ಬೆಳಗಾವಿ: ‘ಸೋಲು, ಗೆಲುವು ದೇವರ ಇಚ್ಛೆ. ಲಕ್ಷ್ಮಣ ಸವದಿ ಏಕೆ ಹತಾಶರಾಗಿ ಮಾತನಾಡುತ್ತಿದ್ದಾರೆ ಎಂಬುದು ನನಗೆ ಅರ್ಥವಾಗುತ್ತಿಲ್ಲ. ನಮ್ಮ ಪಕ್ಷದ ರಾಷ್ಟ್ರೀಯ ನಾಯಕರು ಹೆಮ್ಮರವಾಗಿದ್ದಾರೆ. ಅವರ ಮುಂದೆ ನಾನು ಮತ್ತು ಸವದಿ ಒಂದು ಗಿಡದ ತಪ್ಪಲಷ್ಟೇ. ಅಥಣಿ ಟಿಕೆಟ್ ಬಗ್ಗೆ ನಾಯಕರೇ ನಿರ್ಣಯ ತೆಗೆದುಕೊಳ್ಳಲಿದ್ದಾರೆ. ಏಕೆ ಇಷ್ಟು ಚಡಪಡಿಸುತ್ತಿದ್ದೀಯಾ? ಲಕ್ಷ್ಮಣ ಅಣ್ಣಾ, ಆರಾಮಾಗಿರು...’ ಎಂದು ಶಾಸಕ ರಮೇಶ ಜಾರಕಿಹೊಳಿ ತಿವಿದರು.