ಪ್ರಮುಖ ವೃತ್ತಗಳಲ್ಲಿ ನೀರು ತುಂಬಿಕೊಂಡಿದ್ದರಿಂದ ವಾಹನಗಳು ಪರ್ಯಾಯ ಮಾರ್ಗದಲ್ಲಿ ಸಂಚರಿಸಿದವು. ಗೋವಾವೇಸ್ದಿಂದ ಖಾನಾ
ಪುರಕ್ಕೆ ಹೋಗುವ ರಸ್ತೆಯ ಮಾರ್ಗದ ಮೇಲೆ ಅರ್ಧ ಅಡಿಯಷ್ಟು ನೀರು ಹರಿಯಿತು. ವಾಹನ ಸವಾರರು ಹರಸಾಹಸ ಪಟ್ಟು ವಾಹನ ಚಲಾಯಿಸಿದರು. ಗಾಂಧಿ ನಗರದ ಮೇಲ್ಸೇತುವೆ ಕೆಳಗೆ ನೀರು ಜಮಾಯಿಸಿದ್ದರಿಂದ ದೊಡ್ಡ ದೊಡ್ಡ ವಾಹನಗಳು ಮಾತ್ರ ಸಂಚರಿಸಿದವು. ನೀರಿನ ಪ್ರಮಾಣ ತಗ್ಗಿದ ನಂತರ ಬೈಕ್, ಸ್ಕೂಟರ್ ಸವಾರರು ಸಂಚರಿಸಿದರು.