‘ಇದೇ 19ರಂದು ತುಮಕೂರಿನಲ್ಲಿ ಕಾಂಗ್ರೆಸ್ನವರು ಸಾಧನಾ ಸಮಾವೇಶ ಮಾಡುತ್ತಿದ್ದಾರೆ. ರಾಜ್ಯ ಸರ್ಕಾರ 2 ವರ್ಷದಲ್ಲಿ 713 ಪೊಲೀಸರನ್ನು ಅಮಾನತು ಮಾಡಿದೆ ಎಂದು ‘ಪ್ರಜಾವಾಣಿ’ಯಲ್ಲಿ ಸುದ್ದಿ ಓದಿದೆ. ಇಲವಾಲದಲ್ಲಿ ಚಿನ್ನದ ದರೋಡೆ ಮಾಡಿದ, ಪೊಲೀಸ್ ಕಚೇರಿಯಲ್ಲೇ ಅಸಭ್ಯ ವರ್ತನೆ ತೋರಿದ ಅಧಿಕಾರಿಯ ರಕ್ಷಣೆ ಮಾಡಿದೆ. ಇದನ್ನು ಹೇಳಲು ಸಮಾವೇಶ ಮಾಡುತ್ತಿದ್ದೀರಾ’ ಎಂದು ವ್ಯಂಗ್ಯವಾಡಿದರು.