<p><strong>ಚೆನ್ನೈ:</strong> ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ಭರ್ಜರಿ ಜಯ ದಾಖಲಿಸಿರುವ ನಟ ವಿಜಯ್ ತಾವು ಗೆದ್ದಿರುವ ಎರಡು ಕ್ಷೇತ್ರಗಳ ಪೈಕಿ ತಿರುಚಿ (ಪೂರ್ವ) ಕ್ಷೇತ್ರಕ್ಕೆ ರಾಜೀನಾಮೆ ನೀಡುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ.</p><p>ದ್ರಾವಿಡ ಪಕ್ಷಗಳ 6 ದಶಕಗಳ ಹಿಡಿತಕ್ಕೆ ಬ್ರೇಕ್ ಹಾಕಿರುವ ನಟ ವಿಜಯ್ ರಾಜಧಾನಿ ವ್ಯಾಪ್ತಿಯಲ್ಲಿರುವ ಪೆರಂಬೂರು ಕ್ಷೇತ್ರವನ್ನು ಉಳಿಸಿಕೊಳ್ಳಲಿದ್ದಾರೆ ಎನ್ನಲಾಗಿದೆ. ರಾಜಧಾನಿಗೆ ಹೊಂದಿಕೊಂಡಿರುವುದರಿಂದ ಕ್ಷೇತ್ರದ ಕೆಲಸಗಳನ್ನು ಸುಲಭವಾಗಿ ನಿರ್ವಹಣೆ ಮಾಡಬಹದು ಎಂಬ ಮುಂದಾಲೋಚನೆಯಲ್ಲಿ ಪೆರಂಬೂರು ಕ್ಷೇತ್ರವನ್ನು ಉಳಿಸಿಕೊಳ್ಳಲಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.</p><p>2026ರ ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ವಿಜಯ್ ನೇತೃತ್ವದ ಟಿವಿಕೆ ಐತಿಹಾಸಿಕ ಜಯಭೇರಿ ಬಾರಿಸಿದೆ. ಈ ಮೂಲಕ ರಾಜ್ಯ ರಾಜಕಾರಣದಲ್ಲಿ ಡಿಎಂಕೆ ಮತ್ತು ಎಐಎಡಿಎಂಕೆ ಪಕ್ಷಗಳ ಸುದೀರ್ಘ ಪಾರುಪತ್ಯವನ್ನು ವಿಜಯ್ ಕೊನೆಗಾಣಿಸಿದ್ದಾರೆ.</p><p>ಮೊದಲ ಚುನಾವಣೆಯಲ್ಲೇ ಟಿವಿಕೆ 234 ಸ್ಥಾನಗಳ ಪೈಕಿ 108 ಸ್ಥಾನಗಳನ್ನು ಗೆದ್ದುಕೊಂಡಿದೆ. ಆಡಳಿತಾರೂಢ ಡಿಎಂಕೆ 59 ಮತ್ತು ಎಐಎಡಿಎಂಕೆ 47 ಸ್ಥಾನಗಳಿಗೆ ತೃಪ್ತಿಪಟ್ಟುಕೊಂಡಿವೆ. </p><p>1991ರಲ್ಲಿ ಜಯಲಲಿತಾ ಸಿನಿಮಾ ರಂಗದಿಂದ ಬಂದು ಮುಖ್ಯಮಂತ್ರಿಯಾದರು. ಅದೇ ಮಾದರಿಯಲ್ಲೇ ವಿಜಯ್ ಇದೀಗ ಮುಖ್ಯಮಂತ್ರಿಯಾಗುತ್ತಿದ್ದಾರೆ. ಬಹುಮತದ ಗಡಿ ದಾಟಲು ಟಿವಿಕೆ ಈಗ ಕಾಂಗ್ರೆಸ್, ಎಡಪಕ್ಷಗಳು ಅಥವಾ ಎಐಎಡಿಎಂಕೆ ಜೊತೆ ಮೈತ್ರಿ ಮಾತುಕತೆಗೆ ಮುಂದಾಗುವ ಸಾಧ್ಯತೆಯಿದೆ.</p>.ಟಿವಿಕೆಗೆ ಬಹುಮತ ಸಿಗದಿದ್ದರೆ ಮುಂದೇನು? ದಳಪತಿಯ ಮುಂದಿರುವ ಆಯ್ಕೆಗಳೇನು?.