ನಟ, ದಿವಂಗತ ಪುನೀತ್ ರಾಜ್ಕುಮಾರ್ ಅವರ ಗೌರವಾರ್ಥ ಗೀತ ಸಾಹಿತಿ ಮತ್ತು ಸಂಗೀತ ಸಂಯೋಜಕಿ ಅನಿತಾ ರಂಗಸ್ವಾಮಿ ಅವರು ಆಡಿಯೋವೊಂದನ್ನು ಹೊರತಂದಿದ್ದಾರೆ.
ಎಲ್ಲೂ ಹೋಗಿಲ್ಲ...ನೀನೆಲ್ಲೂ ಹೋಗಿಲ್ಲ ಅಪ್ಪು ಅಪ್ಪು ಅಪ್ಪು... ಹಾಡನ್ನು ಆನಂದ್ ಆಡಿಯೋದ ಯುಟ್ಯೂಬ್ ಚಾನೆಲ್ನಲ್ಲಿ ಬಿಡುಗಡೆ ಮಾಡಿದ್ದಾರೆ. ಶಂಕರ್ಮಹದೇವನ್, ರಾಜೇಶ್ ಕೃಷ್ಣನ್, ವಿಜಯ್ ರಾಘವೇಂದ್ರ, ಹೇಮಂತ್ ಕುಮಾರ್ ಅನುರಾಧ ಭಟ್ ಈ ಹಾಡಿಗೆ ದನಿಯಾಗಿದ್ದಾರೆ. ಜೊತೆಗೆ ಸರೆಗಮಪ ಕಾರ್ಯಕ್ರಮದ ಸಹಗಾಯಕರೂ ದನಿಗೂಡಿಸಿದ್ದಾರೆ. ಮಾರ್ಚ್ 16ರಂದು ಈ ಗೀತೆ ಬಿಡುಗಡೆಯಾಗಿದೆ. ಇದನ್ನು ಸುಮಾರು ಒಂದೂವರೆ ಲಕ್ಷದಷ್ಟು ಮಂದಿ ವೀಕ್ಷಿಸಿದ್ದಾರೆ.
ಅಲ್ವಿನ್ ಫೆರ್ನಾಂಡಿಸ್ (ಗಿಟಾರ್), ಆಕಾಶ್ ಪರ್ವ (ಕೀಬೋರ್ಡ್), ಸಂದೀಪ್ (ಕೊಳಲು), ಸರ್ಫರಾಜ್ ಖಾನ್ (ಸಾರಂಗಿ) ಸಂಗೀತ ಸಂಯೋಜನೆಯಲ್ಲಿ ಪಾಲ್ಗೊಂಡಿದ್ದಾರೆ. ಜೀವನ್ ಕ್ಲಾಡ್ ಡಿ'ಸೋಜಾ ಅವರು ವಿಡಿಯೋ ನಿರ್ದೇಶನ, ಸಜಯ್ಕುಮಾರ್ ಎಂ.ಪಿ. ಧ್ವನಿಮುದ್ರಣ ಮಾಡಿದ್ದಾರೆ.