ರಾಮನಗರ: ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ವಿಧಾನಸಭೆ ಚುನಾವಣೆಯ ನಂತರ ವಿರಾಮದ ಮೂಡ್ನಲ್ಲಿದ್ದು, ಗುರುವಾರ ಸ್ವಕ್ಷೇತ್ರ ಕನಕಪುರದಲ್ಲಿ ಕಾಲ ಕಳೆಯುತ್ತಿದ್ದಾರೆ.
ಚುನಾವಣೆ ಸಂದರ್ಭ ಶಿವಕುಮಾರ್ ಗಡ್ಡ ಬಿಟ್ಟಿದ್ದು ಕುತೂಹಲಕ್ಕೆ ಕಾರಣವಾಗಿತ್ತು. ‘ ಬಿಜೆಪಿಯವರ ಕಾಟದಿಂದ ನಮ್ಮಣ್ಣ ಗಡ್ಡ ಬಿಟ್ಟಿದ್ದಾರೆ. ಮೇ 13ರಂದು ಅದಕ್ಕೆ ಉತ್ತರ ಸಿಗಲಿದೆ’ ಎಂದು ಸಂಸದ ಡಿ.ಕೆ. ಸುರೇಶ್ ಜನರ ಎದುರು ಹೇಳಿಕೊಂಡು ಕಣ್ಣೀರು ಹಾಕಿದ್ದರು. ಆದರೆ ಫಲಿತಾಂಶಕ್ಕೆ ಮುನ್ನವೇ ಅವರು ಗಡ್ಡಕ್ಕೆ ಕತ್ತರಿ ಹಾಕಿಸಿಕೊಂಡರು. ಬೆಳಿಗ್ಗೆ ಕನಕಪುರದ ನಿವಾಸದಲ್ಲಿ ಕಟಿಂಗ್–ಗಡ್ಡ ಟ್ರಿಮ್ ಮಾಡಿಸಿಕೊಂಡ ಡಿಕೆಶಿ, ಸಹೋದರ ಸುರೇಶ್ ಜೊತೆಗೂಡಿ ಕನಕಪುರದ ಪ್ರಸಿದ್ಧ ವಾಸು ಹೋಟೆಲ್ನಲ್ಲಿ ದೋಸೆ ಸವಿದರು.