ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ನಾನು ಸೇಫ್‌ ಆಗಿರುವೆ’ ಎಂದ ನಟಿ ಜಯಶ್ರೀ

Last Updated 22 ಜುಲೈ 2020, 7:11 IST
ಅಕ್ಷರ ಗಾತ್ರ
ADVERTISEMENT
""
""

‘ಉಪ್ಪು ಹುಳಿ ಖಾರ’ ಮತ್ತು ‘ಕನ್ನಡ್‌ ಗೊತ್ತಿಲ್ಲ’ ಸೇರಿದಂತೆ ಹಲವು ಸಿನಿಮಾಗಳಲ್ಲಿ ಅಭಿನಯಿಸಿದ್ದ ನಟಿ ಜಯಶ್ರೀ ರಾಮಯ್ಯ ಬುಧವಾರ ಬೆಳಿಗ್ಗೆ ‘I Quit...’ ಎಂದು ಫೇಸ್‌ಬುಕ್‌ನಲ್ಲಿ ಹಾಕಿದ್ದ ಪೋಸ್ಟ್‌ ಕನ್ನಡ ಚಿತ್ರರಂಗ ಮತ್ತು ಆಕೆಯ ಅಭಿಮಾನಿಗಳಲ್ಲಿ ಆತಂಕ ಮೂಡಿಸಿತ್ತು.

ಬಹಳಷ್ಟು ಜನರು ಆಕೆ ಇರುವ ಸ್ಥಳಕ್ಕೆ ಯಾರಾದರೂ ಹೋಗಿ ಅವರನ್ನು ರಕ್ಷಿಸಿ ಎಂದು ಫೇಸ್‌ಬುಕ್‌ನಲ್ಲಿ ಮೊರೆ ಇಟ್ಟಿದ್ದರು. ಅವರು ಇಂತಹ ನಿರ್ಧಾರ ಏಕೆ ತೆಗೆದುಕೊಂಡಿದ್ದಾರೆ ಎಂಬ ಆತಂಕವನ್ನೂ ವ್ಯಕ್ತಪಡಿಸಿದ್ದರು. ಈ ಫೋಸ್ಟ್‌ ವೈರಲ್‌ ಆಗುತ್ತಿದ್ದಂತೆಯೇ ಆಕೆಯೇ ತನ್ನ ಫೇಸ್‌ಬುಕ್‌ನಲ್ಲಿ ‘I'm Alright and safe!! Love you all❤️’ ಎಂದು ಮತ್ತೊಂದು ಪೋಸ್ಟ್ ಹಾಕಿದ್ದಾರೆ. ಹಾಗಾಗಿ, ಆಕೆಯ ಸ್ನೇಹಿತರು ಕೊಂಚ ನಿರಾಳರಾಗಿದ್ದಾರೆ.

‘ಒಳ್ಳೆಯದಾಗಲಿ... ಇನ್ಯಾವತ್ತು ಈ ರೀತಿ ನಿರ್ಧಾರ ತೆಗೆದುಕೊಳ್ಳಬೇಡಿ. ಅಕಸ್ಮಾತ್ ತಗೊಂಡ್ರೇ ನಿಮ್ಮಂತ ರಣಹೇಡಿ ಮತ್ತೊಬ್ಬರು ಇಲ್ಲ ಎಂದು ಭಾವಿಸುತ್ತೇವೆ’ ಎಂದು ದೀಪುಗೌಡ್ರು ಸೇರಿದಂತೆ ಹಲವರು ಆಕೆಗೆ ಮಾನಸಿಕ ಸ್ಥೈರ್ಯ ತುಂಬಿದ್ದಾರೆ.

ಬೆಳಿಗ್ಗೆಯೇ ‘I Quit...’ ಎಂದು ಪೋಸ್ಟ್‌ ಮಾಡಿದ ಬಳಿಕ ಜಯಶ್ರೀ ಯಾರೊಬ್ಬರ ಮೊಬೈಲ್‌ ಸಂಪರ್ಕಕ್ಕೂ ಸಿಕ್ಕಿರಲಿಲ್ಲ. ಹಾಗಾಗಿ, ಆಕೆಯ ಸ್ನೇಹಿತರು ಮತ್ತು ಕುಟುಂಬದ ಸದಸ್ಯರಲ್ಲಿ ಆತಂಕ ಹೆಚ್ಚಿತ್ತು. ಆದರೆ, ಅವರು ಯಾಕೆ ಈ ರೀತಿಯ ಪೋಸ್ಟ್ ಹಾಕಿದ್ದರು ಎಂಬುದು ತಿಳಿದುಕೊಂಡಿಲ್ಲ.

ಜಯಶ್ರೀ ರಾಮಯ್-ಚಿತ್ರ ಕೃಪೆ: ಜಯಶ್ರೀ ಫೇಸ್‌ಬುಕ್‌ ಖಾತೆ

ಕನ್ನಡದ ‘ಬಿಗ್‌ ಬಾಸ್‌ ಸೀಸನ್‌ 3’ರಲ್ಲಿ ಸ್ಪರ್ಧಿಸಿದ್ದ ಜಯಶ್ರೀ ಒಳ್ಳೆಯ ಡಾನ್ಸರ್‌ ಕೂಡ ಹೌದು. ಅವರು ಕೆಲವು ದಿನಗಳ ಹಿಂದೆ ಖಿನ್ನತೆಗೆ ಒಳಗಾಗಿದ್ದರು. ಅವರನ್ನು ಪುನರ್ವಸತಿ ಕೇಂದ್ರವೊಂದಕ್ಕೆ ದಾಖಲಿಸಲಾಗಿದ್ದು, ಅಲ್ಲಿಂದಲೇ ಅವರು ಈ ರೀತಿಯ ಪೋಸ್ಟ್‌ ಮಾಡಿರಬಹುದು ಎನ್ನಲಾಗಿದೆ.

ಜಯಶ್ರೀ ರಾಮಯ್-ಚಿತ್ರ ಕೃಪೆ: ಜಯಶ್ರೀ ಫೇಸ್‌ಬುಕ್‌ ಖಾತೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT