ಪೊಲೀಸರ ಪ್ರಶ್ನೆಗೆ ಉತ್ತರಿಸಿರುವ ರಾಧಿಕಾ, ‘ಯುವರಾಜ್ ವಂಚನೆ ಬಗ್ಗೆ ನನಗೆ ಗೊತ್ತಿರಲಿಲ್ಲ. ಅವರ ನನ್ನ ತಂದೆಯ ಸ್ನೇಹಿತರು. ವೈಷ್ಣವಿ ಪ್ರೊಡಕ್ಷನ್ ಅಡಿಯಲ್ಲಿ ‘ನಾಟ್ಯ ರಾಣಿ ಶಾಂತಲಾ’ ಹೆಸರಿನ ಸಿನಿಮಾ ಮಾಡಲು ಮಾತುಕತೆ ನಡೆಸಿದ್ದರು. ಅದಕ್ಕೆ ನಾನು ಒಪ್ಪಿದ್ದೆ. ಮುಂಗಡವಾಗಿ ₹ 15 ಲಕ್ಷವನ್ನು ತಮ್ಮ ಖಾತೆಯಿಂದ ನನ್ನ ಖಾತೆಗೆ ಹಾಕಿದ್ದರು. ಜೊತೆಗೆ, ಬೇರೊಬ್ಬ ನಿರ್ಮಾಪಕರ ಖಾತೆಯಿಂದ ₹ 60 ಲಕ್ಷ ಜಮೆ ಮಾಡಿಸಿದ್ದರು. ಅವರು ಯಾರೆಂದು ವಿಚಾರಿಸಿದ್ದಕ್ಕೆ, ಸಂಬಂಧಿಯೆಂದು ತಿಳಿಸಿದ್ದರು’ ಎಂದು ಹೇಳಿರುವುದಾಗಿ ಮೂಲಗಳು ತಿಳಿಸಿವೆ.