<blockquote>ನಟ ಗಣೇಶ್ ನಾಯಕನಾಗಿ ನಟಿಸಿದ್ದ ‘ಚೆಲ್ಲಾಟ’ ಬಿಡುಗಡೆಯಾಗಿ ಇಪತ್ತು ವರ್ಷಗಳಾಗಿವೆ. ಇದರೊಂದಿಗೆ ಅವರ ನಾಯಕನ ಪಯಣಕ್ಕೂ ಎರಡು ದಶಕಗಳು ತುಂಬಿವೆ. ಈ ಸಿನಿಪಯಣದ ಏರಿಳಿತಗಳ ಬಗ್ಗೆ ಅವರು ಮಾತನಾಡಿದ್ದಾರೆ.</blockquote>.<p>‘ಬಂದಿದ್ದು ಒಂದು ಹಳ್ಳಿಯಿಂದ. ಕಾಲೇಜು ದಿನಗಳಿಂದ ರಂಗಭೂಮಿಯಲ್ಲಿದ್ದುಕೊಂಡು ನಟನಾಗಬೇಕು ಎಂದು ಕನಸು ಕಂಡವನು. ಕೊನೆಗೆ ಎಲ್ಲಿಗೇ ಹೋಗಬೇಕೆಂದು ಗೊತ್ತಾಗದೆ ಸಹಾಯಕ ನಿರ್ದೇಶಕನಾದೆ. ಇವತ್ತು ಇಲ್ಲಿದೀವಿ ಅಂದ್ರೆ ದೊಡ್ಡವರ, ಅಭಿಮಾನಿಗಳ ಆಶೀರ್ವಾದವಷ್ಟೆ. ಸಾಮಾಜಿಕ ಜಾಲತಾಣಗಳಲ್ಲಿ ಜನಕ್ಕೆ ಅತ್ಯಂತ ಪ್ರೀತಿಪಾತ್ರನಾದ ನಟನೆಂದು ಶುಭ ಕೋರುತ್ತಿದ್ದಾರೆ. ಇದಕ್ಕಿಂತ ಹೆಚ್ಚಿನದ್ದೇನು ಬಯಸಿಲ್ಲ’ ಎಂದು ಮಾತು ಪ್ರಾರಂಭಿಸಿದರು ಗಣೇಶ್. </p>.<p>‘ಕಾಮಿಡಿ ಟೈಂ’ ಎಂಬ ಹಾಸ್ಯಮಯ ಕಾರ್ಯಕ್ರಮದಿಂದ ಇವರು ಜನಪ್ರಿಯರಾದರು. ಸಣ್ಣಪುಟ್ಟ ಪಾತ್ರಗಳನ್ನು ಮಾಡುತ್ತ, ಪ್ರತಿಭೆ, ಶ್ರಮದಿಂದಲೇ ನಾಯಕನಾದರು. ‘ನಾಯಕನಾದ ಮೊದಲೇ ಸಿನಿಮಾವೇ ಹೌಸ್ಫುಲ್ ಬೋರ್ಡ್ ಬಿತ್ತು. ನನಗೆ ಈಗಲೂ ನೆನಪಿದೆ. ಆವತ್ತು ಗಾಂಧಿನಗರದ ಸಿನಿಮಾ ವಿತರಕರ ಕಚೇರಿಯಲ್ಲಿ ಕುಳಿತಿದ್ದೆ. ಮೇನಕಾ ಚಿತ್ರಮಂದಿರದಲ್ಲಿ ಹೌಸ್ಫುಲ್ ಬೋರ್ಡ್ ಬಿತ್ತು ಎಂದು ಗೊತ್ತಾಗುತ್ತಿದ್ದಂತೆ ನಾನು ಮತ್ತು ಪ್ರೀತಂ ಗುಬ್ಬಿ ಓಡೋಡಿ ಬಂದು ಹೌಸ್ಫುಲ್ ಬೋರ್ಡ್ ಅನ್ನು ಕಣ್ತುಂಬಿಕೊಂಡೆವು. ಹೊಸ ಹುಡುಗನೊಬ್ಬನನ್ನು ಈ ಮಟ್ಟಕ್ಕೆ ಒಪ್ಪಿಕೊಂಡರಲ್ಲ ಎಂದು ಖುಷಿಯಾಗಿತ್ತು’ ಎಂದು ಹಳೆಯ ನೆನಪುಗಳನ್ನು ಮೆಲುಕು ಹಾಕಿದರು.</p>.