ಅಂದಹಾಗೆ ಅಪ್ಪ ಮತ್ತು ಪುತ್ರನ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳುತ್ತಿರುವುದು ಕೊರಟಾಲ ಶಿವ. ನಟ ಜೂನಿಯರ್ ಎನ್ಟಿಆರ್ ನಾಯಕರಾಗಿ ನಟಿಸಿದ್ದ ‘ಜನತಾ ಗ್ಯಾರೇಜ್’ ಹಾಗೂ ನಟ ಮಹೇಶ್ ಬಾಬು ನಟನೆಯ ‘ಭರತ ಆನೆ ನೇನು’ ಚಿತ್ರವನ್ನು ಶಿವ ಅವರೇ ನಿರ್ದೇಶನ ಮಾಡಿದ್ದರು. ‘ಜನತಾ ಗ್ಯಾರೇಜ್’ ಚಿತ್ರ ಸೂಪರ್ ಹಿಟ್ ಆಗಿತ್ತು.ಸೋಲಿನ ಸುಳಿಯಲ್ಲಿ ಸಿಲುಕಿದ್ದ ಜೂನಿಯರ್ ಎನ್ಟಿಆರ್ಗೆ ಹೊಸ ಹುರುಪು ನೀಡಿತ್ತು.