ಜನನಿ ಫಿಲಂಸ್ ಲಾಂಛನದಡಿ ನಿರ್ಮಾಪಕ ಬಿ.ಜೆ. ಪ್ರಶಾಂತ್ ನಿರ್ಮಿಸುತ್ತಿರುವ ‘ಅಲ್ಲೇ ಡ್ರಾ ಅಲ್ಲೇ ಬಹುಮಾನ’ ಚಿತ್ರದ ಶೂಟಿಂಗ್ ಆರಂಭವಾಗಿದೆ.
ರತನ್ ತೀರ್ಥ ನಿರ್ದೇಶನದ ಜೊತೆಗೆ ಕಥೆ, ಚಿತ್ರಕಥೆಯ ನೊಗವನ್ನೂ ಹೊತ್ತಿದ್ದಾರೆ. ಮೊದಲ ಹಂತದ ಚಿತ್ರೀಕರಣವು 10 ದಿನಗಳ ಬೆಂಗಳೂರಿನ ಸುತ್ತಮುತ್ತ ನಡೆಯಲಿದೆ. ತ್ರಿವೇಣಿ ಕೃಷ್ಣ ಮತ್ತು ಶೌರ್ಯ ನಾಯಕಿ, ನಾಯಕನಾಗಿ ಬಣ್ಣಹಚ್ಚಿದ್ದಾರೆ.
ಛಾಯಾಗ್ರಹಣ ಸತೀಶ್ ರಾಜೇಂದ್ರನ್ ಅವರದ್ದು. ನಾಗಭೂಷಣ್ ಸಾಹಿತ್ಯ, ವಿಜಯ್ ರಾಜ್ ಸಂಗೀತ ಸಂಗೀತ ಸಂಯೋಜಿಸಿದ್ದಾರೆ. ಉಜ್ವಲ್ಗೌಡ ಅವರ ಸಂಕಲನವಿದೆ. ಶಂಕರ್ ಅಶ್ವತ್ಥ್, ನಿಖಿಲ್ ಗೌಡ, ಸುಮಂತ್, ಭಾರತಿ ತಾರಾಗಣದಲ್ಲಿದ್ದಾರೆ.