ಟಿಕೆಟ್ ಘೋಷಣೆಯಾಗಿ ಮೂರ್ನಾಲ್ಕು ದಿನವಾದರೂ ಅಶೋಕ ಮಾತ್ರ ಇನ್ನೂ ಕನಕಪುರಕ್ಕೆ ಕಾಲಿಟ್ಟಿಲ್ಲ. ಭಾರಿ ಹುಮ್ಮಸ್ಸಿನಲ್ಲಿರುವ ಬಿಜೆಪಿ ಕಾರ್ಯಕರ್ತರಿಗೆ ಸಹಜವಾಗಿಯೇ ಇದರಿಂದ ನಿರಾಸೆ ಆಗಿದೆಯಂತೆ. ‘ಯೋಚನೆ ಮಾಡಬೇಡಿ, ಬಸವರಾಜ ಬೊಮ್ಮಾಯಿ, ಅರುಣ್ ಸಿಂಗ್ ಸಮೇತ ಇದೇ 18ರಂದು ಅಶೋಕ ಕನಕಪುರ ಕೋಟೆಗೆ ಲಗ್ಗೆ ಇಡಲಿದ್ದಾರೆ’ ಎಂದು ಪಕ್ಷದ ಅಳಿದುಳಿದ ನಾಯಕರು ಕಾರ್ಯಕರ್ತರಿಗೆ ಉತ್ಸಾಹ ತುಂಬುವ ಪ್ರಯತ್ನದಲ್ಲಿ ಇದ್ದಾರಂತೆ.