<p><strong>ಮಜೀರ್ಪಳ್ಳ (ಕಾಸರಗೋಡು ಜಿಲ್ಲೆ)</strong>: ‘ಪಿಣರಾಯಿ ವಿಜಯನ್ ನೇತೃತ್ವದ ಎಡರಂಗ ಸರ್ಕಾರದಲ್ಲಿ ಕೇರಳ ಆರ್ಥಿಕವಾಗಿ ಬೆಳೆಯಲಿಲ್ಲ. ಸಾಲಗಾರ ರಾಜ್ಯವಾಗಿ ಈಗ ದಿವಾಳಿಯತ್ತ ಸಾಗುತ್ತಿದೆ. ಎಡರಂಗ ಸರ್ಕಾರ ಮತ್ತೆ ಬಂದರೆ ಇನ್ನಷ್ಟು ಸಮಸ್ಯೆ ಆಗಲಿದೆ’ ಎಂದು ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.</p>.<p>ಕೇರಳ ವಿಧಾನಸಭೆಯ ಮಂಜೇಶ್ವರ ಕ್ಷೇತ್ರದ ಐಕ್ಯರಂಗ ಅಭ್ಯರ್ಥಿ, ಮುಸ್ಲಿಂಗ್ ಲೀಗ್ನ ಎ.ಕೆ.ಎಂ.ಅಶ್ರಫ್ ಪರ ಭಾನುವಾರ ಸಂಜೆ ಮಜೀರ್ಪಳ್ಳ ಪೇಟೆಯಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ಅವರು ಮಾತನಾಡಿದರು.</p>.<p>‘ರಾಜ್ಯಗಳ ಸಾಲ ಜಿಡಿಪಿಯ ಶೇಕಡ 25ಕ್ಕಿಂತ ಕಡಿಮೆ ಇರಬೇಕು. ಆದರೆ ಕೇರಳದ ಸಾಲ ಈಗ ಜಿಡಿಪಿಯ ಶೇ 30ರಷ್ಟು ಆಗಿದೆ. ಇದು ರಾಜ್ಯವು ಆರ್ಥಿಕ ದಿವಾಳಿಯತ್ತ ಸಾಗುತ್ತಿರುವುದರ ಲಕ್ಷಣ’ ಎಂದು ಹೇಳಿದರು.</p>.<p>‘ಕಾಂಗ್ರೆಸ್ ಆಡಳಿತದ ಕರ್ನಾಟಕದಲ್ಲಿ ನಿರುದ್ಯೋಗ ಶೇ 2.5ರಷ್ಟು ಇದ್ದರೆ ಕೇರಳದಲ್ಲಿ ಅದರ ಶೇ 8ರಷ್ಟಿದೆ. ಹಣದುಬ್ಬರ ಕೇರಳದಲ್ಲಿ ಶೇ 8.5 ಇದೆ. ಕರ್ನಾಟಕದಲ್ಲಿ ಅದು ಶೇ 4. ಇಷ್ಟೆಲ್ಲ ಆಗುತ್ತಿದ್ದರೂ ಪಿಣರಾಯಿ ವಿಜಯನ್ ಏನು ಮಾಡ್ತಿದ್ದಾರೆ’ ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು.</p>.<p>‘ಮತ್ತೊಮ್ಮೆ ಪಿಣರಾಯಿಗೆ ಓಟು ಕೊಡಬೇಕಾ’? ಎಂದು ಕೇಳಿದರು. ಸಭೆಯಿಂದ ‘ಬೇಡ...’ ಎಂಬ ಉದ್ಗಾರ ಕೇಳಿಬಂತು. ‘ಉಮ್ಮನ್ ಚಾಂಡಿ ಮುಖ್ಯಮಂತ್ರಿ ಆಗಿದ್ದಾಗ ಕೇರಳ ಹೇಗಿತ್ತು, ಈಗ ಹೇಗಿದೆ ಎಂಬುದನ್ನು ಹೋಲಿಸಿ ನೋಡಬೇಕು’ ಎಂದು ಸಿದ್ದರಾಮಯ್ಯ ಸಲಹೆ ಮಾಡಿದರು.</p>.