<p>ತಮಿಳುನಾಡಿನಲ್ಲಿ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿ ಸರ್ಕಾರ ರಚಿಸಲು ಹಕ್ಕು ಮಂಡಿಸಿರುವ 'ಟಿವಿಕೆ'ಗೆ ಅವಕಾಶ ನೀಡದ ರಾಜ್ಯಪಾಲರ ಕ್ರಮ ಸಾಕಷ್ಟು ಟೀಕೆಗೆ ಕಾರಣವಾಗಿದೆ. ಲೋಕಭವನವು ಜನಾದೇಶವನ್ನು ಧಿಕ್ಕರಿಸಿ, ಕೇಂದ್ರದ ಕೈಗೊಂಬೆಯಂತೆ ವರ್ತಿಸಿ, ಸಾಂವಿಧಾನಿಕ ನಿಯಮಗಳು ಮತ್ತು ಸುಪ್ರೀಂ ಕೋರ್ಟಿನ ಒಂಬತ್ತು ಜನ ಸಂವಿಧಾನ ಪೀಠದ ಬೊಮ್ಮಾಯಿ ತೀರ್ಮಾನವನ್ನು ಗಾಳಿಗೆ ತೂರಿದೆಯೆಂಬ ಆರೋಪವಿದೆ. ಬಿಜೆಪಿ ಸರ್ಕಾರದ ಮಾಜಿ ಅಟಾರ್ನಿ ಜನರಲ್ ಮುಕುಲ್ ರೋಹಟಗಿ ಸೇರಿದಂತೆ ಕಪಿಲ್ ಸಿಬಲ್, ಅಭಿಷೇಕ್ ಮನು ಸಿಂಘ್ವಿ ಸೇರಿದಂತೆ ಅನೇಕ ಹಿರಿಯ ವಕೀಲರು ಈ ಟೀಕೆಗೆ ದನಿ ಸೇರಿಸಿದ್ದಾರೆ.</p><p>ಕೇಂದ್ರ-ರಾಜ್ಯ ಸಂಬಂಧಗಳು ಮತ್ತು ರಾಜ್ಯಪಾಲರ ಅಧಿಕಾರ ವ್ಯಾಪ್ತಿಯ ವಿವಾದ ಎದ್ದಾಗಲೆಲ್ಲ ಬೊಮ್ಮಾಯಿ ಪ್ರಕರಣ ಚರ್ಚೆಗೆ ಬರುತ್ತದೆ. ಬೊಮ್ಮಾಯಿ ತೀರ್ಪಿನಲ್ಲಿ 356ನೇ ವಿಧಿ ಮತ್ತು ರಾಜ್ಯಪಾಲರ ಅಧಿಕಾರ ವ್ಯಾಪ್ತಿಯ ಬಗ್ಗೆ ಚರ್ಚೆಯಿದೆ ಎಂಬುದು ನಿಜವಾದರೂ, ಇಂದಿನ ವಿವಾದಕ್ಕೂ ಈ ತೀರ್ಮಾನಕ್ಕೂ ನೇರಾನೇರ ಸಂಬಂಧವಿಲ್ಲ. ಬೊಮ್ಮಾಯಿ ಪ್ರಕರಣದ ತೀರ್ಪು ಬಂದದ್ದು 1994ರಲ್ಲಾದರೂ, ಘಟನಾವಳಿಗಳೆಲ್ಲವೂ 1989ರಲ್ಲಿ ಜರುಗಿದ್ದವು.</p>.ಆಳ–ಅಗಲ | ರಾಜ್ಯ–ರಾಜ್ಯಪಾಲರ ಸಂಘರ್ಷ: ‘ಸುಪ್ರೀಂ’ ದಿಕ್ಸೂಚಿ.ವಿಶ್ಲೇಷಣೆ | ಭಾರತದ ಪ್ರಜಾಪ್ರಭುತ್ವದ ಸ್ಥಿರತೆಗೆ ಕಾರಣಗಳು– ಭಾಗ 1 . <p>ಜನತಾ ದಳದ ಮುಂಡರಗಿ ಶಾಸಕರಾಗಿದ್ದ ಕಲ್ಯಾಣ ರಾವ್ ಮೊಳಕೇರಿಯವರು ಅಂದಿನ ರಾಜ್ಯಪಾಲರಾದ ವೆಂಕಟಸುಬ್ಬಯ್ಯನವರಿಗೆ ಹದಿನೇಳು ಶಾಸಕರ ಸಹಿಯಿದ್ದ ಪತ್ರವೊಂದನ್ನು ಸಲ್ಲಿಸಿ ಬೊಮ್ಮಾಯಿ ಸರ್ಕಾರಕ್ಕೆ ಈ ಶಾಸಕರು ಬೆಂಬಲ ವಾಪಾಸ್ ಪಡೆದಿರುವುದಾಗಿ ತಿಳಿಸಿದರು. ನಂತರದಲ್ಲಿ ಅನೇಕ ಶಾಸಕರು ತಮ್ಮ ಸಹಿಯನ್ನು ಬಲವಂತವಾಗಿ ಪಡೆದದ್ದಾಗಿ ರಾಜ್ಯಪಾಲರಿಗೆ ತಿಳಿಸಿದರೂ, ಬೊಮ್ಮಾಯಿಯವರು ಸದನದಲ್ಲಿ ಬಹುಮತವನ್ನು ಸಾಬಿತುಪಡಿಸಲು ಸಿದ್ಧರಿರುವುದಾಗಿ ಹೇಳಿದರೂ ಕೇವಲ ಒಂದು ಪತ್ರದ ಆಧಾರದ ಮೇಲೆ ರಾಜ್ಯ ಸರ್ಕಾರ ಅಲ್ಪಮತಕ್ಕೆ ಇಳಿದಿದೆಯೆಂದು ರಾಜ್ಯಪಾಲರು ಕೇಂದ್ರಕ್ಕೆ ವರದಿ ಸಲ್ಲಿಸಿ, ನಂತರದಲ್ಲಿ ರಾಜ್ಯಪಾಲರ ಆಡಳಿತ ಹೇರಲಾಯಿತು.</p><p>ಈ ಪ್ರಕರಣ ಸುಪ್ರೀಂ ಕೋರ್ಟಿನ ಮೆಟ್ಟಿಲೇರಿ ಐತಿಹಾಸಿಕ ತೀರ್ಪೊಂದಕ್ಕೆ ಕಾರಣವಾಯಿತು.</p><p>ಬೊಮ್ಮಾಯಿ ತೀರ್ಮಾನದ ಒಟ್ಟು ಸಾರವೆಂದರೆ ಪ್ರಜಾಪ್ರಭುತ್ವದಲ್ಲಿ ಬಹುಮತ ಸಾಬೀತಿಗೆ ಸದನವೇ ಸರ್ವೋಚ್ಚ ವೇದಿಕೆ. ಸದನದಲ್ಲಿ ಸಾಬೀತುಪಡಿಸಿದ ಬಹುಮತದ ಆಧಾರದ ಮೇಲೆ ಸರ್ಕಾರದ ಭವಿಷ್ಯವನ್ನು ನಿರ್ಧರಿಸಬಹುದೇ ಹೊರತು ರಾಜ್ಯಪಾಲರ ವೈಯಕ್ತಿಕ ಅಭಿಪ್ರಾಯಗಳಿಂದಲ್ಲ ಎಂಬುದನ್ನು ನಂತರದ ಸುಪ್ರೀಂ ಕೋರ್ಟಿನ ಪ್ರಕರಣಗಳಲ್ಲೂ ಪುನರುಚ್ಛರಿಸಲಾಗಿದೆ.</p><p>ಆಡಳಿತಾರೂಢ ಸರ್ಕಾರ ತನ್ನ ಬಹುಮತವನ್ನು ಹೇಗೆ ಸಾಬೀತುಪಡಿಸುವಲ್ಲಿ ರಾಜ್ಯಪಾಲರ ಪಾತ್ರವೇನು ಎಂಬುದಕ್ಕೆ ಬೊಮ್ಮಾಯಿ ಪ್ರಕರಣ ಮಾರ್ಗದರ್ಶಿಯೇ ಹೊರತು, ಸರ್ಕಾರ ರಚನೆಯ ಮೊದಲು ರಾಜ್ಯಪಾಲರ ಅಧಿಕಾರ-ಕರ್ತವ್ಯಗಳೇನು ಎಂಬುದಕ್ಕಲ್ಲ.</p><p>ಸಂವಿಧಾನದ 164ನೇ ವಿಧಿಯ ಪ್ರಕಾರ ರಾಜ್ಯಪಾಲರು ಮೊದಲು ಮುಖ್ಯಮಂತ್ರಿಯನ್ನು ಮತ್ತು ಮುಖ್ಯಮಂತ್ರಿಯ ಸಲಹೆಯ ಮೇರೆಗೆ ಇತರ ಸಚಿವರನ್ನು ನೇಮಿಸಬೇಕು. ಇಡೀ ಮಂತ್ರಿಮಂಡಲವನ್ನು ನೇಮಿಸುವ ಅಧಿಕಾರವಿರುವುದು ರಾಜ್ಯಪಾಲರಿಗೆ ಮಾತ್ರವೇ ಆದರೂ, ಮುಖ್ಯಮಂತ್ರಿಯಾಗಲು ಯಾರನ್ನು ಆಹ್ವಾನಿಸಬೇಕು ಎಂಬುದರ ಬಗ್ಗೆ ಸ್ಪಷ್ಟ ನಿರ್ದೇಶನವಿಲ್ಲ.</p><p>ಆದರೂ, ಬೊಮ್ಮಾಯಿ ಪ್ರಕರಣವೂ ಸೇರಿದಂತೆ ಸುಪ್ರೀಂ ಕೋರ್ಟಿನ ಅನೇಕ ತೀರ್ಮಾನಗಳಲ್ಲಿ ಹೇಳುವುದೇನೆಂದರೆ, ಒಟ್ಟು ಸದನದ ಸದಸ್ಯರ ಬಹುಮತವನ್ನು ಹೊಂದಿರುವ ವ್ಯಕ್ತಿಯೇ ಮುಖ್ಯಮಂತ್ರಿ ಆಗಬಹುದು. ಸದನದಲ್ಲಿ ತನ್ನ ಬಹುಮತವನ್ನು ಸಾಬೀತುಗೊಳಿಸದೇ ಇದ್ದರೆ ಅಥವಾ ಸಾಬೀತುಗೊಳಿಸಲು ನಿರಾಕರಿಸಿದರೆ ರಾಜ್ಯಪಾಲರು ಮುಖ್ಯಮಂತ್ರಿಯನ್ನು ತೆಗೆದು ಹಾಕಬಹುದು ಮತ್ತು ಮಂತ್ರಿಮಂಡಲವನ್ನು ವಿಸರ್ಜಿಸಬಹುದು.</p><p>ಇದೇ ತರ್ಕಸರಣಿಯನ್ನು ವಿಸ್ತರಿಸಿದರೆ, ಸದನದ ಒಟ್ಟು ಸದಸ್ಯರ ಬಹುಮತ ಹೊಂದಿರಬಹುದಾದ ವ್ಯಕ್ತಿಯನ್ನೇ ರಾಜ್ಯಪಾಲರು ಮುಖ್ಯಮಂತ್ರಿಯನ್ನಾಗಿ ನೇಮಿಸಬೇಕು ಮತ್ತು ಸದನದ ಬಹುಮತ ಹೊಂದಿದ ವ್ಯಕ್ತಿ ಮಾತ್ರವೇ ಇತರರನ್ನು ಮಂತ್ರಿಯನ್ನಾಗಿ ನೇಮಿಸಲು ಸಲಹೆ ನೀಡಬಹುದು ಎಂದಾಗುತ್ತದೆ.</p><p>ಬೊಮ್ಮಾಯಿ ಪ್ರಕರಣದಲ್ಲಿ ಈ ಬಗ್ಗೆ ಯಾವ ಉಲ್ಲೇಖವೂ ಇಲ್ಲ.</p><p>1998ರಲ್ಲಿ ಮೊಟ್ಟ ಮೊದಲ ಬಾರಿಗೆ ಈ ನಿಯಮವನ್ನು ಹುಟ್ಟುಹಾಕಿದ್ದು ರಾಷ್ಟ್ರಪತಿ ಕೆ.ಆರ್.