<p><strong>ಕಾಸರಗೋಡು:</strong> ಕೇರಳ ವಿಧಾನಸಭಾ ಚುನಾವಣೆಯಲ್ಲಿ ಕರ್ನಾಟಕದ ಗಡಿಗೆ ಹೊಂದಿಕೊಂಡಿರುವ ಮಂಜೇಶ್ವರ ಮತ್ತು ಕಾಸರಗೋಡು ಕ್ಷೇತ್ರಗಳು ಹೆಚ್ಚಿನ ಕುತೂಹಲ ಕೆರಳಿಸಿತ್ತು. </p><p>ಕೇರಳದ ಅತ್ಯಂತ ಉತ್ತರದಲ್ಲಿರುವ ಮಂಜೇಶ್ವರ ಮತ್ತು ಕಾಸರಗೋಡು ಕ್ಷೇತ್ರದಲ್ಲಿ ಯುಡಿಎಫ್ ಗಮನಾರ್ಹ ಸಾಧನೆ ಮಾಡಿದ್ದು, ಗೆಲ್ಲುವುದು ಬಹುತೇಕ ಖಚಿತವೆನಿಸಿದೆ. </p><p>ಇದರೊಂದಿಗೆ ಕನ್ನಡಿಗರು ನಿರ್ಣಾಯಕ ಮತಗಳನ್ನು ಹೊಂದಿರುವ ಈ ಎರಡು ಕ್ಷೇತ್ರಗಳಲ್ಲಿ ಬಿಜೆಪಿಗೆ ಹಿನ್ನಡೆಯಾಗಿದೆ. ಎರಡೂ ಕ್ಷೇತ್ರಗಳಲ್ಲಿ ಅಧಿಕೃತ ಘೋಷಣೆಯಷ್ಟೇ ಬಾಕಿಯಿದೆ. </p><p><strong>ಗೆಲುವಿನತ್ತ ಎ.ಕೆ.ಎಂ. ಅಶ್ರಫ್</strong> </p><p>ಮಂಜೇಶ್ವರದಲ್ಲಿ ತ್ರಿಕೋನ ಸ್ಪರ್ಧೆ ಏರ್ಪಟ್ಟಿತ್ತು. ಆದರೆ ತಮ್ಮ ನಿಕಟ ಸ್ಪರ್ಧಿ ಬಿಜೆಪಿಯ ಕೆ. ಸುರೇಂದ್ರನ್ ವಿರುದ್ಧ ಹಾಲಿ ಶಾಸಕ, ಯುಡಿಎಫ್ನ ಎ.ಕೆ.ಎಂ. ಅಶ್ರಫ್ ಮೇಲುಗೈ ಸಾಧಿಸಿದ್ದಾರೆ. </p><p>ಚುನಾವಣಾ ಆಯೋಗದ ಮಾಹಿತಿ ಪ್ರಕಾರ, 12 ಸುತ್ತಿನ ಮತ ಎಣಿಕೆ ವೇಳೆ ಅಶ್ರಫ್ 75 ಸಾವಿರಕ್ಕೂ ಅಧಿಕ ಮತ ಗಳಿಸಿದ್ದಾರೆ. ಅಲ್ಲದೆ 26 ಸಾವಿರಕ್ಕೂ ಅಧಿಕ ಮತಗಳ ಮುನ್ನಡೆ ಕಾಯ್ದುಕೊಂಡಿದ್ದಾರೆ. </p><p>ಅಲ್ಲಿ ಎಲ್ಡಿಎಫ್ನ ಕೆ.ಆರ್. ಜಯನಂದ ಮೂರನೇ ಸ್ಥಾನದಲ್ಲಿದ್ದಾರೆ. </p>.Kerala Results: ಮತದಾನೋತ್ತರ ಸಮೀಕ್ಷೆಗೂ ಮೀರಿದ ಯುಡಿಎಫ್ ಸಾಧನೆ.Kerala Election: ಎಲ್ಡಿಎಫ್ಗೆ ಬಲವಾದ ಪೆಟ್ಟು ಕೊಟ್ಟ ಬಂಡಾಯ ನಾಯಕರು. <p><strong>ಕಾಸರಗೋಡಿನಲ್ಲೂ ಜಯದತ್ತ ಯುಡಿಎಫ್...</strong></p><p>ಅತ್ತ ತನ್ನ ಭದ್ರಕೋಟೆ ಎನಿಸಿರುವ ಕಾಸರಗೋಡಿನಲ್ಲೂ ಯುಡಿಎಫ್ ಜಯದತ್ತ ಮುನ್ನುಗ್ಗುತ್ತಿದೆ. </p><p>ಬಿಜೆಪಿಯ ಅಶ್ವಿನಿ ಎಂ.