<p> <strong>ಚೆನ್ನೈ</strong>: ಬಾರಿ ಕುತೂಹಲ ಕೆರಳಿಸಿದ್ದ ತಮಿಳುನಾಡು ವಿಧಾನಸಭಾ ಚುನಾವಣೆಯ ಮತ ಎಣಿಕೆ ಕಾರ್ಯ ಪ್ರಗತಿಯಲ್ಲಿದೆ.</p><p>ಆಡಳಿತಾರೂಢ ಡಿಎಂಕೆ ಮತ್ತು ಪ್ರಮುಖ ವಿರೋಧ ಪಕ್ಷವಾಗಿರುವ ಎಐಎಡಿಎಂಕೆ ಮೈತ್ರಿಕೂಟಗಳ ನಡುವಣ ತೀವ್ರ ಪೈಪೋಟಿ ನಡುವೆ ನಟ ವಿಜಯ್ ಅವರ ತಮಿಳಗ ವೆಟ್ರಿ ಕಳಗಂ (ಟಿವಿಕೆ) ಪಕ್ಷ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮುತ್ತಿದೆ.</p><p>ವಿಜಯ್ ಕಿಂಗ್ ಮೇಕರ್ ಆಗಬಹುದು ಎಂಬ ಲೆಕ್ಕಾಚಾರ ಉಲ್ಟಾ ಆಗಿದೆ. ಅವರೇ ಕಿಂಗ್ ಆಗುವತ್ತ ಮುನ್ನುಗ್ಗುತ್ತಿದ್ದಾರೆ. 234 ವಿಧಾನಸಭಾ ಸ್ಥಾನಗಳ ಪೈಕಿ ನೂರಕ್ಕೂ ಹೆಚ್ಚುಕಡೆ ಮುನ್ನಡೆ ಸಾಧಿಸಿದೆ.</p><p>ಆರಂಭಿಕ ಮುನ್ನಡೆ ಹೀಗೆಯೇ ಮುಂದುವರಿದರೆ ನಟ ವಿಜಯ್ ಅವರ ಪಕ್ಷ ತಮಿಳಗ ವೆಟ್ರಿ ಕಳಗಂ (ಟಿವಿಕೆ) ಅಧಿಕಾರಕ್ಕೇರುವುದು ಖಚಿತ ಎನ್ನಲಾಗುತ್ತಿದೆ.</p>.ತಮಿಳುನಾಡು ವಿಧಾನಸಭೆ ಚುನಾವಣೆ: ಮುಖ್ಯಮಂತ್ರಿ ಗಾದಿಯ ಸನಿಹಕ್ಕೆ ದಳಪತಿ.ತಮಿಳುನಾಡು ಫಲಿತಾಂಶ: ಮತ್ತೊಬ್ಬ ಎಂಜಿಆರ್ ಆಗುವರೇ ವಿಜಯ್?.<p><strong>ತಮಿಳುನಾಡಿನ ಪ್ರಮುಖ ಕ್ಷೇತ್ರಗಳು<br>ಕೊಳತ್ತೂರು: </strong>ಚೆನ್ನೈ ಜಿಲ್ಲೆಯ ಈ ಕ್ಷೇತ್ರದಲ್ಲಿ ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಕಣದಲ್ಲಿದ್ದಾರೆ.</p><p><strong>ಚೆಪಾಕ್– ತಿರುನಲ್ವೇಲಿ:</strong> ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಅವರ ಪುತ್ರ, ಉಪಮುಖ್ಯಮಂತ್ರಿ ಉದಯನಿಧಿ ಸ್ಟಾಲಿನ್ ಇಲ್ಲಿ ಸ್ಪರ್ಧಿಸಿದ್ದಾರೆ.</p><p><strong>ತಿರುಚಿರಾಪಳ್ಳಿ ಪೂರ್ವ</strong>: ತಿರುಚಿರಾಪಳ್ಳಿ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿರುವ ಈ ಸ್ಥಾನದಲ್ಲಿ ನಟ, ರಾಜಕಾರಣಿ ವಿಜಯ್ ಅವರು ಕಣಕ್ಕಿಳಿದಿದ್ದಾರೆ.</p><p><strong>ಪೆರಂಬೂರ್: </strong>ವಿಜಯ್ ಅವರು ಸ್ಪರ್ಧಿಸಿರುವ ಎರಡನೇ ಕ್ಷೇತ್ರ ಪೆರಂಬೂರ್. ಚೆನ್ನೈ ಜಿಲ್ಲೆಯಲ್ಲಿರುವ ಈ ಕ್ಷೇತ್ರ, ಅಕ್ಕ–ಪಕ್ಕದ ಹಲವು ಕ್ಷೇತ್ರಗಳ ಫಲಿತಾಂಶದ ಮೇಲೂ ಪರಿಣಾಮ ಬೀರಲಿದೆ.</p><p><strong>ಎಡಪ್ಪಾಡಿ:</strong> ಸೇಲಂ ಜಿಲ್ಲೆಯ ಈ ಕ್ಷೇತ್ರ ಎಐಎಡಿಎಂಕೆಯ ಭದ್ರಕೋಟೆ ಎನಿಸಿದೆ. ಮಾಜಿ ಮುಖ್ಯಮಂತ್ರಿ ಮತ್ತು ಎಐಎಡಿಎಂಕೆ ನಾಯಕ ಎಡಪ್ಪಾಡಿ ಕೆ. ಪಳನಿಸ್ವಾಮಿ ಕಣಕ್ಕಿಳಿದಿರುವುದು ಇಲ್ಲಿಂದಲೇ.</p><p><strong>ಬೋದಿನಾಯಕ್ಕನೂರ್: </strong>ಎಐಎಡಿಎಂಕೆ ತೊರೆದು ಡಿಎಂಕೆ ಸೇರಿರುವ, ಮಾಜಿ ಮುಖ್ಯಮಂತ್ರಿ ಓ. ಪನ್ನೀರಸೆಲ್ವಂ ಅವರು ಇಲ್ಲಿಂದ ಸ್ಪರ್ಧಿಸಿದ್ದಾರೆ.</p><p><strong>ಸತ್ತೂರ್: </strong>ವಿರುಧುನಗರ ಜಿಲ್ಲೆಯ ಈ ಕ್ಷೇತ್ರ ಎಐಎಡಿಎಂಕೆ ಪಕ್ಷದ ಭದ್ರ ನೆಲೆ. ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನೈನಾರ್ ನಾಗೇಂದ್ರನ್ ಅವರು ಇಲ್ಲಿಂದ ಸ್ಪರ್ಧಿಸಿದ್ದಾರೆ.</p><p><strong>ಕೊಯಮತ್ತೂರ್ ದಕ್ಷಿಣ: </strong>2021ರ ಚುನಾವಣೆಯಲ್ಲಿ ಬಿಜೆಪಿಯ ವನತಿ ಶ್ರೀನಿವಾಸನ್ ಗೆದ್ದಿದ್ದ ಈ ಕ್ಷೇತ್ರ, ಈ ಬಾರಿ ಮಿತ್ರಪಕ್ಷವಾದ ಎಐಎಡಿಎಂಕೆ ಪಾಲಾಗಿದೆ. ಡಿಎಂಕೆಯ ಸೆಂಥಿಲ್ ಬಾಲಾಜಿ ಅವರಿಗೆ ಇಲ್ಲಿ ಎಐಎಡಿಎಂಕೆಯಿಂದ ಅಮ್ಮನ್ ಕೆ. ಅರ್ಜುನನ್ ಕಣದಲ್ಲಿದ್ದಾರೆ.