ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿನಯ ಕುಲಕರ್ಣಿ ಫಾರ್ಮ್‌ನಲ್ಲಿ ಎತ್ತಿನ ಬಂಡಿ ಓಡಿಸಿ ಸಂಭ್ರಮಿಸಿದ ನಟ ದರ್ಶನ್‌

Last Updated 14 ಆಗಸ್ಟ್ 2020, 9:14 IST
ಅಕ್ಷರ ಗಾತ್ರ

ಧಾರವಾಡ: ಕಾಂಗ್ರೆಸ್ ಮುಖಂಡ ವಿನಯ ಕುಲಕರ್ಣಿ ಅವರ ವಿನಯ ಫಾರ್ಮ್‌ಗೆ ಬಂದಿರುವ ನಟ ದರ್ಶನ, ಎತ್ತಿನ ಬಂಡಿ ಓಡಿಸಿ ಸಂಭ್ರಮಿಸಿದರು.

ವಿನಯ ಕುಲಕರ್ಣಿ ಅವರ ಡೇರಿಯಲ್ಲಿರುವ ಅವರ ನೆಚ್ಚಿನ ಎತ್ತುಗಳನ್ನು ಬಂಡಿಕಟ್ಟಿ ವಿನಯ ಫಾರ್ಮ್ ಸುತ್ತ ಓಡಾಡಿಸಿದರು. ಫಾರ್ಮ್‌ನಲ್ಲಿರುವ ಅತಿಥಿಗೃಹದಲ್ಲಿ ವಿಶ್ರಾಂತಿ ಪಡೆದಿರು ದರ್ಶನ್, ಆಕಳು ಹಾಗೂ ಎಮ್ಮೆಗಾಗಿ ಇರುವ ಪ್ರತ್ಯೇಕ ಡೇರಿಯಲ್ಲಿ ಓಡಾಡಿ ಅಳವಡಿಸಿರುವ ತಂತ್ರಜ್ಞಾನ ಕುರಿತು ವಿನಯ ಕುಲಕರ್ಣಿ ಅವರಿಂದ ಮಾಹಿತಿ ಪಡೆದರು.

ಮಧ್ಯಾಹ್ನ ಉತ್ತರ ಕರ್ನಾಟಕ ಜೋಳದ ರೊಟ್ಟಿ, ಕಾಳು ಪಲ್ಯ, ಗಟ್ಟಿ ಮೊಸರು ಊಟ ಸವಿದರು.ವಿನಯ ಫಾರ್ಮ್‌ಗೆ ಸೇರಿದವರನ್ನು ಹೊರತುಪಡಿಸಿ ಉಳಿದವರಿಗೆ ಪ್ರವೇಶ ನಿರ್ಬಂಧಿಸಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT