<p><strong>ನವದೆಹಲಿ:</strong> ಮತದಾರರ ಪಟ್ಟಿಯ ಸಮಗ್ರ ವಿಶೇಷ ಪರಿಷ್ಕರಣೆ (SIR) ಪ್ರಕ್ರಿಯೆಯಿಂದ ಪಶ್ಚಿಮ ಬಂಗಾಳದ ಸುಮಾರು 50 ಕ್ಷೇತ್ರಗಳಲ್ಲಿ ಅನರ್ಹಗೊಂಡ ಮತದಾರರು ಮತ್ತು ಇನ್ನೂ ವಿಚಾರಣೆ ಬಾಕಿ ಇರುವ ಮತದಾರರ ಸಂಖ್ಯೆಯಿಂದಾಗಿ ಪಕ್ಷಗಳ ಗೆಲುವಿನ ಅಂತರ ಹೆಚ್ಚಳವಾಗಿದೆ ಎಂಬುದನ್ನು ಅಂಕಿಅಂಶಗಳೇ ಹೇಳುತ್ತವೆ.</p><p>ಇವುಗಳಲ್ಲಿ ತಲಾ 25 ಕ್ಷೇತ್ರಗಳಲ್ಲಿ ಬಿಜೆಪಿ ಮತ್ತು ಟಿಎಂಸಿ ಅಭ್ಯರ್ಥಿಗಳ ಗೆಲುವಿನ ಅಂತರ ಹೆಚ್ಚಳವಾಗಿದೆ. </p><p>ಒಂದಕ್ಕಿಂತ ಹೆಚ್ಚು ಕ್ಷೇತ್ರಗಳಲ್ಲಿದ್ದ ಮತದಾರರ ಹೆಸರುಗಳನ್ನು ಪಟ್ಟಿಯಿಂದ ಅನರ್ಹಗೊಳಿಸಿ ಅಥವಾ ತೆಗೆದುಹಾಕಲಾಗಿತ್ತು. ಆದರೆ ನಿರ್ಧಾರವೇ ಆಗದ 27 ಲಕ್ಷ ಮತದಾರರ ವಿಚಾರಣೆ ಇನ್ನೂ ಸುಪ್ರೀಂ ಕೋರ್ಟ್ನಲ್ಲಿ ಬಾಕಿ ಇದೆ. ಅನರ್ಹಗೊಂಡ ಮತದಾರರ ಸಂಖ್ಯೆಗಳೇ ಈಗ ಅಂತರ ಹೆಚ್ಚಳಕ್ಕೆ ಕಾರಣವಾಗಿದೆ ಎಂಬ ಅಂಶವೇ ಚರ್ಚೆಯನ್ನು ಹುಟ್ಟುಹಾಕಿದೆ.</p><p>ಪಶ್ಚಿಮ ಬಂಗಾಳದ ದಕ್ಷಿಣ ಭಾಗದಲ್ಲಿರುವ ಚಂಪದಾನಿ ಕ್ಷೇತ್ರದಲ್ಲಿ 7,600 ಹೆಸರುಗಳು ಅನರ್ಹಗೊಂಡಿದ್ದವು. ಇದರಿಂದಾಗಿ ಈ ಕ್ಷೇತ್ರದಲ್ಲಿ ಟಿಎಂಸಿ ಅಭ್ಯರ್ಥಿ ವಿರುದ್ಧ ಕೇವಲ 300 ಮತಗಳ ಅಂತರದಿಂದ ಬಿಜೆಪಿಯ ದಿಲೀಪ್ ಸಿಂಗ್ ಗೆಲುವು ದಾಖಲಿಸಿದರು.</p><p>ಕರಣದಿಘಿ ಕ್ಷೇತ್ರದಲ್ಲಿ 31,562 ಹೆಸರುಗಳು ಅನರ್ಹ ಎಂದು ಚುನಾವಣಾ ಆಯೋಗ ಘೋಷಿಸಿತು. ಇಲ್ಲಿ ಬಿಜೆಪಿ ಅಭ್ಯರ್ಥಿ ಬಿರಾಜ್ ಬಿಸ್ವಾಸ್ ಅವರು 19,800 ಮತಗಳ ಅಂತರದಿಂದ ಗೆಲುವು ತಮ್ಮದಾಗಿಸಿಕೊಂಡರು.