<p>ಹಾಸನ: ‘ಶೃಂಗೇರಿ ವಿಧಾನಸಭಾ ಕ್ಷೇತ್ರದ ಮರು ಮತಎಣಿಕೆ ವೇಳೆ ಅಂಚೆ ಮತಪತ್ರಗಳನ್ನು ತಿದ್ದಿ ಮತ ಕಳವು ಮಾಡಲಾಗಿದೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೃಷ್ಣ ಬೈರೇಗೌಡ ಆರೋಪಿಸಿದರು.</p>.<p>ನಗರದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿ, ‘ಕಳೆದ ಬಾರಿ ಮತ ಎಣಿಕೆ ಆದ ನಂತರ ಕೆಲವು ಅಂಚೆ ಮತಪತ್ರಗಳನ್ನು ತಿದ್ದಿದ್ದಾರೆ. ಎಣಿಸಿ ಎಲ್ಲ ಪಕ್ಷದ ಏಜೆಂಟರು ಒಪ್ಪಿ ಸಹಿ ಹಾಕಿದ್ದಾರೆ. ಆದರೆ ಈ ಬಾರಿ ರಾಜೇಗೌಡರಿಗೆ ಬಿದ್ದಿದ್ದ ಮತಪತ್ರಗಳಲ್ಲಿ ಕೆಳಭಾಗದಲ್ಲಿ ಬೇರೆ ಇಂಕ್ ಉಪಯೋಗಿಸಿ, ಬೇರೆ ಅಭ್ಯರ್ಥಿಗಳಿಗೂ ಟಿಕ್ ಮಾರ್ಕ್ ಮಾಡಿ, ವೋಟು ಹಾಕಿದಂತೆ ಮಾಡಿ ಆ ಓಟುಗಳನ್ನು ತಿರಸ್ಕೃತ ಮಾಡಿದ್ದಾರೆ’ ಎಂದು ದೂರಿದರು.</p>.<p>‘ಇದು ಸಂಪೂರ್ಣ ಕ್ರಿಮಿನಲ್ ಸಂಚು. ಯಾವುದೇ ಅನುಮಾನವಿಲ್ಲ. ಸತ್ಯ ಹೊರಗೆ ಬರಬೇಕಾದರೆ ತನಿಖೆಯಾಗಬೇಕು. ಎಫ್ಎಸ್ಎಲ್ಗೆ ಕಳುಹಿಸಿ, ಮೇಲ್ಭಾಗದಲ್ಲಿ ಟಿಕ್ ಮಾಡಿರುವ ಇಂಕ್ ಹಾಗೂ ಕೆಳಭಾಗದಲ್ಲಿ ಟಿಕ್ ಮಾಡಿ ರುವ ಇಂಕ್ ಸಾಮ್ಯತೆಯನ್ನು ಪರೀಕ್ಷಿ ಸಬೇಕು’ ಎಂದು ಕಿಡಿಕಾರಿದರು.</p>.<p>‘ಕೆಲವು ಅಧಿಕಾರಿಗಳು ರಾಜೇಗೌಡರಿಗೆ ಬಂದಿದ್ದ ಮತಪತ್ರಗಳನ್ನು ಒಂದೇ ಬಂಡಲ್ನಲ್ಲಿಟ್ಟು, ಅದರಲ್ಲಿ ಬೇರೆ ಅಭ್ಯರ್ಥಿಗಳಿಗೆ ಟಿಕ್ ಮಾರ್ಕ್ ಮಾಡಿದ್ದಾರೆ. ಆ ಬಂಡಲ್ ಎಣಿಕೆ ಆದಾಗ ತೆರೆದಿತ್ತು. ಅಲ್ಲಿಗೆ ಟ್ಯಾಂಪರಿಂಗ್ ಆಗಿದೆ. ತನಿಖೆಯಾಗಲೇಬೇಕು’ ಎಂದು ದೂರಿದರು.</p>.<p>‘ಪಶ್ಚಿಮ ಬಂಗಾಳದಲ್ಲಿ ಸಿಬಿಐ, ಇಡಿ, ಐಟಿ, ಚುನಾವಣಾ ಆಯೋಗ, ಎಸ್ಐಆರ್ ಎಲ್ಲವನ್ನೂ ದುರುಪಯೋಗಪಡಿಸಿಕೊಂಡು ಬಿಜೆಪಿ ಅಧಿಕಾರಕ್ಕೆ ಬಂದಿದೆ. ಮಮತಾ ಬ್ಯಾನರ್ಜಿ ಅವರಿಗೆ ಕೊಡಬಾರದ ಹಿಂಸೆ ಕೊಟ್ಟು, ಕೈ-ಕಾಲು ಕಟ್ಟಿ ಹಾಕಿ ಅಧಿಕಾರಕ್ಕೆ ಬಂದಿರಬಹುದು. ಜನರ ತೀರ್ಪನ್ನು ಸಮಚಿತ್ತದಿಂದ ಸ್ವೀಕರಿಸುತ್ತೇವೆ’ ಎಂದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260507-126-478005464</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಹಾಸನ: ‘ಶೃಂಗೇರಿ ವಿಧಾನಸಭಾ ಕ್ಷೇತ್ರದ ಮರು ಮತಎಣಿಕೆ ವೇಳೆ ಅಂಚೆ ಮತಪತ್ರಗಳನ್ನು ತಿದ್ದಿ ಮತ ಕಳವು ಮಾಡಲಾಗಿದೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೃಷ್ಣ ಬೈರೇಗೌಡ ಆರೋಪಿಸಿದರು.</p>.<p>ನಗರದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿ, ‘ಕಳೆದ ಬಾರಿ ಮತ ಎಣಿಕೆ ಆದ ನಂತರ ಕೆಲವು ಅಂಚೆ ಮತಪತ್ರಗಳನ್ನು ತಿದ್ದಿದ್ದಾರೆ. ಎಣಿಸಿ ಎಲ್ಲ ಪಕ್ಷದ ಏಜೆಂಟರು ಒಪ್ಪಿ ಸಹಿ ಹಾಕಿದ್ದಾರೆ. ಆದರೆ ಈ ಬಾರಿ ರಾಜೇಗೌಡರಿಗೆ ಬಿದ್ದಿದ್ದ ಮತಪತ್ರಗಳಲ್ಲಿ ಕೆಳಭಾಗದಲ್ಲಿ ಬೇರೆ ಇಂಕ್ ಉಪಯೋಗಿಸಿ, ಬೇರೆ ಅಭ್ಯರ್ಥಿಗಳಿಗೂ ಟಿಕ್ ಮಾರ್ಕ್ ಮಾಡಿ, ವೋಟು ಹಾಕಿದಂತೆ ಮಾಡಿ ಆ ಓಟುಗಳನ್ನು ತಿರಸ್ಕೃತ ಮಾಡಿದ್ದಾರೆ’ ಎಂದು ದೂರಿದರು.</p>.<p>‘ಇದು ಸಂಪೂರ್ಣ ಕ್ರಿಮಿನಲ್ ಸಂಚು. ಯಾವುದೇ ಅನುಮಾನವಿಲ್ಲ. ಸತ್ಯ ಹೊರಗೆ ಬರಬೇಕಾದರೆ ತನಿಖೆಯಾಗಬೇಕು. ಎಫ್ಎಸ್ಎಲ್ಗೆ ಕಳುಹಿಸಿ, ಮೇಲ್ಭಾಗದಲ್ಲಿ ಟಿಕ್ ಮಾಡಿರುವ ಇಂಕ್ ಹಾಗೂ ಕೆಳಭಾಗದಲ್ಲಿ ಟಿಕ್ ಮಾಡಿ ರುವ ಇಂಕ್ ಸಾಮ್ಯತೆಯನ್ನು ಪರೀಕ್ಷಿ ಸಬೇಕು’ ಎಂದು ಕಿಡಿಕಾರಿದರು.</p>.<p>‘ಕೆಲವು ಅಧಿಕಾರಿಗಳು ರಾಜೇಗೌಡರಿಗೆ ಬಂದಿದ್ದ ಮತಪತ್ರಗಳನ್ನು ಒಂದೇ ಬಂಡಲ್ನಲ್ಲಿಟ್ಟು, ಅದರಲ್ಲಿ ಬೇರೆ ಅಭ್ಯರ್ಥಿಗಳಿಗೆ ಟಿಕ್ ಮಾರ್ಕ್ ಮಾಡಿದ್ದಾರೆ. ಆ ಬಂಡಲ್ ಎಣಿಕೆ ಆದಾಗ ತೆರೆದಿತ್ತು. ಅಲ್ಲಿಗೆ ಟ್ಯಾಂಪರಿಂಗ್ ಆಗಿದೆ. ತನಿಖೆಯಾಗಲೇಬೇಕು’ ಎಂದು ದೂರಿದರು.</p>.<p>‘ಪಶ್ಚಿಮ ಬಂಗಾಳದಲ್ಲಿ ಸಿಬಿಐ, ಇಡಿ, ಐಟಿ, ಚುನಾವಣಾ ಆಯೋಗ, ಎಸ್ಐಆರ್ ಎಲ್ಲವನ್ನೂ ದುರುಪಯೋಗಪಡಿಸಿಕೊಂಡು ಬಿಜೆಪಿ ಅಧಿಕಾರಕ್ಕೆ ಬಂದಿದೆ. ಮಮತಾ ಬ್ಯಾನರ್ಜಿ ಅವರಿಗೆ ಕೊಡಬಾರದ ಹಿಂಸೆ ಕೊಟ್ಟು, ಕೈ-ಕಾಲು ಕಟ್ಟಿ ಹಾಕಿ ಅಧಿಕಾರಕ್ಕೆ ಬಂದಿರಬಹುದು. ಜನರ ತೀರ್ಪನ್ನು ಸಮಚಿತ್ತದಿಂದ ಸ್ವೀಕರಿಸುತ್ತೇವೆ’ ಎಂದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260507-126-478005464</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>