ನಾರಾಯಣನ್. ಅಂದು ಬಿಜೆಪಿ ಸದನದ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದರೂ, ರಾಷ್ಟ್ರಪತಿಗಳು ವಾಜಪೇಯಿಯವರನ್ನು ಸರ್ಕಾರ ರಚಿಸಲು ಆಹ್ವಾನಿಸಲಿಲ್ಲ. ಚುನಾವಣಾ ಪೂರ್ವ ಮೈತ್ರಿಯ ಸಮಸ್ತ ಪಕ್ಷಗಳ ಒಟ್ಟು ಬೆಂಬಲ ಹೊಂದಿರುವ ಬಗ್ಗೆ ಲಿಖಿತ ದಾಖಲೆಯನ್ನು ಹಾಜರುಪಡಿಸುವಂತೆ ನಾರಾಯಣನ್ ನಿರ್ದೇಶಿಸಿದರು. ತಮ್ಮ ಬೆಂಬಲದ ಪಕ್ಷಗಳ ಬೆಂಬಲ ಪತ್ರಗಳನ್ನು ನೀಡಿದ ಮೇಲೆಯೇ ವಾಜಪೇಯಿಯವರಿಗೆ ಸರ್ಕಾರ ರಚನೆಗೆ ಅವಕಾಶ ನೀಡಲಾಯಿತು. ಹಾಗೂ ಜಯಲಲಲಿತಾ ತಮ್ಮ ಪಕ್ಷದ ಬೆಂಬಲ ಪಾತ್ರ ನೀಡಲು ಮೀನಮೇಷ ಎಣಿಸಿದ್ದರು, ಅವರ ಒಂದು ಮತದಿಂದಾಗಿ ವಾಜಪೇಯಿ ಸರ್ಕಾರ ಒಂದೇ ವರ್ಷದಲ್ಲಿ ಪತನವಾಗಿದ್ದು ಇತಿಹಾಸ.</p>.ಅನುಭವ ಮಂಟಪ | ಒಳ ಮೀಸಲಿನ ಒಡಲಾಳ: ನಿಧಾನದ್ರೋಹದ ರಾಜಕಾರಣ?.ವಿಶ್ಲೇಷಣೆ | ಭಾರತದ ಪ್ರಜಾಪ್ರಭುತ್ವದ ಸ್ಥಿರತೆಗೆ ಕಾರಣಗಳು– ಭಾಗ 1 .<p>ಇಂದಿನ ಸನ್ನಿವೇಶದಲ್ಲಿ ತಮಿಳುನಾಡು ರಾಜ್ಯಪಾಲರು ಸದನದ ಒಟ್ಟು ಬಹುಮತವನ್ನು ಸಾಬಿತುಪಡಿಸಲು ಪ್ರತಿಯೊಬ್ಬ ಸದಸ್ಯನ ಸಹಿಯನ್ನು ಅಥವಾ ಲಿಖಿತ ಬೆಂಬಲವನ್ನು ಕೇಳುತ್ತಿಲ್ಲ, ಮಂತ್ರಿಮಂಡಲ ಅಥವಾ ಸರ್ಕಾರ ರಚಿಸಲು ತನಗೆ ಅವಕಾಶ ನೀಡಬೇಕು ಎಂಬುದಾಗಿ ಕೇಳುತ್ತಿರುವ ವ್ಯಕ್ತಿಗೆ ಸದನದ ಒಟ್ಟಾರೆ ಬಹುಮತವಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಬೇಕಾದ್ದು ರಾಜ್ಯಪಾಲರ ಆದ್ಯ ಕರ್ತವ್ಯ. ಯಾವ ಶಾಸಕರು ಯಾರ ಪರವಾಗಿದ್ದಾರೆ ಎಂಬುದು ಸದನದ ಕಣಲ್ಲೇ ತೀರ್ಮಾನವಾಗಬೇಕು ಎಂಬುದು ನಿರ್ವಿವಾದ. ಆದರೆ, ಭಾವಿ ಮುಖ್ಯಮಂತ್ರಿ ತನಗೆ ಸದನದಲ್ಲಿ ಬಹುಮತಕ್ಕೆ ಬೇಕಿರುವಷ್ಟು ಸಂಖ್ಯೆಯ ಶಾಸಕರನ್ನು ಹೊಂದಿರುವ ಪಕ್ಷಗಳ ಬೆಂಬಲವಿದೆ ಎಂಬುದನ್ನು ಮೇಲ್ನೋಟಕ್ಕೆ ಸಾಬೀತುಗೊಳಿಸಲೇ ಬೇಕು. ಇದನ್ನು ನಿರೀಕ್ಷಿಸುತ್ತಿರುವ ರಾಜ್ಯಪಾಲರ ಕ್ರಮ ಸಂವಿಧಾನ ಚೌಕಟ್ಟಿನಲ್ಲೇ ಇದೆ.</p><p>ಅಂದು ನಾರಾಯಣನ್ ಹಾಕಿ ಕೊಟ್ಟ ಸಾಂವಿಧಾನಿಕ ಸಂಪ್ರದಾಯವನ್ನು ನಂತರದಲ್ಲಿ ಡಾ.ಅಬ್ದುಲ್ ಕಲಾಂ ಮುಂದುವರೆಸಿದರು.</p><p>2004ರ ಯುಪಿಎ ಸರ್ಕಾರ ರಚನೆಯ ಸಂದರ್ಭದಲ್ಲಿ, ಡಾ.ಮನಮೋಹನ್ ಸಿಂಗ್ ಅವರನ್ನು ಆಹ್ವಾನಿಸುವ ಮುನ್ನ ಆಂತರಿಕ ಮತ್ತು ಬಾಹ್ಯ ಬೆಂಬಲ ನೀಡುವ ಪ್ರತಿಯೊಂದು ಪಕ್ಷದ ಸಮರ್ಥನಾ ಪತ್ರಗಳನ್ನು ಸಲ್ಲಿಸಬೇಕೆಂದು ನಿರ್ದೇಶಿಸಿದರು. ಇದೇ ನಾರಾಯಣನ್ ಮಾದರಿಯನ್ನು ಇಂದಿನ ರಾಜ್ಯಪಾಲ ಆರ್ಲೇಕರ್ ಪಾಲಿಸುತ್ತಿದ್ದಾರೆ.</p><p>ಈ ಬಾರಿ ಮೋದಿಯವರ ಸರ್ಕಾರ ರಚನೆಯ ಸಂದರ್ಭದಲ್ಲಿ, ಬಿಜೆಪಿ ಒಂದಕ್ಕೇ ಬಹುಮತ ದೊರೆಯದ ಕಾರಣ ಒಟ್ಟು NDA ಪಕ್ಷಗಳ ಸಭೆ ನಡೆದು, ಈ ಸರ್ವಪಕ್ಷಗಳ ನಾಯಕರಾಗಿ ಆಯ್ಕೆಗೊಂಡ ನಂತರದಲ್ಲೇ, ಮೋದಿಯವರನ್ನು ಸರ್ಕಾರ ರಚನೆಗೆ ಆಹ್ವಾನಿಸಲಾಯಿತು.