ಮೈಸೂರು ಮತ್ತು ಊಟಿಯಲ್ಲಿ ಶೂಟಿಂಗ್ ಮಾಡಲು ಯೋಜಿಸಿದ್ದ ಅವರು ಕೋವಿಡ್ ಕಾರಣಕ್ಕೆ ಚಿತ್ರೀಕರಣದ ತಾಣ ಬದಲಿಸಿದ್ದು, ಬೆಂಗಳೂರಿನಲ್ಲೇ ಬಹುತೇಕ ಭಾಗವನ್ನು ಮತ್ತು ಊಟಿಯಲ್ಲಿ ಚಿತ್ರೀಕರಿಸಬೇಕಿದ್ದ ದೃಶ್ಯಗಳನ್ನು ಚಿಕ್ಕಮಗಳೂರಿನ ರಮ್ಯತಾಣಗಳಲ್ಲಿ ಚಿತ್ರೀಕರಿಸಲು ಯೋಜಿಸಿದ್ದಾರಂತೆ. ಮೊದಲ ಹಂತದಲ್ಲಿ 60 ದಿನಗಳ ಶೂಟಿಂಗ್ಗೆ ಯೋಜನೆ ರೂಪಿಸಿದ್ದು, ಗಣೇಶ್ ಜತೆಗೆ ಆರ್ಮುಗಂ ಪಾತ್ರ ಖ್ಯಾತಿಯ ರವಿಶಂಕರ್, ರಂಗಾಯಣ ರಘು, ಸಾಧು ಕೋಕಿಲ ಹಾಗೂ ಅಚ್ಯುತ್ಕುಮಾರ್ ಚಿತ್ರತಂಡವನ್ನು ಸದ್ಯದಲ್ಲೇ ಕೂಡಿಕೊಳ್ಳಲಿದ್ದಾರಂತೆ. ಇನ್ನು ನಾಯಕಿ ಮತ್ತು ಉಳಿದ ತಾರಾಬಳಗದ ಆಯ್ಕೆಯೂ ಇನ್ನಷ್ಟೇ ನಡೆಯಬೇಕಿದೆಯಂತೆ.