‘ಸೀರೆ ಮೇಲೆ ಪ್ಲಾಸ್ಟಿಕ್ ಹೊದಿಕೆ ಇತ್ತು. ಅದರ ಮೇಲೆ ‘ರಾಜರಾಜೇಶ್ವರಿನಗರ ವಿಧಾನಸಭಾ ಕ್ಷೇತ್ರ, ಬಿಜೆಪಿಯೇ ಭರವಸೆ’ ಎಂಬುದಾಗಿ ಬರೆಯಲಾಗಿತ್ತು. ಸಚಿವ ಮುನಿರತ್ನ ಹಾಗೂ ಮುಖಂಡ ವಿ.ಸಿ. ಚಂದ್ರು ಭಾವಚಿತ್ರಗಳೂ ಹೊದಿಕೆ ಮೇಲಿದ್ದವು. ಐದು ಸೀರೆಗಳನ್ನು ಜಪ್ತಿ ಮಾಡಿದ್ದ ಅಧಿಕಾರಿಗಳು ಠಾಣೆಗೆ ಒಪ್ಪಿಸಿದ್ದಾರೆ. ರೇಷ್ಮೆಸೀರೆಗಳು ಎಂಬುದು ಮೇಲ್ನೋಟಕ್ಕೆ ಗೊತ್ತಾಗುತ್ತಿದೆ’ ಎಂದರು.