</p><p>ಒಂದು ವೇಳೆ ಸದನದ ಬಹುಮತವಿರದ ವ್ಯಕ್ತಿಯನ್ನು ಮುಖ್ಯಮಂತ್ರಿಯನ್ನಾಗಿ ನೇಮಿಸಿ, ಆ ವ್ಯಕ್ತಿ ಹೇಳಿದವರನ್ನು ಮಂತ್ರಿಗಳನ್ನಾಗಿ ಮಾಡಿ ಅಧಿಕಾರ ವಹಿಸಿಕೊಟ್ಟರೆ, ಇಡೀ ಆಡಳಿತ ಯಂತ್ರ ಮತ್ತು ಅಧಿಕಾರ ಚುಕ್ಕಾಣಿಯ ದುರ್ಬಳಕೆಗೆ ನಾಂದಿಯಾಗುತ್ತದೆ.</p><p>ಅಧಿಕಾರ ದೊರೆಯುವ ಮೊದಲು ನಡೆಯುವ ಕಸರತ್ತಿಗೂ, "ಸಿಂಹಾಸನ"ದ ಮೇಲೆ ಕುಳಿತ ಮೇಲೆ ನಡೆಸುವ 'ಅಧಿಕೃತ' ಕುದುರೆ ವ್ಯಾಪಾರಕ್ಕೂ ಅಜಗಜಾಂತರವಿದೆ.</p><p>ರಾಜ್ಯಪಾಲರು ಕೇಂದ್ರದ ನಿರ್ದೇಶನದ ಮೇರೆಗೆ ವಿಳಂಬ ನೀತಿ ಅನುಸರಿಸುತ್ತಿರುವ ಬಗ್ಗೆ ಅನುಮಾನವಿದೆ. ಈ ಸನ್ನಿವೇಶ ಬಿಜೆಪಿ ಅಥವಾ ಕೇಂದ್ರ ಸರ್ಕಾರಕ್ಕೆ ಲಾಭವಾಗುವ ರೀತಿಯಲ್ಲೇನೂ ಇಲ್ಲ. ಕೇಂದ್ರ ಸರ್ಕಾರಗಳು ರಾಜ್ಯಪಾಲರ ಮುಖಾಂತರ ಪರೋಕ್ಷ ಅಥವಾ ಕೆಲ ಬಾರಿ ನೇರ ಹಸ್ತಕ್ಷೇಪ ನಡೆಸಿದ ಸಾಕಷ್ಟು ನಿದರ್ಶನಗಳಿವೆ. ಹಾಗೆಯೇ, ಕೇಂದ್ರದಲ್ಲಿರುವ ಪಕ್ಷಕ್ಕೇ ರಾಜ್ಯಪಾಲರು ಒಲವು ತೋರಿಸಿದ ಸಾಕಷ್ಟು ಉದಾಹರಣೆಗಳೂ ಇವೆ. ಆದರೆ, ವರ್ತಮಾನದ ಸಂದರ್ಭದಲ್ಲಿ, ತಮಿಳು ನಾಡಿನ ರಾಜ್ಯಪಾಲರ ನಡೆಯಿಂದಾಗಿ ಕೇಂದ್ರಕ್ಕೆ ಯಾವ ರಾಜಕೀಯ ಲಾಭವೂ ಕಾಣಿಸುತ್ತಿಲ್ಲ.</p><p>ಕ್ಷೇತ್ರ ಮರುವಿಂಗಡಣೆ ಇತ್ಯಾದಿ ಪ್ರಸ್ತಾವನೆಗಳನ್ನು ಪಾಸುಮಾಡಿಸಿಕೊಳ್ಳಬೇಕಿರುವ ಕೇಂದ್ರಕ್ಕೆ ದಕ್ಷಿಣ ಭಾರತದ ಪಕ್ಷಗಳ ಬೆಂಬಲ ಅತ್ಯಗತ್ಯವಾಗಿ ಬೇಕಿದೆ. ಹೀಗಾಗಿ ಟಿವಿಕೆ ಸೇರಿದಂತೆ ಯಾವ ಪಕ್ಷದ ನಿಷ್ಠುರವನ್ನೂ ಕೇಂದ್ರ ಸರ್ಕಾರ ಕಟ್ಟಿಕೊಳ್ಳಲಿಕ್ಕಿಲ್ಲ. ಇನ್ನು ಬಿಜೆಪಿಯ ಸಂಖ್ಯಾಬಲವೂ ತಮಿಳುನಾಡಿನ ಸದನದಲ್ಲಿ ನಗಣ್ಯ.</p><p>ಕಾರಣವೇನೇ ಇರಲಿ ಸರ್ಕಾರ ರಚನೆ ವಿಳಂಬವಾದಷ್ಟೂ ವಿಜಯ್ ಹೆಚ್ಚು ಸಹಾನುಭೂತಿ ಗಳಿಸುತ್ತಾರೆ ಮತ್ತು ನಂತರದಲ್ಲಿ ಹೆಚ್ಚು ಜನಪ್ರಿಯತೆಯನ್ನೂ ಸಹ. ಒಂದು ವೇಳೆ ರಾಷ್ಟ್ರಪತಿ ಆಡಳಿತ ಹೇರಿದರೆ, ಹೆಚ್ಚಿನ ಬಹುಮತದಿಂದ ಆಯ್ಕೆಯೂ ಆಗಬಹುದು. ಇದರಿಂದ ಕೇಂದ್ರಕ್ಕೂ, ಬಿಜೆಪಿಗೂ ಏನೂ ಲಾಭವಿಲ್ಲ.</p><p>ಒಟ್ಟಾರೆ, ರಾಜ್ಯಪಾಲರನ್ನು ಕಟಕಟೆಯಲ್ಲಿ ನಿಲ್ಲಿಸುವ ಅಥವಾ ಬಹುಮತವಿಲ್ಲದಿದ್ದರೂ ಸರ್ಕಾರ ರಚನೆಗೆ ಅವಕಾಶ ನೀಡಬೇಕೆನ್ನುವ ನೀತಿಯನ್ನು ಪುನರ್ ವಿಮರ್ಶಿಸಬೇಕಾದ ಅಗತ್ಯತೆಯಿದೆ.</p><p><strong>- ಶ್ರೀಧರ ಪ್ರಭು ಹೈಕೋರ್ಟ್ ವಕೀಲರು ಬೆಂಗಳೂರು</strong></p>.ಸೂರ್ಯ–ನಮಸ್ಕಾರ ಅಂಕಣ: ಪ್ರಧಾನಿ ಎದುರಿನ ಸವಾಲುಗಳು!.ದಕ್ಷಿಣದ ಜನಸಂಖ್ಯೆ ಕುಸಿತ: ಸಣ್ಣದಲ್ಲ ಈ ಸವಾಲು.