‘ಚುನಾವಣೆಗಳು ಜಾತಿ ಆಧಾರದಲ್ಲಿ ನಡೆಯುತ್ತವೆ. ಸಪ್ತಗಿರಿ ಶಂಕರ್ನಾಯಕ್ ಅವರ ಲಂಬಾಣಿ ಸಮುದಾಯದವರು. ಇಲ್ಲಿ ಕೇವಲ 1200 ಮತಗಳಿವೆ. ನನ್ನ ಭೋವಿ ಸಮುದಾಯದ 18 ಸಾವಿರ ಮತಗಳಿವೆ. ಮತ್ತೊಬ್ಬ ಆಕಾಂಕ್ಷಿ ಬಿ.ಹೊಂಬಯ್ಯ ಅವರ ಬಲಗೈ ಸಮುದಾಯ ಸುಮಾರು 35ಸಾವಿರ ಮತಗಳಿವೆ. ವಕೀಲ ದೊಡ್ಡೇರಿ ವೆಂಕಟೇಶ್, ಎಂ.ಎನ್.ರಾಮು ಆಕಾಂಕ್ಷಿಗಳಾಗಿದ್ದರು. ನಮ್ಮಲ್ಲಿ ಯಾರಿಗೇ ಕೊಟ್ಟಿದ್ದರೂ ಬೇಸರವಾಗುತ್ತಿರಲಿಲ್ಲ. ಯಾವ ಮಾನದಂಡದ ಆಧಾರದ ಮೇಲೆ ಸಪ್ತಗಿರಿ ಅವರಿಗೆ ಟಿಕೆಟ್ ಕೊಟ್ಟಿದ್ದಾರೋ ಗೊತ್ತಿಲ್ಲ. ಹೀಗಾಗಿ, ನಾವು ಯಾರೂ ಅವರನ್ನು ಬೆಂಬಲಿಸುವುದಿಲ್ಲ’ ಎಂದರು.