ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಸ್ಕೃತ ನಮ್ಮ ರಾಷ್ಟ್ರ ಭಾಷೆ ಆಗಬೇಕೆಂದು ನಾನು ಬಯಸುತ್ತೇನೆ: ಕಂಗನಾ

Last Updated 30 ಏಪ್ರಿಲ್ 2022, 2:21 IST
ಅಕ್ಷರ ಗಾತ್ರ

ಮುಂಬೈ: ಹಿಂದಿ ರಾಷ್ಟ್ರ ಭಾಷೆ ಎಂದುನಟ ಅಜಯ್‌ ದೇವಗನ್‌ ಹೇಳಿರುವುದರಲ್ಲಿ ಯಾವುದೇ ತಪ್ಪಿಲ್ಲ. ಪ್ರತಿಯೊಬ್ಬರಿಗೂ ತಮ್ಮ ಭಾಷೆ ಹಾಗೂ ಸಂಸ್ಕೃತಿ ಬಗ್ಗೆ ಹೆಮ್ಮ ಪಡುವ ಹಕ್ಕಿದೆ ಎಂದುಬಾಲಿವುಡ್‌ ನಟಿ ಕಂಗನಾ ರನೌತ್‌ ಹೇಳಿದ್ದಾರೆ.

ಧಾಕಡ್‌ ಸಿನಿಮಾದ ಟ್ರೇಲರ್‌ ಬಿಡುಗಡೆ ವೇಳೆ ಈ ಕುರಿತು ಮಾತನಾಡಿದ ಕಂಗನಾ, ‘ರಾಷ್ಟ್ರೀಯ ಭಾಷೆಯನ್ನಾಗಿ ಹಿಂದಿಯನ್ನು ವಿರೋಧಿಸುವುದು, ಸಂವಿಧಾನವನ್ನು ವಿರೋಧಿಸಿದಂತೆ. ಹಿಂದಿ ನಮ್ಮ ರಾಷ್ಟ್ರದ ಭಾಷೆ ಆಗಿರುವುದರಿಂದ, ಅಜಯ್‌ ಅವರು ರಾಷ್ಟ್ರೀಯ ಭಾಷೆ ಎಂದು ಕರೆದಿದ್ದಾರೆ. ಆದ್ದರಿಂದ ಇದರಲ್ಲಿ ಅವರ ತಪ್ಪಿಲ್ಲ. ಹಾಗೆಯೇ ಯಾರಾದರೂ ಕನ್ನಡ ಹಿಂದಿ ಭಾಷೆಗಿಂತ ಹಳೆಯದು ಅಥವಾ ತಮಿಳು ಹಳೆಯ ಭಾಷೆ ಎಂದು ಹೇಳಿದರೆ ತಪ್ಪಿಲ್ಲ’ ಎಂದರು.

‘ಸಂಸ್ಕೃತ ನಮ್ಮ ರಾಷ್ಟ್ರ ಭಾಷೆ ಆಗಬೇಕೆಂದು ನಾನು ಬಯಸುತ್ತೇನೆ. ಹಿಂದಿ, ಇಂಗ್ಲಿಷ್‌, ಜರ್ಮನಿ, ಫ್ರೆಂಚ್‌ನಂತಹ ಭಾಷೆಗಳು ಹೊರಹೊಮ್ಮಿರುವುದೇ ಸಂಸ್ಕೃತದಿಂದ. ನಮಗೆ ಸಂಸ್ಕೃತ ಏಕೆ ರಾಷ್ಟ್ರೀಯ ಭಾಷೆಯಾಗಿಲ್ಲ? ನಮ್ಮ ಶಾಲೆಗಳಲ್ಲಿ ಸಂಸ್ಕೃತವನ್ನು ಏಕೆ ಕಡ್ಡಾಯವಾಗಿ ಕಲಿಸುವುದಿಲ್ಲ?’ ಎಂದು ಕಂಗನಾ ಪ್ರಶ್ನಿಸಿದರು.

‘ಹಿಂದಿಯನ್ನು ವಿರೋಧಿಸಿದರೆ ಕೇಂದ್ರ ಸರ್ಕಾರವನ್ನು ವಿರೋಧಿಸಿದಂತೆ. ದೆಹಲಿಯನ್ನು ಕೇಂದ್ರವನ್ನಾಗಿ ನೀವು ಸ್ವೀಕಾರ ಮಾಡುವುದಿಲ್ಲ ಎಂದರ್ಥ. ಸಂವಿಧಾನದಲ್ಲಿ ಏನೇ ಮಾಡಿದರೂ, ಯಾವುದೇ ಕಾನೂನುಗಳನ್ನು ತಿದ್ದುಪಡಿ ಮಾಡಿದರೂ ಅದು ದೆಹಲಿಯಲ್ಲೇ ಹಾಗೂ ಹಿಂದಿಯಲ್ಲೇ’ ಎಂದು ಹೇಳುವ ಮೂಲಕ ಕಂಗನಾ, ಅಜಯ್‌ ಅವರ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT