br></strong>2025ರ ಸೆಪ್ಟೆಂಬರ್ 27ರಂದು ಕರೂರಿನಲ್ಲಿ ನಡೆದ ಪಕ್ಷದ ಸಮಾವೇಶದ ವೇಳೆ ಕಾಲ್ತುಳಿತ ಸಂಭವಿಸಿ, 41 ಜನರು ಮೃತಪಟ್ಟಿದ್ದರು. 80ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದರು. ಇದು, ರಾಜ್ಯದಲ್ಲಿ ಮಾತ್ರವಲ್ಲದೆ ರಾಷ್ಟ್ರದಾದ್ಯಂತ ಸುದ್ದಿಯಾಗಿತ್ತು.</p><p>ಅದೊಂದು ಕಡೆಯಷ್ಟೇ ಅಲ್ಲ. ವಿಜಯ್ ಎಲ್ಲೆಲ್ಲಿ ರ್ಯಾಲಿ, ಸಮಾವೇಶಗಳನ್ನು ಆಯೋಜಿಸಿದ್ದರೋ ಅಲ್ಲೆಲ್ಲಾ ಅಭೂತಪೂರ್ವ ಯಶಸ್ಸು ಸಿಕ್ಕಿತ್ತು. ಅದರಲ್ಲೂ ಮಹಿಳೆಯರು ಮತ್ತು ಯುವಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಇವು, ವಿಜಯ್ ಜನಪ್ರಿಯತೆಗೆ ಸಾಕ್ಷಿಯಾಗಿದ್ದವು. ಇಷ್ಟು ಜನಪ್ರಿಯತೆಯು ಮತವಾಗಿ ಬದಲಾಗಿದೆ.</p><p><strong>* 'ನಕಲಿ' ವಿಜಯ್ ಪ್ರಚಾರ<br></strong>ಹೋದಲ್ಲೆಲ್ಲ ಅಭಿಮಾನಿಗಳು ಅಪಾರ ಸಂಖ್ಯೆಯಲ್ಲಿ ಜಮಾಯಿಸುತ್ತಿದ್ದ ಕಾರಣ, ಅಂದುಕೊಂಡಷ್ಟು ಬೇಗನೆ ಪ್ರಚಾರಕ್ಕೆ ನಿಗದಿಯಾಗಿದ್ದ ಸ್ಥಳಗಳನ್ನು ತಲುಪಲು ವಿಜಯ್ಗೆ ಸಾಧ್ಯವಾಗುತ್ತಿರಲಿಲ್ಲ. ಹೀಗಾಗಿ, ಹಲವು ಸ್ಥಳಗಳಿಗೆ ಭೇಟಿಯನ್ನೇ ವಿಜಯ್ ರದ್ದು ಮಾಡಿಕೊಂಡಿದ್ದರು.</p><p>ಹೀಗಾಗಿ, ಕುಂಬಕೋಣ ವಿಧಾನಸಭಾ ಕ್ಷೇತ್ರದಲ್ಲಿ ಕಣಕ್ಕಿಳಿದಿದ್ದ ಟಿವಿಕೆ ಅಭ್ಯರ್ಥಿ ವಿಜಯ್ ಅವರ '3D' ಪ್ರತಿಕೃತಿಯನ್ನು ಪ್ರಚಾರದಲ್ಲಿ ಬಳಸಿಕೊಂಡಿದ್ದರು. ವಿಜಯ್ ಅವರನ್ನೇ ಹೋಲುವ ಈ 3ಡಿ ಹಾಲೋಗ್ರಾಮ್ ಅನ್ನು ಬಳಸಿಕೊಳ್ಳಲು ಅವರ ಪಕ್ಷದ ಹಲವರು ಮುಂದಾದರು.</p><p>ವಿಜಯ್ ಅವರನ್ನೇ ಹೋಲುತ್ತಿದ್ದ ಈ 'ನಕಲಿ' ಪ್ರತಿಕೃತಿಯು, ಜನರನ್ನು ಸೆಳೆಯುವಲ್ಲಿ ಯಶಸ್ವಿಯಾಗಿದೆ.</p>.ತಮಿಳುನಾಡು ವಿಧಾನಸಭೆ ಚುನಾವಣೆಯಲ್ಲಿ '3D ದಳಪತಿ'ಯ ಸದ್ದು! ಟಿವಿಕೆಗೆ ವರ?.ತಮಿಳುನಾಡಿನ 'ಅಕ್ಕಿ ಪಾತ್ರೆ'ಯಲ್ಲಿ ಮತ ಲೆಕ್ಕಾಚಾರ: ಡಿಎಂಕೆಗೆ ರೈತರ ಚಾಟಿ ಏಟು?.<p><strong>* ಡಿಎಂಕೆಗೆ ಮುಳುವಾದ ಉದಯನಿಧಿ<br></strong>ಮುಖ್ಯಮಂತ್ರಿ ಸ್ಟಾಲಿನ್ ಪುತ್ರ ಹಾಗೂ ಉಪಮುಖ್ಯಮಂತ್ರಿ ಉದಯನಿಧಿ ಸ್ಟಾಲಿನ್ ಅವರು, ಸನಾತನ ಧರ್ಮದ ಕುರಿತು ಅವಹೇಳನಕಾರಿ ಹೇಳಿಕೆಗಳನ್ನು ಹಲವು ಬಾರಿ ನೀಡಿದ್ದರು. ಇದು, ಜನರ ಧಾರ್ಮಿಕ ಭಾವನೆಗಳಿಗೆ ಘಾಸಿಯಾಗಿತ್ತು ಎನ್ನಲಾಗಿದೆ.</p><p>ಉದಯನಿಧಿ ಅವರನ್ನು 2024ರ ಸೆಪ್ಟೆಂಬರ್ನಲ್ಲಿ ರಾಜ್ಯದ ಉಪಮುಖ್ಯಮಂತ್ರಿಯನ್ನಾಗಿ ನೇಮಿಸಲಾಗಿತ್ತು. ಇದು, ಡಿಎಂಕೆ ಹಿರಿಯ ನಾಯಕರಲ್ಲಿ ಅಸಮಾಧಾ ಉಂಟು ಮಾಡಿತ್ತು. ಇದು ಪಕ್ಷ ಸಂಘಟನೆ ಮೇಲೆ ನಕಾರಾತ್ಮಕ ಪರಿಣಾಮ ಬೀರಿತು ಎಂದು ಹೇಳಲಾಗುತ್ತಿದೆ.</p><p><strong>* ಸಿನಿಮಾ ನಂಟು<br></strong>ಸಿನಿಮಾ ಮಂದಿ ತಮಿಳುನಾಡು ರಾಜಕೀಯದಲ್ಲಿ ಯಶಸ್ಸು ಸಾಧಿಸಿರುವುದಕ್ಕೆ ದೀರ್ಘ ಇತಿಹಾಸವಿದೆ. ಮಾಜಿ ಮುಖ್ಯಮಂತ್ರಿಗಳಾದ ಸಿ.ಎನ್. ಅಣ್ಣಾದುರೈ, ಎಂ.ಕರುಣಾನಿಧಿ, ಎಂ.ಜಿ. ರಾಮಚಂದ್ರನ್, ಜೆ.ಜಯಲಲಿತಾ ಅವರು ಸಿನಿಮಾ ಹಿನ್ನೆಲೆಯವರೇ.</p><p>ಜಯಲಲಿತಾ, ಕರುಣಾನಿಧಿ ಬಳಿಕ ಅವರ ಪಕ್ಷಗಳನ್ನು ನೇರವಾಗಿ ಸಿನಿಮಾದೊಂದಿಗೆ ನಂಟು ಹೊಂದಿಲ್ಲದವರೇ ಮುನ್ನಡೆಸುತ್ತಾ ಬಂದಿದ್ದಾರೆ. ಆ ಸಂದರ್ಭದಲ್ಲಿ ರಾಜಕೀಯಕ್ಕೆ ಧುಮುಕಲು ಆಸಕ್ತಿ ತೋರಿದ್ದ, ರಜನಿಕಾಂತ್ ನಂತರ ಹಿಂದೇಟು ಹಾಕಿದ್ದರು. ರಾಜ್ಯದಲ್ಲಿ ಪ್ರಭಾಶಾಲಿಯಾಗಲು ಕಮಲ್ ಹಾಸನ್ ಅವರ ಪಕ್ಷಕ್ಕೂ ಸಾಧ್ಯವಾಗಿರಲಿಲ್ಲ.</p><p>ಇಂತಹ ಹೊತ್ತಲ್ಲಿ ವಿಜಯ್ ರಾಜಕೀಯಕ್ಕೆ ಎಂಟ್ರಿಕೊಟ್ಟರು. ಅವರು ಪಕ್ಷ ಸ್ಥಾಪಿಸುತ್ತಿದ್ದಂತೆ ರಾಜ್ಯ ರಾಜಕಾರಣದಲ್ಲಿ ಸಿನಿಮಾ–ರಾಜಕೀಯದ ಸಂಬಂಧದ ಕುರಿತ ಚರ್ಚೆ ತಮಿಳುನಾಡಿನಾದ್ಯಂತ ಮುನ್ನೆಲೆಗೆ ಬಂದಿತ್ತು.</p><p>ಹಾಗಾಗಿಯೇ, ಎಚ್ಚೆತ್ತುಕೊಳ್ಳುವ ಪ್ರಯತ್ನ ಹಾಗೂ ಲೆಕ್ಕಾಚಾರದ ಹೆಜ್ಜೆ ಇಟ್ಟಿದ್ದ ಸ್ಟಾಲಿನ್, ತಮ್ಮ ಪುತ್ರ ನಟ, ನಿರ್ಮಾಪಕ ಉದಯನಿಧಿ ಅವರಿಗೆ ಉಪಮುಖ್ಯಮಂತ್ರಿಯನ್ನಾಗಿಸಿದ್ದರು. ಈ 'ಬಡ್ತಿ'ಯ ಮೂಲಕ ವಿಜಯ್ ಓಟಕ್ಕೆ ತಡೆಯೊಡ್ಡುವ ಪ್ರಯತ್ನ ಮಾಡಿದ್ದರು. ಆದರೆ, ಅದು ಕೆಲಸ ಮಾಡಲಿಲ್ಲ.</p><p><strong>* ಬುದ್ಧಿವಂತ ನಡೆ<br></strong>ಹಿಂದಿನ ಎಲ್ಲಾ ಜನಪ್ರಿಯ ನಾಯಕರೂ ನಮ್ಮವರೇ ಎಂದು ವಿಜಯ್ ಅವರು ತಮ್ಮ<strong> </strong>ಚುನಾವಣಾ ಭಾಷಣಗಳಲ್ಲಿ ಹೇಳಿಕೊಂಡಿದ್ದರು. ಆ ಮೂಲಕ ಕಾಮರಾಜ್, ಎಂಜಿಆರ್, ಜಯಲಲಿತಾ, ವಿಜಯಕಾಂತ್ ಬೆಂಬಲಿಗರನ್ನೂ ಸೆಳೆಯುವಲ್ಲಿ ಯಶಸ್ವಿಯಾದರು ಎನ್ನಲಾಗಿದೆ.</p><p><strong>* ಕೈ ಹಿಡಿದ ಭರವಸೆಗಳು<br></strong>ಚುನಾವಣಾ ಪೂರ್ವದಲ್ಲಿ ವಿಜಯ್ ಅವರು ನೀಡಿದ್ದ ಆಶ್ವಾಸನೆಗಳು ಟಿವಿಕೆಯನ್ನು ಜಯದ ಅಲೆಯಲ್ಲಿ ತೇಲಿಸಿವೆ. ಬಡ ಹೆಣ್ಣುಮಕ್ಕಳ ವಿವಾಹಕ್ಕೆ 8 ಗ್ರಾಂ. ಬಂಗಾರ, ಶಿಕ್ಷಣಕ್ಕೆ ಆದ್ಯತೆ, ರೈತರ ಸಾಲಮನ್ನಾ, ಬೆಂಬಲ ಬೆಲೆ, ಮಹಿಳೆಯರಿಗೆ ಮಾಸಿಕ ಸಹಾಯಧನ, ಎಐ ನಗರ ನಿರ್ಮಾಣ ಸೇರಿದಂತೆ ಹಲವು ಘೋಷಣೆಗಳನ್ನು ಮಾಡಿದ್ದರು. ಇವೆಲ್ಲವೂ ಫಲಿತಾಂಶದ ಮೇಲೆ ಪರಿಣಾಮ ಬೀರಿವೆ.</p><p><strong>* ಸಿದ್ಧಾಂತಕ್ಕೆ ಸೀಮಿತವಾಗಿಲ್ಲ<br></strong>ಯಾವುದೇ ನಿರ್ದಿಷ್ಟ ಸಿದ್ದಾಂತಕ್ಕೆ ಅಂಟಿಕೊಳ್ಳದೆ, ಚುನಾವಣಾ ಪ್ರಚಾರದಲ್ಲಿ ತೊಡಗಿದ್ದು ವಿಜಯ್ಗೆ ಅನುಕೂಲ ಮಾಡಿಕೊಟ್ಟಿತು. ಎಲ್ಲ ಸಮುದಾಯದ ಜನರೂ ವಿಜಯ್ಗೆ ಮತಹಾಕಿದ್ದಾರೆ ಎನ್ನಲಾಗಿದೆ.</p>.ದಳಪತಿ ವಿಜಯ್, ಟಿವಿಕೆಯನ್ನು ಪಟ್ಟಕ್ಕೇರಿಸಲಿವೆಯೇ ಅಭಿಮಾನಿ ಸಂಘಗಳು?.ರೈತರ ಸಾಲಮನ್ನಾ ಸೇರಿ ಹಲವು ಘೋಷಣೆ ಮಾಡಿದ ಟಿವಿಕೆ ಮುಖ್ಯಸ್ಥ, ನಟ ವಿಜಯ್ .<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಚೆನ್ನೈ</strong>: ಡಿಎಂಕೆ ಹಾಗೂ ಎಐಎಡಿಎಂಕೆ ಪಕ್ಷಗಳ ಅಂಗಳದಲ್ಲೇ ಸುಳಿದಾಡುತ್ತಿದ್ದ 'ಅಧಿಕಾರ' ಇದೀಗ ತಮಿಳಗ ವೆಟ್ರಿ ಕಳಗಂ (ಟಿವಿಕೆ) ಪಕ್ಷದ ಮನೆಯಂಗಳ ಪ್ರವೇಶಿಸುವ ಸುಳಿವು ಲಭ್ಯವಾಗಿದೆ.</p><p>ಚುನಾವಣಾ ಆಯೋಗದ ಮಾಹಿತಿ ಪ್ರಕಾರ, ಮತ ಎಣಿಕೆ ಪ್ರಗತಿಯಲ್ಲಿದ್ದು ಟಿವಿಕೆ ನೂರಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಮುನ್ನಡೆ ಕಾಯ್ದುಕೊಂಡಿದೆ.</p><p>ಚುನಾವಣೋತ್ತರ ಸಮೀಕ್ಷೆಗಳು, ವಿಜಯ್ ಅವರ ಪಕ್ಷ 'ಕಿಂಗ್ ಮೇಕರ್' ಆಗಬಹುದು ಎಂದು ಭವಿಷ್ಯ ನುಡಿದಿದ್ದವು. ಆದರೆ, ಆ ಎಲ್ಲ ಲೆಕ್ಕಾಚಾರಗಳನ್ನು ಉಲ್ಟಾ ಮಾಡಿರುವ ವಿಜಯ್, ತಾವೇ 'ಕಿಂಗ್' ಆಗಲು ಹೊರಟಿದ್ದಾರೆ. ಇದರೊಂದಿಗೆ, ಎಂ.ಜಿ. ರಾಮಚಂದ್ರನ್ ಮತ್ತು ಜೆ.ಜಯಲಲಿತಾ ನಂತರ ಇದೀಗ ತಮಿಳುನಾಡಿನ ಮುಖ್ಯಮಂತ್ರಿಯಾಗುವ ಅವಕಾಶ ವಿಜಯ್ ಅವರದ್ದಾಗುವ ಸಾಧ್ಯತೆ ಇದೆ.</p><p><strong><ins>ಟಿವಿಕೆ ಕೈ ಹಿಡಿದ ಅಂಶಗಳೇನು?</ins></strong></p><p><strong>* ಸರಿಯಾದ ಸಮಯದಲ್ಲಿ ರಾಜಕೀಯ ಪ್ರವೇಶ<br></strong>ಡಿಎಂಕೆ ಬಿಟ್ಟರೆ ಎಐಡಿಎಂಕೆ; ಎಐಡಿಎಂಕೆ ಬಿಟ್ಟರೆ ಡಿಎಂಕೆ – ಬಹುತೇಕ ಆರು ದಶಕಗಳಿಂದಲೂ ತಮಿಳುನಾಡಿನಲ್ಲಿ ಅಧಿಕಾರ ಹಂಚಿಕೆಯಾಗುತ್ತಾ ಬಂದಿರುವುದು ಇದೇ ರೀತಿ.</p><p>ಈ ಬಾರಿ ಡಿಎಂಕೆಗೆ ಆಡಳಿತ ವಿರೋಧಿ ಅಲೆ ಎದುರಾಗಿದೆ. ಆದರೆ, ಅದರ ಲಾಭ ಪಡೆಯುವಲ್ಲಿ ಎಐಎಡಿಎಂಕೆ ವಿಫಲವಾಗಿದೆ. ಮಾಜಿ ಮುಖ್ಯಮಂತ್ರಿ ಜೆ.ಜಯಲಲಿತಾ ಅವರ ನಿಧನದ ನಂತರ ಉಂಟಾದ ಆಂತರಿಕ ಬಿಕ್ಕಟ್ಟಿನಿಂದ ಎಐಎಡಿಎಂಕೆ ಬಲ ಕುಸಿದಿರುವುದು ಅದಕ್ಕೆ ಕಾರಣ.</p><p>ಇಂತಹ ಹೊತ್ತಿನಲ್ಲೇ ವಿಜಯ್ ರಾಜಕೀಯ ಪ್ರವೇಶಿಸಿ, ಟಿವಿಕೆ ಸ್ಥಾಪಿಸಿದ್ದು ಕೆಲಸ ಮಾಡಿದೆ. ಪರ್ಯಾಯ ನಾಯಕತ್ವ, ಸರ್ಕಾರವನ್ನು ಎದುರು ನೋಡುತ್ತಿದ್ದ ರಾಜ್ಯದ ಜನತೆ ಕೈ ಹಿಡಿದಿದ್ದಾರೆ.</p><p><strong>* ರೈತರ ಅಸಮಾಧಾನ<br></strong>ತಮಿಳುನಾಡಿನ 'ಅನ್ನದ ಬಟ್ಟಲು' ಎನ್ನಲಾಗುವ ಕಾವೇರಿ ನದಿ ಮುಖಜಭೂಮಿ ಅಥವಾ ಕೇಂದ್ರ ಭಾಗದಲ್ಲಿ ರೈತರ ಅಸಮಾಧಾನ ಬಲಗೊಂಡಿತ್ತು. ಇದು, ಡಿಎಂಕೆಗೆ ಹಿನ್ನಡೆಯಾಗಿ ಪರಿಣಮಿಸಿದೆ. 2021ರ ವಿಧಾನಸಭಾ ಚುನಾವಣೆ ವೇಳೆ ಈ ಭಾಗದ 46 ಸ್ಥಾನಗಳ ಪೈಕಿ 40ರಲ್ಲಿ ಜಯ ಕಂಡಿದ್ದ ಡಿಎಂಕೆ, ಈ ಬಾರಿ ನೀರಸ ಪ್ರದರ್ಶನ ತೋರಿದೆ.</p><p>‘ಸರ್ಕಾರ ನಮ್ಮ ಸಮಸ್ಯೆಗಳನ್ನು ಆಲಿಸುತ್ತಿಲ್ಲ. ನಮ್ಮ ಬಗ್ಗೆ ಕಾಳಜಿ ತೋರುತ್ತಿಲ್ಲ. ಪ್ರವಾಹದಿಂದ ಆಗಿರುವ ಬೆಳೆ ಹಾನಿಗೆ ನೀಡುತ್ತಿರುವ ಪರಿಹಾರ ಯಾವುದಕ್ಕೂ ಸಾಲುತ್ತಿಲ್ಲ. ರಸಗೊಬ್ಬರ ಕೊರತೆ ಹಾಗೆಯೇ ಇದೆ’ ಎಂದು ಈ ಭಾಗದ ರೈತರು ಚುನಾವಣಾ ಪೂರ್ವದಲ್ಲಿ ಅಸಮಾಧಾನ ವ್ಯಕ್ತಪಡಿಸಿದ್ದರು. ಇದರ ಲಾಭವನ್ನು ಟಿವಿಕೆ ಮಾಡಿಕೊಂಡಿದೆ.</p>.ತಮಿಳುನಾಡು ಫಲಿತಾಂಶ: ಮತ್ತೊಬ್ಬ ಎಂಜಿಆರ್ ಆಗುವರೇ ವಿಜಯ್?.Tamil Nadu Election: ಡಿಎಂಕೆ ಭದ್ರಕೋಟೆಗೆ ನುಗ್ಗುವ ಧೈರ್ಯ ಮಾಡಿದ್ದೇಕೆ ವಿಜಯ್?.<p><strong>* ಎಐಎಡಿಎಂಕೆ–ಬಿಜೆಪಿ ಮೈತ್ರಿ</strong><br>ರಾಜ್ಯದಲ್ಲಿ ಡಿಎಂಕೆ ಆಡಳಿತದ ವಿರುದ್ಧ ವ್ಯಕ್ತವಾಗಿದ್ದ ಆಡಳಿತ ವಿರೋಧಿ ಅಲೆಯ ಲಾಭ ಪಡೆಯಲು ಎಐಎಡಿಎಂಕೆ ವಿಫಲವಾಗಿದೆ. ಇದೇ ಕಾರಣಕ್ಕೆ ಜನರು, ಎಐಎಡಿಎಂಕೆಯತ್ತ ಒಲವು ಹೊಂದಿದ್ದರೂ, ಆ ಪಕ್ಷ ಬಿಜೆಪಿಯೊಂದಿಗೆ ಕೈ ಜೋಡಿಸಿರುವುದು ಅಸಮಾಧಾನ ಮೂಡಿಸಿತ್ತು. ಅದೇ ಕಾರಣಕ್ಕೆ ದ್ರಾವಿಡ ನೆಲೆಯ ರಾಜ್ಯದ ಜನರ ಚಿತ್ತ ಮೂರನೇ ಪಕ್ಷದತ್ತ ಹೊರಳಿದೆ. ಅದು ಫಲಿತಾಂಶದಲ್ಲಿ ಪ್ರತಿಫಲಿಸಿದೆ.</p><p><strong>* 'ಇಮೇಜ್' ಬಳಸಿಕೊಂಡ ವಿಜಯ್!<br></strong>ಸಿನಿರಂಗದಲ್ಲಿ ʼದಳಪತಿʼ (ತಲಪತಿ) ಎಂದೇ ಖ್ಯಾತರಾಗಿರುವ 51ರ ವಿಜಯ್, ತಮ್ಮ ಅಪಾರ ಅಭಿಮಾನಿಗಳ ಬೆಂʼಬಲʼದೊಂದಿಗೆ 2024ರಲ್ಲೇ ಟಿವಿಕೆ ಸ್ಥಾಪಿಸಿದರು. ಬೇರೆ ಪಕ್ಷಗಳೊಂದಿಗೆ ಕೈ ಜೋಡಿಸುವ ಸಾಧ್ಯತೆಗಳಿವೆ ಎಂಬ ಊಹಾಪೋಹಗಳ ನಡುವೆ, ಏಕಾಂಗಿಯಾಗಿ 'ಮೊದಲ' ಪರೀಕ್ಷೆ ಎದುರಿಸಿದರು.