ಬೆಂಗಳೂರು: ಕೆನರಾ ಬ್ಯಾಂಕ್ ನಿವೃತ್ತ ವ್ಯವಸ್ಥಾಪಕ ಎಚ್.ಡಿ. ಪ್ರಸನ್ನಕುಮಾರ್ (64) ಅವರು ತಮ್ಮ ಜನ್ಮದಿನದ ಸಂಭ್ರಮದಲ್ಲಿಯೇ ಮತಗಟ್ಟೆಗೆ ವ್ಹೀಲ್ಚೇರ್ನಲ್ಲಿ ಬಂದು ಮತದಾನ ಮಾಡಿದರು.
ಬನಶಂಕರಿ 2ನೇ ಹಂತದ ನಿವಾಸಿ ಪ್ರಸನ್ನಕುಮಾರ್, ಪಾರ್ಶ್ವವಾಯು ಆಗಿದೆ. ನಡೆದಾಡಲು ಸಾಧ್ಯವಿಲ್ಲ. ಹೀಗಾಗಿ, ತಮ್ಮ ಪತ್ನಿ ಎಂ.ಸಿ. ರಜನಿ ಅವರ ಜೊತೆಗೆ ವ್ಹೀಲ್ಚೇರ್ನಲ್ಲಿ ಬಂದು ಪದ್ಮನಾಭನಗರ ವಿಧಾನಸಭಾ ಕ್ಷೇತ್ರದಲ್ಲಿ ಮತ ಚಲಾಯಿಸಿದರು.