<p>‘ನಾನು ಅತ್ತಾಗ ಪ್ರೇಕ್ಷಕರು ನನ್ನ ಜೊತೆ ಅತ್ತರು, ನಕ್ಕಾಗ ನಕ್ಕರು. ನನ್ನನ್ನು ಮನೆಮಗನ ರೀತಿ ನೋಡಿಕೊಂಡರು. ಹೀಗಾಗಿ 20 ವರ್ಷಗಳು ಪವಾಡವೆಂಬ ರೀತಿಯಲ್ಲಿ ಕಳೆದು ಹೋಯ್ತು. ಪ್ರತಿ ಸಿನಿಮಾ ಸಿಕ್ಕಾಗಲೂ ಖುಷಿಯಿಂದ ಮಾಡುತ್ತೇನೆ. ಫಲಿತಾಂಶ ನಂತರದ್ದು. ಕೆಲಸ ಮೊದಲು. ಆ ಕೆಲಸವನ್ನು ಸರಿಯಾಗಿ ಮಾಡಿದರೆ ಮಾತ್ರ ಫಲಿತಾಂಶ. ಅದನ್ನು ಮೀರಿ ಉತ್ತಮ ಫಲಿತಾಂಶ ಬರದಿದ್ದರೆ ಮುಂದೆ ಮತ್ತೆ ಯತ್ನ ಮಾಡಬೇಕು. ಒಂದು ಸಿನಿಮಾ ಗೆದ್ದಿದೆ ಎಂದು ಸುಮ್ಮನೆ ಕೂರಲು ಸಾಧ್ಯವಿಲ್ಲ ಅಥವಾ ಸೋತಿದೆ ಎಂದು ಚಿಂತೆ ಮಾಡಿದರೂ ಪ್ರಯೋಜನವಿಲ್ಲ. ಎರಡೂ ಸನ್ನಿವೇಶಗಳಲ್ಲಿ ಮುಂದಕ್ಕೆ ಹೋಗಲೇಬೇಕು’ ಎನ್ನುತ್ತಾರೆ ಅವರು.</p>.<p>‘ನಟನಾಗಿ ಬೇರೆ ಬೇರೆ ರೀತಿಯ ಪಾತ್ರಗಳನ್ನು ಮಾಡಬೇಕು. ಕಮರ್ಷಿಯಲ್ ಆಗಿಯೂ ಗೆಲ್ಲಬೇಕು, ನಟನಾಗಿಯೂ ಗೆಲ್ಲಬೇಕು. ಸವಾಲಿನ ಪಾತ್ರಗಳನ್ನು ಮಾಡುವಾಗ ಮಾನಸಿಕವಾಗಿ ಎಷ್ಟು ಖುಷಿಯಾಗಿ, ನೆಮ್ಮದಿಯಾಗಿ ಇರುತ್ತೇವೆ ಎಂಬುದು ಬಹಳ ಮುಖ್ಯ’ ಎಂಬುದು ಅವರ ಅಭಿಮತ.</p>.<p>ಅವರ ‘ಮುಂಗಾರು ಮಳೆ’ ಚಿತ್ರ ಕನ್ನಡ ಚಿತ್ರರಂಗದಲ್ಲಿ ಹೊಸ ದಾಖಲೆ ಬರೆಯಿತು. ಅಲ್ಲಿಂದ ಈತನಕ 47 ಸಿನಿಮಾಗಳಾಗಿವೆ. ‘ಗಾಳಿಪಟ’, ‘ಚೆಲುವಿನ ಚಿತ್ತಾರ’ದಿಂದ ಹಿಡಿದು ಇತ್ತೀಚೆಗೆ ತೆರೆಕಂಡ ‘ಕೃಷ್ಣಂ ಪ್ರಣಯ ಸಖಿ’ವರೆಗೆ ಒಂದಷ್ಟು ಹಿಟ್ ಸಿನಿಮಾಗಳಿವೆ. ಕೆಲವಷ್ಟು ನಿರೀಕ್ಷಿತ ಮಟ್ಟ ತಲುಪಿಲ್ಲ. ‘ಬೃಂದವಿಹಾರಿ’ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ನಡೆಯುತ್ತಿದೆ. ಅದು ಮುಗಿದ ತಕ್ಷಣ ತೆರೆಗೆ ಬರಲಿದೆ. ‘ಸಿನ್ಸಿಯರ್ಲಿ ರಾಮ್’ ಚಿತ್ರೀಕರಣ ನಡೆಯುತ್ತಿದೆ. ‘ಪಿನಾಕ’ ಕ್ಲೈಮ್ಯಾಕ್ಸ್ ಹಂತದಲ್ಲಿದೆ. ಸದ್ಯ ಅದೇ ಚಿತ್ರದ ಚಿತ್ರೀಕರಣದಲ್ಲಿರುವೆ. ‘ಡಿಜಾಂಗೋ ಕೃಷ್ಣಮೂರ್ತಿ’ ಮೊದಲ ಹಂತದ ಚಿತ್ರೀಕರಣ ಮುಗಿದಿದೆ. ‘ತಮ್ಮ ಸುಖಾಗಮನಬಯಸುವ’ ಚಿತ್ರೀಕರಣ ಪ್ರಾರಂಭವಾಗಬೇಕು. ಕೈತುಂಬ ಸಿನಿಮಾಗಳಿವೆ ಎಂದು ತಮ್ಮ ಮುಂದಿನ ಯೋಜನೆಗಳನ್ನು ಅವರು ತೆರೆದಿಟ್ಟರು.</p>.<p>ತುಳುವಿನಲ್ಲಿ ಒಂದು ಸಿನಿಮಾ ನಿರ್ಮಾಣವನ್ನೂ ಮಾಡಿದ್ದಾರೆ. ಅದು ಇನ್ನೆರಡು ತಿಂಗಳಲ್ಲಿ ತೆರೆಗೆ ಬರಲಿದೆ. ‘ಕನ್ನಡದಲ್ಲಿಯೂ ಒಳ್ಳೆ ಸಿನಿಮಾ ನಿರ್ಮಾಣ ಯೋಜನೆಯಿದೆ. ಆದರೆ ಉತ್ತಮ ಸ್ಕ್ರಿಪ್ಟ್ ಸಿಗಬೇಕು. ಜತೆಗೆ ಈಗ ನಟನಾಗಿ ಒಪ್ಪಿಕೊಂಡ ಸಿನಿಮಾಗಳು ಮುಗಿಯಬೇಕು. ಅದರ ನಂತರವೇ ಬೇರೆ ಯೋಚನೆ’ ಎಂದು ಅವರು ಮಾತಿಗೆ ವಿರಾಮವಿಟ್ಟರು. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<blockquote>ನಟ ಗಣೇಶ್ ನಾಯಕನಾಗಿ ನಟಿಸಿದ್ದ ‘ಚೆಲ್ಲಾಟ’ ಬಿಡುಗಡೆಯಾಗಿ ಇಪತ್ತು ವರ್ಷಗಳಾಗಿವೆ. ಇದರೊಂದಿಗೆ ಅವರ ನಾಯಕನ ಪಯಣಕ್ಕೂ ಎರಡು ದಶಕಗಳು ತುಂಬಿವೆ. ಈ ಸಿನಿಪಯಣದ ಏರಿಳಿತಗಳ ಬಗ್ಗೆ ಅವರು ಮಾತನಾಡಿದ್ದಾರೆ.</blockquote>.<p>‘ಬಂದಿದ್ದು ಒಂದು ಹಳ್ಳಿಯಿಂದ. ಕಾಲೇಜು ದಿನಗಳಿಂದ ರಂಗಭೂಮಿಯಲ್ಲಿದ್ದುಕೊಂಡು ನಟನಾಗಬೇಕು ಎಂದು ಕನಸು ಕಂಡವನು. ಕೊನೆಗೆ ಎಲ್ಲಿಗೇ ಹೋಗಬೇಕೆಂದು ಗೊತ್ತಾಗದೆ ಸಹಾಯಕ ನಿರ್ದೇಶಕನಾದೆ. ಇವತ್ತು ಇಲ್ಲಿದೀವಿ ಅಂದ್ರೆ ದೊಡ್ಡವರ, ಅಭಿಮಾನಿಗಳ ಆಶೀರ್ವಾದವಷ್ಟೆ. ಸಾಮಾಜಿಕ ಜಾಲತಾಣಗಳಲ್ಲಿ ಜನಕ್ಕೆ ಅತ್ಯಂತ ಪ್ರೀತಿಪಾತ್ರನಾದ ನಟನೆಂದು ಶುಭ ಕೋರುತ್ತಿದ್ದಾರೆ. ಇದಕ್ಕಿಂತ ಹೆಚ್ಚಿನದ್ದೇನು ಬಯಸಿಲ್ಲ’ ಎಂದು ಮಾತು ಪ್ರಾರಂಭಿಸಿದರು ಗಣೇಶ್. </p>.