ಒಲವು ಸಿನಿಮಾ ಸಂಸ್ಥೆಯು ನಿರ್ಮಿಸುತ್ತಿರುವ ‘ಅಮರ ಪ್ರೇಮಿ ಅರುಣ್’ ಚಿತ್ರತನ್ನ ಚಿತ್ರೀಕರಣವನ್ನು ಮುಗಿಸಿದೆ. ಬಳ್ಳಾರಿ ನಗರ ಮತ್ತು ಬಳ್ಳಾರಿ ಜಿಲ್ಲೆಯ ಅನೇಕ ಊರುಗಳಲ್ಲಿ ಸುಮಾರು 50 ದಿನಗಳಲ್ಲಿ ಚಿತ್ರೀಕರಣ ನಡೆಸಲಾಗಿದೆ.
ವಿಶೇಷ ಪಾತ್ರಗಳಲ್ಲಿ ಮಂಜಮ್ಮ ಜೋಗತಿ, ಖ್ಯಾತ ರಂಗಕರ್ಮಿ ಹುಲಿಗೆಪ್ಪ ಕಟ್ಟಿಮನಿ, ಅರ್ಚನಾ ಕೊಟ್ಟಿಗೆ, ಶ್ವೇತಾ ಭಟ್ ಅವರು ನಟಿಸಿದ್ದಾರೆ.
ಜಯಂತ್ ಕಾಯ್ಕಿಣಿ, ಯೋಗರಾಜ್ ಭಟ್ ಮತ್ತು ಪ್ರವೀಣ್ ಕುಮಾರ್ ಜಿ. ಅವರು ಹಾಡುಗಳನ್ನು ಬರೆದಿದ್ದಾರೆ. ಬಳ್ಳಾರಿ ಸೀಮೆಯ ಶೈಲಿಯ ಮಾತುಗಳಲ್ಲೇ ಇರುವ ಮಾತುಗಳನ್ನು ಪ್ರವೀಣ್ ಕುಮಾರ್ ಜಿ. ಅವರು ಬರೆದಿದ್ದಾರೆ.
ಅಮರ ಪ್ರೇಮಿ ಅರುಣ್ ಚಿತ್ರಕ್ಕೆ ಪ್ರವೀಣ್ ಕುಮಾರ್ ಜಿ. ಅವರ ರಚನೆ-ನಿರ್ದೇಶನ, ಪ್ರವೀಣ್ ಎಸ್. ಅವರ ಛಾಯಾಗ್ರಹಣ, ಕಿರಣ್ ರವೀಂದ್ರನಾಥ್ ಅವರ ಸಂಗೀತ, ಮನು ಶೇಡ್ಗಾರ್ ಅವರ ಸಂಕಲನ, ಮಂಡ್ಯ ಮಂಜು ಅವರ ಕಾರ್ಯಕಾರಿ ನಿರ್ಮಾಣವಿದೆ.
ಅಮರ ಪ್ರೇಮಿ ಅರುಣ್ ಸಿನಿಮಾ ಈಗ ಸಂಕಲನ ಮತ್ತು ಡಬ್ಬಿಂಗ್ನತ್ತ ಸಾಗಿದೆ.