</p>.<p>ಜಾಂಗಿಪುರದಲ್ಲೂ ಇಂಥದ್ದೇ ಸ್ಥಿತಿ ನಿರ್ಮಾಣವಾಗಿದೆ. ಇಲ್ಲಿ 36,423 ಹೆಸರುಗಳು ಮತದಾರರ ಪಟ್ಟಿಯಿಂದ ಅನರ್ಹಗೊಂಡವು. ಇಲ್ಲಿಯೂ ಬಿಜೆಪಿ ಅಭ್ಯರ್ಥಿ ಗೆಲುವಿನ ಅಂತರ 10,542 ಆಗಿದೆ.</p><p>ಮೋಂಟೆಶ್ವರ್ದಲ್ಲಿ 23,423 ಹೆಸರುಗಳು ಅನರ್ಹಗೊಂಡಿವೆ ಹಾಗೂ ಇನ್ನೂ ಕೆಲವು ವಿಚಾರಣೆ ಹಂತದಲ್ಲಿವೆ. ಇಲ್ಲಿಯೂ ಅಭ್ಯರ್ಥಿ ಗೆಲುವಿನ ಅಂತರ 14,700 ಆಗಿದೆ.</p><p>ಹೆಮ್ಟಾಬಾದ್ನಲ್ಲಿ 18,215 ಹೆಸರುಗಳು ರದ್ದಾಗಿವೆ. ಇಲ್ಲಿಯೂ ಗೆಲುವಿನ ಅಂತರ 12,300 ಇದೆ.</p><p>ಇದೇ ರೀತಿಯ ಚಿತ್ರಣವು ಉತ್ತರ ಬಂಗಾಳದಿಂದ ಡಾರ್ಜಿಲಿಂಗ್ ಹಾಗೂ ರೈನಾದಿಂದ ಬೇಲಿವರೆಗೂ ಕಂಡುಬಂದಿದೆ. </p>.ಮಮತಾ ಸೋಲಿನ ಬೆನ್ನಲ್ಲೇ ಬಿಜೆಪಿ ಮುಂದಿನ ಗುರಿ ಅಖಿಲೇಶ್ ಯಾದವ್: ಸುವೇಂದು ಅಧಿಕಾರಿ.West Bengal Politics: TMC ಕಚೇರಿಗಳನ್ನು ಧ್ವಂಸಗೊಳಿಸಿದ ಬಿಜೆಪಿ ಕಾರ್ಯಕರ್ತರು.<p>ಎಸ್ಐಆರ್ನ ಲಾಭ ಕೇವಲ ಬಿಜೆಪಿಗಷ್ಟೇ ಅಲ್ಲ, ಟಿಎಂಸಿಗೂ ಆಗಿದೆ ಎಂಬುದು ಇದೇ ಅಂಕಿಅಂಶಗಳಿಂದ ಸಾಬೀತಾಗಿದೆ.</p><p>ಶಂಷೇರ್ಗಂಜ್ ಕ್ಷೇತ್ರದಲ್ಲಿ 74 ಸಾವಿರ ಹೆಸರುಗಳು ಮತದಾರರ ಪಟ್ಟಿಯಿಂದ ಅನರ್ಹಗೊಂಡಿವೆ. ಇಲ್ಲಿ ಟಿಎಂಸಿ ಅಭ್ಯರ್ಥಿ 7,500 ಮತಗಳ ಅಂತರದಿಂದ ಗೆಲುವು ದಾಖಲಿಸಿದ್ದಾರೆ. ಇದೇ ರೀತಿ ಮಾಣಿಕ್ಚಕ್, ಸೂತಿ, ಲಾಲ್ಗೋಲಾ ಮತ್ತು ರಘುನಾಥ್ಗಂಜ್ ಕ್ಷೇತ್ರಗಳಲ್ಲೂ ಇಂಥದ್ದೇ ಸ್ಥಿತಿಯನ್ನು ಗಮನಿಸಬಹುದು. </p><p>ಲಾಲ್ಗೋಲಾದಲ್ಲಿ 55,420 ಹೆಸರುಗಳು ರದ್ದಾಗಿವೆ. ಇಲ್ಲಿನ ಅಭ್ಯರ್ಥಿಯ ಗೆಲುವಿನ ಅಂತರ 19 ಸಾವಿರ ಆಗಿದೆ. ಸೂತಿಯಲ್ಲಿ 37,965 ಹೆಸರುಗಳು ರದ್ದಾಗಿವೆ. ಇಲ್ಲಿಯೂ ಗೆಲುವಿನ ಅಂತರ 12,350ರಷ್ಟು ಹೆಚ್ಚಾಗಿದೆ.