ತಮಿಳುನಾಡು ಚುನಾವಣೆ: ಲಾಟರಿ ಕಿಂಗ್ ಮಾರ್ಟಿನ್ ಕುಟುಂಬಸ್ಥರು ಮೂರು ಪಕ್ಷಗಳ ಶಾಸಕರು.<h2>ಎರಡೂ ಕ್ಷೇತ್ರಗಳಲ್ಲಿ ಭರ್ಜರಿ ಗೆಲುವು</h2><p>ವಿಜಯ್ ತಿರುಚಿ (ಪೂರ್ವ) ಮತ್ತು ಪೆರಂಬೂರು ಕ್ಷೇತ್ರಗಳಿಂದ ಸ್ಪರ್ಧಿಸಿ ಎರಡರಲ್ಲೂ ಭರ್ಜರಿ ಜಯ ಸಾಧಿಸಿದ್ದಾರೆ. ತಿರುಚಿಯಲ್ಲಿ ಡಿಎಂಕೆಯ ಇರುದಯರಾಜ್ ಅವರನ್ನು 27,416 ಮತಗಳ ಅಂತರದಿಂದ ಸೋಲಿಸಿದ್ದಾರೆ.</p><p>ಪೆರಂಬೂರು ಕ್ಷೇತ್ರದಲ್ಲಿ ಡಿಎಂಕೆಯ ಆರ್.ಡಿ. ಶೇಖರ್ ವಿರುದ್ಧ ವಿಜಯ್ 53,715 ಮತಗಳ ಬೃಹತ್ ಅಂತರದ ಜಯ ದಾಖಲಿಸಿದ್ದಾರೆ.</p><p>ಪೆರಂಬೂರು ಕ್ಷೇತ್ರವು ಚೆನ್ನೈನ ಉತ್ತರ ಭಾಗದಲ್ಲಿದ್ದು, ಇದು ಡಿಎಂಕೆಯ ಭದ್ರಕೋಟೆ ಎಂದು ಪರಿಗಣಿಸಲ್ಪಟ್ಟಿತ್ತು. ಇಲ್ಲಿ ಸ್ಪರ್ಧಿಸುವುದು ವಿಜಯ್ ಪಾಲಿಗೆ ಸವಾಲಾಗಿತ್ತು, ಆದರೆ ಅವರ ಸ್ಟಾರ್ ಇಮೇಜ್ ನಗರ ಪ್ರದೇಶದ ಮತದಾರರನ್ನು ಸೆಳೆಯುವಲ್ಲಿ ಯಶಸ್ವಿಯಾಗಿದೆ. ಮತ್ತೊಂದೆಡೆ, ತಿರುಚಿ ಕ್ಷೇತ್ರ ಚೆನ್ನೈನಿಂದ ಹೊರಗಿದ್ದು ವಿಜಯ್ ಅವರಿಗೆ ಕೇವಲ ನಗರ ಪ್ರದೇಶಗಳಲ್ಲಷ್ಟೇ ಅಲ್ಲ ರಾಜ್ಯದಾದ್ಯಂತ ವ್ಯಾಪಕ ಬೆಂಬಲವಿದೆ ಎಂಬುದನ್ನು ಸಾಬೀತುಪಡಿಸಿದೆ.</p><p>ಗಾಂಧಿ ಮಾರುಕಟ್ಟೆ ಮತ್ತು ರಾಕ್ಫೋರ್ಟ್ ಪ್ರದೇಶದ ಗಲ್ಲಿಗಳಲ್ಲಿ ವಿಜಯ್ ನಡೆಸಿದ ಅಬ್ಬರದ ಪ್ರಚಾರಕ್ಕೆ ಜನಸಾಗರವೇ ಹರಿದು ಬಂದಿತ್ತು. ಹಳೆಯ ದ್ರಾವಿಡ ರಾಜಕಾರಣದಿಂದ ಬೇಸತ್ತಿದ್ದ ತಮಿಳು ಮತದಾರರು, ವಿಜಯ್ ಅವರಲ್ಲಿ ಹೊಸ ಆಶಾವಾದವನ್ನು ಕಂಡಿದ್ದಾರೆ ಎಂಬುದು ಈ ಚುನಾವಣಾ ಫಲಿತಾಂಶದಿಂದ ಸ್ಪಷ್ಟವಾಗಿದೆ.</p>.ಕಿಂಗ್ ಮೇಕರ್ ಅಲ್ಲ 'ಕಿಂಗ್' ಆಗುವತ್ತ ದಳಪತಿ ವಿಜಯ್: TVK ಕೈ ಹಿಡಿದ ಅಂಶಗಳಿವು....ಇದು ವಿಜಯ್ಗಷ್ಟೇ ಅಲ್ಲ, ತಮಿಳುನಾಡು ರಾಜಕೀಯದ ಪಾಲಿಗೂ ಮೈಲುಗಲ್ಲು: ಏಕೆ ಗೊತ್ತಾ?.