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ತಮಿಳುನಾಡಿನಲ್ಲಿ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿ ಸರ್ಕಾರ ರಚಿಸಲು ಹಕ್ಕು ಮಂಡಿಸಿರುವ 'ಟಿವಿಕೆ'ಗೆ ಅವಕಾಶ ನೀಡದ ರಾಜ್ಯಪಾಲರ ಕ್ರಮ ಸಾಕಷ್ಟು ಟೀಕೆಗೆ ಕಾರಣವಾಗಿದೆ. ಲೋಕಭವನವು ಜನಾದೇಶವನ್ನು ಧಿಕ್ಕರಿಸಿ, ಕೇಂದ್ರದ ಕೈಗೊಂಬೆಯಂತೆ ವರ್ತಿಸಿ, ಸಾಂವಿಧಾನಿಕ ನಿಯಮಗಳು ಮತ್ತು ಸುಪ್ರೀಂ ಕೋರ್ಟಿನ ಒಂಬತ್ತು ಜನ ಸಂವಿಧಾನ ಪೀಠದ ಬೊಮ್ಮಾಯಿ ತೀರ್ಮಾನವನ್ನು ಗಾಳಿಗೆ ತೂರಿದೆಯೆಂಬ ಆರೋಪವಿದೆ. ಬಿಜೆಪಿ ಸರ್ಕಾರದ ಮಾಜಿ ಅಟಾರ್ನಿ ಜನರಲ್ ಮುಕುಲ್ ರೋಹಟಗಿ ಸೇರಿದಂತೆ ಕಪಿಲ್ ಸಿಬಲ್, ಅಭಿಷೇಕ್ ಮನು ಸಿಂಘ್ವಿ ಸೇರಿದಂತೆ ಅನೇಕ ಹಿರಿಯ ವಕೀಲರು ಈ ಟೀಕೆಗೆ ದನಿ ಸೇರಿಸಿದ್ದಾರೆ.</p><p>ಕೇಂದ್ರ-ರಾಜ್ಯ ಸಂಬಂಧಗಳು ಮತ್ತು ರಾಜ್ಯಪಾಲರ ಅಧಿಕಾರ ವ್ಯಾಪ್ತಿಯ ವಿವಾದ ಎದ್ದಾಗಲೆಲ್ಲ ಬೊಮ್ಮಾಯಿ ಪ್ರಕರಣ ಚರ್ಚೆಗೆ ಬರುತ್ತದೆ. ಬೊಮ್ಮಾಯಿ ತೀರ್ಪಿನಲ್ಲಿ 356ನೇ ವಿಧಿ ಮತ್ತು ರಾಜ್ಯಪಾಲರ ಅಧಿಕಾರ ವ್ಯಾಪ್ತಿಯ ಬಗ್ಗೆ ಚರ್ಚೆಯಿದೆ ಎಂಬುದು ನಿಜವಾದರೂ, ಇಂದಿನ ವಿವಾದಕ್ಕೂ ಈ ತೀರ್ಮಾನಕ್ಕೂ ನೇರಾನೇರ ಸಂಬಂಧವಿಲ್ಲ. ಬೊಮ್ಮಾಯಿ ಪ್ರಕರಣದ ತೀರ್ಪು ಬಂದದ್ದು 1994ರಲ್ಲಾದರೂ, ಘಟನಾವಳಿಗಳೆಲ್ಲವೂ 1989ರಲ್ಲಿ ಜರುಗಿದ್ದವು.</p>.ಆಳ–ಅಗಲ | ರಾಜ್ಯ–ರಾಜ್ಯಪಾಲರ ಸಂಘರ್ಷ: ‘ಸುಪ್ರೀಂ’ ದಿಕ್ಸೂಚಿ.ವಿಶ್ಲೇಷಣೆ | ಭಾರತದ ಪ್ರಜಾಪ್ರಭುತ್ವದ ಸ್ಥಿರತೆಗೆ ಕಾರಣಗಳು– ಭಾಗ 1 . <p>ಜನತಾ ದಳದ ಮುಂಡರಗಿ ಶಾಸಕರಾಗಿದ್ದ ಕಲ್ಯಾಣ ರಾವ್ ಮೊಳಕೇರಿಯವರು ಅಂದಿನ ರಾಜ್ಯಪಾಲರಾದ ವೆಂಕಟಸುಬ್ಬಯ್ಯನವರಿಗೆ ಹದಿನೇಳು ಶಾಸಕರ ಸಹಿಯಿದ್ದ ಪತ್ರವೊಂದನ್ನು ಸಲ್ಲಿಸಿ ಬೊಮ್ಮಾಯಿ ಸರ್ಕಾರಕ್ಕೆ ಈ ಶಾಸಕರು ಬೆಂಬಲ ವಾಪಾಸ್ ಪಡೆದಿರುವುದಾಗಿ ತಿಳಿಸಿದರು. ನಂತರದಲ್ಲಿ ಅನೇಕ ಶಾಸಕರು ತಮ್ಮ ಸಹಿಯನ್ನು ಬಲವಂತವಾಗಿ ಪಡೆದದ್ದಾಗಿ ರಾಜ್ಯಪಾಲರಿಗೆ ತಿಳಿಸಿದರೂ, ಬೊಮ್ಮಾಯಿಯವರು ಸದನದಲ್ಲಿ ಬಹುಮತವನ್ನು ಸಾಬಿತುಪಡಿಸಲು ಸಿದ್ಧರಿರುವುದಾಗಿ ಹೇಳಿದರೂ ಕೇವಲ ಒಂದು ಪತ್ರದ ಆಧಾರದ ಮೇಲೆ ರಾಜ್ಯ ಸರ್ಕಾರ ಅಲ್ಪಮತಕ್ಕೆ ಇಳಿದಿದೆಯೆಂದು ರಾಜ್ಯಪಾಲರು ಕೇಂದ್ರಕ್ಕೆ ವರದಿ ಸಲ್ಲಿಸಿ, ನಂತರದಲ್ಲಿ ರಾಜ್ಯಪಾಲರ ಆಡಳಿತ ಹೇರಲಾಯಿತು.</p><p>ಈ ಪ್ರಕರಣ ಸುಪ್ರೀಂ ಕೋರ್ಟಿನ ಮೆಟ್ಟಿಲೇರಿ ಐತಿಹಾಸಿಕ ತೀರ್ಪೊಂದಕ್ಕೆ ಕಾರಣವಾಯಿತು.