<p>ಲಾಸ್ ವೇಗಾಸ್ನಲ್ಲಿ ನಡೆದ ‘ಸಿನಿಮಾಕಾನ್2026‘ರ ಕಾರ್ಯಕ್ರಮದಲ್ಲಿ ರಾಕಿಂಗ್ ಸ್ಟಾರ್ ಯಶ್ ಹಾಗೂ ‘ರಾಮಾಯಣ’ ಚಿತ್ರದ ನಿರ್ಮಾಪಕರು ಭಾಗಿಯಾಗಿ ಈ ಚಿತ್ರದ ಪ್ರಚಾರ ಆರಂಭಿಸಿದ್ದಾರೆ. </p><p>ಯಶ್, ನಮಿತ್ ಮಲ್ಹೋತ್ರಾ ಅವರನ್ನು 'ಸಿನಿಮಾಕಾನ್' ಕಾರ್ಯಕ್ರಮಕ್ಕೆ ಆಹ್ವಾನಿಸಲಾಗಿತ್ತು. ಆ ವೇಳೆ ಅವರು ಅಂತರರಾಷ್ಟ್ರೀಯ ಮಾಧ್ಯಮಗಳೊಂದಿಗೆ ಮುಂಬರುವ ‘ಅಸ್ತ್ರವರ್ಸ್’, ‘ರಾಮಾಯಣ’, ‘ಟಾಕ್ಸಿಕ್’ ಚಿತ್ರಗಳ ಕುರಿತು ಸಂವಾದ ನಡೆಸಿದ್ದಾರೆ.</p>.ಮತ್ತೆ ಬದಲಾದ ರಜನಿ, ಕಮಲ್ ಹಾಸನ್ ನಟನೆಯ ತಲೈವರ್ 173’ ಚಿತ್ರದ ನಿರ್ದೇಶಕ.<p>ಈ ಕಾರ್ಯಕ್ರಮದಲ್ಲಿ ಮಾತನಾಡಿರುವ ನಮಿತ್ ಮಲ್ಹೋತ್<strong>, ‘</strong>ಭಾರತೀಯರಿಗೆ ರಾಮಾಯಣ ಚಿರಪರಿಚಿತವಾದರೂ, ಅಂತರರಾಷ್ಟ್ರೀಯ ಪ್ರೇಕ್ಷಕರಿಗೆ ಇದರ ಬಗ್ಗೆ ಅಷ್ಟಾಗಿ ತಿಳಿದಿಲ್ಲ. ಇಂತಹ ವಿಸ್ಮಯಕಾರಿ ವಿಷಯಗಳನ್ನು ಇಲ್ಲಿನ ಪ್ರೇಕ್ಷಕರ ಮುಂದೆ ಇಡಲು ಸಜ್ಜಾಗಿದ್ದೇವೆ’ ಎಂದಿದ್ದಾರೆ. </p><p>‘ಪ್ರತಿಯೊಬ್ಬ ಭಾರತೀಯನ ಹೃದಯವೂ ಈ ಕಥೆಯ ಜೊತೆ ಮಿಡಿಯುತ್ತದೆ. ನಾವು, ನಮ್ಮ ಪೋಷಕರು, ಅಜ್ಜ-ಅಜ್ಜಿಯರು ಹೀಗೆ ಎಲ್ಲರೂ ರಾಮಾಯಣವನ್ನು ಕೇಳುತ್ತಾ ಬೆಳೆದಿದ್ದೇವೆ. ಪ್ರತಿಯೊಬ್ಬ ಭಾರತೀಯನಿಗೂ ಆಪ್ತವಾದ ಈ ಕಥೆಯನ್ನು ದೊಡ್ಡ ಪರದೆಯ ಮೇಲೆ ತೋರಿಸುವುದು ತುಂಬಾ ವಿಶೇಷವಾದ ವಿಷಯವಾಗಿದೆ’ ಎಂದು ಹೇಳಿಕೊಂಡಿದ್ದಾರೆ.</p><p>ಇಡೀ ಜಗತ್ತಿಗೆ ಈ ಕಥೆ ಬಹಳ ಅಗತ್ಯ. ಸಿನಿಮಾ ಪ್ರೇಕ್ಷಕರು ಯಾವಾಗಲೂ ಹೊಸದನ್ನು ಮತ್ತು ವಿಭಿನ್ನವಾದುದನ್ನು ನೋಡಲು ಬಯಸುತ್ತಾರೆ ಎಂದು ಹೇಳಿಕೊಂಡಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಲಾಸ್ ವೇಗಾಸ್ನಲ್ಲಿ ನಡೆದ ‘ಸಿನಿಮಾಕಾನ್2026‘ರ ಕಾರ್ಯಕ್ರಮದಲ್ಲಿ ರಾಕಿಂಗ್ ಸ್ಟಾರ್ ಯಶ್ ಹಾಗೂ ‘ರಾಮಾಯಣ’ ಚಿತ್ರದ ನಿರ್ಮಾಪಕರು ಭಾಗಿಯಾಗಿ ಈ ಚಿತ್ರದ ಪ್ರಚಾರ ಆರಂಭಿಸಿದ್ದಾರೆ. </p><p>ಯಶ್, ನಮಿತ್ ಮಲ್ಹೋತ್ರಾ ಅವರನ್ನು 'ಸಿನಿಮಾಕಾನ್' ಕಾರ್ಯಕ್ರಮಕ್ಕೆ ಆಹ್ವಾನಿಸಲಾಗಿತ್ತು. ಆ ವೇಳೆ ಅವರು ಅಂತರರಾಷ್ಟ್ರೀಯ ಮಾಧ್ಯಮಗಳೊಂದಿಗೆ ಮುಂಬರುವ ‘ಅಸ್ತ್ರವರ್ಸ್’, ‘ರಾಮಾಯಣ’, ‘ಟಾಕ್ಸಿಕ್’ ಚಿತ್ರಗಳ ಕುರಿತು ಸಂವಾದ ನಡೆಸಿದ್ದಾರೆ.</p>.ಮತ್ತೆ ಬದಲಾದ ರಜನಿ, ಕಮಲ್ ಹಾಸನ್ ನಟನೆಯ ತಲೈವರ್ 173’ ಚಿತ್ರದ ನಿರ್ದೇಶಕ.<p>ಈ ಕಾರ್ಯಕ್ರಮದಲ್ಲಿ ಮಾತನಾಡಿರುವ ನಮಿತ್ ಮಲ್ಹೋತ್<strong>, ‘</strong>ಭಾರತೀಯರಿಗೆ ರಾಮಾಯಣ ಚಿರಪರಿಚಿತವಾದರೂ, ಅಂತರರಾಷ್ಟ್ರೀಯ ಪ್ರೇಕ್ಷಕರಿಗೆ ಇದರ ಬಗ್ಗೆ ಅಷ್ಟಾಗಿ ತಿಳಿದಿಲ್ಲ. ಇಂತಹ ವಿಸ್ಮಯಕಾರಿ ವಿಷಯಗಳನ್ನು ಇಲ್ಲಿನ ಪ್ರೇಕ್ಷಕರ ಮುಂದೆ ಇಡಲು ಸಜ್ಜಾಗಿದ್ದೇವೆ’ ಎಂದಿದ್ದಾರೆ. </p><p>‘ಪ್ರತಿಯೊಬ್ಬ ಭಾರತೀಯನ ಹೃದಯವೂ ಈ ಕಥೆಯ ಜೊತೆ ಮಿಡಿಯುತ್ತದೆ. ನಾವು, ನಮ್ಮ ಪೋಷಕರು, ಅಜ್ಜ-ಅಜ್ಜಿಯರು ಹೀಗೆ ಎಲ್ಲರೂ ರಾಮಾಯಣವನ್ನು ಕೇಳುತ್ತಾ ಬೆಳೆದಿದ್ದೇವೆ. ಪ್ರತಿಯೊಬ್ಬ ಭಾರತೀಯನಿಗೂ ಆಪ್ತವಾದ ಈ ಕಥೆಯನ್ನು ದೊಡ್ಡ ಪರದೆಯ ಮೇಲೆ ತೋರಿಸುವುದು ತುಂಬಾ ವಿಶೇಷವಾದ ವಿಷಯವಾಗಿದೆ’ ಎಂದು ಹೇಳಿಕೊಂಡಿದ್ದಾರೆ.</p><p>ಇಡೀ ಜಗತ್ತಿಗೆ ಈ ಕಥೆ ಬಹಳ ಅಗತ್ಯ. ಸಿನಿಮಾ ಪ್ರೇಕ್ಷಕರು ಯಾವಾಗಲೂ ಹೊಸದನ್ನು ಮತ್ತು ವಿಭಿನ್ನವಾದುದನ್ನು ನೋಡಲು ಬಯಸುತ್ತಾರೆ ಎಂದು ಹೇಳಿಕೊಂಡಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>