</p>.ವಿಜಯ್ 'ಸೂಪರ್ ಹಿಟ್'; ಸೂಪರ್ ಸ್ಟಾರ್ ರಜನಿ ಸೇರಿದಂತೆ ಸಿನಿ ತಾರೆಯರ ಶುಭಾಶಯ.ತಮಿಳುನಾಡು ಚುನಾವಣೆ: ಎನ್ಟಿಆರ್ ಹಾದಿಯಲ್ಲಿ ವಿಜಯ್.<p>ಪಶ್ಚಿಮ ಬಂಗಾಳವನ್ನೂ ಒಳಗೊಂಡಂತೆ ಹತ್ತಕ್ಕೂ ಹೆಚ್ಚು ರಾಜ್ಯಗಳಲ್ಲಿ 2ನೇ ಹಂತದ ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆ ನಡೆಯಿತು. ಇದರಲ್ಲಿ ಸುಮಾರು 2 ಕೋಟಿ ಹೆಸರುಗಳು ಪತದಾರರ ಪಟ್ಟಿಯಿಂದ ಅನರ್ಹಗೊಂಡು ರದ್ದಾಗಿವೆ.</p><p>ಇದರಲ್ಲಿ ಪಶ್ಚಿಮ ಬಂಗಾಳದಲ್ಲಿ ಸುಮಾರು 27 ಲಕ್ಷ ಹೆಸರುಗಳು ಮತದಾರರ ಪಟ್ಟಿಯಿಂದ ಅನರ್ಹಗೊಂಡಿವೆ. ಇನ್ನೂ ಕೆಲವು ಸುಪ್ರಿಂ ಕೋರ್ಟ್ನ ಆದೇಶದಂತೆ ವಿಚಾರಣೆ ಹಂತದಲ್ಲಿವೆ. </p><p>ಎಸ್ಐಆರ್ ಪ್ರಕ್ರಿಯೆಯಲ್ಲಿ ಏ. 23ರಂದು ವಿಚಾರಣೆ ನಡೆಸಿದ್ದ ಸುಪ್ರೀಂ ಕೋರ್ಟ್, ಒಂದೊಮ್ಮೆ ಗೆಲುವಿನ ಅಂತರದ ಮತಗಳ ಸಂಖ್ಯೆ ಶೇ 2ರಷ್ಟಿದ್ದರೆ ಮತ್ತು ಶೇ 15ರಷ್ಟು ಮತದಾರರಿಗೆ ಮತ ಚಲಾಯಿಸಲು ಸಾಧ್ಯವಾಗದಿದ್ದರೆ ಆಗ ಸುಪ್ರೀಂ ಕೋರ್ಟ್ ಖಂಡಿತವಾಗಿಯೂ ಮಧ್ಯ ಪ್ರವೇಶಿಸಲಿದೆ ಎಂದಿದ್ದನ್ನು ಇಲ್ಲಿ ಸ್ಮರಿಸಬಹುದು.</p>.ಬಂಗಾಳದಲ್ಲಿ TMCಗೆ ಮುಖಭಂಗ: ಟ್ರೋಲ್ ಮೂಲಕ ದೀದಿ ಕಾಲೆಳೆಯುತ್ತಿರುವ ನೆಟ್ಟಿಗರು.2026ರ ಬಳಿಕ ಮಮತಾ ದೀದಿ ಮುಖ್ಯಮಂತ್ರಿಯಾಗಿರುವುದಿಲ್ಲ: ಅಮಿತ್ ಶಾ.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ:</strong> ಮತದಾರರ ಪಟ್ಟಿಯ ಸಮಗ್ರ ವಿಶೇಷ ಪರಿಷ್ಕರಣೆ (SIR) ಪ್ರಕ್ರಿಯೆಯಿಂದ ಪಶ್ಚಿಮ ಬಂಗಾಳದ ಸುಮಾರು 50 ಕ್ಷೇತ್ರಗಳಲ್ಲಿ ಅನರ್ಹಗೊಂಡ ಮತದಾರರು ಮತ್ತು ಇನ್ನೂ ವಿಚಾರಣೆ ಬಾಕಿ ಇರುವ ಮತದಾರರ ಸಂಖ್ಯೆಯಿಂದಾಗಿ ಪಕ್ಷಗಳ ಗೆಲುವಿನ ಅಂತರ ಹೆಚ್ಚಳವಾಗಿದೆ ಎಂಬುದನ್ನು ಅಂಕಿಅಂಶಗಳೇ ಹೇಳುತ್ತವೆ.</p><p>ಇವುಗಳಲ್ಲಿ ತಲಾ 25 ಕ್ಷೇತ್ರಗಳಲ್ಲಿ ಬಿಜೆಪಿ ಮತ್ತು ಟಿಎಂಸಿ ಅಭ್ಯರ್ಥಿಗಳ ಗೆಲುವಿನ ಅಂತರ ಹೆಚ್ಚಳವಾಗಿದೆ. </p><p>ಒಂದಕ್ಕಿಂತ ಹೆಚ್ಚು ಕ್ಷೇತ್ರಗಳಲ್ಲಿದ್ದ ಮತದಾರರ ಹೆಸರುಗಳನ್ನು ಪಟ್ಟಿಯಿಂದ ಅನರ್ಹಗೊಳಿಸಿ ಅಥವಾ ತೆಗೆದುಹಾಕಲಾಗಿತ್ತು. ಆದರೆ ನಿರ್ಧಾರವೇ ಆಗದ 27 ಲಕ್ಷ ಮತದಾರರ ವಿಚಾರಣೆ ಇನ್ನೂ ಸುಪ್ರೀಂ ಕೋರ್ಟ್ನಲ್ಲಿ ಬಾಕಿ ಇದೆ. ಅನರ್ಹಗೊಂಡ ಮತದಾರರ ಸಂಖ್ಯೆಗಳೇ ಈಗ ಅಂತರ ಹೆಚ್ಚಳಕ್ಕೆ ಕಾರಣವಾಗಿದೆ ಎಂಬ ಅಂಶವೇ ಚರ್ಚೆಯನ್ನು ಹುಟ್ಟುಹಾಕಿದೆ.</p><p>ಪಶ್ಚಿಮ ಬಂಗಾಳದ ದಕ್ಷಿಣ ಭಾಗದಲ್ಲಿರುವ ಚಂಪದಾನಿ ಕ್ಷೇತ್ರದಲ್ಲಿ 7,600 ಹೆಸರುಗಳು ಅನರ್ಹಗೊಂಡಿದ್ದವು. ಇದರಿಂದಾಗಿ ಈ ಕ್ಷೇತ್ರದಲ್ಲಿ ಟಿಎಂಸಿ ಅಭ್ಯರ್ಥಿ ವಿರುದ್ಧ ಕೇವಲ 300 ಮತಗಳ ಅಂತರದಿಂದ ಬಿಜೆಪಿಯ ದಿಲೀಪ್ ಸಿಂಗ್ ಗೆಲುವು ದಾಖಲಿಸಿದರು.</p><p>ಕರಣದಿಘಿ ಕ್ಷೇತ್ರದಲ್ಲಿ 31,562 ಹೆಸರುಗಳು ಅನರ್ಹ ಎಂದು ಚುನಾವಣಾ ಆಯೋಗ ಘೋಷಿಸಿತು. ಇಲ್ಲಿ ಬಿಜೆಪಿ ಅಭ್ಯರ್ಥಿ ಬಿರಾಜ್ ಬಿಸ್ವಾಸ್ ಅವರು 19,800 ಮತಗಳ ಅಂತರದಿಂದ ಗೆಲುವು ತಮ್ಮದಾಗಿಸಿಕೊಂಡರು.</p>.