</p><p><strong>ಕೊಯಮತ್ತೂರ್ ಉತ್ತರ: </strong>ಬಿಜೆಪಿಯ ವನತಿ ಶ್ರೀನಿವಾಸನ್ ಅವರು ಇಲ್ಲಿ ಕಣಕ್ಕಿಳಿದಿದ್ದಾರೆ. ಕಳೆದ ಬಾರಿ ಅವರುಮಕ್ಕಳ್ ನೀದಿ ಮೈಯಂ(ಎಂಎನ್ಎಂ) ಪಕ್ಷದ ನಾಯಕ, ನಟ ಕಮಲ್ ಹಾಸನ್ ಅವರನ್ನು ಮಣಿಸಿದ್ದರು.</p><p><strong>ಡಾ. ರಾಧಾಕೃಷ್ಣನ್ ನಗರ: </strong>ಆರ್.ಕೆ. ನಗರ್ ಎಂದೂ ಕರೆಯಲಾಗುವ ಈ ಕ್ಷೇತ್ರವಿರುವುದು ಚೆನ್ನೈ ಜಿಲ್ಲೆಯಲ್ಲಿ. ಜೆ. ಜಯಲಲಿತಾ ಅವರು 2016ರಲ್ಲಿ ಇಲ್ಲಿಂದ ವಿಧಾನಸಭೆಗೆ ಆಯ್ಕೆಯಾದಾಗ ಇಡೀ ದೇಶವೇ ಕ್ಷೇತ್ರದತ್ತ ತಿರುಗಿ ನೋಡಿತ್ತು. ಇಲ್ಲಿ ಶಾಸಕ ಜಾನ್ ಎಬೆನೆಝೆರ್ ಈ ಬಾರಿಯೂ ಡಿಎಂಕೆಯಿಂದ ಕಣಕ್ಕಿಳಿದಿದ್ದಾರೆ. ಆರ್.ಎಸ್. ರಾಜೇಶ್ ಅವರು ಎಐಎಡಿಎಂಕೆ ಅಭ್ಯರ್ಥಿಯಾಗಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p> <strong>ಚೆನ್ನೈ</strong>: ಬಾರಿ ಕುತೂಹಲ ಕೆರಳಿಸಿದ್ದ ತಮಿಳುನಾಡು ವಿಧಾನಸಭಾ ಚುನಾವಣೆಯ ಮತ ಎಣಿಕೆ ಕಾರ್ಯ ಪ್ರಗತಿಯಲ್ಲಿದೆ.</p><p>ಆಡಳಿತಾರೂಢ ಡಿಎಂಕೆ ಮತ್ತು ಪ್ರಮುಖ ವಿರೋಧ ಪಕ್ಷವಾಗಿರುವ ಎಐಎಡಿಎಂಕೆ ಮೈತ್ರಿಕೂಟಗಳ ನಡುವಣ ತೀವ್ರ ಪೈಪೋಟಿ ನಡುವೆ ನಟ ವಿಜಯ್ ಅವರ ತಮಿಳಗ ವೆಟ್ರಿ ಕಳಗಂ (ಟಿವಿಕೆ) ಪಕ್ಷ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮುತ್ತಿದೆ.</p><p>ವಿಜಯ್ ಕಿಂಗ್ ಮೇಕರ್ ಆಗಬಹುದು ಎಂಬ ಲೆಕ್ಕಾಚಾರ ಉಲ್ಟಾ ಆಗಿದೆ. ಅವರೇ ಕಿಂಗ್ ಆಗುವತ್ತ ಮುನ್ನುಗ್ಗುತ್ತಿದ್ದಾರೆ. 234 ವಿಧಾನಸಭಾ ಸ್ಥಾನಗಳ ಪೈಕಿ ನೂರಕ್ಕೂ ಹೆಚ್ಚುಕಡೆ ಮುನ್ನಡೆ ಸಾಧಿಸಿದೆ.