<p>‘ಕಾಮಿಡಿ ಟೈಂ’ ಎಂಬ ಹಾಸ್ಯಮಯ ಕಾರ್ಯಕ್ರಮದಿಂದ ಇವರು ಜನಪ್ರಿಯರಾದರು. ಸಣ್ಣಪುಟ್ಟ ಪಾತ್ರಗಳನ್ನು ಮಾಡುತ್ತ, ಪ್ರತಿಭೆ, ಶ್ರಮದಿಂದಲೇ ನಾಯಕನಾದರು. ‘ನಾಯಕನಾದ ಮೊದಲೇ ಸಿನಿಮಾವೇ ಹೌಸ್ಫುಲ್ ಬೋರ್ಡ್ ಬಿತ್ತು. ನನಗೆ ಈಗಲೂ ನೆನಪಿದೆ. ಆವತ್ತು ಗಾಂಧಿನಗರದ ಸಿನಿಮಾ ವಿತರಕರ ಕಚೇರಿಯಲ್ಲಿ ಕುಳಿತಿದ್ದೆ. ಮೇನಕಾ ಚಿತ್ರಮಂದಿರದಲ್ಲಿ ಹೌಸ್ಫುಲ್ ಬೋರ್ಡ್ ಬಿತ್ತು ಎಂದು ಗೊತ್ತಾಗುತ್ತಿದ್ದಂತೆ ನಾನು ಮತ್ತು ಪ್ರೀತಂ ಗುಬ್ಬಿ ಓಡೋಡಿ ಬಂದು ಹೌಸ್ಫುಲ್ ಬೋರ್ಡ್ ಅನ್ನು ಕಣ್ತುಂಬಿಕೊಂಡೆವು. ಹೊಸ ಹುಡುಗನೊಬ್ಬನನ್ನು ಈ ಮಟ್ಟಕ್ಕೆ ಒಪ್ಪಿಕೊಂಡರಲ್ಲ ಎಂದು ಖುಷಿಯಾಗಿತ್ತು’ ಎಂದು ಹಳೆಯ ನೆನಪುಗಳನ್ನು ಮೆಲುಕು ಹಾಕಿದರು.</p>.<p>‘ನಾನು ಅತ್ತಾಗ ಪ್ರೇಕ್ಷಕರು ನನ್ನ ಜೊತೆ ಅತ್ತರು, ನಕ್ಕಾಗ ನಕ್ಕರು. ನನ್ನನ್ನು ಮನೆಮಗನ ರೀತಿ ನೋಡಿಕೊಂಡರು. ಹೀಗಾಗಿ 20 ವರ್ಷಗಳು ಪವಾಡವೆಂಬ ರೀತಿಯಲ್ಲಿ ಕಳೆದು ಹೋಯ್ತು. ಪ್ರತಿ ಸಿನಿಮಾ ಸಿಕ್ಕಾಗಲೂ ಖುಷಿಯಿಂದ ಮಾಡುತ್ತೇನೆ. ಫಲಿತಾಂಶ ನಂತರದ್ದು. ಕೆಲಸ ಮೊದಲು. ಆ ಕೆಲಸವನ್ನು ಸರಿಯಾಗಿ ಮಾಡಿದರೆ ಮಾತ್ರ ಫಲಿತಾಂಶ. ಅದನ್ನು ಮೀರಿ ಉತ್ತಮ ಫಲಿತಾಂಶ ಬರದಿದ್ದರೆ ಮುಂದೆ ಮತ್ತೆ ಯತ್ನ ಮಾಡಬೇಕು. ಒಂದು ಸಿನಿಮಾ ಗೆದ್ದಿದೆ ಎಂದು ಸುಮ್ಮನೆ ಕೂರಲು ಸಾಧ್ಯವಿಲ್ಲ ಅಥವಾ ಸೋತಿದೆ ಎಂದು ಚಿಂತೆ ಮಾಡಿದರೂ ಪ್ರಯೋಜನವಿಲ್ಲ. ಎರಡೂ ಸನ್ನಿವೇಶಗಳಲ್ಲಿ ಮುಂದಕ್ಕೆ ಹೋಗಲೇಬೇಕು’ ಎನ್ನುತ್ತಾರೆ ಅವರು.</p>.