ಮೈಸೂರು: ನಟ ದರ್ಶನ್ ಅವರು ಬುಧವಾರ ಇಲ್ಲಿನ ಕೊಲಂಬಿಯಾ ಏಷ್ಯಾ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದಿದ್ದಾರೆ.
ಮೂರು ದಿನಗಳಿಂದ ಮೈಸೂರಿನಲ್ಲಿ ಸಿನಿಮಾ ಶೂಟಿಂಗ್ನಲ್ಲಿ ನಿರತ ರಾಗಿದ್ದ ಅವರಿಗೆ ಹೊಟ್ಟೆನೋವು ಕಾಣಿಸಿಕೊಂಡಿತ್ತು. ಬೆಳಿಗ್ಗೆ ಆಸ್ಪತ್ರೆಗೆ ದಾಖಲಾಗಿದ್ದ ಅವರಿಗೆ ವೈದ್ಯ ಅನೂಪ್ ಆಳ್ವ ಚಿಕಿತ್ಸೆ ನೀಡಿದ್ದಾರೆ.
‘ದರ್ಶನ್ ಅವರನ್ನು, ಎಂಡೋ ಸ್ಕೋಪಿ ಸೇರಿದಂತೆ ವಿವಿಧ ಪರೀಕ್ಷೆಗೆ ಒಳಪಡಿಸಲಾಗಿದೆ. ಅವರ ಆರೋಗ್ಯ ಸ್ಥಿರವಾಗಿದೆ. ಸಂಜೆಯ ವೇಳೆಗೆ ಡಿಸ್ ಚಾರ್ಚ್ ಮಾಡಲಾಯಿತು’ ಎಂದು ವೈದ್ಯರು ತಿಳಿಸಿದ್ದಾರೆ.