</p><p>ಬೊಮ್ಮಾಯಿ ತೀರ್ಮಾನದ ಒಟ್ಟು ಸಾರವೆಂದರೆ ಪ್ರಜಾಪ್ರಭುತ್ವದಲ್ಲಿ ಬಹುಮತ ಸಾಬೀತಿಗೆ ಸದನವೇ ಸರ್ವೋಚ್ಚ ವೇದಿಕೆ. ಸದನದಲ್ಲಿ ಸಾಬೀತುಪಡಿಸಿದ ಬಹುಮತದ ಆಧಾರದ ಮೇಲೆ ಸರ್ಕಾರದ ಭವಿಷ್ಯವನ್ನು ನಿರ್ಧರಿಸಬಹುದೇ ಹೊರತು ರಾಜ್ಯಪಾಲರ ವೈಯಕ್ತಿಕ ಅಭಿಪ್ರಾಯಗಳಿಂದಲ್ಲ ಎಂಬುದನ್ನು ನಂತರದ ಸುಪ್ರೀಂ ಕೋರ್ಟಿನ ಪ್ರಕರಣಗಳಲ್ಲೂ ಪುನರುಚ್ಛರಿಸಲಾಗಿದೆ.</p><p>ಆಡಳಿತಾರೂಢ ಸರ್ಕಾರ ತನ್ನ ಬಹುಮತವನ್ನು ಹೇಗೆ ಸಾಬೀತುಪಡಿಸುವಲ್ಲಿ ರಾಜ್ಯಪಾಲರ ಪಾತ್ರವೇನು ಎಂಬುದಕ್ಕೆ ಬೊಮ್ಮಾಯಿ ಪ್ರಕರಣ ಮಾರ್ಗದರ್ಶಿಯೇ ಹೊರತು, ಸರ್ಕಾರ ರಚನೆಯ ಮೊದಲು ರಾಜ್ಯಪಾಲರ ಅಧಿಕಾರ-ಕರ್ತವ್ಯಗಳೇನು ಎಂಬುದಕ್ಕಲ್ಲ.</p><p>ಸಂವಿಧಾನದ 164ನೇ ವಿಧಿಯ ಪ್ರಕಾರ ರಾಜ್ಯಪಾಲರು ಮೊದಲು ಮುಖ್ಯಮಂತ್ರಿಯನ್ನು ಮತ್ತು ಮುಖ್ಯಮಂತ್ರಿಯ ಸಲಹೆಯ ಮೇರೆಗೆ ಇತರ ಸಚಿವರನ್ನು ನೇಮಿಸಬೇಕು. ಇಡೀ ಮಂತ್ರಿಮಂಡಲವನ್ನು ನೇಮಿಸುವ ಅಧಿಕಾರವಿರುವುದು ರಾಜ್ಯಪಾಲರಿಗೆ ಮಾತ್ರವೇ ಆದರೂ, ಮುಖ್ಯಮಂತ್ರಿಯಾಗಲು ಯಾರನ್ನು ಆಹ್ವಾನಿಸಬೇಕು ಎಂಬುದರ ಬಗ್ಗೆ ಸ್ಪಷ್ಟ ನಿರ್ದೇಶನವಿಲ್ಲ.</p><p>ಆದರೂ, ಬೊಮ್ಮಾಯಿ ಪ್ರಕರಣವೂ ಸೇರಿದಂತೆ ಸುಪ್ರೀಂ ಕೋರ್ಟಿನ ಅನೇಕ ತೀರ್ಮಾನಗಳಲ್ಲಿ ಹೇಳುವುದೇನೆಂದರೆ, ಒಟ್ಟು ಸದನದ ಸದಸ್ಯರ ಬಹುಮತವನ್ನು ಹೊಂದಿರುವ ವ್ಯಕ್ತಿಯೇ ಮುಖ್ಯಮಂತ್ರಿ ಆಗಬಹುದು. ಸದನದಲ್ಲಿ ತನ್ನ ಬಹುಮತವನ್ನು ಸಾಬೀತುಗೊಳಿಸದೇ ಇದ್ದರೆ ಅಥವಾ ಸಾಬೀತುಗೊಳಿಸಲು ನಿರಾಕರಿಸಿದರೆ ರಾಜ್ಯಪಾಲರು ಮುಖ್ಯಮಂತ್ರಿಯನ್ನು ತೆಗೆದು ಹಾಕಬಹುದು ಮತ್ತು ಮಂತ್ರಿಮಂಡಲವನ್ನು ವಿಸರ್ಜಿಸಬಹುದು.</p><p>ಇದೇ ತರ್ಕಸರಣಿಯನ್ನು ವಿಸ್ತರಿಸಿದರೆ, ಸದನದ ಒಟ್ಟು ಸದಸ್ಯರ ಬಹುಮತ ಹೊಂದಿರಬಹುದಾದ ವ್ಯಕ್ತಿಯನ್ನೇ ರಾಜ್ಯಪಾಲರು ಮುಖ್ಯಮಂತ್ರಿಯನ್ನಾಗಿ ನೇಮಿಸಬೇಕು ಮತ್ತು ಸದನದ ಬಹುಮತ ಹೊಂದಿದ ವ್ಯಕ್ತಿ ಮಾತ್ರವೇ ಇತರರನ್ನು ಮಂತ್ರಿಯನ್ನಾಗಿ ನೇಮಿಸಲು ಸಲಹೆ ನೀಡಬಹುದು ಎಂದಾಗುತ್ತದೆ.</p><p>ಬೊಮ್ಮಾಯಿ ಪ್ರಕರಣದಲ್ಲಿ ಈ ಬಗ್ಗೆ ಯಾವ ಉಲ್ಲೇಖವೂ ಇಲ್ಲ.</p><p>1998ರಲ್ಲಿ ಮೊಟ್ಟ ಮೊದಲ ಬಾರಿಗೆ ಈ ನಿಯಮವನ್ನು ಹುಟ್ಟುಹಾಕಿದ್ದು ರಾಷ್ಟ್ರಪತಿ ಕೆ.ಆರ್.ನಾರಾಯಣನ್. ಅಂದು ಬಿಜೆಪಿ ಸದನದ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದರೂ, ರಾಷ್ಟ್ರಪತಿಗಳು ವಾಜಪೇಯಿಯವರನ್ನು ಸರ್ಕಾರ ರಚಿಸಲು ಆಹ್ವಾನಿಸಲಿಲ್ಲ. ಚುನಾವಣಾ ಪೂರ್ವ ಮೈತ್ರಿಯ ಸಮಸ್ತ ಪಕ್ಷಗಳ ಒಟ್ಟು ಬೆಂಬಲ ಹೊಂದಿರುವ ಬಗ್ಗೆ ಲಿಖಿತ ದಾಖಲೆಯನ್ನು ಹಾಜರುಪಡಿಸುವಂತೆ ನಾರಾಯಣನ್ ನಿರ್ದೇಶಿಸಿದರು. ತಮ್ಮ ಬೆಂಬಲದ ಪಕ್ಷಗಳ ಬೆಂಬಲ ಪತ್ರಗಳನ್ನು ನೀಡಿದ ಮೇಲೆಯೇ ವಾಜಪೇಯಿಯವರಿಗೆ ಸರ್ಕಾರ ರಚನೆಗೆ ಅವಕಾಶ ನೀಡಲಾಯಿತು. ಹಾಗೂ ಜಯಲಲಲಿತಾ ತಮ್ಮ ಪಕ್ಷದ ಬೆಂಬಲ ಪಾತ್ರ ನೀಡಲು ಮೀನಮೇಷ ಎಣಿಸಿದ್ದರು, ಅವರ ಒಂದು ಮತದಿಂದಾಗಿ ವಾಜಪೇಯಿ ಸರ್ಕಾರ ಒಂದೇ ವರ್ಷದಲ್ಲಿ ಪತನವಾಗಿದ್ದು ಇತಿಹಾಸ.</p>.ಅನುಭವ ಮಂಟಪ | ಒಳ ಮೀಸಲಿನ ಒಡಲಾಳ: ನಿಧಾನದ್ರೋಹದ ರಾಜಕಾರಣ?.ವಿಶ್ಲೇಷಣೆ | ಭಾರತದ ಪ್ರಜಾಪ್ರಭುತ್ವದ ಸ್ಥಿರತೆಗೆ ಕಾರಣಗಳು– ಭಾಗ 1 .<p>ಇಂದಿನ ಸನ್ನಿವೇಶದಲ್ಲಿ ತಮಿಳುನಾಡು ರಾಜ್ಯಪಾಲರು ಸದನದ ಒಟ್ಟು ಬಹುಮತವನ್ನು ಸಾಬಿತುಪಡಿಸಲು ಪ್ರತಿಯೊಬ್ಬ ಸದಸ್ಯನ ಸಹಿಯನ್ನು ಅಥವಾ ಲಿಖಿತ ಬೆಂಬಲವನ್ನು ಕೇಳುತ್ತಿಲ್ಲ, ಮಂತ್ರಿಮಂಡಲ ಅಥವಾ ಸರ್ಕಾರ ರಚಿಸಲು ತನಗೆ ಅವಕಾಶ ನೀಡಬೇಕು ಎಂಬುದಾಗಿ ಕೇಳುತ್ತಿರುವ ವ್ಯಕ್ತಿಗೆ ಸದನದ ಒಟ್ಟಾರೆ ಬಹುಮತವಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಬೇಕಾದ್ದು ರಾಜ್ಯಪಾಲರ ಆದ್ಯ ಕರ್ತವ್ಯ. ಯಾವ ಶಾಸಕರು ಯಾರ ಪರವಾಗಿದ್ದಾರೆ ಎಂಬುದು ಸದನದ ಕಣಲ್ಲೇ ತೀರ್ಮಾನವಾಗಬೇಕು ಎಂಬುದು ನಿರ್ವಿವಾದ. ಆದರೆ, ಭಾವಿ ಮುಖ್ಯಮಂತ್ರಿ ತನಗೆ ಸದನದಲ್ಲಿ ಬಹುಮತಕ್ಕೆ ಬೇಕಿರುವಷ್ಟು ಸಂಖ್ಯೆಯ ಶಾಸಕರನ್ನು ಹೊಂದಿರುವ ಪಕ್ಷಗಳ ಬೆಂಬಲವಿದೆ ಎಂಬುದನ್ನು ಮೇಲ್ನೋಟಕ್ಕೆ ಸಾಬೀತುಗೊಳಿಸಲೇ ಬೇಕು. ಇದನ್ನು ನಿರೀಕ್ಷಿಸುತ್ತಿರುವ ರಾಜ್ಯಪಾಲರ ಕ್ರಮ ಸಂವಿಧಾನ ಚೌಕಟ್ಟಿನಲ್ಲೇ ಇದೆ.</p><p>ಅಂದು ನಾರಾಯಣನ್ ಹಾಕಿ ಕೊಟ್ಟ ಸಾಂವಿಧಾನಿಕ ಸಂಪ್ರದಾಯವನ್ನು ನಂತರದಲ್ಲಿ ಡಾ.ಅಬ್ದುಲ್ ಕಲಾಂ ಮುಂದುವರೆಸಿದರು.</p><p>2004ರ ಯುಪಿಎ ಸರ್ಕಾರ ರಚನೆಯ ಸಂದರ್ಭದಲ್ಲಿ, ಡಾ.ಮನಮೋಹನ್ ಸಿಂಗ್ ಅವರನ್ನು ಆಹ್ವಾನಿಸುವ ಮುನ್ನ ಆಂತರಿಕ ಮತ್ತು ಬಾಹ್ಯ ಬೆಂಬಲ ನೀಡುವ ಪ್ರತಿಯೊಂದು ಪಕ್ಷದ ಸಮರ್ಥನಾ ಪತ್ರಗಳನ್ನು ಸಲ್ಲಿಸಬೇಕೆಂದು ನಿರ್ದೇಶಿಸಿದರು. ಇದೇ ನಾರಾಯಣನ್ ಮಾದರಿಯನ್ನು ಇಂದಿನ ರಾಜ್ಯಪಾಲ ಆರ್ಲೇಕರ್ ಪಾಲಿಸುತ್ತಿದ್ದಾರೆ.</p><p>ಈ ಬಾರಿ ಮೋದಿಯವರ ಸರ್ಕಾರ ರಚನೆಯ ಸಂದರ್ಭದಲ್ಲಿ, ಬಿಜೆಪಿ ಒಂದಕ್ಕೇ ಬಹುಮತ ದೊರೆಯದ ಕಾರಣ ಒಟ್ಟು NDA ಪಕ್ಷಗಳ ಸಭೆ ನಡೆದು, ಈ ಸರ್ವಪಕ್ಷಗಳ ನಾಯಕರಾಗಿ ಆಯ್ಕೆಗೊಂಡ ನಂತರದಲ್ಲೇ, ಮೋದಿಯವರನ್ನು ಸರ್ಕಾರ ರಚನೆಗೆ ಆಹ್ವಾನಿಸಲಾಯಿತು.