<p>ಕರ್ನಾಟದ ಪಂಚ ಗ್ಯಾರಂಟಿಗಳನ್ನು ಪ್ರಸ್ತಾಪಿಸಿ, ಕೇರಳದಲ್ಲಿ ಐಕ್ಯರಂಗ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣದ ಗ್ಯಾರಂಟಿ ಘೋಷಿಸಿದ್ದು ಖುಷಿಯ ಸಂಗತಿ ಎಂದರು. ‘ಬಿಜೆಪಿಗೆ ಇಲ್ಲಿ ಬೆಳೆಯಲು ಬಿಡದಿರುವುದು ಸ್ವಾಗತಾರ್ಹ. ಆ ಪಕ್ಷ ಸಂವಿಧಾನ ವಿರೋಧಿ, ಬಡವರ ವಿರೋಧಿ, ಅಲ್ಪಸಂಖ್ಯಾತರ ವಿರೋಧಿ’ ಎಂದರು.</p>.<p>ಅಭ್ಯರ್ಥಿ ಎ.ಕೆ.ಎಂ.ಅಶ್ರಫ್, ಸಚಿವ ಎನ್.ಎಸ್. ಬೋಸರಾಜು, ಕೇರಳ ಸಂಸದ ರಾಜ್ಮೋಹನ್ ಉಣ್ಣಿತ್ತಾನ್, ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ, ಮುಖಂಡರಾದ ರಮಾನಾಥ ರೈ, ವಿನಯ ಕುಮಾರ್ ಸೊರಕೆ, ಕೆಪಿಸಿಸಿ ವಕ್ತಾರ ಸುಧೀರ್ ಕುಮಾರ್ ಮರೋಳಿ, ಕಾಂಗ್ರೆಸ್ ಕಾಸರಗೋಡು ಜಿಲ್ಲಾ ಘಟಕದ ಅಧ್ಯಕ್ಷ ಫೈಝಲ್ ಕಾಸರಗೋಡು ಪಾಲ್ಗೊಂಡಿದ್ದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260406-51-206243161</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮಜೀರ್ಪಳ್ಳ (ಕಾಸರಗೋಡು ಜಿಲ್ಲೆ)</strong>: ‘ಪಿಣರಾಯಿ ವಿಜಯನ್ ನೇತೃತ್ವದ ಎಡರಂಗ ಸರ್ಕಾರದಲ್ಲಿ ಕೇರಳ ಆರ್ಥಿಕವಾಗಿ ಬೆಳೆಯಲಿಲ್ಲ. ಸಾಲಗಾರ ರಾಜ್ಯವಾಗಿ ಈಗ ದಿವಾಳಿಯತ್ತ ಸಾಗುತ್ತಿದೆ. ಎಡರಂಗ ಸರ್ಕಾರ ಮತ್ತೆ ಬಂದರೆ ಇನ್ನಷ್ಟು ಸಮಸ್ಯೆ ಆಗಲಿದೆ’ ಎಂದು ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.</p>.<p>ಕೇರಳ ವಿಧಾನಸಭೆಯ ಮಂಜೇಶ್ವರ ಕ್ಷೇತ್ರದ ಐಕ್ಯರಂಗ ಅಭ್ಯರ್ಥಿ, ಮುಸ್ಲಿಂಗ್ ಲೀಗ್ನ ಎ.ಕೆ.ಎಂ.ಅಶ್ರಫ್ ಪರ ಭಾನುವಾರ ಸಂಜೆ ಮಜೀರ್ಪಳ್ಳ ಪೇಟೆಯಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ಅವರು ಮಾತನಾಡಿದರು.</p>.<p>‘ರಾಜ್ಯಗಳ ಸಾಲ ಜಿಡಿಪಿಯ ಶೇಕಡ 25ಕ್ಕಿಂತ ಕಡಿಮೆ ಇರಬೇಕು. ಆದರೆ ಕೇರಳದ ಸಾಲ ಈಗ ಜಿಡಿಪಿಯ ಶೇ 30ರಷ್ಟು ಆಗಿದೆ. ಇದು ರಾಜ್ಯವು ಆರ್ಥಿಕ ದಿವಾಳಿಯತ್ತ ಸಾಗುತ್ತಿರುವುದರ ಲಕ್ಷಣ’ ಎಂದು ಹೇಳಿದರು.