ಎಲ್ ವಿರುದ್ಧ ಯುಡಿಎಫ್ನ ಕಲ್ಲಟ್ರ ಮಾಹೀನ್ ಹಾಜಿ 22 ಸಾವಿರಕ್ಕೂ ಅಧಿಕ ಮತಗಳ ಮುನ್ನಡೆ ಗಳಿಸಿದ್ದಾರೆ. </p><p>ಮಂಜೇಶ್ವರ ಹಾಗೂ ಕಾಸರಗೋಡಿನಲ್ಲಿ ಯುಡಿಎಫ್ನಿಂದ ಐಯುಎಂಎಲ್ ಅಭ್ಯರ್ಥಿಗಳು ಸ್ಪರ್ಧಿಸಿದ್ದರು. </p><p>ಕೇರಳದಲ್ಲಿ ಬಿಜೆಪಿ ಗೆಲ್ಲುವ ಅತಿ ಹೆಚ್ಚು ನಿರೀಕ್ಷೆ ಹೊಂದಿರುವ ಕ್ಷೇತ್ರಗಳಲ್ಲಿ ಮಂಜೇಶ್ವರ ಒಂದಾಗಿತ್ತು. 2016ರಲ್ಲಿ ಕೆ. ಸುರೇಂದ್ರನ್ ಕೇವಲ 89 ಮತಗಳಿಂದ ಸೋತಿದ್ದರು. 2021ರಲ್ಲಿ ಅಶ್ರಫ್ ವಿರುದ್ಧ ಸುರೇಂದ್ರನ್ 745 ಮತಗಳ ಅಂತರದಿಂದ ಪರಾಭವಗೊಂಡಿದ್ದರು. </p>.Kerala Election Results: ಸಿಎಂ ಪಿಣರಾಯಿ ವಿಜಯನ್ 'ಹ್ಯಾಟ್ರಿಕ್' ಕನಸು ಭಗ್ನ.Kerala Results: ಯುಡಿಎಫ್ ಅಭೂತಪೂರ್ವ ಸಾಧನೆ, ಯಾರಾಗಲಿದ್ದಾರೆ ಕೇರಳ ಸಿಎಂ?.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕಾಸರಗೋಡು:</strong> ಕೇರಳ ವಿಧಾನಸಭಾ ಚುನಾವಣೆಯಲ್ಲಿ ಕರ್ನಾಟಕದ ಗಡಿಗೆ ಹೊಂದಿಕೊಂಡಿರುವ ಮಂಜೇಶ್ವರ ಮತ್ತು ಕಾಸರಗೋಡು ಕ್ಷೇತ್ರಗಳು ಹೆಚ್ಚಿನ ಕುತೂಹಲ ಕೆರಳಿಸಿತ್ತು. </p><p>ಕೇರಳದ ಅತ್ಯಂತ ಉತ್ತರದಲ್ಲಿರುವ ಮಂಜೇಶ್ವರ ಮತ್ತು ಕಾಸರಗೋಡು ಕ್ಷೇತ್ರದಲ್ಲಿ ಯುಡಿಎಫ್ ಗಮನಾರ್ಹ ಸಾಧನೆ ಮಾಡಿದ್ದು, ಗೆಲ್ಲುವುದು ಬಹುತೇಕ ಖಚಿತವೆನಿಸಿದೆ. </p><p>ಇದರೊಂದಿಗೆ ಕನ್ನಡಿಗರು ನಿರ್ಣಾಯಕ ಮತಗಳನ್ನು ಹೊಂದಿರುವ ಈ ಎರಡು ಕ್ಷೇತ್ರಗಳಲ್ಲಿ ಬಿಜೆಪಿಗೆ ಹಿನ್ನಡೆಯಾಗಿದೆ. ಎರಡೂ ಕ್ಷೇತ್ರಗಳಲ್ಲಿ ಅಧಿಕೃತ ಘೋಷಣೆಯಷ್ಟೇ ಬಾಕಿಯಿದೆ. </p><p><strong>ಗೆಲುವಿನತ್ತ ಎ.ಕೆ.ಎಂ. ಅಶ್ರಫ್</strong> </p><p>ಮಂಜೇಶ್ವರದಲ್ಲಿ ತ್ರಿಕೋನ ಸ್ಪರ್ಧೆ ಏರ್ಪಟ್ಟಿತ್ತು. ಆದರೆ ತಮ್ಮ ನಿಕಟ ಸ್ಪರ್ಧಿ ಬಿಜೆಪಿಯ ಕೆ. ಸುರೇಂದ್ರನ್ ವಿರುದ್ಧ ಹಾಲಿ ಶಾಸಕ, ಯುಡಿಎಫ್ನ ಎ.ಕೆ.ಎಂ. ಅಶ್ರಫ್ ಮೇಲುಗೈ ಸಾಧಿಸಿದ್ದಾರೆ. </p><p>ಚುನಾವಣಾ ಆಯೋಗದ ಮಾಹಿತಿ ಪ್ರಕಾರ, 12 ಸುತ್ತಿನ ಮತ ಎಣಿಕೆ ವೇಳೆ ಅಶ್ರಫ್ 75 ಸಾವಿರಕ್ಕೂ ಅಧಿಕ ಮತ ಗಳಿಸಿದ್ದಾರೆ. ಅಲ್ಲದೆ 26 ಸಾವಿರಕ್ಕೂ ಅಧಿಕ ಮತಗಳ ಮುನ್ನಡೆ ಕಾಯ್ದುಕೊಂಡಿದ್ದಾರೆ. </p><p>ಅಲ್ಲಿ ಎಲ್ಡಿಎಫ್ನ ಕೆ.ಆರ್. ಜಯನಂದ ಮೂರನೇ ಸ್ಥಾನದಲ್ಲಿದ್ದಾರೆ. </p>.Kerala Results: ಮತದಾನೋತ್ತರ ಸಮೀಕ್ಷೆಗೂ ಮೀರಿದ ಯುಡಿಎಫ್ ಸಾಧನೆ.Kerala Election: ಎಲ್ಡಿಎಫ್ಗೆ ಬಲವಾದ ಪೆಟ್ಟು ಕೊಟ್ಟ ಬಂಡಾಯ ನಾಯಕರು. <p><strong>ಕಾಸರಗೋಡಿನಲ್ಲೂ ಜಯದತ್ತ ಯುಡಿಎಫ್...</strong></p><p>ಅತ್ತ ತನ್ನ ಭದ್ರಕೋಟೆ ಎನಿಸಿರುವ ಕಾಸರಗೋಡಿನಲ್ಲೂ ಯುಡಿಎಫ್ ಜಯದತ್ತ ಮುನ್ನುಗ್ಗುತ್ತಿದೆ. </p><p>ಬಿಜೆಪಿಯ ಅಶ್ವಿನಿ ಎಂ.ಎಲ್ ವಿರುದ್ಧ ಯುಡಿಎಫ್ನ ಕಲ್ಲಟ್ರ ಮಾಹೀನ್ ಹಾಜಿ 22 ಸಾವಿರಕ್ಕೂ ಅಧಿಕ ಮತಗಳ ಮುನ್ನಡೆ ಗಳಿಸಿದ್ದಾರೆ. </p><p>ಮಂಜೇಶ್ವರ ಹಾಗೂ ಕಾಸರಗೋಡಿನಲ್ಲಿ ಯುಡಿಎಫ್ನಿಂದ ಐಯುಎಂಎಲ್ ಅಭ್ಯರ್ಥಿಗಳು ಸ್ಪರ್ಧಿಸಿದ್ದರು. </p><p>ಕೇರಳದಲ್ಲಿ ಬಿಜೆಪಿ ಗೆಲ್ಲುವ ಅತಿ ಹೆಚ್ಚು ನಿರೀಕ್ಷೆ ಹೊಂದಿರುವ ಕ್ಷೇತ್ರಗಳಲ್ಲಿ ಮಂಜೇಶ್ವರ ಒಂದಾಗಿತ್ತು. 2016ರಲ್ಲಿ ಕೆ. ಸುರೇಂದ್ರನ್ ಕೇವಲ 89 ಮತಗಳಿಂದ ಸೋತಿದ್ದರು. 2021ರಲ್ಲಿ ಅಶ್ರಫ್ ವಿರುದ್ಧ ಸುರೇಂದ್ರನ್ 745 ಮತಗಳ ಅಂತರದಿಂದ ಪರಾಭವಗೊಂಡಿದ್ದರು. </p>.Kerala Election Results: ಸಿಎಂ ಪಿಣರಾಯಿ ವಿಜಯನ್ 'ಹ್ಯಾಟ್ರಿಕ್' ಕನಸು ಭಗ್ನ.Kerala Results: ಯುಡಿಎಫ್ ಅಭೂತಪೂರ್ವ ಸಾಧನೆ, ಯಾರಾಗಲಿದ್ದಾರೆ ಕೇರಳ ಸಿಎಂ?.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>