</p><p>ಒಂದು ವೇಳೆ ಸದನದ ಬಹುಮತವಿರದ ವ್ಯಕ್ತಿಯನ್ನು ಮುಖ್ಯಮಂತ್ರಿಯನ್ನಾಗಿ ನೇಮಿಸಿ, ಆ ವ್ಯಕ್ತಿ ಹೇಳಿದವರನ್ನು ಮಂತ್ರಿಗಳನ್ನಾಗಿ ಮಾಡಿ ಅಧಿಕಾರ ವಹಿಸಿಕೊಟ್ಟರೆ, ಇಡೀ ಆಡಳಿತ ಯಂತ್ರ ಮತ್ತು ಅಧಿಕಾರ ಚುಕ್ಕಾಣಿಯ ದುರ್ಬಳಕೆಗೆ ನಾಂದಿಯಾಗುತ್ತದೆ.</p><p>ಅಧಿಕಾರ ದೊರೆಯುವ ಮೊದಲು ನಡೆಯುವ ಕಸರತ್ತಿಗೂ, "ಸಿಂಹಾಸನ"ದ ಮೇಲೆ ಕುಳಿತ ಮೇಲೆ ನಡೆಸುವ 'ಅಧಿಕೃತ' ಕುದುರೆ ವ್ಯಾಪಾರಕ್ಕೂ ಅಜಗಜಾಂತರವಿದೆ.</p><p>ರಾಜ್ಯಪಾಲರು ಕೇಂದ್ರದ ನಿರ್ದೇಶನದ ಮೇರೆಗೆ ವಿಳಂಬ ನೀತಿ ಅನುಸರಿಸುತ್ತಿರುವ ಬಗ್ಗೆ ಅನುಮಾನವಿದೆ. ಈ ಸನ್ನಿವೇಶ ಬಿಜೆಪಿ ಅಥವಾ ಕೇಂದ್ರ ಸರ್ಕಾರಕ್ಕೆ ಲಾಭವಾಗುವ ರೀತಿಯಲ್ಲೇನೂ ಇಲ್ಲ. ಕೇಂದ್ರ ಸರ್ಕಾರಗಳು ರಾಜ್ಯಪಾಲರ ಮುಖಾಂತರ ಪರೋಕ್ಷ ಅಥವಾ ಕೆಲ ಬಾರಿ ನೇರ ಹಸ್ತಕ್ಷೇಪ ನಡೆಸಿದ ಸಾಕಷ್ಟು ನಿದರ್ಶನಗಳಿವೆ. ಹಾಗೆಯೇ, ಕೇಂದ್ರದಲ್ಲಿರುವ ಪಕ್ಷಕ್ಕೇ ರಾಜ್ಯಪಾಲರು ಒಲವು ತೋರಿಸಿದ ಸಾಕಷ್ಟು ಉದಾಹರಣೆಗಳೂ ಇವೆ. ಆದರೆ, ವರ್ತಮಾನದ ಸಂದರ್ಭದಲ್ಲಿ, ತಮಿಳು ನಾಡಿನ ರಾಜ್ಯಪಾಲರ ನಡೆಯಿಂದಾಗಿ ಕೇಂದ್ರಕ್ಕೆ ಯಾವ ರಾಜಕೀಯ ಲಾಭವೂ ಕಾಣಿಸುತ್ತಿಲ್ಲ.</p><p>ಕ್ಷೇತ್ರ ಮರುವಿಂಗಡಣೆ ಇತ್ಯಾದಿ ಪ್ರಸ್ತಾವನೆಗಳನ್ನು ಪಾಸುಮಾಡಿಸಿಕೊಳ್ಳಬೇಕಿರುವ ಕೇಂದ್ರಕ್ಕೆ ದಕ್ಷಿಣ ಭಾರತದ ಪಕ್ಷಗಳ ಬೆಂಬಲ ಅತ್ಯಗತ್ಯವಾಗಿ ಬೇಕಿದೆ. ಹೀಗಾಗಿ ಟಿವಿಕೆ ಸೇರಿದಂತೆ ಯಾವ ಪಕ್ಷದ ನಿಷ್ಠುರವನ್ನೂ ಕೇಂದ್ರ ಸರ್ಕಾರ ಕಟ್ಟಿಕೊಳ್ಳಲಿಕ್ಕಿಲ್ಲ. ಇನ್ನು ಬಿಜೆಪಿಯ ಸಂಖ್ಯಾಬಲವೂ ತಮಿಳುನಾಡಿನ ಸದನದಲ್ಲಿ ನಗಣ್ಯ.</p><p>ಕಾರಣವೇನೇ ಇರಲಿ ಸರ್ಕಾರ ರಚನೆ ವಿಳಂಬವಾದಷ್ಟೂ ವಿಜಯ್ ಹೆಚ್ಚು ಸಹಾನುಭೂತಿ ಗಳಿಸುತ್ತಾರೆ ಮತ್ತು ನಂತರದಲ್ಲಿ ಹೆಚ್ಚು ಜನಪ್ರಿಯತೆಯನ್ನೂ ಸಹ. ಒಂದು ವೇಳೆ ರಾಷ್ಟ್ರಪತಿ ಆಡಳಿತ ಹೇರಿದರೆ, ಹೆಚ್ಚಿನ ಬಹುಮತದಿಂದ ಆಯ್ಕೆಯೂ ಆಗಬಹುದು. ಇದರಿಂದ ಕೇಂದ್ರಕ್ಕೂ, ಬಿಜೆಪಿಗೂ ಏನೂ ಲಾಭವಿಲ್ಲ.</p><p>ಒಟ್ಟಾರೆ, ರಾಜ್ಯಪಾಲರನ್ನು ಕಟಕಟೆಯಲ್ಲಿ ನಿಲ್ಲಿಸುವ ಅಥವಾ ಬಹುಮತವಿಲ್ಲದಿದ್ದರೂ ಸರ್ಕಾರ ರಚನೆಗೆ ಅವಕಾಶ ನೀಡಬೇಕೆನ್ನುವ ನೀತಿಯನ್ನು ಪುನರ್ ವಿಮರ್ಶಿಸಬೇಕಾದ ಅಗತ್ಯತೆಯಿದೆ.</p><p><strong>- ಶ್ರೀಧರ ಪ್ರಭು ಹೈಕೋರ್ಟ್ ವಕೀಲರು ಬೆಂಗಳೂರು</strong></p>.ಸೂರ್ಯ–ನಮಸ್ಕಾರ ಅಂಕಣ: ಪ್ರಧಾನಿ ಎದುರಿನ ಸವಾಲುಗಳು!.ದಕ್ಷಿಣದ ಜನಸಂಖ್ಯೆ ಕುಸಿತ: ಸಣ್ಣದಲ್ಲ ಈ ಸವಾಲು.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>