<p>ಜಾಂಗಿಪುರದಲ್ಲೂ ಇಂಥದ್ದೇ ಸ್ಥಿತಿ ನಿರ್ಮಾಣವಾಗಿದೆ. ಇಲ್ಲಿ 36,423 ಹೆಸರುಗಳು ಮತದಾರರ ಪಟ್ಟಿಯಿಂದ ಅನರ್ಹಗೊಂಡವು. ಇಲ್ಲಿಯೂ ಬಿಜೆಪಿ ಅಭ್ಯರ್ಥಿ ಗೆಲುವಿನ ಅಂತರ 10,542 ಆಗಿದೆ.</p><p>ಮೋಂಟೆಶ್ವರ್ದಲ್ಲಿ 23,423 ಹೆಸರುಗಳು ಅನರ್ಹಗೊಂಡಿವೆ ಹಾಗೂ ಇನ್ನೂ ಕೆಲವು ವಿಚಾರಣೆ ಹಂತದಲ್ಲಿವೆ. ಇಲ್ಲಿಯೂ ಅಭ್ಯರ್ಥಿ ಗೆಲುವಿನ ಅಂತರ 14,700 ಆಗಿದೆ.</p><p>ಹೆಮ್ಟಾಬಾದ್ನಲ್ಲಿ 18,215 ಹೆಸರುಗಳು ರದ್ದಾಗಿವೆ. ಇಲ್ಲಿಯೂ ಗೆಲುವಿನ ಅಂತರ 12,300 ಇದೆ.</p><p>ಇದೇ ರೀತಿಯ ಚಿತ್ರಣವು ಉತ್ತರ ಬಂಗಾಳದಿಂದ ಡಾರ್ಜಿಲಿಂಗ್ ಹಾಗೂ ರೈನಾದಿಂದ ಬೇಲಿವರೆಗೂ ಕಂಡುಬಂದಿದೆ. </p>.ಮಮತಾ ಸೋಲಿನ ಬೆನ್ನಲ್ಲೇ ಬಿಜೆಪಿ ಮುಂದಿನ ಗುರಿ ಅಖಿಲೇಶ್ ಯಾದವ್: ಸುವೇಂದು ಅಧಿಕಾರಿ.West Bengal Politics: TMC ಕಚೇರಿಗಳನ್ನು ಧ್ವಂಸಗೊಳಿಸಿದ ಬಿಜೆಪಿ ಕಾರ್ಯಕರ್ತರು.<p>ಎಸ್ಐಆರ್ನ ಲಾಭ ಕೇವಲ ಬಿಜೆಪಿಗಷ್ಟೇ ಅಲ್ಲ, ಟಿಎಂಸಿಗೂ ಆಗಿದೆ ಎಂಬುದು ಇದೇ ಅಂಕಿಅಂಶಗಳಿಂದ ಸಾಬೀತಾಗಿದೆ.</p><p>ಶಂಷೇರ್ಗಂಜ್ ಕ್ಷೇತ್ರದಲ್ಲಿ 74 ಸಾವಿರ ಹೆಸರುಗಳು ಮತದಾರರ ಪಟ್ಟಿಯಿಂದ ಅನರ್ಹಗೊಂಡಿವೆ. ಇಲ್ಲಿ ಟಿಎಂಸಿ ಅಭ್ಯರ್ಥಿ 7,500 ಮತಗಳ ಅಂತರದಿಂದ ಗೆಲುವು ದಾಖಲಿಸಿದ್ದಾರೆ. ಇದೇ ರೀತಿ ಮಾಣಿಕ್ಚಕ್, ಸೂತಿ, ಲಾಲ್ಗೋಲಾ ಮತ್ತು ರಘುನಾಥ್ಗಂಜ್ ಕ್ಷೇತ್ರಗಳಲ್ಲೂ ಇಂಥದ್ದೇ ಸ್ಥಿತಿಯನ್ನು ಗಮನಿಸಬಹುದು. </p><p>ಲಾಲ್ಗೋಲಾದಲ್ಲಿ 55,420 ಹೆಸರುಗಳು ರದ್ದಾಗಿವೆ. ಇಲ್ಲಿನ ಅಭ್ಯರ್ಥಿಯ ಗೆಲುವಿನ ಅಂತರ 19 ಸಾವಿರ ಆಗಿದೆ. ಸೂತಿಯಲ್ಲಿ 37,965 ಹೆಸರುಗಳು ರದ್ದಾಗಿವೆ. ಇಲ್ಲಿಯೂ ಗೆಲುವಿನ ಅಂತರ 12,350ರಷ್ಟು ಹೆಚ್ಚಾಗಿದೆ.