ಇಡುಕ್ಕಿ: 2021ರ ವಂಚನೆ ಪ್ರಕರಣದಲ್ಲಿ ಮಲಯಾಳ ನಟ ಬಾಬುರಾಜ್ ಅವರನ್ನು ಬಂಧಿಸಲಾಗಿದೆ ಎಂದು ಶನಿವಾರ ಪೊಲೀಸರು ತಿಳಿಸಿದ್ದಾರೆ.
‘ಕೇರಳ ಹೈಕೋರ್ಟ್ ಆದೇಶದಂತೆ ಬಾಬು ಅವರು ಪೊಲೀಸರ ಎದುರು ಹಾಜರಾಗಿದ್ದರು. ಅವರನ್ನು ಬಂಧಿಸಿ, ಸ್ಥಳೀಯ ನ್ಯಾಯಾಲಯದ ಎದುರು ಹಾಜರುಪಡಿಸಲಾಯಿತು. ನ್ಯಾಯಾಲಯವು ಅವರಿಗೆ ಜಾಮೀನು ಮಂಜೂರು ಮಾಡಿದೆ’ ಎಂದು ಅವರು ತಿಳಿಸಿದ್ದಾರೆ.
ಬಾಬೂರಾಜ್ ಅವರು ಮುನ್ನಾರ್ ಸಮೀಪದಲ್ಲಿರುವ ತಮ್ಮ ರೆಸಾರ್ಟ್ ಕಂದಾಯ ಬಾಕಿ ವಿಚಾರಣೆ ಎದುರಿಸುತ್ತಿದೆ ಎಂಬ ವಿಷಯ ಮುಚ್ಚಿಟ್ಟು, ಅದನ್ನು ಭೋಗ್ಯಕ್ಕೆ ನೀಡಿದ್ದರು ಎಂದು ಮೂಲಗಳು ತಿಳಿಸಿವೆ.