ಹೊಸಪೇಟೆ: ಹಗರಿಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದ ಅಂಚೆ ಮತ ಪತ್ರಗಳ ಸಂಖ್ಯೆಯಲ್ಲಿ ಏರುಪೇರಾಗಿದ್ದಕ್ಕೆ ಜೆಡಿಎಸ್ ಅಭ್ಯರ್ಥಿ ಕೆ. ನೇಮರಾಜ ನಾಯ್ಕ ಅವರು ಚುನಾವಣಾಧಿಕಾರಿ ಈರಣ್ಣ ಬಿರಾದಾರ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
ಒಟ್ಟು 3086 ಅಂಚೆ ಮತದಾನ ಆಗಿದೆ. ಆದರೆ, ಇಲ್ಲಿಗೆ ತಂದಿದ್ದು 2888. ಸಂಖ್ಯೆಯಲ್ಲಿ ಏಕೆ ವ್ಯತ್ಯಾಸವಾಗಿದೆ ಎಂದು ಪ್ರಶ್ನಿಸಿದರು. ಪರಿಶೀಲಿಸಿ ಕ್ರಮ ಜರುಗಿಸಲಾಗುವುದು ಎಂದು ಹೇಳಿದ ನಂತರ ಸಮಾಧಾನಗೊಂಡರು.