</p><p>ಆರಂಭಿಕ ಮುನ್ನಡೆ ಹೀಗೆಯೇ ಮುಂದುವರಿದರೆ ನಟ ವಿಜಯ್ ಅವರ ಪಕ್ಷ ತಮಿಳಗ ವೆಟ್ರಿ ಕಳಗಂ (ಟಿವಿಕೆ) ಅಧಿಕಾರಕ್ಕೇರುವುದು ಖಚಿತ ಎನ್ನಲಾಗುತ್ತಿದೆ.</p>.ತಮಿಳುನಾಡು ವಿಧಾನಸಭೆ ಚುನಾವಣೆ: ಮುಖ್ಯಮಂತ್ರಿ ಗಾದಿಯ ಸನಿಹಕ್ಕೆ ದಳಪತಿ.ತಮಿಳುನಾಡು ಫಲಿತಾಂಶ: ಮತ್ತೊಬ್ಬ ಎಂಜಿಆರ್ ಆಗುವರೇ ವಿಜಯ್?.<p><strong>ತಮಿಳುನಾಡಿನ ಪ್ರಮುಖ ಕ್ಷೇತ್ರಗಳು<br>ಕೊಳತ್ತೂರು: </strong>ಚೆನ್ನೈ ಜಿಲ್ಲೆಯ ಈ ಕ್ಷೇತ್ರದಲ್ಲಿ ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಕಣದಲ್ಲಿದ್ದಾರೆ.</p><p><strong>ಚೆಪಾಕ್– ತಿರುನಲ್ವೇಲಿ:</strong> ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಅವರ ಪುತ್ರ, ಉಪಮುಖ್ಯಮಂತ್ರಿ ಉದಯನಿಧಿ ಸ್ಟಾಲಿನ್ ಇಲ್ಲಿ ಸ್ಪರ್ಧಿಸಿದ್ದಾರೆ.</p><p><strong>ತಿರುಚಿರಾಪಳ್ಳಿ ಪೂರ್ವ</strong>: ತಿರುಚಿರಾಪಳ್ಳಿ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿರುವ ಈ ಸ್ಥಾನದಲ್ಲಿ ನಟ, ರಾಜಕಾರಣಿ ವಿಜಯ್ ಅವರು ಕಣಕ್ಕಿಳಿದಿದ್ದಾರೆ.</p><p><strong>ಪೆರಂಬೂರ್: </strong>ವಿಜಯ್ ಅವರು ಸ್ಪರ್ಧಿಸಿರುವ ಎರಡನೇ ಕ್ಷೇತ್ರ ಪೆರಂಬೂರ್. ಚೆನ್ನೈ ಜಿಲ್ಲೆಯಲ್ಲಿರುವ ಈ ಕ್ಷೇತ್ರ, ಅಕ್ಕ–ಪಕ್ಕದ ಹಲವು ಕ್ಷೇತ್ರಗಳ ಫಲಿತಾಂಶದ ಮೇಲೂ ಪರಿಣಾಮ ಬೀರಲಿದೆ.</p><p><strong>ಎಡಪ್ಪಾಡಿ:</strong> ಸೇಲಂ ಜಿಲ್ಲೆಯ ಈ ಕ್ಷೇತ್ರ ಎಐಎಡಿಎಂಕೆಯ ಭದ್ರಕೋಟೆ ಎನಿಸಿದೆ. ಮಾಜಿ ಮುಖ್ಯಮಂತ್ರಿ ಮತ್ತು ಎಐಎಡಿಎಂಕೆ ನಾಯಕ ಎಡಪ್ಪಾಡಿ ಕೆ. ಪಳನಿಸ್ವಾಮಿ ಕಣಕ್ಕಿಳಿದಿರುವುದು ಇಲ್ಲಿಂದಲೇ.