<p>‘ನಟನಾಗಿ ಬೇರೆ ಬೇರೆ ರೀತಿಯ ಪಾತ್ರಗಳನ್ನು ಮಾಡಬೇಕು. ಕಮರ್ಷಿಯಲ್ ಆಗಿಯೂ ಗೆಲ್ಲಬೇಕು, ನಟನಾಗಿಯೂ ಗೆಲ್ಲಬೇಕು. ಸವಾಲಿನ ಪಾತ್ರಗಳನ್ನು ಮಾಡುವಾಗ ಮಾನಸಿಕವಾಗಿ ಎಷ್ಟು ಖುಷಿಯಾಗಿ, ನೆಮ್ಮದಿಯಾಗಿ ಇರುತ್ತೇವೆ ಎಂಬುದು ಬಹಳ ಮುಖ್ಯ’ ಎಂಬುದು ಅವರ ಅಭಿಮತ.</p>.<p>ಅವರ ‘ಮುಂಗಾರು ಮಳೆ’ ಚಿತ್ರ ಕನ್ನಡ ಚಿತ್ರರಂಗದಲ್ಲಿ ಹೊಸ ದಾಖಲೆ ಬರೆಯಿತು. ಅಲ್ಲಿಂದ ಈತನಕ 47 ಸಿನಿಮಾಗಳಾಗಿವೆ. ‘ಗಾಳಿಪಟ’, ‘ಚೆಲುವಿನ ಚಿತ್ತಾರ’ದಿಂದ ಹಿಡಿದು ಇತ್ತೀಚೆಗೆ ತೆರೆಕಂಡ ‘ಕೃಷ್ಣಂ ಪ್ರಣಯ ಸಖಿ’ವರೆಗೆ ಒಂದಷ್ಟು ಹಿಟ್ ಸಿನಿಮಾಗಳಿವೆ. ಕೆಲವಷ್ಟು ನಿರೀಕ್ಷಿತ ಮಟ್ಟ ತಲುಪಿಲ್ಲ. ‘ಬೃಂದವಿಹಾರಿ’ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ನಡೆಯುತ್ತಿದೆ. ಅದು ಮುಗಿದ ತಕ್ಷಣ ತೆರೆಗೆ ಬರಲಿದೆ. ‘ಸಿನ್ಸಿಯರ್ಲಿ ರಾಮ್’ ಚಿತ್ರೀಕರಣ ನಡೆಯುತ್ತಿದೆ. ‘ಪಿನಾಕ’ ಕ್ಲೈಮ್ಯಾಕ್ಸ್ ಹಂತದಲ್ಲಿದೆ. ಸದ್ಯ ಅದೇ ಚಿತ್ರದ ಚಿತ್ರೀಕರಣದಲ್ಲಿರುವೆ. ‘ಡಿಜಾಂಗೋ ಕೃಷ್ಣಮೂರ್ತಿ’ ಮೊದಲ ಹಂತದ ಚಿತ್ರೀಕರಣ ಮುಗಿದಿದೆ. ‘ತಮ್ಮ ಸುಖಾಗಮನಬಯಸುವ’ ಚಿತ್ರೀಕರಣ ಪ್ರಾರಂಭವಾಗಬೇಕು. ಕೈತುಂಬ ಸಿನಿಮಾಗಳಿವೆ ಎಂದು ತಮ್ಮ ಮುಂದಿನ ಯೋಜನೆಗಳನ್ನು ಅವರು ತೆರೆದಿಟ್ಟರು.</p>.<p>ತುಳುವಿನಲ್ಲಿ ಒಂದು ಸಿನಿಮಾ ನಿರ್ಮಾಣವನ್ನೂ ಮಾಡಿದ್ದಾರೆ. ಅದು ಇನ್ನೆರಡು ತಿಂಗಳಲ್ಲಿ ತೆರೆಗೆ ಬರಲಿದೆ. ‘ಕನ್ನಡದಲ್ಲಿಯೂ ಒಳ್ಳೆ ಸಿನಿಮಾ ನಿರ್ಮಾಣ ಯೋಜನೆಯಿದೆ. ಆದರೆ ಉತ್ತಮ ಸ್ಕ್ರಿಪ್ಟ್ ಸಿಗಬೇಕು. ಜತೆಗೆ ಈಗ ನಟನಾಗಿ ಒಪ್ಪಿಕೊಂಡ ಸಿನಿಮಾಗಳು ಮುಗಿಯಬೇಕು. ಅದರ ನಂತರವೇ ಬೇರೆ ಯೋಚನೆ’ ಎಂದು ಅವರು ಮಾತಿಗೆ ವಿರಾಮವಿಟ್ಟರು. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>