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಚೆನ್ನೈ:</strong> ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ಭರ್ಜರಿ ಜಯ ದಾಖಲಿಸಿರುವ ನಟ ವಿಜಯ್ ತಾವು ಗೆದ್ದಿರುವ ಎರಡು ಕ್ಷೇತ್ರಗಳ ಪೈಕಿ ತಿರುಚಿ (ಪೂರ್ವ) ಕ್ಷೇತ್ರಕ್ಕೆ ರಾಜೀನಾಮೆ ನೀಡುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ.</p><p>ದ್ರಾವಿಡ ಪಕ್ಷಗಳ 6 ದಶಕಗಳ ಹಿಡಿತಕ್ಕೆ ಬ್ರೇಕ್ ಹಾಕಿರುವ ನಟ ವಿಜಯ್ ರಾಜಧಾನಿ ವ್ಯಾಪ್ತಿಯಲ್ಲಿರುವ ಪೆರಂಬೂರು ಕ್ಷೇತ್ರವನ್ನು ಉಳಿಸಿಕೊಳ್ಳಲಿದ್ದಾರೆ ಎನ್ನಲಾಗಿದೆ. ರಾಜಧಾನಿಗೆ ಹೊಂದಿಕೊಂಡಿರುವುದರಿಂದ ಕ್ಷೇತ್ರದ ಕೆಲಸಗಳನ್ನು ಸುಲಭವಾಗಿ ನಿರ್ವಹಣೆ ಮಾಡಬಹದು ಎಂಬ ಮುಂದಾಲೋಚನೆಯಲ್ಲಿ ಪೆರಂಬೂರು ಕ್ಷೇತ್ರವನ್ನು ಉಳಿಸಿಕೊಳ್ಳಲಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.</p><p>2026ರ ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ವಿಜಯ್ ನೇತೃತ್ವದ ಟಿವಿಕೆ ಐತಿಹಾಸಿಕ ಜಯಭೇರಿ ಬಾರಿಸಿದೆ. ಈ ಮೂಲಕ ರಾಜ್ಯ ರಾಜಕಾರಣದಲ್ಲಿ ಡಿಎಂಕೆ ಮತ್ತು ಎಐಎಡಿಎಂಕೆ ಪಕ್ಷಗಳ ಸುದೀರ್ಘ ಪಾರುಪತ್ಯವನ್ನು ವಿಜಯ್ ಕೊನೆಗಾಣಿಸಿದ್ದಾರೆ.</p><p>ಮೊದಲ ಚುನಾವಣೆಯಲ್ಲೇ ಟಿವಿಕೆ 234 ಸ್ಥಾನಗಳ ಪೈಕಿ 108 ಸ್ಥಾನಗಳನ್ನು ಗೆದ್ದುಕೊಂಡಿದೆ. ಆಡಳಿತಾರೂಢ ಡಿಎಂಕೆ 59 ಮತ್ತು ಎಐಎಡಿಎಂಕೆ 47 ಸ್ಥಾನಗಳಿಗೆ ತೃಪ್ತಿಪಟ್ಟುಕೊಂಡಿವೆ. </p><p>1991ರಲ್ಲಿ ಜಯಲಲಿತಾ ಸಿನಿಮಾ ರಂಗದಿಂದ ಬಂದು ಮುಖ್ಯಮಂತ್ರಿಯಾದರು. ಅದೇ ಮಾದರಿಯಲ್ಲೇ ವಿಜಯ್ ಇದೀಗ ಮುಖ್ಯಮಂತ್ರಿಯಾಗುತ್ತಿದ್ದಾರೆ. ಬಹುಮತದ ಗಡಿ ದಾಟಲು ಟಿವಿಕೆ ಈಗ ಕಾಂಗ್ರೆಸ್, ಎಡಪಕ್ಷಗಳು ಅಥವಾ ಎಐಎಡಿಎಂಕೆ ಜೊತೆ ಮೈತ್ರಿ ಮಾತುಕತೆಗೆ ಮುಂದಾಗುವ ಸಾಧ್ಯತೆಯಿದೆ.</p>.ಟಿವಿಕೆಗೆ ಬಹುಮತ ಸಿಗದಿದ್ದರೆ ಮುಂದೇನು? ದಳಪತಿಯ ಮುಂದಿರುವ ಆಯ್ಕೆಗಳೇನು?.ತಮಿಳುನಾಡು ಚುನಾವಣೆ: ಲಾಟರಿ ಕಿಂಗ್ ಮಾರ್ಟಿನ್ ಕುಟುಂಬಸ್ಥರು ಮೂರು ಪಕ್ಷಗಳ ಶಾಸಕರು.<h2>ಎರಡೂ ಕ್ಷೇತ್ರಗಳಲ್ಲಿ ಭರ್ಜರಿ ಗೆಲುವು</h2><p>ವಿಜಯ್ ತಿರುಚಿ (ಪೂರ್ವ) ಮತ್ತು ಪೆರಂಬೂರು ಕ್ಷೇತ್ರಗಳಿಂದ ಸ್ಪರ್ಧಿಸಿ ಎರಡರಲ್ಲೂ ಭರ್ಜರಿ ಜಯ ಸಾಧಿಸಿದ್ದಾರೆ. ತಿರುಚಿಯಲ್ಲಿ ಡಿಎಂಕೆಯ ಇರುದಯರಾಜ್ ಅವರನ್ನು 27,416 ಮತಗಳ ಅಂತರದಿಂದ ಸೋಲಿಸಿದ್ದಾರೆ.</p><p>ಪೆರಂಬೂರು ಕ್ಷೇತ್ರದಲ್ಲಿ ಡಿಎಂಕೆಯ ಆರ್.ಡಿ. ಶೇಖರ್ ವಿರುದ್ಧ ವಿಜಯ್ 53,715 ಮತಗಳ ಬೃಹತ್ ಅಂತರದ ಜಯ ದಾಖಲಿಸಿದ್ದಾರೆ.</p><p>ಪೆರಂಬೂರು ಕ್ಷೇತ್ರವು ಚೆನ್ನೈನ ಉತ್ತರ ಭಾಗದಲ್ಲಿದ್ದು, ಇದು ಡಿಎಂಕೆಯ ಭದ್ರಕೋಟೆ ಎಂದು ಪರಿಗಣಿಸಲ್ಪಟ್ಟಿತ್ತು. ಇಲ್ಲಿ ಸ್ಪರ್ಧಿಸುವುದು ವಿಜಯ್ ಪಾಲಿಗೆ ಸವಾಲಾಗಿತ್ತು, ಆದರೆ ಅವರ ಸ್ಟಾರ್ ಇಮೇಜ್ ನಗರ ಪ್ರದೇಶದ ಮತದಾರರನ್ನು ಸೆಳೆಯುವಲ್ಲಿ ಯಶಸ್ವಿಯಾಗಿದೆ. ಮತ್ತೊಂದೆಡೆ, ತಿರುಚಿ ಕ್ಷೇತ್ರ ಚೆನ್ನೈನಿಂದ ಹೊರಗಿದ್ದು ವಿಜಯ್ ಅವರಿಗೆ ಕೇವಲ ನಗರ ಪ್ರದೇಶಗಳಲ್ಲಷ್ಟೇ ಅಲ್ಲ ರಾಜ್ಯದಾದ್ಯಂತ ವ್ಯಾಪಕ ಬೆಂಬಲವಿದೆ ಎಂಬುದನ್ನು ಸಾಬೀತುಪಡಿಸಿದೆ.</p><p>ಗಾಂಧಿ ಮಾರುಕಟ್ಟೆ ಮತ್ತು ರಾಕ್ಫೋರ್ಟ್ ಪ್ರದೇಶದ ಗಲ್ಲಿಗಳಲ್ಲಿ ವಿಜಯ್ ನಡೆಸಿದ ಅಬ್ಬರದ ಪ್ರಚಾರಕ್ಕೆ ಜನಸಾಗರವೇ ಹರಿದು ಬಂದಿತ್ತು. ಹಳೆಯ ದ್ರಾವಿಡ ರಾಜಕಾರಣದಿಂದ ಬೇಸತ್ತಿದ್ದ ತಮಿಳು ಮತದಾರರು, ವಿಜಯ್ ಅವರಲ್ಲಿ ಹೊಸ ಆಶಾವಾದವನ್ನು ಕಂಡಿದ್ದಾರೆ ಎಂಬುದು ಈ ಚುನಾವಣಾ ಫಲಿತಾಂಶದಿಂದ ಸ್ಪಷ್ಟವಾಗಿದೆ.</p>.ಕಿಂಗ್ ಮೇಕರ್ ಅಲ್ಲ 'ಕಿಂಗ್' ಆಗುವತ್ತ ದಳಪತಿ ವಿಜಯ್: TVK ಕೈ ಹಿಡಿದ ಅಂಶಗಳಿವು....ಇದು ವಿಜಯ್ಗಷ್ಟೇ ಅಲ್ಲ, ತಮಿಳುನಾಡು ರಾಜಕೀಯದ ಪಾಲಿಗೂ ಮೈಲುಗಲ್ಲು: ಏಕೆ ಗೊತ್ತಾ?.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>