</p>.<p>‘ಕಾಂಗ್ರೆಸ್ ಆಡಳಿತದ ಕರ್ನಾಟಕದಲ್ಲಿ ನಿರುದ್ಯೋಗ ಶೇ 2.5ರಷ್ಟು ಇದ್ದರೆ ಕೇರಳದಲ್ಲಿ ಅದರ ಶೇ 8ರಷ್ಟಿದೆ. ಹಣದುಬ್ಬರ ಕೇರಳದಲ್ಲಿ ಶೇ 8.5 ಇದೆ. ಕರ್ನಾಟಕದಲ್ಲಿ ಅದು ಶೇ 4. ಇಷ್ಟೆಲ್ಲ ಆಗುತ್ತಿದ್ದರೂ ಪಿಣರಾಯಿ ವಿಜಯನ್ ಏನು ಮಾಡ್ತಿದ್ದಾರೆ’ ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು.</p>.<p>‘ಮತ್ತೊಮ್ಮೆ ಪಿಣರಾಯಿಗೆ ಓಟು ಕೊಡಬೇಕಾ’? ಎಂದು ಕೇಳಿದರು. ಸಭೆಯಿಂದ ‘ಬೇಡ...’ ಎಂಬ ಉದ್ಗಾರ ಕೇಳಿಬಂತು. ‘ಉಮ್ಮನ್ ಚಾಂಡಿ ಮುಖ್ಯಮಂತ್ರಿ ಆಗಿದ್ದಾಗ ಕೇರಳ ಹೇಗಿತ್ತು, ಈಗ ಹೇಗಿದೆ ಎಂಬುದನ್ನು ಹೋಲಿಸಿ ನೋಡಬೇಕು’ ಎಂದು ಸಿದ್ದರಾಮಯ್ಯ ಸಲಹೆ ಮಾಡಿದರು.</p>.<p>ಕರ್ನಾಟದ ಪಂಚ ಗ್ಯಾರಂಟಿಗಳನ್ನು ಪ್ರಸ್ತಾಪಿಸಿ, ಕೇರಳದಲ್ಲಿ ಐಕ್ಯರಂಗ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣದ ಗ್ಯಾರಂಟಿ ಘೋಷಿಸಿದ್ದು ಖುಷಿಯ ಸಂಗತಿ ಎಂದರು. ‘ಬಿಜೆಪಿಗೆ ಇಲ್ಲಿ ಬೆಳೆಯಲು ಬಿಡದಿರುವುದು ಸ್ವಾಗತಾರ್ಹ. ಆ ಪಕ್ಷ ಸಂವಿಧಾನ ವಿರೋಧಿ, ಬಡವರ ವಿರೋಧಿ, ಅಲ್ಪಸಂಖ್ಯಾತರ ವಿರೋಧಿ’ ಎಂದರು.</p>.<p>ಅಭ್ಯರ್ಥಿ ಎ.ಕೆ.ಎಂ.ಅಶ್ರಫ್, ಸಚಿವ ಎನ್.ಎಸ್. ಬೋಸರಾಜು, ಕೇರಳ ಸಂಸದ ರಾಜ್ಮೋಹನ್ ಉಣ್ಣಿತ್ತಾನ್, ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ, ಮುಖಂಡರಾದ ರಮಾನಾಥ ರೈ, ವಿನಯ ಕುಮಾರ್ ಸೊರಕೆ, ಕೆಪಿಸಿಸಿ ವಕ್ತಾರ ಸುಧೀರ್ ಕುಮಾರ್ ಮರೋಳಿ, ಕಾಂಗ್ರೆಸ್ ಕಾಸರಗೋಡು ಜಿಲ್ಲಾ ಘಟಕದ ಅಧ್ಯಕ್ಷ ಫೈಝಲ್ ಕಾಸರಗೋಡು ಪಾಲ್ಗೊಂಡಿದ್ದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260406-51-206243161</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>