</p><p>ಸಿನಿಮಾಗಳಲ್ಲಿ ಬಡವರಿಗಾಗಿ ಹೋರಾಡುವ, ಭ್ರಷ್ಟರನ್ನು ಹಣಿಯುವ, ನ್ಯಾಯಕ್ಕಾಗಿ ಕೆಲಸ ಮಾಡುವ ನಾಯಕನ ಪಾತ್ರಗಳಲ್ಲಿ ತೆರೆಯ ಮೇಲೆ ಮಿಂಚಿರುವ ವಿಜಯ್ಗೆ, ಯುವಕರ ಕಣ್ಮಣಿ, ಜನನಾಯಕನ ಇಮೇಜ್ ದೊರೆತಿತ್ತು. ಅದನ್ನು, ಚೆನ್ನಾಗಿಯೇ ಬಳಸಿಕೊಂಡಿದ್ದಾರೆ ವಿಜಯ್.</p><p><strong>* ಮತ ತಂದುಕೊಟ್ಟ ಜನಪ್ರಿಯತೆ<br></strong>2025ರ ಸೆಪ್ಟೆಂಬರ್ 27ರಂದು ಕರೂರಿನಲ್ಲಿ ನಡೆದ ಪಕ್ಷದ ಸಮಾವೇಶದ ವೇಳೆ ಕಾಲ್ತುಳಿತ ಸಂಭವಿಸಿ, 41 ಜನರು ಮೃತಪಟ್ಟಿದ್ದರು. 80ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದರು. ಇದು, ರಾಜ್ಯದಲ್ಲಿ ಮಾತ್ರವಲ್ಲದೆ ರಾಷ್ಟ್ರದಾದ್ಯಂತ ಸುದ್ದಿಯಾಗಿತ್ತು.</p><p>ಅದೊಂದು ಕಡೆಯಷ್ಟೇ ಅಲ್ಲ. ವಿಜಯ್ ಎಲ್ಲೆಲ್ಲಿ ರ್ಯಾಲಿ, ಸಮಾವೇಶಗಳನ್ನು ಆಯೋಜಿಸಿದ್ದರೋ ಅಲ್ಲೆಲ್ಲಾ ಅಭೂತಪೂರ್ವ ಯಶಸ್ಸು ಸಿಕ್ಕಿತ್ತು. ಅದರಲ್ಲೂ ಮಹಿಳೆಯರು ಮತ್ತು ಯುವಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಇವು, ವಿಜಯ್ ಜನಪ್ರಿಯತೆಗೆ ಸಾಕ್ಷಿಯಾಗಿದ್ದವು. ಇಷ್ಟು ಜನಪ್ರಿಯತೆಯು ಮತವಾಗಿ ಬದಲಾಗಿದೆ.</p><p><strong>* 'ನಕಲಿ' ವಿಜಯ್ ಪ್ರಚಾರ<br></strong>ಹೋದಲ್ಲೆಲ್ಲ ಅಭಿಮಾನಿಗಳು ಅಪಾರ ಸಂಖ್ಯೆಯಲ್ಲಿ ಜಮಾಯಿಸುತ್ತಿದ್ದ ಕಾರಣ, ಅಂದುಕೊಂಡಷ್ಟು ಬೇಗನೆ ಪ್ರಚಾರಕ್ಕೆ ನಿಗದಿಯಾಗಿದ್ದ ಸ್ಥಳಗಳನ್ನು ತಲುಪಲು ವಿಜಯ್ಗೆ ಸಾಧ್ಯವಾಗುತ್ತಿರಲಿಲ್ಲ. ಹೀಗಾಗಿ, ಹಲವು ಸ್ಥಳಗಳಿಗೆ ಭೇಟಿಯನ್ನೇ ವಿಜಯ್ ರದ್ದು ಮಾಡಿಕೊಂಡಿದ್ದರು.</p><p>ಹೀಗಾಗಿ, ಕುಂಬಕೋಣ ವಿಧಾನಸಭಾ ಕ್ಷೇತ್ರದಲ್ಲಿ ಕಣಕ್ಕಿಳಿದಿದ್ದ ಟಿವಿಕೆ ಅಭ್ಯರ್ಥಿ ವಿಜಯ್ ಅವರ '3D' ಪ್ರತಿಕೃತಿಯನ್ನು ಪ್ರಚಾರದಲ್ಲಿ ಬಳಸಿಕೊಂಡಿದ್ದರು. ವಿಜಯ್ ಅವರನ್ನೇ ಹೋಲುವ ಈ 3ಡಿ ಹಾಲೋಗ್ರಾಮ್ ಅನ್ನು ಬಳಸಿಕೊಳ್ಳಲು ಅವರ ಪಕ್ಷದ ಹಲವರು ಮುಂದಾದರು.</p><p>ವಿಜಯ್ ಅವರನ್ನೇ ಹೋಲುತ್ತಿದ್ದ ಈ 'ನಕಲಿ' ಪ್ರತಿಕೃತಿಯು, ಜನರನ್ನು ಸೆಳೆಯುವಲ್ಲಿ ಯಶಸ್ವಿಯಾಗಿದೆ.</p>.ತಮಿಳುನಾಡು ವಿಧಾನಸಭೆ ಚುನಾವಣೆಯಲ್ಲಿ '3D ದಳಪತಿ'ಯ ಸದ್ದು! ಟಿವಿಕೆಗೆ ವರ?.ತಮಿಳುನಾಡಿನ 'ಅಕ್ಕಿ ಪಾತ್ರೆ'ಯಲ್ಲಿ ಮತ ಲೆಕ್ಕಾಚಾರ: ಡಿಎಂಕೆಗೆ ರೈತರ ಚಾಟಿ ಏಟು?.<p><strong>* ಡಿಎಂಕೆಗೆ ಮುಳುವಾದ ಉದಯನಿಧಿ<br></strong>ಮುಖ್ಯಮಂತ್ರಿ ಸ್ಟಾಲಿನ್ ಪುತ್ರ ಹಾಗೂ ಉಪಮುಖ್ಯಮಂತ್ರಿ ಉದಯನಿಧಿ ಸ್ಟಾಲಿನ್ ಅವರು, ಸನಾತನ ಧರ್ಮದ ಕುರಿತು ಅವಹೇಳನಕಾರಿ ಹೇಳಿಕೆಗಳನ್ನು ಹಲವು ಬಾರಿ ನೀಡಿದ್ದರು. ಇದು, ಜನರ ಧಾರ್ಮಿಕ ಭಾವನೆಗಳಿಗೆ ಘಾಸಿಯಾಗಿತ್ತು ಎನ್ನಲಾಗಿದೆ.</p><p>ಉದಯನಿಧಿ ಅವರನ್ನು 2024ರ ಸೆಪ್ಟೆಂಬರ್ನಲ್ಲಿ ರಾಜ್ಯದ ಉಪಮುಖ್ಯಮಂತ್ರಿಯನ್ನಾಗಿ ನೇಮಿಸಲಾಗಿತ್ತು. ಇದು, ಡಿಎಂಕೆ ಹಿರಿಯ ನಾಯಕರಲ್ಲಿ ಅಸಮಾಧಾ ಉಂಟು ಮಾಡಿತ್ತು. ಇದು ಪಕ್ಷ ಸಂಘಟನೆ ಮೇಲೆ ನಕಾರಾತ್ಮಕ ಪರಿಣಾಮ ಬೀರಿತು ಎಂದು ಹೇಳಲಾಗುತ್ತಿದೆ.</p><p><strong>* ಸಿನಿಮಾ ನಂಟು<br></strong>ಸಿನಿಮಾ ಮಂದಿ ತಮಿಳುನಾಡು ರಾಜಕೀಯದಲ್ಲಿ ಯಶಸ್ಸು ಸಾಧಿಸಿರುವುದಕ್ಕೆ ದೀರ್ಘ ಇತಿಹಾಸವಿದೆ. ಮಾಜಿ ಮುಖ್ಯಮಂತ್ರಿಗಳಾದ ಸಿ.ಎನ್. ಅಣ್ಣಾದುರೈ, ಎಂ.ಕರುಣಾನಿಧಿ, ಎಂ.ಜಿ. ರಾಮಚಂದ್ರನ್, ಜೆ.ಜಯಲಲಿತಾ ಅವರು ಸಿನಿಮಾ ಹಿನ್ನೆಲೆಯವರೇ.</p><p>ಜಯಲಲಿತಾ, ಕರುಣಾನಿಧಿ ಬಳಿಕ ಅವರ ಪಕ್ಷಗಳನ್ನು ನೇರವಾಗಿ ಸಿನಿಮಾದೊಂದಿಗೆ ನಂಟು ಹೊಂದಿಲ್ಲದವರೇ ಮುನ್ನಡೆಸುತ್ತಾ ಬಂದಿದ್ದಾರೆ. ಆ ಸಂದರ್ಭದಲ್ಲಿ ರಾಜಕೀಯಕ್ಕೆ ಧುಮುಕಲು ಆಸಕ್ತಿ ತೋರಿದ್ದ, ರಜನಿಕಾಂತ್ ನಂತರ ಹಿಂದೇಟು ಹಾಕಿದ್ದರು. ರಾಜ್ಯದಲ್ಲಿ ಪ್ರಭಾಶಾಲಿಯಾಗಲು ಕಮಲ್ ಹಾಸನ್ ಅವರ ಪಕ್ಷಕ್ಕೂ ಸಾಧ್ಯವಾಗಿರಲಿಲ್ಲ.</p><p>ಇಂತಹ ಹೊತ್ತಲ್ಲಿ ವಿಜಯ್ ರಾಜಕೀಯಕ್ಕೆ ಎಂಟ್ರಿಕೊಟ್ಟರು. ಅವರು ಪಕ್ಷ ಸ್ಥಾಪಿಸುತ್ತಿದ್ದಂತೆ ರಾಜ್ಯ ರಾಜಕಾರಣದಲ್ಲಿ ಸಿನಿಮಾ–ರಾಜಕೀಯದ ಸಂಬಂಧದ ಕುರಿತ ಚರ್ಚೆ ತಮಿಳುನಾಡಿನಾದ್ಯಂತ ಮುನ್ನೆಲೆಗೆ ಬಂದಿತ್ತು.</p><p>ಹಾಗಾಗಿಯೇ, ಎಚ್ಚೆತ್ತುಕೊಳ್ಳುವ ಪ್ರಯತ್ನ ಹಾಗೂ ಲೆಕ್ಕಾಚಾರದ ಹೆಜ್ಜೆ ಇಟ್ಟಿದ್ದ ಸ್ಟಾಲಿನ್, ತಮ್ಮ ಪುತ್ರ ನಟ, ನಿರ್ಮಾಪಕ ಉದಯನಿಧಿ ಅವರಿಗೆ ಉಪಮುಖ್ಯಮಂತ್ರಿಯನ್ನಾಗಿಸಿದ್ದರು. ಈ 'ಬಡ್ತಿ'ಯ ಮೂಲಕ ವಿಜಯ್ ಓಟಕ್ಕೆ ತಡೆಯೊಡ್ಡುವ ಪ್ರಯತ್ನ ಮಾಡಿದ್ದರು. ಆದರೆ, ಅದು ಕೆಲಸ ಮಾಡಲಿಲ್ಲ.</p><p><strong>* ಬುದ್ಧಿವಂತ ನಡೆ<br></strong>ಹಿಂದಿನ ಎಲ್ಲಾ ಜನಪ್ರಿಯ ನಾಯಕರೂ ನಮ್ಮವರೇ ಎಂದು ವಿಜಯ್ ಅವರು ತಮ್ಮ<strong> </strong>ಚುನಾವಣಾ ಭಾಷಣಗಳಲ್ಲಿ ಹೇಳಿಕೊಂಡಿದ್ದರು. ಆ ಮೂಲಕ ಕಾಮರಾಜ್, ಎಂಜಿಆರ್, ಜಯಲಲಿತಾ, ವಿಜಯಕಾಂತ್ ಬೆಂಬಲಿಗರನ್ನೂ ಸೆಳೆಯುವಲ್ಲಿ ಯಶಸ್ವಿಯಾದರು ಎನ್ನಲಾಗಿದೆ.</p><p><strong>* ಕೈ ಹಿಡಿದ ಭರವಸೆಗಳು<br></strong>ಚುನಾವಣಾ ಪೂರ್ವದಲ್ಲಿ ವಿಜಯ್ ಅವರು ನೀಡಿದ್ದ ಆಶ್ವಾಸನೆಗಳು ಟಿವಿಕೆಯನ್ನು ಜಯದ ಅಲೆಯಲ್ಲಿ ತೇಲಿಸಿವೆ. ಬಡ ಹೆಣ್ಣುಮಕ್ಕಳ ವಿವಾಹಕ್ಕೆ 8 ಗ್ರಾಂ. ಬಂಗಾರ, ಶಿಕ್ಷಣಕ್ಕೆ ಆದ್ಯತೆ, ರೈತರ ಸಾಲಮನ್ನಾ, ಬೆಂಬಲ ಬೆಲೆ, ಮಹಿಳೆಯರಿಗೆ ಮಾಸಿಕ ಸಹಾಯಧನ, ಎಐ ನಗರ ನಿರ್ಮಾಣ ಸೇರಿದಂತೆ ಹಲವು ಘೋಷಣೆಗಳನ್ನು ಮಾಡಿದ್ದರು. ಇವೆಲ್ಲವೂ ಫಲಿತಾಂಶದ ಮೇಲೆ ಪರಿಣಾಮ ಬೀರಿವೆ.</p><p><strong>* ಸಿದ್ಧಾಂತಕ್ಕೆ ಸೀಮಿತವಾಗಿಲ್ಲ<br></strong>ಯಾವುದೇ ನಿರ್ದಿಷ್ಟ ಸಿದ್ದಾಂತಕ್ಕೆ ಅಂಟಿಕೊಳ್ಳದೆ, ಚುನಾವಣಾ ಪ್ರಚಾರದಲ್ಲಿ ತೊಡಗಿದ್ದು ವಿಜಯ್ಗೆ ಅನುಕೂಲ ಮಾಡಿಕೊಟ್ಟಿತು. ಎಲ್ಲ ಸಮುದಾಯದ ಜನರೂ ವಿಜಯ್ಗೆ ಮತಹಾಕಿದ್ದಾರೆ ಎನ್ನಲಾಗಿದೆ.</p>.ದಳಪತಿ ವಿಜಯ್, ಟಿವಿಕೆಯನ್ನು ಪಟ್ಟಕ್ಕೇರಿಸಲಿವೆಯೇ ಅಭಿಮಾನಿ ಸಂಘಗಳು?.ರೈತರ ಸಾಲಮನ್ನಾ ಸೇರಿ ಹಲವು ಘೋಷಣೆ ಮಾಡಿದ ಟಿವಿಕೆ ಮುಖ್ಯಸ್ಥ, ನಟ ವಿಜಯ್ .<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>