</p>.ವಿಜಯ್ 'ಸೂಪರ್ ಹಿಟ್'; ಸೂಪರ್ ಸ್ಟಾರ್ ರಜನಿ ಸೇರಿದಂತೆ ಸಿನಿ ತಾರೆಯರ ಶುಭಾಶಯ.ತಮಿಳುನಾಡು ಚುನಾವಣೆ: ಎನ್ಟಿಆರ್ ಹಾದಿಯಲ್ಲಿ ವಿಜಯ್.<p>ಪಶ್ಚಿಮ ಬಂಗಾಳವನ್ನೂ ಒಳಗೊಂಡಂತೆ ಹತ್ತಕ್ಕೂ ಹೆಚ್ಚು ರಾಜ್ಯಗಳಲ್ಲಿ 2ನೇ ಹಂತದ ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆ ನಡೆಯಿತು. ಇದರಲ್ಲಿ ಸುಮಾರು 2 ಕೋಟಿ ಹೆಸರುಗಳು ಪತದಾರರ ಪಟ್ಟಿಯಿಂದ ಅನರ್ಹಗೊಂಡು ರದ್ದಾಗಿವೆ.</p><p>ಇದರಲ್ಲಿ ಪಶ್ಚಿಮ ಬಂಗಾಳದಲ್ಲಿ ಸುಮಾರು 27 ಲಕ್ಷ ಹೆಸರುಗಳು ಮತದಾರರ ಪಟ್ಟಿಯಿಂದ ಅನರ್ಹಗೊಂಡಿವೆ. ಇನ್ನೂ ಕೆಲವು ಸುಪ್ರಿಂ ಕೋರ್ಟ್ನ ಆದೇಶದಂತೆ ವಿಚಾರಣೆ ಹಂತದಲ್ಲಿವೆ. </p><p>ಎಸ್ಐಆರ್ ಪ್ರಕ್ರಿಯೆಯಲ್ಲಿ ಏ. 23ರಂದು ವಿಚಾರಣೆ ನಡೆಸಿದ್ದ ಸುಪ್ರೀಂ ಕೋರ್ಟ್, ಒಂದೊಮ್ಮೆ ಗೆಲುವಿನ ಅಂತರದ ಮತಗಳ ಸಂಖ್ಯೆ ಶೇ 2ರಷ್ಟಿದ್ದರೆ ಮತ್ತು ಶೇ 15ರಷ್ಟು ಮತದಾರರಿಗೆ ಮತ ಚಲಾಯಿಸಲು ಸಾಧ್ಯವಾಗದಿದ್ದರೆ ಆಗ ಸುಪ್ರೀಂ ಕೋರ್ಟ್ ಖಂಡಿತವಾಗಿಯೂ ಮಧ್ಯ ಪ್ರವೇಶಿಸಲಿದೆ ಎಂದಿದ್ದನ್ನು ಇಲ್ಲಿ ಸ್ಮರಿಸಬಹುದು.</p>.ಬಂಗಾಳದಲ್ಲಿ TMCಗೆ ಮುಖಭಂಗ: ಟ್ರೋಲ್ ಮೂಲಕ ದೀದಿ ಕಾಲೆಳೆಯುತ್ತಿರುವ ನೆಟ್ಟಿಗರು.2026ರ ಬಳಿಕ ಮಮತಾ ದೀದಿ ಮುಖ್ಯಮಂತ್ರಿಯಾಗಿರುವುದಿಲ್ಲ: ಅಮಿತ್ ಶಾ.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>