</p><p><strong>ಬೋದಿನಾಯಕ್ಕನೂರ್: </strong>ಎಐಎಡಿಎಂಕೆ ತೊರೆದು ಡಿಎಂಕೆ ಸೇರಿರುವ, ಮಾಜಿ ಮುಖ್ಯಮಂತ್ರಿ ಓ. ಪನ್ನೀರಸೆಲ್ವಂ ಅವರು ಇಲ್ಲಿಂದ ಸ್ಪರ್ಧಿಸಿದ್ದಾರೆ.</p><p><strong>ಸತ್ತೂರ್: </strong>ವಿರುಧುನಗರ ಜಿಲ್ಲೆಯ ಈ ಕ್ಷೇತ್ರ ಎಐಎಡಿಎಂಕೆ ಪಕ್ಷದ ಭದ್ರ ನೆಲೆ. ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನೈನಾರ್ ನಾಗೇಂದ್ರನ್ ಅವರು ಇಲ್ಲಿಂದ ಸ್ಪರ್ಧಿಸಿದ್ದಾರೆ.</p><p><strong>ಕೊಯಮತ್ತೂರ್ ದಕ್ಷಿಣ: </strong>2021ರ ಚುನಾವಣೆಯಲ್ಲಿ ಬಿಜೆಪಿಯ ವನತಿ ಶ್ರೀನಿವಾಸನ್ ಗೆದ್ದಿದ್ದ ಈ ಕ್ಷೇತ್ರ, ಈ ಬಾರಿ ಮಿತ್ರಪಕ್ಷವಾದ ಎಐಎಡಿಎಂಕೆ ಪಾಲಾಗಿದೆ. ಡಿಎಂಕೆಯ ಸೆಂಥಿಲ್ ಬಾಲಾಜಿ ಅವರಿಗೆ ಇಲ್ಲಿ ಎಐಎಡಿಎಂಕೆಯಿಂದ ಅಮ್ಮನ್ ಕೆ. ಅರ್ಜುನನ್ ಕಣದಲ್ಲಿದ್ದಾರೆ.</p><p><strong>ಕೊಯಮತ್ತೂರ್ ಉತ್ತರ: </strong>ಬಿಜೆಪಿಯ ವನತಿ ಶ್ರೀನಿವಾಸನ್ ಅವರು ಇಲ್ಲಿ ಕಣಕ್ಕಿಳಿದಿದ್ದಾರೆ. ಕಳೆದ ಬಾರಿ ಅವರುಮಕ್ಕಳ್ ನೀದಿ ಮೈಯಂ(ಎಂಎನ್ಎಂ) ಪಕ್ಷದ ನಾಯಕ, ನಟ ಕಮಲ್ ಹಾಸನ್ ಅವರನ್ನು ಮಣಿಸಿದ್ದರು.</p><p><strong>ಡಾ. ರಾಧಾಕೃಷ್ಣನ್ ನಗರ: </strong>ಆರ್.ಕೆ. ನಗರ್ ಎಂದೂ ಕರೆಯಲಾಗುವ ಈ ಕ್ಷೇತ್ರವಿರುವುದು ಚೆನ್ನೈ ಜಿಲ್ಲೆಯಲ್ಲಿ. ಜೆ. ಜಯಲಲಿತಾ ಅವರು 2016ರಲ್ಲಿ ಇಲ್ಲಿಂದ ವಿಧಾನಸಭೆಗೆ ಆಯ್ಕೆಯಾದಾಗ ಇಡೀ ದೇಶವೇ ಕ್ಷೇತ್ರದತ್ತ ತಿರುಗಿ ನೋಡಿತ್ತು. ಇಲ್ಲಿ ಶಾಸಕ ಜಾನ್ ಎಬೆನೆಝೆರ್ ಈ ಬಾರಿಯೂ ಡಿಎಂಕೆಯಿಂದ ಕಣಕ್ಕಿಳಿದಿದ್ದಾರೆ. ಆರ್.ಎಸ್. ರಾಜೇಶ್ ಅವರು ಎಐಎಡಿಎಂಕೆ ಅಭ್ಯರ್ಥಿಯಾಗಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>